ಸಮಾಜ ಸಂಘಟನೆಗೆ ಒತ್ತು ಕೊಡಿ
ಬೇಮಳಖೇಡಾದಲ್ಲಿ ಹೇಮರಡ್ಡಿ ಮಲ್ಲಮ್ಮ ಮಂದಿರ ಕಳಸಾರೋಹಣ
Team Udayavani, Feb 1, 2020, 4:16 PM IST
ಹುಮನಾಬಾದ: ರೆಡ್ಡಿ ಸಮಾಜ ಬಾಂಧವರು ಸಮಾಜದ ಸಂಘಟನೆಗೆ ಒತ್ತು ಕೊಡಬೇಕು. ರೆಡ್ಡಿ ಸಮಾಜದ ಅಭಿವೃದ್ಧಿಗಾಗಿ ಎಲ್ಲರೂ ಒಂದಾಗಿ ಶ್ರಮಿಸಬೇಕು ಎಂದು ಮಾಜಿ ಸಚಿವ ರಾಮಲಿಂಗಾರಡ್ಡಿ ಹೇಳಿದರು.
ಚಿಟಗುಪ್ಪ ತಾಲೂಕಿನ ಬೇಮಳಖೇಡಾ ಗ್ರಾಮದಲ್ಲಿ ಶುಕ್ರವಾರ ನಡೆದ ಹೇಮರಡ್ಡಿ ಮಲ್ಲಮ್ಮದೇವಿ ಮಂದಿರದ ಕಳಸಾರೋಹಣ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಪ್ರತಿಯೊಂದು ಸಮಾಜದವರು ಇಂದು ಸಂಘಟನೆಗೆ ಒತ್ತು ನೀಡುತ್ತಿದ್ದಾರೆ. ಅದೇ ರೀತಿ ರಡ್ಡಿ ಸಮಾಜದವರು ಒಂದುಕಡೆ ಸೇರಿ ಸಮಾಜ ಸಂಘಟನೆ ಮಾಡುವುದರಲ್ಲಿ ಯಾವುದೇ ತಪ್ಪೇನಿಲ್ಲ ಎಂದ ಅವರು, ರಡ್ಡಿ ಸಮಾಜಕ್ಕೆ ತನ್ನದೆಯಾದ ಇತಿಹಾಸವಿದೆ. ಯಾವುದೇ ಗೊಂದಲಗಳು ಹಾಗೂ ವೈಮನಸ್ಸು ಇದ್ದಲ್ಲಿ ಅವುಗಳನ್ನು ಬಿದಿಗಿಟ್ಟು ಸಮಾಜ ಸಂಘಟನೆಗೆ ಮುಂದಾಗಬೇಕು ಎಂದು ಸಲಹೆ ನೀಡಿದರು.
ಶಾಸಕ ಬಂಡೆಪ್ಪ ಖಾಶೆಂಪೂರ ಮಾತನಾಡಿ, ಶಿವಶರಣೆ ಹೇಮರಡ್ಡಿ ಮಲ್ಲಮ್ಮ ತಾಯಿ ಸೇರಿದಂತೆ ಅನೇಕ ಶಿವಶರಣರ ತತ್ವಾದರ್ಶಗಳನ್ನು ಪ್ರತಿಯೊಬ್ಬರು ಜೀವನದಲ್ಲಿ ಪಾಲಿಸಬೇಕು. ರಡ್ಡಿ ಸಮಾಜ ಬಲಿಷ್ಠ ಸಮಾಜವಾಗಿ ಬೆಳೆಯುತ್ತಿದೆ. ವಿವಿಧ ಕ್ಷೇತ್ರದಲ್ಲಿ ರಡ್ಡಿ ಸಮಾಜದವರು ಗುರುತಿಸಿಕೊಳ್ಳುತ್ತಿದ್ದಾರೆ ಎಂದರು.
ಇದಕ್ಕೂ ಮುನ್ನ ಹೇಮರಡ್ಡಿ ಮಲ್ಲಮ್ಮದೇವಿ ಮಂದಿರದಲ್ಲಿ ಹೋಮ ಕಾರ್ಯಕ್ರಮ ನಡೆಯಿತು. ಅಲ್ಲದೆ, ನಾನಾ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು. ಹೇಮವೇಮ ಗುರುಪೀಠ ಹರಿಹರದ ವೇಮನಾನಂದ ಮಹಾಸ್ವಾಮಿಗಳು ಆರ್ಶೀವಚನ ನೀಡಿದರು. ಹುಗ್ಗಿ ಪಾಟೀಲ, ರೆಡ್ಡಿ ಸಮಾಜದ ಅಧ್ಯಕ್ಷ ಅಶೋಕರಡ್ಡಿ ಔರಾದಿ, ಎನ್. ಶೇಖರರಡ್ಡಿ,
ಜಿಲ್ಲಾ ಪಂಚಾಯಿತಿ ಸದಸ್ಯ ಗುಂಡುರಡ್ಡಿ ಕಮಲಾಪೂರೆ, ಸಂತೋಷ ರಾಸೂರ್,
ರವೀಂದ್ರರಡ್ಡಿ ಕೊತ್ತೂರ, ನಿರ್ದೇಶಕ ಕೃಷ್ಣರಡ್ಡಿ, ಜಿಲ್ಲಾ ಅಧ್ಯಕ್ಷ ಶಂಕರರಡ್ಡಿ ಚಿಟ್ಟಾ, ಗ್ರಾಪಂ ಅಧ್ಯಕ್ಷೆ ತುಳಸಮ್ಮ ಭುರಿ, ಪ್ರಮುಖರಾದ ರಮೇಶರಡ್ಡಿ ಹುಮನಾಬಾದ, ನಸೀಮ ಪಟೇಲ, ಮಣಿಪಾಲರಡ್ಡಿ ಮುನ್ನೂರ ಸೇರಿದಂತೆ ಅನೇಕರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bidar; ಕರ್ನಾಟಕಕ್ಕೆ ಬರಲು ಮೋದಿಗೆ ಯಾವುದೇ ನೈತಿಕತೆ ಇಲ್ಲ: ಸುರ್ಜೇವಾಲಾ
ಕೇಂದ್ರದಿಂದ 3454 ಕೋಟಿ ರೂ. ಬರ ಪರಿಹಾರ; ರಾಜ್ಯಕ್ಕೆ ಸಂದ ಜಯ: ಈಶ್ವರ ಖಂಡ್ರೆ
B.S.Yediyurappa: ಶಾಸಕ ಪ್ರಭು ಚವ್ಹಾಣ ಹೆಸರು ಹೇಳುತ್ತಿದ್ದಂತೆ ಬಿಎಸ್ವೈ ಗರಂ
BJP; ಖೂಬಾ ಮತ್ತೊಮ್ಮೆ ಸಚಿವರಾಗ್ತಾರೆ : ಔರಾದ್ ನಲ್ಲಿ ಯಡಿಯೂರಪ್ಪ ಘೋಷಣೆ
Bidar; ನೇಹಾ ಪ್ರಕರಣದಲ್ಲಿ ಬಿಜೆಪಿ ರಾಜಕೀಯ ಮಾಡುವುದು ಸರಿಯಲ್ಲ: ಸಿಎಂ ಸಿದ್ಧರಾಮಯ್ಯ