ನಷ್ಟಕ್ಕೊಳಗಾದ ಪ್ರತಿಯೊಬ್ಬ ರೈತಗೂ ಪರಿಹಾರ
Team Udayavani, Nov 27, 2021, 3:18 PM IST
ಸಿಂಧನೂರು: ಅಪಾರ ಪ್ರಮಾಣದಲ್ಲಿ ಭತ್ತದ ಬೆಳೆಹಾನಿಗೆ ಒಳಗಾಗಿದ್ದು, ಈ ಬಗ್ಗೆ ಸಿಎಂ ಬಸವರಾಜ ಬೊಮ್ಮಾಯಿ ಅವರ ಗಮನಕ್ಕೂ ತರಲಾಗಿದೆ. ನಷ್ಟಕ್ಕೆ ಒಳಗಾದ ಪ್ರತಿಯೊಬ್ಬ ರೈತರಿಗೂ ಸರಕಾರ ಪರಿಹಾರ ಕಲ್ಪಿಸಲಿದೆ ಎಂದು ಮಾಜಿ ಶಾಸಕ ಪ್ರತಾಪ್ಗೌಡ ಪಾಟೀಲ್ ಭರವಸೆ ನೀಡಿದರು.
ತಾಲೂಕಿನ 4ನೇ ಮೈಲ್ ಕ್ಯಾಂಪ್, ವಿರೂಪಾಪುರ, ಮಲ್ಲದಗುಡ್ಡ, ಅರಳಹಳ್ಳಿ, 7ನೇ ಮೈಲ್ ಕ್ಯಾಂಪ್, ಗುಂಜಳ್ಳಿ, ಶ್ರೀನಿವಾಸ್ ಕ್ಯಾಂಪ್, ತುರುವಿಹಾಳ ಭಾಗದಲ್ಲಿ ಅಕಾಲಿಕ ಮಳೆಯಿಂದ ಹಾನಿಗೀಡಾದ ಭತ್ತದ ಗದ್ದೆಗಳನ್ನು ವೀಕ್ಷಿಸಿ ಶುಕ್ರವಾರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
ಸ್ಥಳಕ್ಕೆ ಭೇಟಿ ನೀಡಿದ ಮಾಜಿ ಶಾಸಕರನ್ನು ಹಲವು ರೈತರು ತಮ್ಮ ಜಮೀನುಗಳಿಗೆ ಕರೆದೊಯ್ದು ಹಾನಿ ಪ್ರದೇಶ ನೋಡುವಂತೆ ಒತ್ತಾಯಿಸಿದರು. ರೈತರ ಅಹವಾಲು ಕೇಳಿದ ಬಳಿಕ ಅಧಿಕಾರಿಗಳನ್ನು ಸಂಪರ್ಕಿಸಿದ ಮಾಜಿ ಶಾಸಕರು, ಸಮರ್ಪಕ ಬೆಳೆಹಾನಿ ಸಮೀಕ್ಷೆ ನಡೆಸಬೇಕು. ಯಾವೊಬ್ಬ ರೈತನೂ ಕೂಡ ಸರ್ವೇಯಿಂದ ಹೊರಗೆ ಉಳಿಯಬಾರದು ಎಂದು ಒತ್ತಾಯಿಸಿದರು.
ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಅಮರೇಗೌಡ ವಿರೂಪಾಪುರ, ಮುಖಂಡರಾದ ವೀರಬಸನಗೌಡ ವಿರೂಪಾಪುರ, ರಾಮಲಿಂಗಪ್ಪ ಸಾಹುಕಾರ, ಮಸ್ಕಿ ಮಂಡಲ ಅಧ್ಯಕ್ಷ ಶಿವಪುತ್ರಪ್ಪ, ಸತ್ಯಪ್ಪ, ಸತ್ಯಬಾಬು, ವೀರನಗೌಡ ಗುಂಜಳ್ಳಿ, ಹನುಮನಗೌಡ, ರುದ್ರಸ್ವಾಮಿ, ನಿಂಗಪ್ಪ ಕಟ್ಟಿಮನಿ, ಕರಿಯಪ್ಪ ಭಂಗಿ, ಶರಣಪ್ಪ ಹೊಸಗೌಡ್ರು, ಬಾಲಪ್ಪ ಕುಂಟೋಜಿ, ಶರಣಬಸವ ನಾಗರಬೆಂಚಿ ಸೇರಿದಂತೆ ಇತರರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bidar: ರಾಜ್ಯದ 28 ಸ್ಥಾನದಲ್ಲೂ ಕಾಂಗ್ರೆಸ್ಗೆ ಗೆಲುವು: ಮುನಿಯಪ್ಪ ವಿಶ್ವಾಸ
Prajwal Pendrive Case: ವಿಶ್ವದ ನಾಗರಿಕ ಸಮಾಜವೇ ತಲೆ ತಗ್ಗಿಸುವಂತಹ ಘಟನೆ ಇದು
PM ಮೋದಿ ಸ್ಟೇಟ್ಸ್ ಮ್ಯಾನ್ ಅಲ್ಲ, ಸೇಲ್ಸ್ಮ್ಯಾನ್: ಬಿ.ಕೆ ಹರಿಪ್ರಸಾದ್
Bidar; ಹಣ ಹಂಚುವ ದೂರು: ನಾಗಮಾರಪಳ್ಳಿ ಮನೆಯಲ್ಲಿ ಪರಿಶೀಲನೆ
Bidar; ಕರ್ನಾಟಕಕ್ಕೆ ಬರಲು ಮೋದಿಗೆ ಯಾವುದೇ ನೈತಿಕತೆ ಇಲ್ಲ: ಸುರ್ಜೇವಾಲಾ