Bidar: ಜಿ.ಪಂ ಉಪ ಕಾರ್ಯದರ್ಶಿಗೆ ಚಪ್ಪಲಿಯಿಂದ ಹೊಡೆದ ಅಮಾನತ್ತಿನಲ್ಲಿದ್ದ ಪಿಡಿಒ
Team Udayavani, Mar 11, 2024, 6:43 PM IST
ಬೀದರ್: ಕೆಲಸದಿಂದ ಅಮಾನತ್ತಿನಲ್ಲಿದ್ದ ಪಿಡಿಒನಿಂದ ಜಿ.ಪಂ ಉಪ ಕಾರ್ಯದರ್ಶಿಗೆ ಚಪ್ಪಲಿಯಿಂದ ಹೊಡೆದ ಘಟನೆ ಬೀದರನಲ್ಲಿ ನಡೆದಿದೆ.
ಪ್ರಭುದಾಸ ಜಾಧವ ಎಂಬ ಪಿಡಿಓ ಉಪ ಕಾರ್ಯದರ್ಶಿ ಸೂರ್ಯಕಾಂತ ಬಿರಾದಾರ ಮೇಲೆ ಹಲ್ಲೆ ಮಾಡಿದ್ದಾನೆ.
ಅಕ್ರಮ ಎಸಗಿ ಆರ್ಥಿಕ ನಷ್ಟ ಉಂಟು ಮಾಡಿದ ಆರೋಪದ ಮೇಲೆ ಔರಾದನ ಸುಂದಾಳ ಗ್ರಾಪಂ ಪಿಡಿಒ ಆಗಿದ್ದ ಪ್ರಭುದಾಸ ಅವರನ್ನು ಜಿಪಂ ಸಿಇಒ ಅಮಾನತ್ತು ಮಾಡಿದ್ದರು. ಕೆಲಸಕ್ಕೆ ಮರು ನಿಯೋಜನೆ ಕುರಿತಂತೆ ಉಪ ಕಾರ್ಯದರ್ಶಿಗಳ ಚೆಂಬರ್ ಗೆ ಹೋದಾಗ ಇಬ್ಬರ ನಡುವೆ ವಾಗ್ವಾದ ನಡೆದಿದೆ. ನಂತರ ಕೋಪಗೊಂಡ ಪಿಡಿಒ ಹಲ್ಲೆ ಮಾಡಿದ್ದಾನೆ. ಈ ಕುರಿತು ಉಪ ಕಾರ್ಯದರ್ಶಿಗಳು ಜಿ.ಪಂ ಸಿಇಒಗೆ ದೂರು ನೀಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bidar; ಕರ್ನಾಟಕಕ್ಕೆ ಬರಲು ಮೋದಿಗೆ ಯಾವುದೇ ನೈತಿಕತೆ ಇಲ್ಲ: ಸುರ್ಜೇವಾಲಾ
ಕೇಂದ್ರದಿಂದ 3454 ಕೋಟಿ ರೂ. ಬರ ಪರಿಹಾರ; ರಾಜ್ಯಕ್ಕೆ ಸಂದ ಜಯ: ಈಶ್ವರ ಖಂಡ್ರೆ
B.S.Yediyurappa: ಶಾಸಕ ಪ್ರಭು ಚವ್ಹಾಣ ಹೆಸರು ಹೇಳುತ್ತಿದ್ದಂತೆ ಬಿಎಸ್ವೈ ಗರಂ
BJP; ಖೂಬಾ ಮತ್ತೊಮ್ಮೆ ಸಚಿವರಾಗ್ತಾರೆ : ಔರಾದ್ ನಲ್ಲಿ ಯಡಿಯೂರಪ್ಪ ಘೋಷಣೆ
Bidar; ನೇಹಾ ಪ್ರಕರಣದಲ್ಲಿ ಬಿಜೆಪಿ ರಾಜಕೀಯ ಮಾಡುವುದು ಸರಿಯಲ್ಲ: ಸಿಎಂ ಸಿದ್ಧರಾಮಯ್ಯ