ಅನುದಾನದ ಬಗ್ಗೆ ಸಚಿವ ಆನಂದ ಸಿಂಗ್ ದಾಖಲಾತಿ ಸಮೇತ ಬಹಿರಂಗ ಪಡಿಸಲಿ: ಶಾಸಕ ಈ ತುಕಾರಾಂ ಸವಾಲು


Team Udayavani, Feb 24, 2023, 6:35 PM IST

ಅನುದಾನದ ಬಗ್ಗೆ ಸಚಿವ ಆನಂದ ಸಿಂಗ್ ದಾಖಲಾತಿ ಸಮೇತ ಬಹಿರಂಗ ಪಡಿಸಲಿ: ಶಾಸಕ ಈ ತುಕಾರಾಂ ಸವಾಲು

ಕುರುಗೋಡು: ಸಂಡೂರಲ್ಲಿ ಡಿಎಂಎಫ್ ಅನುದಾನ ಯಾವ ಚರಂಡಿಗೆ ಹರಿದು ಹೋಗಿದೆ ಗೊತ್ತಿಲ್ಲ, ಅಂತ ದಾಖಲಾತಿ ಇಲ್ಲದೆ ವೇದಿಕೆ ಮೇಲೆ ಸಚಿವ ಆನಂದ್ ಸಿಂಗ್ ಮಾತನಾಡುವುದು ಸರಿಯಲ್ಲ ಎಂದು ಶಾಸಕ ಈ ತುಕಾರಾಂ ಕಿಡಿಕಾರಿದರು.

ಸಮೀಪದ ಏಳುಬೆಂಚಿ ಗ್ರಾಮದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಚಿವ ಆನಂದ್ ಸಿಂಗ್ ಅವರು ಯಾವುದೇ ವಿಷಯದ ಬಗ್ಗೆ ಮಾತನಾಡುವುದಾದರೆ ದಾಖಲಾತಿ ಸಮೇತ ತೆಗೆದುಕೊಂಡು ಬಂದು ಮಾತನಾಡಲಿ, ನಾನು ಕೂಡ ಡಿಎಂಎಫ್ ಅನುದಾನದಡಿಯಲ್ಲಿ ಏನು ಅಭಿವೃದ್ಧಿ ಕಾರ್ಯಗಳು ನಡೆದಿದವೇ ನಾನು ದಾಖಲಾತಿ ಸಮೇತ ಕೊಡುತ್ತೇನೆ ಚುನಾವಣೆಯ ಮತ ಬ್ಯಾಂಕಿಗಾಗಿ ಕ್ಷೇತ್ರದ ಜನರನ್ನು ದಿಕ್ಕು ತಪ್ಪಿಸುವ ಕೆಲಸ ವನ್ನು ಮೊದಲು ಆನಂದ್ ಸಿಂಗ್ ಬಿಡಬೇಕು ಎಂದು ಗುಡುಗಿದರು.

ತಾವು ಒಬ್ರು ಸಚಿವರು ಇದ್ದಾರೆ ಸಂಡೂರು ಕ್ಷೇತ್ರಕ್ಕೆ ಡಿಎಂಎಫ್ ಅನುದಾನ ಎಷ್ಟು ನೀಡಿದ್ದಾರೆ ಎಂದು ಕ್ಷೇತ್ರಕ್ಕೆ ಬಂದು ಜನರಿಗೆ ಮಾಹಿತಿ ನೀಡಲಿ ನೋಡೋಣ ಸಂವಿಧಾನ ಬದ್ದವಾಗಿ ವಿಜಯನಗರಕ್ಕೆ 18 ರಷ್ಟು ಬಳಕೆ ಮಾಡಿಕೊಳ್ಳಬೇಕು ಅದನ್ನು ಬಿಟ್ಟು 28 ರಷ್ಟು ಬಳಕೆ ಮಾಡಿಕೊಂಡು ಸಂಡೂರು ಜನತೆಗೆ ಅನ್ಯಾಯ ಮಾಡಿದ್ದಾರೆ ಎಂದರು.

ಇನ್ನೂ ಪ್ರವಾಸೋದ್ಯಮ ಸಚಿವರಾಗಿರುವ ತಾವು ಸಂಡೂರು ಕ್ಷೇತ್ರಕ್ಕೆ ಪ್ರವಾಸೋದ್ಯಮ ಇಲಾಖೆಯ ಅನುದಾನ ಎಷ್ಟು ನೀಡಿದ್ದಾರೆ ಎಂಬುವುದು ಖಚಿತ ಪಡಿಸಲಿ ಇದರ ಬಗ್ಗೆ ಕ್ಷೇತ್ರದ ಜನರು ಕೂಡ ಬಹಳ ಕೇಳುತಿದ್ದಾರೆ ಎಂದರು.

ಇದರ ಬಗ್ಗೆ ನಾನು ಮತ್ತು ಸಂತೋಷ್ ಲಾಡ್ ಅವರು ಇದರ ಬಗ್ಗೆ ಮಾಹಿತಿ ಕೇಳಿದ್ದೇವೆ ಕೊಡುತೀನಿ ಅಂದಿದ್ದಾರೆ ಕೂಡಲೇ ಇದರ ಬಗ್ಗೆ ಸಚಿವ ಆನಂದ್ ಸಿಂಗ್ ಮಾಹಿತಿ ನೀಡಬೇಕು ಎಂದು ಅಗ್ರಹಿಸಿದರು.

18 ರಷ್ಟು ಬಳಕೆ ಮಾಡಿಕೊಳ್ಳೋ ಬದಲು ಕಾನೂನು ಪ್ರಕಾರ 14 ರಷ್ಟು ಹೆಚ್ಚಿಗೆ ತಗೊಂಡಿರುವ ಅನುದಾನವನ್ನು ಬಿಜೆಪಿ ಸರಕಾರ ನಮ್ಮ ಕ್ಷೇತ್ರದ ಮೇಲೆ ಗೌರವ ಇದ್ರೆ ನಮಗೆ ವಾಪಸ್ಸು ನೀಡಲಿ ಆನಂದ್ ಸಿಂಗ್ ಅವರು ಏನೋ ಅಭಿವೃದ್ಧಿ ಆಗಿಲ್ಲ ಅಂತಿದಾರೆ ಅಲ್ಲ ಅದನ್ನು ತೋರಿಸಿದರೆ ಅದೇ ಅನುದಾನದಿಂದ ಅದನ್ನು ಅಭಿವೃದ್ಧಿ ಮಾಡುತ್ತೇನೆ ಎಂದರು.

ಇನ್ನೂ 6.9.2021ರಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನೇತೃತ್ವದಲ್ಲಿ ಡಿಎಂಎಪ್ ಅನುದಾನವನ್ನು 22 ರಷ್ಟು ಬಳಕೆ ಮಾಡಿಕೊಳ್ಳುವುದರ ಬಗ್ಗೆ ಸಭೆ ನಡೆದಿದೆ ಈ ಸಭೆಯಲ್ಲಿ ಕಾರ್ಯದರ್ಶಿ, ಗಣಿ ಇಲಾಖೆಯ ಸಚಿವರು, ಸಂಬಂಧ ಪಟ್ಟ ಶಾಸಕರು ಇಲ್ಲದೆ ಬೇರೆ ಬೇರೆಯವರು ಭಾಗವಹಿಸಿ ತರತೂರಿಯಲ್ಲಿ ಸಭೆ ಮಾಡಿ ಸಂವಿಧಾನಕ್ಕೆ ಕಪ್ಪು ಚುಕ್ಕೆ ಬರುವಂತೆ ಕೆಲಸ ಮಾಡಿದ್ದಾರೆ ಎಂದರು.

ಡಿಎಂಎಪ್ ಅನುದಾನ ಸಾರ್ವಜನಿಕರದು, ಅದು ಸಂಡೂರು ಕ್ಷೇತ್ರದ ಜನರ ಹಣ ಅದರ ಬಗ್ಗೆ ಅವರು ಕೇಳಬೇಕು ಅದನ್ನು ಬಿಟ್ಟು ರಾಜಕೀಯ ವಾಗಿ ಬಂದು ವೇದಿಕೆಗಳ ಮೇಲೆ ಆನಂದ್ ಸಿಂಗ್ ಅವರು ಇಲ್ಲಸಲ್ಲದ ಸುಳ್ಳನ್ನು ಜನರ ಮುಂದೆ ಹೇಳುವುದು ಸಂವಿಧಾನಕ್ಕೆ ಒಳ್ಳೆಯದಲ್ಲ ಎಂದರು. ಮೊದಲು ಉಸ್ತುವಾರಿ ಮಂತ್ರಿ ಇದ್ರೂ ಸದ್ಯ ಕೂಡ ಶ್ರೀರಾಮುಲು ಉಸ್ತುವಾರಿ ಮಂತ್ರಿ ಇದ್ದಾರೆ ಅವರೆಲ್ಲ ಕುಳಿತುಕೊಂಡು ಚರ್ಚೆ ಮಾಡಿ ಸಂಡೂರ್ ಭಾಗದಲ್ಲಿ ಇಂತಹ ಕಡೆ ಡಿಎಂಎಪ್ ಅನುದಾನ ಸರಿಯಾಗಿ ಸದ್ಭಳಕೆ ಯಾಗಿಲ್ಲ ಅಂತ ಕೇಳಬೇಕು ಅದನ್ನು ಬಿಟ್ಟು ಜನರ ಮುಂದೆ ಹೇಳಿ ಸುಳ್ಳು ಸಂದೇಶ ಹರಡುಸುವುದು ಬಿಡಬೇಕು ಎಂದರು.

ಸಂಡೂರು ಕ್ಷೇತ್ರಕ್ಕೆ ಅಮಿತ್ ಶಾ ಅವರು ಮದ್ಯಾಹ್ನ 1 ಗಂಟೆಗೆ ಬರಬೇಕಿತ್ತು ಅವರು ತಡವಾಗಿ ತರತೂರಿಯಲ್ಲಿ ಬಂದು ಕ್ಷೇತ್ರದ ಜನರು ಬಿಜೆಪಿ ಯನ್ನು ತಿರಸ್ಕಾರ ಮಾಡಿದ್ದಾರೆ ಎಂದು ಅಲ್ಲಿ ಭಾಗವಹಿಸಿದ ಜನರ ಸಂಖ್ಯೆ ನೋಡಿ ಕೇವಲ 30 ನಿಮಿಷ ಕೂಡ ಇರದೆ ಹೊಡಿ ಹೋಗಿದ್ದಾರೆ ಎಂದರು.

ಸಂಡೂರಲ್ಲಿ ಬಿಜೆಪಿ ಯವರು ವಿಜಯ ಸಂಕಲ್ಪ ಯಾತ್ರೆ ಮಾಡಿರುವುದರಿಂದ ಕಾಂಗ್ರೆಸ್ ಗೆ ಯಾವ ಪರಿಣಾಮ ಬೀರಲ್ಲ ನಾನು ಪರೀಕ್ಷೆ ಬಂದಾಗ ಓದುವವನು ಅಲ್ಲ ಮೊದಲೇ ಓದಿಕೊಂಡಿರುತ್ತೇನೆ ಪರೀಕ್ಷೆ ಯಲ್ಲಿ ಹೇಗೆ ಪಾಸ್ ಆಗಬೇಕು ಅಂತ ಗೊತ್ತಿರುತ್ತದೆ ಆಗಾಗಿ ಮೊದ್ಲೇ ಓದಿ ಕೊಳ್ಳದೆ ಪರೀಕ್ಷೆ ಬಂದಾಗ ಬಂದವರು ಹೇಗೆ ಪಾಸ್ ಆಗಬೇಕು ಅಂತ ಭಯ ಪಡುತ್ತಿರುತ್ತಾರೆ ಎಂದು ಬಿಜೆಪಿ ವಿರುದ್ದ ವ್ಯಂಗ್ಯವಾಡಿದರು.

ಟಾಪ್ ನ್ಯೂಸ್

Spying: ಪಾಕಿಸ್ತಾನ ಪರ ಬೇಹುಗಾರಿಕೆ: ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ ವ್ಯಕ್ತಿಯ ಬಂಧನ

Spying: ಪಾಕಿಸ್ತಾನ ಪರ ಬೇಹುಗಾರಿಕೆ: ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ ವ್ಯಕ್ತಿಯ ಬಂಧನ

T20 ವಿಶ್ವಕಪ್ ಗೆ ಬಲಿಷ್ಠ ತಂಡವನ್ನು ಪ್ರಕಟಿಸಿದ ನ್ಯೂಜಿಲೆಂಡ್; ಮರಳಿದ ಸ್ಫೋಟಕ ಆಟಗಾರ

T20 ವಿಶ್ವಕಪ್ ಗೆ ಬಲಿಷ್ಠ ತಂಡವನ್ನು ಪ್ರಕಟಿಸಿದ ನ್ಯೂಜಿಲೆಂಡ್; ಮರಳಿದ ಸ್ಫೋಟಕ ಆಟಗಾರ

Tragedy: ಛತ್ತೀಸ್‌ಗಢದಲ್ಲಿ ಭೀಕರ ಅಪಘಾತ… ಮಕ್ಕಳು ಸೇರಿ 8 ಮಂದಿ ಸಾವು, 22 ಮಂದಿಗೆ ಗಾಯ

Tragedy: ಛತ್ತೀಸ್‌ಗಢದಲ್ಲಿ ಭೀಕರ ಅಪಘಾತ… ಮಕ್ಕಳು ಸೇರಿ 8 ಮಂದಿ ಮೃತ್ಯು, 22 ಮಂದಿಗೆ ಗಾಯ

Untitled-1

MP Srinivas Prasad: ಚಾಮರಾಜನಗರ ಸಂಸದ ಶ್ರೀನಿವಾಸ್ ಪ್ರಸಾದ್ ನಿಧನ

Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ

Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ

HD Revanna, ಪ್ರಜ್ವಲ್‌ ಮೇಲೆ ಲೈಂಗಿಕ ದೌರ್ಜನ್ಯ ಕೇಸ್‌!

HD Revanna, ಪ್ರಜ್ವಲ್‌ ಮೇಲೆ ಲೈಂಗಿಕ ದೌರ್ಜನ್ಯ ಕೇಸ್‌!

CET ಮೌಲ್ಯಮಾಪನ: 50 ಪಠ್ಯೇತರ ಪ್ರಶ್ನೆಗೆ ಕೊಕ್‌; ಮರು ಪರೀಕ್ಷೆ ನಡೆಸದಿರಲು ನಿರ್ಧಾರ

CET ಮೌಲ್ಯಮಾಪನ: 50 ಪಠ್ಯೇತರ ಪ್ರಶ್ನೆಗೆ ಕೊಕ್‌; ಮರು ಪರೀಕ್ಷೆ ನಡೆಸದಿರಲು ನಿರ್ಧಾರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

MP Srinivas Prasad: ಚಾಮರಾಜನಗರ ಸಂಸದ ಶ್ರೀನಿವಾಸ್ ಪ್ರಸಾದ್ ನಿಧನ

HD Revanna, ಪ್ರಜ್ವಲ್‌ ಮೇಲೆ ಲೈಂಗಿಕ ದೌರ್ಜನ್ಯ ಕೇಸ್‌!

HD Revanna, ಪ್ರಜ್ವಲ್‌ ಮೇಲೆ ಲೈಂಗಿಕ ದೌರ್ಜನ್ಯ ಕೇಸ್‌!

CET ಮೌಲ್ಯಮಾಪನ: 50 ಪಠ್ಯೇತರ ಪ್ರಶ್ನೆಗೆ ಕೊಕ್‌; ಮರು ಪರೀಕ್ಷೆ ನಡೆಸದಿರಲು ನಿರ್ಧಾರ

CET ಮೌಲ್ಯಮಾಪನ: 50 ಪಠ್ಯೇತರ ಪ್ರಶ್ನೆಗೆ ಕೊಕ್‌; ಮರು ಪರೀಕ್ಷೆ ನಡೆಸದಿರಲು ನಿರ್ಧಾರ

Temperature; ಮುಂದಿನ 5 ದಿನ ಅರ್ಧ ರಾಜ್ಯಕ್ಕೆ ಉಷ್ಣ ಅಲೆ ಮುನ್ನೆಚ್ಚರಿಕೆ

Temperature; ಮುಂದಿನ 5 ದಿನ ಅರ್ಧ ರಾಜ್ಯಕ್ಕೆ ಉಷ್ಣ ಅಲೆ ಮುನ್ನೆಚ್ಚರಿಕೆ

ಇಂದಿನಿಂದ ದ್ವಿತೀಯ ಪಿಯು-2 ಪರೀಕ್ಷೆ: 1.5 ಲಕ್ಷ ವಿದ್ಯಾರ್ಥಿಗಳ ನೋಂದಣಿ

ಇಂದಿನಿಂದ ದ್ವಿತೀಯ ಪಿಯು-2 ಪರೀಕ್ಷೆ: 1.5 ಲಕ್ಷ ವಿದ್ಯಾರ್ಥಿಗಳ ನೋಂದಣಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Spying: ಪಾಕಿಸ್ತಾನ ಪರ ಬೇಹುಗಾರಿಕೆ: ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ ವ್ಯಕ್ತಿಯ ಬಂಧನ

Spying: ಪಾಕಿಸ್ತಾನ ಪರ ಬೇಹುಗಾರಿಕೆ: ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ ವ್ಯಕ್ತಿಯ ಬಂಧನ

T20 ವಿಶ್ವಕಪ್ ಗೆ ಬಲಿಷ್ಠ ತಂಡವನ್ನು ಪ್ರಕಟಿಸಿದ ನ್ಯೂಜಿಲೆಂಡ್; ಮರಳಿದ ಸ್ಫೋಟಕ ಆಟಗಾರ

T20 ವಿಶ್ವಕಪ್ ಗೆ ಬಲಿಷ್ಠ ತಂಡವನ್ನು ಪ್ರಕಟಿಸಿದ ನ್ಯೂಜಿಲೆಂಡ್; ಮರಳಿದ ಸ್ಫೋಟಕ ಆಟಗಾರ

Tragedy: ಛತ್ತೀಸ್‌ಗಢದಲ್ಲಿ ಭೀಕರ ಅಪಘಾತ… ಮಕ್ಕಳು ಸೇರಿ 8 ಮಂದಿ ಸಾವು, 22 ಮಂದಿಗೆ ಗಾಯ

Tragedy: ಛತ್ತೀಸ್‌ಗಢದಲ್ಲಿ ಭೀಕರ ಅಪಘಾತ… ಮಕ್ಕಳು ಸೇರಿ 8 ಮಂದಿ ಮೃತ್ಯು, 22 ಮಂದಿಗೆ ಗಾಯ

Untitled-1

MP Srinivas Prasad: ಚಾಮರಾಜನಗರ ಸಂಸದ ಶ್ರೀನಿವಾಸ್ ಪ್ರಸಾದ್ ನಿಧನ

Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ

Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.