ಹೊರಸಿನ ಮೇಲೆ ಅನ್ನದಾತನ ಜೀವದ ಸೆಣಸು; ಹೊಲಕ್ಕೆ ಹೋಗಲು ನದಿಯೇ ಅಡ್ಡಿ


Team Udayavani, Apr 6, 2017, 3:45 AM IST

5BDR1A.jpg

ಬೀದರ: ಆಕಾಶಕ್ಕೆ ಏಣಿ ಹಾಕುವ ಹಂತಕ್ಕೆ ತಂತ್ರಜ್ಞಾನ ಮುಂದುವರಿದರೂ ಗಡಿ ಜಿಲ್ಲೆ ಬೀದರ್‌ನ ಕುಗ್ರಾಮ ಮರಕುಂದಾ ಗ್ರಾಮಸ್ಥರ ಬವಣೆ ಮಾತ್ರ ತಪ್ಪಿಲ್ಲ. ನದಿ ದಾಟಲು ಸೇತುವೆಯಿಲ್ಲದೆ ಹರಸಾಹಸ ಪಡುತ್ತಿರುವ ಈ ಗ್ರಾಮಸ್ಥರಿಗೆ ಹಗ್ಗದ ಮಂಚವೇ (ಹೊರಸು) ಆಸರೆ. ಸ್ವಲ್ಪ ಆಯ ತಪ್ಪಿದರೂ ನೀರುಪಾಲು ನಿಶ್ಚಿತ!

ಕಾರಂಜಾ ನದಿ ದಡದಲ್ಲಿರುವ ಬೀದರ ದಕ್ಷಿಣ ವಿಧಾನಸಭಾ ಕ್ಷೇತ್ರದ ಮರಕುಂದಾ ಗ್ರಾಮದ ರೈತರು, ನಿತ್ಯ ಇಂಥ ಅಪಾಯಕಾರಿ ಸ್ಥಿತಿಯಲ್ಲಿ ನದಿ ದಾಟಿ ಹೊಲ ಸೇರಬೇಕಿದೆ. ಕಾರಂಜಾ ಜಲಾಶಯದಲ್ಲಿ ಹಿನ್ನೀರು ಹೆಚ್ಚಿದಾಗೆಲ್ಲ ಮರಕುಂದಾ ಗ್ರಾಮಸ್ಥರಿಗೆ ಕಷ್ಟ ತಪ್ಪಿದ್ದಲ್ಲ. ಗ್ರಾಮದ ಹಿಂಭಾಗದಲ್ಲಿ ಜಮೀನು ಹೊಂದಿದ ರೈತರಿಗೆ ಜೀವ ಜಲವೇ ಈಗ ಸಂಕಷ್ಟ ತಂದೊಡ್ಡಿದೆ.

ನಿತ್ಯದ ಸರ್ಕಸ್‌:
ಮೂವತ್ತು ಮೀಟರ್‌ಗಿಂತ ಅಧಿಧಿಕ ಅಂತರ ಹೊಂದಿರುವ ನದಿಯಲ್ಲಿ ಹತ್ತು ಅಡಿಗಿಂತ ಹೆಚ್ಚು ಆಳದ ನೀರು ನಿಂತಿದೆ. ನದಿಯಾಚೆಗೆ ಗ್ರಾಮದ 30ಕ್ಕೂ ಹೆಚ್ಚು ರೈತರ 500 ಎಕರೆ ಜಮೀನಿದೆ. 100-150 ಮೀಟರ್‌ ಹೆಜ್ಜೆ ಹಾಕಿದರೆ ಹೊಲಗಳಿಗೆ ಹೋಗಬಹುದು. ಆದರೆ, ನೀರು ಅಡ್ಡಿಯಾಗಿದೆ. ಇದಕ್ಕಾಗಿ ರೈತರು ಟ್ಯೂಬ್‌, ಕಟ್ಟಿಗೆ, ಹಗ್ಗದ ಆಸರೆಯಲ್ಲಿ ನದಿಯಾಚೆಗೆ ತೆರಳುವ ಮಾರ್ಗ ಕಂಡುಕೊಂಡಿದ್ದಾರೆ. ನಿತ್ಯವೂ ಜೀವ ಕೈಯಲ್ಲಿ ಹಿಡಿದು ದಡ ಸೇರುತ್ತಿದ್ದಾರೆ.

ಪ್ರತಿದಿನ ಮಹಿಳೆಯರು, ಮಕ್ಕಳೂ ಕೂಡ ಹೊಲಕ್ಕೆ ಹೀಗೆಯೇ ಹೋಗಬೇಕು. ಆಸರೆಯಾಗಿರುವ ಟ್ಯೂಬ್‌ ಅಥವಾ ಹಗ್ಗ ಕೈಕೊಟ್ಟರೆ ದೇವರೇ ಗತಿ. ಇನ್ನೂ ಜಾನುವಾರುಗಳು ಈಜಿಕೊಂಡೇ ಬರಬೇಕು.

ನದಿಯೇ ಹತ್ತಿರದ ದಾರಿ:
ನದಿ ದಾಟುವ ತೊಂದರೆ ಬೇಡವಾದರೆ ಭಂಗೂರ, ಸಿಂದೋಲ್‌, ಪಾತರಪಳ್ಳಿ ಅಥವಾ ಬಗದಲ್‌ ಮೂಲಕ ಸುಮಾರು 12 ರಿಂದ 15 ಕಿಮೀ ಸುತ್ತು ಹಾಕಬೇಕು. ನೂರು ಮೀಟರ್‌ ಅಂತರದಲ್ಲಿರುವ ಜಮೀನುಗಳಿಗೆ ಇಷ್ಟು ದೂರ ಸುತ್ತು ಹಾಕುವ ಬದಲು ಕಷ್ಟವಾದರೂ ಸರಿ ನದಿ ದಾಟುವುದೇ ಉತ್ತಮ ಎನ್ನುತ್ತಾರೆ ರೈತರು.

ನೈಸ್‌ ಕಂಪನಿ ಮುಖ್ಯಸ್ಥ ಅಶೋಕ ಖೇಣಿ ಈ ಕ್ಷೇತ್ರವನ್ನು ಪ್ರತಿನಿಧಿಧಿಸುತ್ತಾರೆ. ಚುನಾವಣೆ ವೇಳೆ ಅಭಿವೃದ್ಧಿ ಭರವಸೆ ಹೊತ್ತಿದ್ದ ಈ ಭಾಗದ ಜನರಿಗೆ ನಿರಾಶೆಯಾಗಿದೆ. ಪ್ರಯಾಣಿಸಲು ಉತ್ತಮ ರಸ್ತೆ, ಸೇತುವೆಗಳಂಥ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿಲ್ಲ. ಜನರ ಗೋಳು ಕೇಳಬೇಕಾದ ಸರ್ಕಾರ ಜಾಣಕುರುಡನಂತೆ ವರ್ತಿಸುತ್ತಿದೆ. ಯಾವುದೇ ಸರ್ಕಾರ ಇರಲಿ ಅಥವಾ ಯಾರೇ ಶಾಸಕರಾಗಲಿ ಸಂಕಷ್ಟ ಮಾತ್ರ ತಪ್ಪುತ್ತಿಲ್ಲ ಎಂಬುದು ಗ್ರಾಮಸ್ಥರ ಅಳಲು.

ಶಾಶ್ವತ ಪರಿಹಾರ ರೂಪಿಸಿ
ಕಾರಂಜಾದಲ್ಲಿ ಹೆಚ್ಚಿನ ನೀರು ಇರುವ ವರೆಗೆ ಹಿನ್ನೀರಿನ ಸಮಸ್ಯೆ ತಪ್ಪಿದ್ದಲ್ಲ. ಅಲ್ಲಿಯವರೆಗೆ ಜಮೀನುಗಳಿಗೆ ಹೋಗಲು ಪರದಾಡಲೇಬೇಕು. ಟ್ಯೂಬ್‌, ಹಗ್ಗ ಸದ್ಯಕ್ಕೆ ಆಸರೆಗಿದೆ. ಇದಕ್ಕೆ ಶಾಶ್ವತ ಪರಿಹಾರ ರೂಪಿಸಲು ಇಲ್ಲಿ ಸಣ್ಣ ಸೇತುವೆ ಅಥವಾ ಬ್ಯಾರೇಜ್‌ ಕಟ್ಟಬೇಕು. ಈ ನಿಟ್ಟಿನಲ್ಲಿ ಸರ್ಕಾರ ಮತ್ತು ಶಾಸಕರು ಇತ್ತ ಗಮನಹರಿಸಿ ಕ್ರಮಕ್ಕೆ ಮುಂದಾಗಬೇಕು.
– ವೀರಶೆಟ್ಟಿ ಮಾಲಿಪಾಟೀಲ, ರೈತ

-ಶಶಿಕಾಂತ ಬಂಬುಳಗೆ

ಟಾಪ್ ನ್ಯೂಸ್

1-qeweqweqwe

IPL; ಹೈದರಾಬಾದ್ ಎದುರು ಚೆನ್ನೈ ಗೆ 78 ರನ್‌ಗಳ ಅಮೋಘ ಜಯ

Electrical Short Circuit: ನೇರ್ಲ ಶಾಲಾ ಗೇರು, ತೆಂಗು ತೋಟಕ್ಕೆ ಬೆಂಕಿ

Electrical Short Circuit: ನೇರ್ಲ ಶಾಲಾ ಗೇರು, ತೆಂಗು ತೋಟಕ್ಕೆ ಬೆಂಕಿ

ಹೌತಿ ದಾಳಿ: ಹಡಗನ್ನು ರಕ್ಷಿಸಿದ ಭಾರತ ನೌಕಾಪಡೆ

ಹೌತಿ ದಾಳಿ: ಹಡಗನ್ನು ರಕ್ಷಿಸಿದ ಭಾರತ ನೌಕಾಪಡೆ

MP Prajwal Revanna ವಿರುದ್ಧ ಮಹಿಳೆಯರು ಕೆಂಡ

MP Prajwal Revanna ವಿರುದ್ಧ ಮಹಿಳೆಯರು ಕೆಂಡ

Prajwal Revanna ತಪ್ಪು ಮಾಡಿದ್ದರೆ ಶಿಕ್ಷೆ ಆಗಲೇಬೇಕು: ಎಚ್‌ಡಿಕೆ

Prajwal Revanna ತಪ್ಪು ಮಾಡಿದ್ದರೆ ಶಿಕ್ಷೆ ಆಗಲೇಬೇಕು: ಎಚ್‌ಡಿಕೆ

UPA ಅವಧಿಯಲ್ಲಿ ರಾಜ್ಯಕ್ಕೆ ಸಿಕ್ಕಿದ್ದು ಬರೀ ಚಿಪ್ಪು: ಅಶೋಕ್‌

UPA ಅವಧಿಯಲ್ಲಿ ರಾಜ್ಯಕ್ಕೆ ಸಿಕ್ಕಿದ್ದು ಬರೀ ಚಿಪ್ಪು: ಅಶೋಕ್‌

ಕೆರೆಯಲ್ಲಿ ಸೆಲ್ಫಿ ತೆಗೆಯಲು ಹೋಗಿ ಅಪ್ಪ, ಮಗಳು ಸಾವು

Bangarapet ಕೆರೆಯಲ್ಲಿ ಸೆಲ್ಫಿ ತೆಗೆಯಲು ಹೋಗಿ ಅಪ್ಪ, ಮಗಳು ಸಾವು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

MP Prajwal Revanna ವಿರುದ್ಧ ಮಹಿಳೆಯರು ಕೆಂಡ

MP Prajwal Revanna ವಿರುದ್ಧ ಮಹಿಳೆಯರು ಕೆಂಡ

Prajwal Revanna ತಪ್ಪು ಮಾಡಿದ್ದರೆ ಶಿಕ್ಷೆ ಆಗಲೇಬೇಕು: ಎಚ್‌ಡಿಕೆ

Prajwal Revanna ತಪ್ಪು ಮಾಡಿದ್ದರೆ ಶಿಕ್ಷೆ ಆಗಲೇಬೇಕು: ಎಚ್‌ಡಿಕೆ

UPA ಅವಧಿಯಲ್ಲಿ ರಾಜ್ಯಕ್ಕೆ ಸಿಕ್ಕಿದ್ದು ಬರೀ ಚಿಪ್ಪು: ಅಶೋಕ್‌

UPA ಅವಧಿಯಲ್ಲಿ ರಾಜ್ಯಕ್ಕೆ ಸಿಕ್ಕಿದ್ದು ಬರೀ ಚಿಪ್ಪು: ಅಶೋಕ್‌

Andhra Pradesh ರಾಜಮಂಡ್ರಿ ಲೋಕಸಭಾ ಕ್ಷೇತ್ರಕ್ಕೆ ಸುಧಾಕರ್‌ ಉಸ್ತುವಾರಿ

Andhra Pradesh ರಾಜಮಂಡ್ರಿ ಲೋಕಸಭಾ ಕ್ಷೇತ್ರಕ್ಕೆ ಸುಧಾಕರ್‌ ಉಸ್ತುವಾರಿ

1-wewewqewqew

Hosapete; ಕೆಲವು ದೇಶಗಳು ಭಾರತ ಸರ್ಕಾರ ದುರ್ಬಲವಾಗಿರಲು ಬಯಸುತ್ತಿವೆ: ಮೋದಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-qeweqweqwe

IPL; ಹೈದರಾಬಾದ್ ಎದುರು ಚೆನ್ನೈ ಗೆ 78 ರನ್‌ಗಳ ಅಮೋಘ ಜಯ

Electrical Short Circuit: ನೇರ್ಲ ಶಾಲಾ ಗೇರು, ತೆಂಗು ತೋಟಕ್ಕೆ ಬೆಂಕಿ

Electrical Short Circuit: ನೇರ್ಲ ಶಾಲಾ ಗೇರು, ತೆಂಗು ತೋಟಕ್ಕೆ ಬೆಂಕಿ

ಮಣಿಪಾಲ ಸಂಸ್ಥೆಗಳಿಗೆ ಜಾಗತಿಕ ಸ್ಥಾನ ಕಲ್ಪಿಸಿದ ಡಾ|ರಾಮದಾಸ್‌ ಪೈ

ಮಣಿಪಾಲ ಸಂಸ್ಥೆಗಳಿಗೆ ಜಾಗತಿಕ ಸ್ಥಾನ ಕಲ್ಪಿಸಿದ ಡಾ|ರಾಮದಾಸ್‌ ಪೈ

ಹೌತಿ ದಾಳಿ: ಹಡಗನ್ನು ರಕ್ಷಿಸಿದ ಭಾರತ ನೌಕಾಪಡೆ

ಹೌತಿ ದಾಳಿ: ಹಡಗನ್ನು ರಕ್ಷಿಸಿದ ಭಾರತ ನೌಕಾಪಡೆ

MP Prajwal Revanna ವಿರುದ್ಧ ಮಹಿಳೆಯರು ಕೆಂಡ

MP Prajwal Revanna ವಿರುದ್ಧ ಮಹಿಳೆಯರು ಕೆಂಡ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.