ಜನರ ಬಳಿಗೆ ಪುಸ್ತಕ ಆದರ್ಶ ಪ್ರಾಯ
Team Udayavani, Oct 21, 2018, 1:48 PM IST
ಬೀದರ: ನಗರದ ಪ್ರೊ| ಸಿದ್ರಾಮಪ್ಪಾ ಮಾಸಿಮಾಡೆ ಅವರ ಮನೆಯಲ್ಲಿ ಕನ್ನಡ ಪುಸ್ತಕ ಪ್ರಾಧಿಕಾರ ಬೆಂಗಳೂರು ವತಿಯಿಂದ ಶನಿವಾರ “ನಿಮ್ಮ ಮನೆಗೆ ನಮ್ಮ ಪುಸ್ತಕ’ ಎಂಬ ವಿನೂತನ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮ ಉದ್ಘಾಟಿಸಿದ ಶರಣಬಸವೇಶ್ವರ ವಿಶ್ವವಿದ್ಯಾಲಯದ ಡಾ| ಅನೀಲಕುಮಾರ ಬಿಡವೆ ಮಾತನಾಡಿ, ಪುಸ್ತಕದ ಕಡೆ ಜನ ಬರದಿದ್ದರೆ ಜನರ ಬಳಿಯೇ ಪುಸ್ತಕ ಕೊಂಡೊಯ್ಯುವ ಈ ಕಾರ್ಯಕ್ರಮ ತುಂಬಾ ಅರ್ಥಗರ್ಭಿತ ಹಾಗೂ ಆದರ್ಶ ಪ್ರಾಯವಾಗಿದೆ ಎಂದು, ವಿನೂತನ ಕಾರ್ಯಕ್ರಮಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.
ಹುಬ್ಬಳ್ಳಿಯ ಡಾ| ಶಶಿಕಲಾ ವಸ್ತ್ರದ ಮಾತನಾಡಿ, ಮನುಷ್ಯ ಹೊಟ್ಟೆ ತುಂಬಿಕೊಳ್ಳುವುದಕ್ಕಷ್ಟೇ ಜೀವನ ಅಂತ ತಿಳಿದುಕೊಂಡರೆ ಅದಕ್ಕೂ ಪ್ರಾಣಿಗಳಿಗೂ ಯಾವ ವ್ಯತ್ಯಾಸವೂ ಇರುವುದಿಲ್ಲ. ಪುಸ್ತಕ ಓದುವುದರಿಂದ ಮನುಷ್ಯರಲ್ಲಿ ಅಪಾರ ಬದಲಾವಣೆ ಬರುತ್ತದೆ. ವಚನ ಸಾಹಿತ್ಯ, ದಾಸ ಸಾಹಿತ್ಯ, ಸೂಫಿ ಸಾಹಿತ್ಯ, ತತ್ವಪದ ಸಾಹಿತ್ಯ ಓದುವ ಪ್ರವೃತ್ತಿ ಬೆಳೆಯಬೇಕಾಗಿದೆ.
ಮೂಲ ಸೂರ್ಯನ ಆರಾಧಕರಿಂದ, ಚಿತ್ರಲಿಪಿಯಿಂದ ಅಕ್ಷರ ಲಿಪಿಯವರೆಗೆ ಬೆಳೆದು ಬಂದಂತಹ ಸಾಹಿತ್ಯದಲ್ಲಿ ಕನ್ನಡ ಲಿಪಿ ಬಹು ಸುಂದರವಾದ ಲಿಪಿ. ಗ್ರಂಥಾಲಯ, ಪುಸ್ತಕಗಳು ಇರದಿದ್ದರೆ ನಾವು ಅನಾಗರಿಕರಾಗುತ್ತೇವೆ.
ಪ್ರತಿಯೊಬ್ಬರ ಮನೆಯಲ್ಲಿ ಪುಸ್ತಕಗಳನ್ನು ಇಟ್ಟು, ಮಕ್ಕಳಿಗೆ ಓದಲು ಪ್ರೋತ್ಸಾಹಿಸಬೇಕು. ಓದುವುದರಿಂದ ಮನಸ್ಸು ಮಾಗುತ್ತದೆ. ಸಮನ್ವಯ ಶಕ್ತಿ ಬರುತ್ತದೆ. ಓದು ಅರಗಿಸಿಕೊಂಡರೆ ಅದಕ್ಕೊಂದು ಬೆಲೆ ಬರುತ್ತದೆ ಎಂದರು.
ಡಾ| ಕಾಶಿನಾಥ ಅಂಬಲಗಿ ಮಾತನಾಡಿ, ಪುಸ್ತಕ ಜಗತ್ತಿನಲ್ಲಿ ಎಲ್ಲವನ್ನು ಹೇಳಿಕೊಡುತ್ತದೆ. ಅನುಭವ, ಶಕ್ತಿ ಕೊಡುವ ಶಕ್ತಿ ಪುಸಕ್ತಕ್ಕೆ ಇದೆ. ನಾವು ಪುಸ್ತಕಗಳನ್ನು ರೂಪಿಸುವುದಕ್ಕಿಂತ ಪುಸ್ತಕಗಳೇ ನನ್ನನ್ನು ರೂಪಿಸಲಿ ಎಂದ ಅವರು, ಓದು ಆತ್ಮವಿಶ್ವಾಸ, ಅರಿವು, ವಿವೇಕ, ಸೌಂದರ್ಯ ತಂದುಕೊಡುತ್ತದೆ ಎಂದರು.
ಪುಸ್ತಕ ಪ್ರಾಧಿಕಾರದ ಸದಸ್ಯ ಸಂಚಾಲಕಿ ಡಾ| ಜಯದೇವಿ ಗಾಯಕವಾಡ ಮಾತನಾಡಿ, ಪುಸ್ತಕ ಓದುವುದರಿಂದ ಬರೆಯುವುದರಿಂದ ಬದುಕಿನಲ್ಲಿ ಲವಲವಿಕೆಯಿಂದ ಇರಲು ಸಾಧ್ಯ. ಕನ್ನಡ ಪುಸ್ತಕ ಪ್ರಾಧಿಕಾರ ನಿರಂತರವಾಗಿ ಇಂತಹ ಅರ್ಥಗರ್ಭಿತ ಕಾರ್ಯಕ್ರಮ ದೊಂದಿಗೆ ನಿರಂತರವಾಗಿ ನಡೆಯುತ್ತಿದೆ ಎಂದು, ಪ್ರಾಧಿಕಾರದ ಕಾರ್ಯಕ್ರಮಗಳ ಕುರಿತು ವಿವರಣೆ ನೀಡಿದರು.
ಪ್ರೊ| ಸಿದ್ರಾಮಪ್ಪ ಮಾಸಿಮಾಡೆ, ಗಂಗಾಂಬಿಕಾ, ಬಸವರಾಜ ಮೂಲಗೆ ಸೇರಿದಂತೆ ಇತರರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಕೇಂದ್ರದಿಂದ 3454 ಕೋಟಿ ರೂ. ಬರ ಪರಿಹಾರ; ರಾಜ್ಯಕ್ಕೆ ಸಂದ ಜಯ: ಈಶ್ವರ ಖಂಡ್ರೆ
B.S.Yediyurappa: ಶಾಸಕ ಪ್ರಭು ಚವ್ಹಾಣ ಹೆಸರು ಹೇಳುತ್ತಿದ್ದಂತೆ ಬಿಎಸ್ವೈ ಗರಂ
BJP; ಖೂಬಾ ಮತ್ತೊಮ್ಮೆ ಸಚಿವರಾಗ್ತಾರೆ : ಔರಾದ್ ನಲ್ಲಿ ಯಡಿಯೂರಪ್ಪ ಘೋಷಣೆ
Bidar; ನೇಹಾ ಪ್ರಕರಣದಲ್ಲಿ ಬಿಜೆಪಿ ರಾಜಕೀಯ ಮಾಡುವುದು ಸರಿಯಲ್ಲ: ಸಿಎಂ ಸಿದ್ಧರಾಮಯ್ಯ
Lok Sabha Election: ಸೀನಿಯರ್ ಖೂಬಾಗೆ ಜ್ಯೂನಿಯರ್ ಖಂಡ್ರೆ ಸವಾಲು
MUST WATCH
ಹೊಸ ಸೇರ್ಪಡೆ
Belagavi; ನಿಮ್ಮ ಕನಸುಗಳು ನನ್ನ ಸಂಕಲ್ಪ…: ಬೃಹತ್ ಸಮಾವೇಶದಲ್ಲಿ ನರೇಂದ್ರ ಮೋದಿ ಹೇಳಿಕೆ
LS Polls: ಜೆಡಿಎಸ್ ಬೆಂಬಲ ಆನೆ ಬಲ ತಂದು ಕೊಟ್ಟಿದೆ: ಆರಗ ಜ್ಞಾನೇಂದ್ರ
Pramod, Pruthvi Ambaar: ಪೋಸ್ಟ್ ಪ್ರೊಡಕ್ಷನ್ನಲ್ಲಿ ‘ಭುವನಂ ಗಗನಂ’
Water Supply; ಮಂಗಳೂರಿನ ಈ ಭಾಗಗಳಲ್ಲಿ ಎ.30ರಿಂದ ಮೇ.1ರವರೆಗೆ ನೀರು ಸರಬರಾಜು ಸ್ಥಗಿತ
Heart Diseases: ಮಹಿಳೆಯರಲ್ಲಿ ಹೃದ್ರೋಗಗಳು: ಇದು ವಿಭಿನ್ನ!