![1-24-saturday](https://www.udayavani.com/wp-content/uploads/2024/07/1-24-saturday-2-415x249.jpg)
ಬಸವಸಾಗರಕ್ಕೆ 130 ಕೋಟಿ ಅನುದಾನ! ಆಲಮಟ್ಟಿ ಮಾದರಿಯಲ್ಲಿ ಉದ್ಯಾನವನ ನಿರ್ಮಾಣ
Team Udayavani, Oct 1, 2020, 4:50 PM IST
![ಬಸವಸಾಗರಕ್ಕೆ 130 ಕೋಟಿ ಅನುದಾನ! ಆಲಮಟ್ಟಿ ಮಾದರಿಯಲ್ಲಿ ಉದ್ಯಾನವನ ನಿರ್ಮಾಣ](https://www.udayavani.com/wp-content/uploads/2020/10/Basavasagara-620x389.jpg)
ಸುರಪುರ: ಈ ಭಾಗದ ರೈತರ ಜೀವನಾಡಿಯಾದ ಬಸವಸಾಗರ ಜಲಾಶಯ ಅಭಿವೃದ್ದಿಗೆ ಕೇಂದ್ರ ಸರಕಾರ 130 ಕೋಟಿ ರೂ. ಅನುದಾನ ಮಂಜೂರು ಮಾಡಿದೆ. ಇದರಲ್ಲಿ ಜಲಾಶಯದ ನಿರ್ವಹಣೆ ಜತೆಗೆ ಆಲಮಟ್ಟಿ ಮಾದರಿಯಲ್ಲಿ ಉದ್ಯಾನವನ ನಿರ್ಮಿಸಲಾಗುವುದು ಎಂದು ನಗರ ನೀರು ಸರಬರಾಜು ಹಾಗೂ ಒಳಚರಂಡಿ ನಿಗಮದ ಅಧ್ಯಕ್ಷ ಶಾಸಕ ನರಸಿಂಹ ನಾಯಕ (ರಾಜುಗೌಡ) ಹೇಳಿದರು.
ನಗರದ ತಮ್ಮ ನಿವಾಸದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರೈತರ ಹಿತಾಸಕ್ತಿ ಗಮನದಲ್ಲಿರಿಸಿಕೊಂಡು 1982ರಲ್ಲಿ ಬಸವಸಾಗರ ಜಲಾಶಯ ನಿರ್ಮಿಸಲಾಗಿದೆ. ಆದರೆ ಅಭಿವೃದ್ಧಿಗಾಗಿ ಈವರೆಗೆ ಯಾವುದೇ ಅನುದಾನ ಮಂಜೂರಾಗಿರಲಿಲ್ಲ. ಈ ಭಾಗದ ಸಂಸದರು, ಶಾಸಕರು, ಸಚಿವರ ಪ್ರಯತ್ನದ ಫಲವಾಗಿ ಕೇಂದ್ರ ಸರಕಾರ 2020-21ನೇ ಸಾಲಿನ (ಟ್ರಿಪ್) ಜಲಾಶಯ ನಿರ್ವಹಣೆ ಮತ್ತು ಅಭಿವೃದ್ಧಿ ಯೋಜನೆಯಡಿ ಅನುದಾನ ಮಂಜೂರು ಮಾಡಿದೆ ಎಂದು ತಿಳಿಸಿದರು.
ಇದನ್ನೂ ಓದಿ :ಮೈತ್ರಿಧರ್ಮವನ್ನೂ ಧರ್ಮವೆಂದು ಒಪ್ಪದ ಕಾಂಗ್ರೆಸ್ ಜೊತೆ ಎಂದೂ ಮೈತ್ರಿ ಇಲ್ಲ: ಕುಮಾರಸ್ವಾಮಿ
ಈ ಅನುದಾನದದಲ್ಲಿ 70 ಲಕ್ಷ ರೂ. ಜಲಾಶಯ ನಿರ್ವಹಣೆಗೆ ಬಳಸಲಾಗುವುದು. ಗೇಟ್ ಅಟೋಮೇಷನ್, ಸಿಸಿ ಕ್ಯಾಮೆರಾ ಅಳವಡಿಕೆ, ಎಷ್ಟಿ ವಾಲ್ ನಿರ್ಮಾಣ ಸೇರಿದಂತೆ ಜಲಾಶಯದ ಇತರೆ ಅಭಿವೃದ್ಧಿ ಕಾಮಗಾರಿಗಳಿಗೆ ಹಣ ಬಳಸಲಾಗುವುದು. 60 ಲಕ್ಷ ರೂ. ವೆಚ್ಚದಲ್ಲಿ ಜಲಾಶಯದ ಕೆಳಗಡೆಯ 300 ಎಕರೆ ಪ್ರದೇಶದಲ್ಲಿ ಆಲಮಟ್ಟಿಯ ಲಾಲಬಾಹದ್ದೂರ ಶಾಸ್ತ್ರೀ ಜಲಾಶಯದ ಮಾದರಿಯಲ್ಲಿ ಉದ್ಯಾನವನ ನಿರ್ಮಿಸಿ ಪವಾಸಿ ತಾಣವನ್ನಾಗಿ ರೂಪಿಸ ಲಾಗುವುದು ಎಂದು ತಿಳಿಸಿದರು.
ಡ್ಯಾಂ ಹತ್ತಿರದ ಜಾವೂರ ಕ್ರಾಸ್ನಿಂದ ಜಲಾಶಯದ ಮುಂಭಾಗದವರೆಗೆ ಜೋಡು ರಸ್ತೆ, ರಸ್ತೆ ವಿಭಜಕ ಅಳವಡಿಸಿ ಎರಡು ಕಡೆ ದೀಪಗಳ ವ್ಯವಸ್ಥೆ ಮಾಡಲಾಗುವುದು. ಪ್ರವಾಸಿಗರ ವೀಕ್ಷಣಾ ಛಾವಣಿ, ಮಾಹಿತಿ ಕೇಂದ್ರ, ತಂಗುದಾಣ, ವಿಶ್ರಾಂತಿ ಕೋಣೆ, ಸ್ನಾನ ಗೃಹ, ಮಕ್ಕಳ ಆಟಿಕೆ ಸಾಮಗ್ರಿ ಅಳವಡಿಸಿ ಪ್ರವಾಸಿ ತಾಣವಾಗಿ ನಿರ್ಮಿಸಲಾಗುವುದು ಜೊತೆಗೆ ಪುಷ್ಪೋಧ್ಯಾನ ಮತ್ಸಗಾರ, ಎಡ ಹಾಗೂ ಬಲದಂಡೆ ಕಾಲುವೆಗಳ ನೀರಾವರಿ ಯೋಜನೆಗೆ ಒಳಪಡುವ ಜಿಲ್ಲೆಗಳ ಸಮಗ್ರ ಕೃಷಿ ಮಾಹಿತಿ ಚಿತ್ರ ಪಟ ಬಿಡಿಸಲಾಗುವುದು.
ಜೊತೆಗೆ ಈ ಬಾಗದ ಜನಜೀವನ, ಸಂಸ್ಕೃತಿ ಬಿಂಬಿಸುವ ಚಿತ್ರಗಳನ್ನು ಅನಾವರಣಗೊಳಿಸಲಾಗುವುದು. ಈ ಎಲ್ಲ ಅಭಿವೃದ್ಧಿಗಳ ಕುರಿತು ಈಗಾಗಲೇ ನೀಲ ನಕ್ಷೆ ಸಿದ್ದಪಡಿಸಲು ಡ್ಯಾಂ ಅಧಿಕಾರಿ ಮುಖ್ಯ ಎಂಜಿನಿಯರ್ ರಂಗರಾಮ್ ಅವರಿಗೆ ಸೂಚಿಸಲಾಗಿದೆ ಎಂದು ವಿವರಿಸಿದರು.
ಟಾಪ್ ನ್ಯೂಸ್
![1-24-saturday](https://www.udayavani.com/wp-content/uploads/2024/07/1-24-saturday-2-415x249.jpg)
![](https://www.udayavani.com/wp-content/uploads/2024/03/IndianClicks_GVega_300x250_03212024_1_3.gif)
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
![1-adsadsadsad](https://www.udayavani.com/wp-content/uploads/2024/07/1-adsadsadsad-150x79.jpg)
Sikkim; ಆರೋಗ್ಯದಲ್ಲಿ ಏರುಪೇರಾಗಿ ಬೀದರ್ ನ ಯೋಧ ನಿಧನ
![1-bidar](https://www.udayavani.com/wp-content/uploads/2024/07/1-bidar-150x78.jpg)
Education; ‘ಶಿಕ್ಷಣ ಕಾಶಿ’ಯಾಗಿ ಬದಲಾಗುತ್ತಿದೆ ”ಧರಿನಾಡು”
![Bidar: ಬಾಲಕಿ ಮೇಲೆ ಅತ್ಯಾಚಾರ ಪ್ರಕರಣ… ಆರೋಪಿಗೆ ಕಠಿಣ ಜೀವಾವಧಿ ಶಿಕ್ಷೆ, ೫೦ ಸಾವಿರ ದಂಡ](https://www.udayavani.com/wp-content/uploads/2024/07/bidar-1-150x84.jpg)
Bidar: ಬಾಲಕಿ ಮೇಲೆ ಅತ್ಯಾಚಾರ ಪ್ರಕರಣ… ಆರೋಪಿಗೆ ಕಠಿಣ ಜೀವಾವಧಿ ಶಿಕ್ಷೆ, 50 ಸಾವಿರ ದಂಡ
![Selling liquor online? Minister RB Thimmapura clarified](https://www.udayavani.com/wp-content/uploads/2024/07/thim-150x83.jpg)
Liquor; ಆನ್ಲೈನ್ನಲ್ಲಿ ಮದ್ಯ ಮಾರಾಟ? ಸ್ಪಷ್ಟನೆ ನೀಡಿದ ಸಚಿವ ಆರ್.ಬಿ ತಿಮ್ಮಾಪುರ
![BUS driver](https://www.udayavani.com/wp-content/uploads/2024/07/BUS-driver-150x94.jpg)
Bidar; ಪ್ರೇಮ ವೈಫಲ್ಯದಿಂದ ಖಿನ್ನತೆ: ಯುವಕನಿಂದ ಮಹಾರಾಷ್ಟ್ರದ ಬಸ್ ಗೆ ಕಲ್ಲುತೂರಾಟ!
MUST WATCH
ಹೊಸ ಸೇರ್ಪಡೆ
![1-24-saturday](https://www.udayavani.com/wp-content/uploads/2024/07/1-24-saturday-2-150x90.jpg)
Daily Horoscope: ಪಾಲುದಾರಿಕೆ ವ್ಯವಹಾರದಲ್ಲಿ ಲಾಭ ಹೆಚ್ಚಳ, ಆರೋಗ್ಯ ಉತ್ತಮ
![CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್ಗೆ ವಿವರಣೆ?](https://www.udayavani.com/wp-content/uploads/2024/07/cm-7-150x91.jpg)
CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್ಗೆ ವಿವರಣೆ?
![Ramanagara ಜಿಲ್ಲೆ ಇನ್ನು ಬೆಂಗಳೂರು ದಕ್ಷಿಣ; ರಾಜ್ಯ ಸಚಿವ ಸಂಪುಟದಲ್ಲಿ ನಿರ್ಧಾರ](https://www.udayavani.com/wp-content/uploads/2024/07/Vidhana-Soudha-24-150x100.jpg)
Ramanagara ಜಿಲ್ಲೆ ಇನ್ನು ಬೆಂಗಳೂರು ದಕ್ಷಿಣ; ರಾಜ್ಯ ಸಚಿವ ಸಂಪುಟದಲ್ಲಿ ನಿರ್ಧಾರ
![Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ](https://www.udayavani.com/wp-content/uploads/2024/07/cm-g-150x100.jpg)
Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ
![Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್’!](https://www.udayavani.com/wp-content/uploads/2024/07/Pilikula-Biological-150x91.jpg)
Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್’!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.