3600 ಆಹಾರ ಧಾನ್ಯ ಕಿಟ್ ವಿತರಣೆ: ಬಸವರಾಜ
Team Udayavani, Apr 27, 2020, 1:27 PM IST
ಸೇಡಂ: ಎನ್ಜಿಒ, ದಾನಿಗಳ ಸಭೆಯಲ್ಲಿ ತಹಶೀಲ್ದಾರ್ ಬಸವರಾಜ ಬೆಣ್ಣೆಶಿರೂರ ಮಾತನಾಡಿದರು.
ಸೇಡಂ: ಕೋವಿಡ್ ಮಹಾಮಾರಿಯಿಂದ ಕಂಗೆಟ್ಟ ಸಾವಿರಾರು ಕುಟುಂಬಗಳಿಗೆ ದಾನಿಗಳು ನೀಡಿದ ಕಿಟ್ಗಳನ್ನು ಪ್ರಾಮಾಣಿಕವಾಗಿ ತಲುಪಿಸಲಾಗಿದೆ ಎಂದು ತಹಶೀಲ್ದಾರ್ ಬಸವರಾಜ ಬೆಣ್ಣೆಶಿರೂರ ಹೇಳಿದರು.
ಪಟ್ಟಣದ ತಹಶೀಲ್ದಾರ್ ಕಚೇರಿಯಲ್ಲಿ ಕರೆದ ಎನ್ಜಿಒ, ದಾನಿಗಳ ಸಭೆಯಲ್ಲಿ ಮಾಹಿತಿ ನೀಡಿದ ಅವರು, ಮಳಖೇಡ ರಾಜಶ್ರೀ ಸಿಮೆಂಟ್ ಕಾರ್ಖಾನೆ, ಅಜೀಂ ಪ್ರೇಮಜಿ ಫೌಂಡೇಷನ್, ಮಾರ್ವಾಡಿ ಸಮಾಜ, ಮಾಜಿ ಸಚಿವ ಡಾ. ಶರಣಪ್ರಕಾಶ ಪಾಟೀಲ ಹೀಗೆ ಹಲವಾರು ದಾನಿಗಳಿಂದ ಪಡೆದಂತಹ ದವಸ ಧಾನ್ಯ, ಅಡುಗೆ ಸಾಮಗ್ರಿಗಳ 3600 ಕಿಟ್ಗಳನ್ನು ಈಗಾಗಲೇ ಅವಶ್ಯಕತೆ ಇರುವ ಕುಟುಂಬಗಳಿಗೆ ತಲುಪಿಸಲಾಗಿದೆ. ಯಾವುದೇ ಪಕ್ಷ ಬೇಧ, ಜಾತಿ ಬೇಧ ಮಾಡದೇ ಕಷ್ಟದಲ್ಲಿರುವವರಿಗೆ ಕಿಟ್ ಗಳನ್ನು ಸರಬರಾಜು ಮಾಡಲಾಗಿದೆ. ಪಡಿತರ ಕಾರ್ಡ್ ಹೊಂದಿರದವರು ಹಾಗೂ ಪಡಿತರಕ್ಕಾಗಿ ಅರ್ಜಿ ಹಾಕದ 1800 ಕುಟುಂಬಗಳನ್ನು ಗುರುತಿಸಲಾಗಿದ್ದು, ಅವರಿಗೂ ಸಹ ದವಸ ಧಾನ್ಯ ತಲುಪಿಸಲಾಗುತ್ತಿದೆ. ಈಗ ಸರ್ಕಾರದ ಆದೇಶದಂತೆ ವಿವಿಧ ರೀತಿಯಲ್ಲಿ ಜನರಿಗೆ ನೆರವಾದ ಎನ್.ಜಿ.ಒಗಳು, ವೈಯಕ್ತಿಕ ದಾನಿಗಳ ಮಾಹಿತಿಯನ್ನು ಸರ್ಕಾರಕ್ಕೆ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಇದರಿಂದ ಮುಂದೆ ದಾನಿಗಳಿಗೆ ಅನುಕೂಲವಾಗಲಿದೆ.
ವೈದ್ಯಕೀಯ ಸಿಬ್ಬಂದಿಗೆ ಹೆಚ್ಚಿನ ಮಾಸ್ಕ್ ಮತ್ತು ಸ್ಯಾನಿಟೈಸರ್ ಅವಶ್ಯಕತೆ ಇದೆ ಈ ಬಗ್ಗೆ ದಾನ ಮಾಡುವವರು ಮಾಡಬಹುದಾಗಿದ್ದು, ಮಳಖೇಡದ ರಾಜಶ್ರೀ ಸಿಮೆಂಟ್ ಕಾರ್ಖಾನೆಯವರು ಸಾವಿರಾರು ಕಿಟ್ ಗಳನ್ನು ನೀಡಿದ್ದಾರೆ. ಜತೆಗೆ ಶ್ರೀಸಿಮೆಂಟ್ ಮತ್ತು ವಾಸವದತ್ತಾ ಸಿಮೆಂಟ್ ಆಡಳಿತ ಮಂಡಳಿಯೂ ಸಹ ಜನರ ನೆರವಿಗೆ ಬರಬೇಕು ಎಂದರು.
ಉಪ ತಹಶೀಲ್ದಾರ್ ನಾಗನಾಥ ತರಗೆ, ಉದ್ಯಮಿಗಳಾದ ರಮೇಶ ತಾಪಾಡಿಯಾ, ಶ್ರೀನಿವಾಸ ಕಾಸೋಜು, ಭರತ ಬಜಾಜ, ಸಾಹಿತಿ ಮಹಿಪಾಲರೆಡ್ಡಿ ಮುನ್ನೂರು, ಮುಖಂಡರಾದ ನಾಗೇಶ್ವರರಾವ್ ಮಾಲಿಪಾಟೀಲ, ಸುದರ್ಶನರೆಡ್ಡಿ ಪಾಟೀಲ, ರಾಜಶ್ರೀ ಕಾರ್ಖಾನೆಯ ಚಂದಮ್ಮ ಅಂಬಲಗಿ, ಓಂಪ್ರಕಾಶ ಪಾಟೀಲ, ದತ್ತಾತ್ರೇಯ ಐನಾಪುರ, ಶ್ರೀನಿವಾಸ ಬಳ್ಳಾರಿ ಇನ್ನಿತರರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bidar; ಕರ್ನಾಟಕಕ್ಕೆ ಬರಲು ಮೋದಿಗೆ ಯಾವುದೇ ನೈತಿಕತೆ ಇಲ್ಲ: ಸುರ್ಜೇವಾಲಾ
ಕೇಂದ್ರದಿಂದ 3454 ಕೋಟಿ ರೂ. ಬರ ಪರಿಹಾರ; ರಾಜ್ಯಕ್ಕೆ ಸಂದ ಜಯ: ಈಶ್ವರ ಖಂಡ್ರೆ
B.S.Yediyurappa: ಶಾಸಕ ಪ್ರಭು ಚವ್ಹಾಣ ಹೆಸರು ಹೇಳುತ್ತಿದ್ದಂತೆ ಬಿಎಸ್ವೈ ಗರಂ
BJP; ಖೂಬಾ ಮತ್ತೊಮ್ಮೆ ಸಚಿವರಾಗ್ತಾರೆ : ಔರಾದ್ ನಲ್ಲಿ ಯಡಿಯೂರಪ್ಪ ಘೋಷಣೆ
Bidar; ನೇಹಾ ಪ್ರಕರಣದಲ್ಲಿ ಬಿಜೆಪಿ ರಾಜಕೀಯ ಮಾಡುವುದು ಸರಿಯಲ್ಲ: ಸಿಎಂ ಸಿದ್ಧರಾಮಯ್ಯ
MUST WATCH
ಹೊಸ ಸೇರ್ಪಡೆ
Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್
Ramanagara: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು
Sirsi: ಮನವಿ ಕೊಟ್ಟ ವಾರದೊಳಗೇ ಕೆಲಸ ಶುರು… 26 ಗುಂಟೆ ಕೆರೆಗೆ ಜೀರ್ಣೋದ್ದಾರ ಭಾಗ್ಯ
Father; ಚಂದ್ರು ನಿರ್ಮಾಣದ ‘ಫಾದರ್’ ಚಿತ್ರಕ್ಕೆ ಮುಹೂರ್ತ
Thirthahalli: ಇದು ಪಿಕ್ ಪ್ಯಾಕೆಟ್ ಸರ್ಕಾರ… ಕಾಂಗ್ರೆಸ್ ವಿರುದ್ಧ ಕುಮಾರಸ್ವಾಮಿ ಹೇಳಿಕೆ