Bidar:ಜಿಲ್ಲೆಯ ಹಲವೆಡೆ ಬಿರುಗಾಳಿ ಸಹಿತ ಮಳೆ, ತಂಪಾದ ಇಳೆ
Team Udayavani, Mar 17, 2024, 5:33 PM IST
ಬೀದರ್: ಜಿಲ್ಲೆಯ ಹಲವೆಡೆ ರವಿವಾರ ಸಾಯಂಕಾಲ ಗುಡುಗು, ಬಿರುಗಾಳಿ ಸಹಿತ ಜೋರು ಮಳೆಯಾಗಿದ್ದು, ವಾತಾವರಣ ಸಂಪೂರ್ಣ ತಂಪಾಗಿಸಿತು.
ಜಿಲ್ಲೆಯಲ್ಲಿ ಮಾರ್ಚ್ ತಿಂಗಳಲ್ಲೇ ಕೆಂಡದಂತಹ ಬಿಸಿಲಿಗೆ ಜನ ಬೇಸತ್ತು ಹೋಗಿದ್ದರು. ಆದರೆ, ಬಿರುಗಾಳಿಯೊಂದಿಗೆ ಸುರಿದ ಮಳೆಯಿಂದ ಇಳೆ ತಂಪಾಗಿದ್ದು, ಜನ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.
ಬೆಳಗ್ಗೆಯಿಂದಲೇ ಮೋಡ ಕವಿದ ವಾತಾವರಣ ಇತ್ತು. ಸಾಯಂಕಾಲ 4.30 ರ ಸುಮಾರಿಗೆ ಏಕಾಏಕಿ ವರ್ಷಧಾರೆಯಾಗಿದೆ. ಬೀದರ, ಔರಾದ ಮತ್ತು ಕಮಲನಗರ ತಾಲೂಕು ಸೇರಿದಂತೆ ಹಲವೆಡೆ ಮಳೆಯಾಗಿದೆ. ಬಿರುಗಾಳಿ ಹಿನ್ನಲೆ ಔರಾದನ ಚಿಕ್ಲಿ ಗ್ರಾಮ ಸೇರಿ ಕೆಲವೆಡೆ ಮನೆಗಳ ಮೇಲಿನ ಪತ್ರಗಳು ಹಾರಿ ಹೋಗಿದ್ದರೆ, ವಿದ್ಯುತ್ ಕಂಬ ಮತ್ತು ಮರಗಳು ನೆಲಕ್ಕುರುಳಿವೆ.