600 ಲೀ. ಬೆಲ್ಲದ ಕೊಳೆ ನಾಶ: ಇಬ್ಬರ ಬಂಧನ
Team Udayavani, Apr 26, 2020, 1:45 PM IST
ಮುದಗಲ್ಲ: ಜುಕ್ಕರಮಡು ತಾಂಡಾದಲ್ಲಿ ವಶಪಡಿಸಿಕೊಂಡ ಬೆಲ್ಲದ ಕೊಳೆ ತುಂಬಿದ್ದ ಕೊಡಗಳು.
ಮುದಗಲ್ಲ: ಜಕ್ಕರಮಡು ತಾಂಡಾಕ್ಕೆ ದಾಳಿ ಮಾಡಿದ ಪೊಲೀಸರು ಮತ್ತು ಅಬಕಾರಿ ಇಲಾಖೆ ಅಧಿಕಾರಿಗಳು 600 ಲೀ. ಬೆಲ್ಲದ ಕೊಳೆ ಮತ್ತು 100 ಕ್ವಿಂಟಲ್ ಬೆಲ್ಲ ನಾಶಗೊಳಿಸಿ ಇಬ್ಬರನ್ನು ಬಂಧಿಸಿದ್ದಾರೆ.
ಮಸ್ಕಿ ಸಿಪಿಐ ದೀಪಕ ಭೂಸರಡ್ಡಿ ಹಾಗೂ ಅಬಕಾರಿ ಡಿಎಸ್ಪಿ ಮೈನುದ್ದೀನ್ ನೇತೃತ್ವದಲ್ಲಿ ಜಂಟಿ ದಾಳಿ ನಡೆಲಾಯಿತು. 150 ಬಿಂದಿಗೆಗಳಲ್ಲಿ ತುಂಬಿ ಇಟ್ಟಿದ್ದ 600 ಲೀಟರ್ ಬೆಲ್ಲದ ಕೊಳೆ, 18 ಬ್ಯಾಗ್ ಬೆಲ್ಲ ವಶಕ್ಕೆ ಪಡೆದು ಅದನ್ನು ಸ್ಥಳದಲ್ಲೇ ನಾಶ ಮಾಡಿದರು ಹಾಗೂ ಕಳ್ಳಭಟ್ಟಿ ಸಾರಾಯಿ ಮಾರಾಟದಲ್ಲಿ ತೊಡಗಿದ್ದ ಕಾಳಪ್ಪ ಪುಲ್ಲಪ್ಪ ರಾಠೊಡ, ಪುಲ್ಲಪ್ಪ ಜಿತಪ್ಪ ರಾಠೊಡ ಎಂಬ ಆರೋಪಿಗಳನ್ನು ಬಂಧಿಸಿ ಮುದಗಲ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಮುದಗಲ್ಲ ಠಾಣೆ ಪಿಎಐ ಡಾಕೇಶ ಯು., ಮಸ್ಕಿ ಠಾಣೆ ಪಿಎಐ ಸಣ್ಣ ವೀರಣ್ಣ ಹಾಗೂ ಮುದಗಲ ಠಾಣೆ ಸಿಬ್ಬಂದಿ ಅಕ್ಕಮ್ಮ, ಭಾಷಾ ಪೋತ್ನಾಳ, ಹನುಮಂತ ದೇವಭೂಪುರ, ಅಡಿವೆಪ್ಪ, ವೆಂಕಟೇಶ, ಹನುಮಂತ ಭೋವಿ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bidar; ಕರ್ನಾಟಕಕ್ಕೆ ಬರಲು ಮೋದಿಗೆ ಯಾವುದೇ ನೈತಿಕತೆ ಇಲ್ಲ: ಸುರ್ಜೇವಾಲಾ
ಕೇಂದ್ರದಿಂದ 3454 ಕೋಟಿ ರೂ. ಬರ ಪರಿಹಾರ; ರಾಜ್ಯಕ್ಕೆ ಸಂದ ಜಯ: ಈಶ್ವರ ಖಂಡ್ರೆ
B.S.Yediyurappa: ಶಾಸಕ ಪ್ರಭು ಚವ್ಹಾಣ ಹೆಸರು ಹೇಳುತ್ತಿದ್ದಂತೆ ಬಿಎಸ್ವೈ ಗರಂ
BJP; ಖೂಬಾ ಮತ್ತೊಮ್ಮೆ ಸಚಿವರಾಗ್ತಾರೆ : ಔರಾದ್ ನಲ್ಲಿ ಯಡಿಯೂರಪ್ಪ ಘೋಷಣೆ
Bidar; ನೇಹಾ ಪ್ರಕರಣದಲ್ಲಿ ಬಿಜೆಪಿ ರಾಜಕೀಯ ಮಾಡುವುದು ಸರಿಯಲ್ಲ: ಸಿಎಂ ಸಿದ್ಧರಾಮಯ್ಯ
MUST WATCH
ಹೊಸ ಸೇರ್ಪಡೆ
ಮೀಸಲಾತಿ ಕುರಿತ ಅಮಿತ್ ಶಾ ಹೇಳಿಕೆಯ ನಕಲಿ ವಿಡಿಯೋ ವೈರಲ್… FIR ದಾಖಲು
Srinivas Prasad: ದ. ಕರ್ನಾಟಕದ ʼದಲಿತ ಸೂರ್ಯʼ ಎಂದು ಖ್ಯಾತರಾಗಿದ್ದ ಶ್ರೀನಿವಾಸ ಪ್ರಸಾದ್
ಗುಜರಾತ್ ಕರಾವಳಿ ಪ್ರದೇಶದಲ್ಲಿ 602 ಕೋಟಿ ಮೌಲ್ಯದ ಡ್ರಗ್ಸ್ ವಶ: 14 ಪಾಕ್ ಪ್ರಜೆಗಳ ಬಂಧನ
ನಾರಿ ಶಕ್ತಿ ವಿರೋಧಿಸುವ ಕಾಂಗ್ರೆಸ್ಗೆ ಚುನಾವಣೆಯಲ್ಲಿ ಪಾಠ ಕಲಿಸಬೇಕು: ಗಾಯತ್ರಿ ಸಿದ್ದೇಶ್ವರ
Spying: ಪಾಕಿಸ್ತಾನ ಪರ ಬೇಹುಗಾರಿಕೆ: ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ ವ್ಯಕ್ತಿಯ ಬಂಧನ