![Shimoga; ಎಣ್ಣೆ ಕೊಟ್ಟಿಲ್ಲವೆಂದು ಹೆದ್ದಾರಿ ತಡೆದ ಯುವಕನ ಹುಚ್ಚಾಟಕ್ಕೆ ವಾಹನ ಸವಾರರ ಪರದಾಟ](https://www.udayavani.com/wp-content/uploads/2024/07/shi1-415x229.jpg)
ಅಂಬೇಡ್ಕರ್ ಅನುಯಾಯಿಗಳಾಗಿ: ಕಲ್ಬುರ್ಗಿ
Team Udayavani, Dec 8, 2020, 4:32 PM IST
![ಅಂಬೇಡ್ಕರ್ ಅನುಯಾಯಿಗಳಾಗಿ: ಕಲ್ಬುರ್ಗಿ](https://www.udayavani.com/wp-content/uploads/2020/12/BIADAR-TDY-1-620x372.jpg)
ಬೀದರ: ಬುದ್ಧ ಮತ್ತು ಅಂಬೇಡ್ಕರ ಎಂದೂ ಪರಿಹಾರಕ್ಕಾಗಿ ಹೋರಾಟ ಮಾಡಿಲ್ಲ. ಹೊರತಾಗಿಪರಿವರ್ತನೆಗಾಗಿ ಹೋರಾಟ ಮಾಡಿದ್ದಾರೆ. ನಾವು ಬಾಬಾ ಸಾಹೇಬರ ಅಭಿಮಾನಿಗಳಾಗಬಾರದು, ಅವರ ಅನುಯಾಯಿಗಳಾದರೆ ಮಾತ್ರ ಮಾನಸಿಕ ಗುಲಾಮಿತನದಿಂದ ಹೊರ ಬರಲು ಸಾಧ್ಯ ಎಂದುಪ್ರಗತಿಪರ ಚಿಂತಕ ವಿಠಲ್ ವಗ್ಗನ್ ಕಲುºರ್ಗಿ ಕರೆ ನೀಡಿದರು.
ನಗರದಲ್ಲಿ ಡಾ| ಅಂಬೇಡ್ಕರರ 64ನೇ ಪರಿನಿರ್ವಾಣ ದಿನ ಆಯೋಜನಾ ಸಮಿತಿ ಹಮ್ಮಿಕೊಂಡಿದ್ದ ಸ್ವಯಂ ಪ್ರಕಾಶಿತರಾಗುವ ಕಡೆ ನಮ್ಮ ನಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಅಂಧ ವಿಶ್ವಾಸ ತೊರೆಯಬೇಕು.ಎಲ್ಲರೂ ಮೈತ್ರಿ ಭಾವದಿಂದ ಬದುಕಿದಾಗ ಮಾತ್ರ ಭಾರತ ಪ್ರಬುದ್ಧ ದೇಶವಾಗಲು ಸಾಧ್ಯ ಎಂದು ವಿವರಿಸಿದರು.
ಮಹಾತ್ಮರ ಭಾವಚಿತ್ರಗಳನ್ನು ಕೇವಲ ಮನೆಗಳಲ್ಲಿ ಇಟ್ಟು ಪೂಜಿಸಿದರೆ ಸಾಲದು. ಅವರ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಆಚರಣೆಯಲ್ಲಿ ತಂದು, ಇನ್ನೊಬ್ಬರಿಗೆ ತಿಳಿ ಹೇಳಿದಾಗ ಮಾತ್ರ ಬೌದ್ಧಧರ್ಮ ಬೆಳೆಯಲು ಸಾಧ್ಯ. ಈಗಿನ ಬಹುತೇಕ ಜನರು ಬಾಬಾ ಸಾಹೇಬರ ಭಾವಚಿತ್ರಗಳು ಹಾಗೂ ಪ್ರತಿಮೆಗಳನ್ನು ಇಟ್ಟು ಪೂಜೆ ಮಾಡುವುದಕ್ಕಷ್ಟೇ ಸೀಮಿತ ರಾಗಿದ್ದಾರೆಂದು ಬೇಸರ ವ್ಯಕ್ತಪಡಿಸಿದರು.2016ರಿಂದ ವಿಶ್ವಸಂಸ್ಥೆಯಡಿಯ 193 ರಾಷ್ಟ್ರಗಳು ಅಂಬೇಡ್ಕರ ಅವರ ಜನ್ಮದಿನ ಆಚರಣೆ ಮಾಡುತ್ತಿವೆ. ಪ್ರಪಂಚದಲ್ಲಿ ಯಾವ ಫಿಲಾಸಫಿಯನ್ನು ಓದದ ಚೀನಾ ದೇಶ ತನ್ನ ವಿಶ್ವವಿದ್ಯಾಲಯಗಳಲ್ಲಿ ಬಾಬಾಸಾಹೇಬರ ಬರೆಹಗಳ ಕುರಿತು ಅಧ್ಯಯನ ನಡೆಸಿದೆ. ಬಾಬಾ ಸಾಹೇಬರು ಪ್ರತಿಮೆಗಳಲ್ಲಿ ಇಲ್ಲ. ಪ್ರತಿಮೆಗಳು ಸ್ವಾಭಿಮಾನದ ಸಂಕೇತವಷ್ಟೇ. ಬಾಬಾ ಸಾಹೇಬರ ಪುಸ್ತಕಗಳನ್ನು ಓದಿ ಅವರ ವಿಚಾರಗಳು ಮೈಗೂಡಿಸಿಕೊಂಡು ಆಚರಣೆಯಲ್ಲಿ ತರಬೇಕು ಎಂದು ತಿಳಿಸಿದರು.
ಪ್ರಾಚಾರ್ಯ ವಿಠಲದಾಸ ಪ್ಯಾಗೆ ಮಾತನಾಡಿ, ಅಂಬೇಡ್ಕರ ಬಗ್ಗೆ ನಾವು ಭಾವುಕರಾಗದೇಅವರ ವಿಚಾರಗಳನ್ನು ಮೈಗೂಡಿಸಿಕೊಂಡುಆಚರಿಸಬೇಕೆಂದು ಹೇಳಿದರು.ಕಲಬುರಗಿಯ ಯುವ ಚಿಂತಕ ಅನಿಲಕುಮಾರ ಟೇಂಗಳಿ ಮಾತನಾಡಿದರು. ಆಣದೂರನ ಭಂತೆಧಮ್ಮಾನಂದ ಥೇರೋ ನೇತೃತ್ವದ ಭಿಕ್ಕು ಸಂಘ ಸಾನ್ನಿಧ್ಯ ವಹಿಸಿದ್ದರು. ಮುಖಂಡ ಸೂರ್ಯಕಾಂತನಾಗಮಾರಪಳ್ಳಿ, ಪ್ರದೀಪ ನಾಟೇಕರ್, ಸೂರ್ಯಕಾಂತ ಸಾದೂರೆ, ವಿನೋದ ರತ್ನಾಕರ್, ಸಂತೋಷ ಭೂರೆ, ವಿಜಯ ರಾಮಬಾಣ್, ಶ್ರೀಧರಸೋಮನೂರ, ಕಿಶೋರ ನವಲಸಪುರ, ರಾಜರತನಶಿಂಧೆ, ಅಮರ ಸಾಗರ, ಪವನ್ ಮಿಠಾರೆ, ಗೌತಮ ಮುತ್ತಂಗಿಕರ್, ಶಿವಕುಮಾರ ಗೂನಳ್ಳಿಕರ್, ಶಾರದಾ ಆಳಂದಕರ್, ಉಷಾ ಬನಸೂಡೆ ಹಾಗೂ ಇಂದುಮತಿ ಸಾಗರ ಇದ್ದರು.
ಟಾಪ್ ನ್ಯೂಸ್
![Shimoga; ಎಣ್ಣೆ ಕೊಟ್ಟಿಲ್ಲವೆಂದು ಹೆದ್ದಾರಿ ತಡೆದ ಯುವಕನ ಹುಚ್ಚಾಟಕ್ಕೆ ವಾಹನ ಸವಾರರ ಪರದಾಟ](https://www.udayavani.com/wp-content/uploads/2024/07/shi1-415x229.jpg)
![](https://www.udayavani.com/wp-content/uploads/2024/03/IndianClicks_GVega_300x250_03212024_1_3.gif)
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
![1-adsadsadsad](https://www.udayavani.com/wp-content/uploads/2024/07/1-adsadsadsad-150x79.jpg)
Sikkim; ಆರೋಗ್ಯದಲ್ಲಿ ಏರುಪೇರಾಗಿ ಬೀದರ್ ನ ಯೋಧ ನಿಧನ
![1-bidar](https://www.udayavani.com/wp-content/uploads/2024/07/1-bidar-150x78.jpg)
Education; ‘ಶಿಕ್ಷಣ ಕಾಶಿ’ಯಾಗಿ ಬದಲಾಗುತ್ತಿದೆ ”ಧರಿನಾಡು”
![Bidar: ಬಾಲಕಿ ಮೇಲೆ ಅತ್ಯಾಚಾರ ಪ್ರಕರಣ… ಆರೋಪಿಗೆ ಕಠಿಣ ಜೀವಾವಧಿ ಶಿಕ್ಷೆ, ೫೦ ಸಾವಿರ ದಂಡ](https://www.udayavani.com/wp-content/uploads/2024/07/bidar-1-150x84.jpg)
Bidar: ಬಾಲಕಿ ಮೇಲೆ ಅತ್ಯಾಚಾರ ಪ್ರಕರಣ… ಆರೋಪಿಗೆ ಕಠಿಣ ಜೀವಾವಧಿ ಶಿಕ್ಷೆ, 50 ಸಾವಿರ ದಂಡ
![Selling liquor online? Minister RB Thimmapura clarified](https://www.udayavani.com/wp-content/uploads/2024/07/thim-150x83.jpg)
Liquor; ಆನ್ಲೈನ್ನಲ್ಲಿ ಮದ್ಯ ಮಾರಾಟ? ಸ್ಪಷ್ಟನೆ ನೀಡಿದ ಸಚಿವ ಆರ್.ಬಿ ತಿಮ್ಮಾಪುರ
![BUS driver](https://www.udayavani.com/wp-content/uploads/2024/07/BUS-driver-150x94.jpg)
Bidar; ಪ್ರೇಮ ವೈಫಲ್ಯದಿಂದ ಖಿನ್ನತೆ: ಯುವಕನಿಂದ ಮಹಾರಾಷ್ಟ್ರದ ಬಸ್ ಗೆ ಕಲ್ಲುತೂರಾಟ!
MUST WATCH
ಹೊಸ ಸೇರ್ಪಡೆ
![Shimoga; ಎಣ್ಣೆ ಕೊಟ್ಟಿಲ್ಲವೆಂದು ಹೆದ್ದಾರಿ ತಡೆದ ಯುವಕನ ಹುಚ್ಚಾಟಕ್ಕೆ ವಾಹನ ಸವಾರರ ಪರದಾಟ](https://www.udayavani.com/wp-content/uploads/2024/07/shi1-150x83.jpg)
Shimoga; ಎಣ್ಣೆ ಕೊಟ್ಟಿಲ್ಲವೆಂದು ಹೆದ್ದಾರಿ ತಡೆದ ಯುವಕನ ಹುಚ್ಚಾಟಕ್ಕೆ ವಾಹನ ಸವಾರರ ಪರದಾಟ
![2-chithapura](https://www.udayavani.com/wp-content/uploads/2024/07/2-chithapura-150x90.jpg)
Chittapur: ಪಟ್ಟಣದ ಹೊರವಲಯದಲ್ಲಿ ಯುವಕನ ಶವ ಪತ್ತೆ: ಕೊಲೆ ಶಂಕೆ
![Leopard… ಪೆರಂಪಳ್ಳಿ: ಮನೆಯ ಕಾಂಪೌಂಡ್ ಒಳಗೆ ಕಾಣಿಸಿಕೊಂಡ ಚಿರತೆ… ಭಯಭೀತರಾದ ಜನ](https://www.udayavani.com/wp-content/uploads/2024/07/chirate-1-150x90.jpg)
Leopard… ಪೆರಂಪಳ್ಳಿ: ಮನೆಯ ಕಾಂಪೌಂಡ್ ಒಳಗೆ ಕಾಣಿಸಿಕೊಂಡ ಚಿರತೆ… ಭಯಭೀತರಾದ ಜನ
![Navi Mumbai: ಬೆಳ್ಳಂಬೆಳಗ್ಗೆ ಮೂರೂ ಅಂತಸ್ತಿನ ಕಟ್ಟಡ ಕುಸಿತ… ಹಲವರು ಸಿಲುಕಿರುವ ಶಂಕೆ](https://www.udayavani.com/wp-content/uploads/2024/07/BUILDING-1-150x84.jpg)
Navi Mumbai: ಬೆಳ್ಳಂಬೆಳಗ್ಗೆ ಮೂರೂ ಅಂತಸ್ತಿನ ಕಟ್ಟಡ ಕುಸಿತ… ಹಲವರು ಸಿಲುಕಿರುವ ಶಂಕೆ
![Tragedy: ಚಲಿಸುತ್ತಿದ್ದ ಬೈಕ್ ಮೇಲೆ ಬಿದ್ದ ಮರ… ಯುವಕ ಸ್ಥಳದಲ್ಲೇ ಮೃತ್ಯು](https://www.udayavani.com/wp-content/uploads/2024/07/BIKE-7-150x86.jpg)
Tragedy: ಚಲಿಸುತ್ತಿದ್ದ ಬೈಕ್ ಮೇಲೆ ಬಿದ್ದ ಮರ… ಯುವಕ ಸ್ಥಳದಲ್ಲೇ ಮೃತ್ಯು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.