ದೇಶಕ್ಕಿದೆ ಕುಶಲಕರ್ಮಿಗಳ ಅವಶ್ಯಕತೆ: ಶರಣಪ್ಪ

ಕೌಶಲ್ಯಕ್ಕೆ ಪೂರಕವಾಗುವ ದಿಸೆಯಲ್ಲಿ ಕಾರ್ಯನ್ಮುಖ ರಾಗುವುದೇ ನಿಜವಾದ ಕ್ಷಮತೆ

Team Udayavani, Feb 22, 2021, 4:14 PM IST

ದೇಶಕ್ಕಿದೆ ಕುಶಲಕರ್ಮಿಗಳ ಅವಶ್ಯಕತೆ: ಶರಣಪ್ಪ

ಬೀದರ: ದೇಶಕ್ಕೆ ಪರಿಪೂರ್ಣ ಕುಶಲಕರ್ಮಿಗಳ ಅವಶ್ಯಕತೆ ಇದೆ. ಗುಣಮಟ್ಟದ ವಸ್ತುಗಳು ಉತ್ಪಾದನೆಯಾಗಲು ಕುಶಲಕರ್ಮಿಗಳ ಕ್ಷಮತೆ ತುಂಬಾ ಅವಶ್ಯಕತೆಯಾಗಿದೆ. ಐಟಿಐ ತರಬೇತಿದಾರರಲ್ಲಿ ಸೀಮಿತ ವಿಚಾರ ಬೇಡ ಇದರಲ್ಲಿಯೇ ತಾವು ಪರಿಪೂರ್ಣತೆ ಮೈಗೂಡಿಸಿಕೊಂಡರೆ ಉನ್ನತ ಮಟ್ಟದ ಸ್ಥಾನದ ಜತೆಗೆ ಕೈತುಂಬ ಸಂಬಳ ಸಿಗುವುದರಲ್ಲಿ ಸಂದೇಹವಿಲ್ಲ ಎಂದು ಪ್ರಾಚಾರ್ಯ ಪ್ರೊ. ಶರಣಪ್ಪ ಬಿರಾದಾರ ಹೇಳಿದರು.

ಔರಾದ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ತರಬೇತಿದಾರರ ಪಾಲಕರ ಸಭೆ ಹಾಗೂ ರಾಷ್ಟ್ರೀಯ ವೃತ್ತಿ ಪ್ರಮಾಣ ಪತ್ರ (ಎನ್‌.ಟಿ.ಸಿ.) ವಿತರಣ
ಸಮಾರಂಭದಲ್ಲಿ ಮಾತನಾಡಿದ ಅವರು, ಬದುಕು ಕಟ್ಟಿಕೊಡಲು ಶ್ರಮ ಜೀವಿಗಳಾಗಿರಿ. ದಿನನಿತ್ಯ ಪ್ರಾಯೋಗಿಕ ಪಾಠ ಕರಗತ ಮಾಡಿಕೊಳ್ಳಲು
ಮನಸ್ಸು ಇಚ್ಛಾಶಕ್ತಿ ಒಂದಾಗಿಸಿಕೊಂಡು ಜೀವನ ರೂಪಿಸಿಕೊಳ್ಳಬೇಕು ಎಂದರು.

ಯುವ ಮುಖಂಡ ಶಿವರಾಜ ಅಲ್ಮಾಜೆ ಮಾತನಾಡಿ, ಪಾಲಕರಾದವರು ಮಕ್ಕಳ ಜತೆಗೆ ದಿನಾಲೂ ಸಮಾಲೋಚನೆ ಮಾಡಬೇಕು. ತಮ್ಮ ಮಕ್ಕಳು ಪ್ರವೇಶ ಪಡೆದುಕೊಂಡ ಮೇಲೆ ಅವರ ಸಂಪರ್ಕ ಇಟ್ಟುಕೊಂಡು ಅರ್ಥೈಸಿಕೊಳ್ಳಬೇಕು. ಅವರಲ್ಲಿ ಓದು ಕಡಿಮೆಯಾಗುತ್ತಿದ್ದರೆ ಸಂಬಂಧಪಟ್ಟ ಸಿಬ್ಬಂದಿಗೆ ಮಾತನಾಡಿ ಸಮಸ್ಯೆ ಪರಿಹರಿಸಿಕೊಳ್ಳಬೇಕು ಎಂದರು.

ಪಾಲಕರ ಪರವಾಗಿ ಗಂಗನಬೀಡದ ಗಣಪತಿ ಪವಾರ, ತುಳಜಾಪೂರದ ಕಲಾವತಿ, ಮುಧೋಳ (ಬಿ) ಮುನ್ನಾಬಿ, ಖೇರ್ಡಾದ ನೀಲಕಂಠ, ವಡಗಾಂವದ ಯೇಸುದಾಸ, ಎಕಲಾರದ ಬಬನ್‌ ರಾಠೊಡ ತಮ್ಮ ವಿಚಾರ ವ್ಯಕ್ತಪಡಿಸಿ ಮನೆಯ ಬಾಗಿಲಿಗೆ ಕೌಶಲ್ಯತೆಯ ಕಳಕಳಿ ಮುಟ್ಟಿಸುವ ಕಾರ್ಯ ಶ್ಲಾಘನೀಯ. ಮಕ್ಕಳು ಮೊಬೈಲ್‌ ಬಳಸುತ್ತಿರುವುದರಿಂದ ಅನೇಕ ಸಂಕಷ್ಟ ಎದುರಿಸುತ್ತಿದ್ದೇವೆ. ತಮ್ಮಂಥವರು ಮಕ್ಕಳಿಗೆ ಕೌಶಲ್ಯ ಜತೆಗೆ ಅಚ್ಚಕಟ್ಟುತನದ ಸಂಸ್ಕೃತಿಗೆ ಎಡೆಮಾಡಿ ಕೊಡುತ್ತಿರುವ ಈ ಸಭೆ ಮುಂಬರುವ ದಿನಗಳಲ್ಲಿ ತರಬೇತಿದಾರರ ಭವಿಷ್ಯತೆಗೆ ಇದು ಬುನಾದಿ ನೀಡಲಿದೆ ಎಂದು ಹೇಳಿದರು.

ಸಂಸ್ಥೆಯ ಪ್ರಾಚಾರ್ಯ ಶಿವಶಂಕರ ಟೋಕರೆ ಅಧ್ಯಕ್ಷತೆ ವಹಿಸಿ ಮಾತನಾಡಿ, ನಮ್ಮಲ್ಲಿ ಅನೇಕ ತೊಂದರೆಗಳು ಇರುವುದು ಸಹಜ. ಆದರೆ ಸಂಕಷ್ಟಗಳನ್ನು ಇಷ್ಟದಂತೆ ಸ್ವೀಕರಿಸಿ ತರಬೇತಿದಾರರ ಕೌಶಲ್ಯಕ್ಕೆ ಪೂರಕವಾಗುವ ದಿಸೆಯಲ್ಲಿ ಕಾರ್ಯನ್ಮುಖ ರಾಗುವುದೇ ನಿಜವಾದ ಕ್ಷಮತೆ. ತರಬೇತಿದಾರರಿಗೆ ಅಗತ್ಯ ಮೂಲ ವ್ಯವಸ್ಥೆ ಮಾಡಲಾಗಿದೆ. ಆದರೂ ನಿಗದಿತ ಸಮಯಕ್ಕೆ ಬಾರದೆ ಇರುವುದರಿಂದ ಅನಿವಾರ್ಯವಾಗಿ ಇಂದು ಪಾಲಕರ ಸಭೆ ಆಯೋಜಿಸಿದೆ. ದಯವಿಟ್ಟು ಪಾಲಕರಾದವರು ಮೇಲಿಂದ ಮೇಲೆ ಸಂಸ್ಥೆಗೆ ಭೇಟಿ ನೀಡಿ ಮಕ್ಕಳ ಕೌಶಲ್ಯ ಕಲಿಯಲು ಸಹಕರಿಸಬೇಕು ಎಂದು ಪ್ರಾರ್ಥಿಸಿದರು.

ಸಿಬ್ಬಂದಿಗಳಾದ ಸತೀಷ ಬಳ್ಳೂರೆ, ಚಂದ್ರಮೋಹನ ಬಂಗಾರೆ, ಸುಜಾತ ಗೋವಿಂದ, ಸಂಗಮೇಶ ಜೋಜನಾ, ಸಂತೋಷ ಹಕ್ಯಾಳೆ ಇದ್ದರು. ಆಡಳಿತಾಧಿ ಕಾರಿ ಅಸದುಲ್‌ ಬೇಗ ಸ್ವಾಗತಿಸಿದರು. ಕಿರಿಯ ತರಬೇತಿ ಅಧಿಕಾರಿ ಬಂಬುಳಗೆ ದಯಾನಂದ ನಿರೂಪಿಸಿದರು. ಹುಲಸೂರೆ ಚಂದ್ರಕಾಂತ ವಂದಿಸಿದರು.

ಟಾಪ್ ನ್ಯೂಸ್

Foreign Cruise: ಕ್ರೂಸ್‌ ರಿವೇರಾ ಮಂಗಳೂರಿಗೆ

Foreign Cruise: ಕ್ರೂಸ್‌ ರಿವೇರಾ ಮಂಗಳೂರಿಗೆ

ತುಳು ಮಾನ್ಯತೆಗೆ ಶ್ರಮಿಸಿದ ಡಾ| ಆಚಾರ್‌

ತುಳು ಮಾನ್ಯತೆಗೆ ಶ್ರಮಿಸಿದ ಡಾ| ಆಚಾರ್‌

Lok Sabha ಚುನಾವಣೆ ಮುಗಿಯಿತು; ಇನ್ನು ಫ‌ಲಿತಾಂಶದ ಜಪ

Lok Sabha ಚುನಾವಣೆ ಮುಗಿಯಿತು; ಇನ್ನು ಫ‌ಲಿತಾಂಶದ ಜಪ

S. M. Krishna ಆರೋಗ್ಯದಲ್ಲಿ ಚೇತರಿಕೆ; ಖರ್ಗೆ, ವಿಜಯೇಂದ್ರ ಭೇಟಿ

S. M. Krishna ಆರೋಗ್ಯದಲ್ಲಿ ಚೇತರಿಕೆ; ಖರ್ಗೆ, ವಿಜಯೇಂದ್ರ ಭೇಟಿ

Eshwarappa ಕಣದಿಂದ ಹಿಂದೆ ಸರಿದ ನಕಲಿ ಸುದ್ದಿ ವೈರಲ್‌: ದೂರು

Eshwarappa ಕಣದಿಂದ ಹಿಂದೆ ಸರಿದ ನಕಲಿ ಸುದ್ದಿ ವೈರಲ್‌: ದೂರು

DCM ಡಿಕೆಶಿ, ಶಿವರಾಮೇಗೌಡ ವಿರುದ್ಧ ಜೆಡಿಎಸ್‌ ಆಕ್ರೋಶ: ಹಲವೆಡೆ ಪ್ರತಿಭಟನೆ

DCM ಡಿಕೆಶಿ, ಶಿವರಾಮೇಗೌಡ ವಿರುದ್ಧ ಜೆಡಿಎಸ್‌ ಆಕ್ರೋಶ: ಹಲವೆಡೆ ಪ್ರತಿಭಟನೆ

ಹಂತ-2: ಶೇ. 71.4 ಮತ: ಉತ್ತರ ಕರ್ನಾಟಕದ 14 ಕ್ಷೇತ್ರಗಳಲ್ಲಿ ಮತದಾನ ಸಂಪನ್ನ

ಹಂತ-2: ಶೇ. 71.4 ಮತ: ಉತ್ತರ ಕರ್ನಾಟಕದ 14 ಕ್ಷೇತ್ರಗಳಲ್ಲಿ ಮತದಾನ ಸಂಪನ್ನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Bidar; ಒಂದೂವರೆ ವರ್ಷದ ಮಗು ಅಪಹರಣ ಸುಖಾಂತ್ಯ; ಹೈದರಾಬಾದ್ ನಲ್ಲಿ ಮಹಿಳೆ ಬಂಧನ

Bidar; ಒಂದೂವರೆ ವರ್ಷದ ಮಗು ಅಪಹರಣ ಸುಖಾಂತ್ಯ; ಹೈದರಾಬಾದ್ ನಲ್ಲಿ ಮಹಿಳೆ ಬಂಧನ

Tragedy: ಚೆಕ್ ಪೋಸ್ಟ್ ನಲ್ಲಿ ಕರ್ತವ್ಯದಲ್ಲಿದ್ದ ಅಧಿಕಾರಿ ಹೃದಯಘಾತದಿಂದ ಮೃತ್ಯು…

Tragedy: ಹೃದಯಘಾತದಿಂದ ಚೆಕ್ ಪೋಸ್ಟ್ ನಲ್ಲಿ ಕರ್ತವ್ಯದಲ್ಲಿದ್ದ ಅಧಿಕಾರಿ ಮೃತ್ಯು…

ಪ್ರಜ್ವಲ್ ನನ್ನು ವಿದೇಶಕ್ಕೆ ಕಳುಹಿಸಿದ್ದೇ ಸಿದ್ದರಾಮಯ್ಯ: ಆರ್.ಅಶೋಕ್ ಆರೋಪ

Bidar; ಪ್ರಜ್ವಲ್ ನನ್ನು ವಿದೇಶಕ್ಕೆ ಕಳುಹಿಸಿದ್ದೇ ಸಿದ್ದರಾಮಯ್ಯ: ಆರ್.ಅಶೋಕ್ ಆರೋಪ

Jignesh Mevani: ಮೋದಿ ಪರಿವಾರ ಎಂದರೆ ಪ್ರಜ್ವಲ್‌ ರೇವಣ್ಣನಂಥವರಾ?; ಜಿಗ್ನೇಶ್‌

Jignesh Mevani: ಮೋದಿ ಪರಿವಾರ ಎಂದರೆ ಪ್ರಜ್ವಲ್‌ ರೇವಣ್ಣನಂಥವರಾ?; ಜಿಗ್ನೇಶ್‌

Bidar; ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಕ್ರೂಸರ್ ವಾಹನ; ಮೂವರು ಸ್ಥಳದಲ್ಲೇ ಸಾವು

Bidar; ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಕ್ರೂಸರ್ ವಾಹನ; ಮೂವರು ಸ್ಥಳದಲ್ಲೇ ಸಾವು

MUST WATCH

udayavani youtube

ಭಗವಂತನ ಆಣೆ ಯಾವ ಸಂತ್ರಸ್ತೆಯರನ್ನು ನಾನು ಭೇಟಿ ಮಾಡಿಲ್ಲಶ್ರೇಯಸ್‌ಪಟೇಲ್ ಹೇಳಿಕೆ

udayavani youtube

ಉಡುಪಿ ರೈತನ ವಿಭಿನ್ನ ಪ್ರಯತ್ನ : ಕೈ ಹಿಡಿದ ಕೇಸರಿ ಕಲ್ಲಂಗಡಿ

udayavani youtube

ಹಿಮೋಫಿಲಿಯಾ ಈ ರಕ್ತದ ಕಾಯಿಲೆ ಇರುವವರು ಮಾಡಬೇಕಾದ್ದೇನು ?

udayavani youtube

ಪ್ರಚಾರದ ವೇಳೆ ಕೈ ಮುಖಂಡನಿಗೆ ಕಪಾಳ ಮೋಕ್ಷ‌ ಮಾಡಿದ ಡಿಕೆಶಿ;

udayavani youtube

ಅಂಕಲ್ ಎಗ್ ರೈಸ್ ಕಾರ್ನರ್ ನಲ್ಲಿ ದಿನಕ್ಕೆ ಎಷ್ಟು ಮೊಟ್ಟೆ ಉಪಯೋಗಿಸುತ್ತಾರೆ ಗೊತ್ತಾ ?|

ಹೊಸ ಸೇರ್ಪಡೆ

Foreign Cruise: ಕ್ರೂಸ್‌ ರಿವೇರಾ ಮಂಗಳೂರಿಗೆ

Foreign Cruise: ಕ್ರೂಸ್‌ ರಿವೇರಾ ಮಂಗಳೂರಿಗೆ

ತುಳು ಮಾನ್ಯತೆಗೆ ಶ್ರಮಿಸಿದ ಡಾ| ಆಚಾರ್‌

ತುಳು ಮಾನ್ಯತೆಗೆ ಶ್ರಮಿಸಿದ ಡಾ| ಆಚಾರ್‌

Lok Sabha ಚುನಾವಣೆ ಮುಗಿಯಿತು; ಇನ್ನು ಫ‌ಲಿತಾಂಶದ ಜಪ

Lok Sabha ಚುನಾವಣೆ ಮುಗಿಯಿತು; ಇನ್ನು ಫ‌ಲಿತಾಂಶದ ಜಪ

S. M. Krishna ಆರೋಗ್ಯದಲ್ಲಿ ಚೇತರಿಕೆ; ಖರ್ಗೆ, ವಿಜಯೇಂದ್ರ ಭೇಟಿ

S. M. Krishna ಆರೋಗ್ಯದಲ್ಲಿ ಚೇತರಿಕೆ; ಖರ್ಗೆ, ವಿಜಯೇಂದ್ರ ಭೇಟಿ

Eshwarappa ಕಣದಿಂದ ಹಿಂದೆ ಸರಿದ ನಕಲಿ ಸುದ್ದಿ ವೈರಲ್‌: ದೂರು

Eshwarappa ಕಣದಿಂದ ಹಿಂದೆ ಸರಿದ ನಕಲಿ ಸುದ್ದಿ ವೈರಲ್‌: ದೂರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.