ಪ್ರತ್ಯೇಕ ಪ್ರಾಧ್ಯಾಪಕರನ್ನು ನೇಮಿಸಿ
Team Udayavani, Apr 28, 2017, 5:32 PM IST
ವಿಜಯಪುರ: ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯ ವ್ಯಾಪ್ತಿಯ ಎಲ್ಲ ಪದವಿ ಕಾಲೇಜುಗಳಲ್ಲಿ ನ್ಯಾಕ್ ಮಾನ್ಯತೆ ಪಡೆಯಲು ಇರುವ ಮಾರ್ಗಸೂಚಿಗಳ ನಿರ್ವಹಣೆಗೆ ಪ್ರತಿ ಕಾಲೆಜಿನಲ್ಲೂ ಪ್ರತ್ಯೇಕವಾಗಿ ಓರ್ವ ಪ್ರಾಧ್ಯಾಪಕರನ್ನು ನೇಮಿಸಬೇಕು ಎಂದು ಕುಲಪತಿ ಪ್ರೊ|ಸಬಿಹಾ ಸೂಚಿಸಿದರು.
ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಡಾ| ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಜರುಗಿದ ಪ್ರಾಂಶುಪಾಲರ ಸಭೆಯ ನಡಾವಳಿಗಳ ಕುರಿತು ಅವರು ಮಾತನಾಡಿದ ಅವರು, ಪ್ರಾಂಶುಪಾಲರ ಸಭೆಗೆ ಕಡ್ಡಾಯವಾಗಿ ಪ್ರಾಂಶುಪಾಲರೇ ಹಾಜರಾಗಬೇಕು ಎಂದು ಸೂಚಿಸಿದರು.
137 ಮಹಿಳಾ ಕಾಲೇಜುಗಳಲ್ಲಿ ಕೇವಲ ಮೂರು ಮಹಿಳಾ ಮಹಾವಿದ್ಯಾಲಯಗಳು 2 ಎಫ್ ಮತ್ತು 12 ಬಿ ಮಾನ್ಯತೆ ಪಡೆದಿದ್ದು, ಭವಿಷ್ಯದಲ್ಲಿ ಪ್ರತಿ ಕಾಲೇಜುಗಳು ಈ ಮಾನ್ಯತೆ ಪಡೆಯುವ ಅರ್ಹತೆಯ ಸೌಲಭ್ಯ ಹೊಂದಬೇಕು. ಈ ವರೆಗೆ ಕೇವಲ 3 ಮಹಿಳಾ ಕಾಲೇಜುಗಳು 2-ಎಫ್ ಮತ್ತು 12-ಬಿ ಮಾನ್ಯತೆ ಪಡೆದಿವೆ.
15 ಮಹಿಳಾ ಕಾಲೇಜುಗಳು ನ್ಯಾಕ್ ಮಾನ್ಯತೆ ಪಡೆದಿವೆ ಎಂದು ವಿವರಿಸಿದರು. ಹೀಗಾಗಿ ಉಳಿದ ಎಲ್ಲ ಕಾಲೇಜುಗಳ ಕೂಡಾ ಕಡ್ಡಾಯವಾಗಿ 2-ಎಫ್, 12 ಬಿ ನ್ಯಾಕ್ ಮಾನ್ಯತೆ ಪಡೆಯುವ ಅರ್ಹತೆ ಹೊಂದಬೇಕು ಎಂದು ಸಲಹೆ ನೀಡಿ, ನ್ಯಾಕ್ ಮಾನ್ಯತೆ ಪಡೆಯಲು ಇರುವ ಮಾರ್ಗಸೂಚಿಗಳ ನಿರ್ವಹಣೆಗೆ ಪ್ರತಿ ಕಾಲೇಜಿನಲ್ಲೂ ಪ್ರತ್ಯೇಕವಾಗಿ ಓರ್ವ ಪ್ರಾಧ್ಯಾಪಕರನ್ನು ನೇಮಿಸಬೇಕು ಎಂದು ಸೂಚಿಸಿದರು.
ವಿಜ್ಞಾನ ಮತ್ತು ತಂತ್ರಜ್ಞಾನ ನಿಕಾಯದ ಡೀನ್ ಪ್ರೊ|ಎ ಸ್.ಬಿ.ಮಾಡಗಿ ಮಾತನಾಡಿ, ನಮ್ಮ ವಿಶ್ವವಿದ್ಯಾಲಯದ ಎಲ್ಲಾ ಕಾಲೇಜುಗಳಿಗೆ ಸ್ಥಾನಿಕ ವಿಚಾರಣಾ ಸಮಿತಿ ನೀಡಿದ ಶೇಕಡಾ ಅಂಕಗಳನ್ನು ಇನ್ನೂ ಹೆಚ್ಚಿಸಿಕೊಳ್ಳಬೇಕು. ನ್ಯಾಕ್ ಮಾನ್ಯತೆ ಪಡೆಯುವ ಅಗತ್ಯ, ವಿಧಾನ, ಅನುಕೂಲತೆ ಕುರಿತು ಮಾಹಿತಿ ನೀಡಿದರು.
ವಿಶ್ವವಿದ್ಯಾಲಯ ವ್ಯಾಪ್ತಿಯ ಎಲ್ಲ ಕಾಲೇಜುಗಳು ನ್ಯಾಕ್ ಅಂಕ ಗಳಿಕೆಯಲ್ಲಿ ಸಾಧನೆ ಮಾಡಬೇಕು ಎಂದು ಕಿವಿ ಮಾತು ಹೇಳಿದರು. ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ ವಿಭಾಗದ ಪ್ರೊ| ಪಿ.ಜಿ.ತಡಸದ ಮಾತನಾಡಿದರು. ವಾಣಿಜ್ಯ ಶಾಸ್ತ್ರ ವಿಭಾಗದ ಉಪನ್ಯಾಸಕ ಸೊನಾಲ್ ನಿರೂಪಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Tragedy; ಲಚ್ಯಾಣ ರಥೋತ್ಸವ ಗಾಯಾಳುವೂ ಸಾವು: ಮೃತರ ಸಂಖ್ಯೆ ಮೂರಕ್ಕೇರಿಕೆ
Vijayapura; 33 ಲಕ್ಷ ರೂ. ಮೌಲ್ಯದ ಮಾದಕ ವಸ್ತು, ವಾಹನ ವಶ : ದೆಹಲಿ ಮೂಲದ ವ್ಯಕ್ತಿ ಬಂಧನ
BJP ಶೆಟ್ಟರ್, ಶ್ರೀರಾಮುಲುಗೆ ಚೊಂಬು ಗ್ಯಾರಂಟಿ : ಲಕ್ಷ್ಮಣ ಸವದಿ
Indi ಲಚ್ಯಾಣ ಮಹಾರಥೋತ್ಸವದಲ್ಲಿ ಅವಘಡ: ರಥದ ಗಾಲಿಗೆ ಸಿಲುಕಿ ಇಬ್ಬರು ಮೃತ್ಯು
State Govt ದಿವಾಳಿ ಆಗಿದೆ:ಸರ್ಕಾರದಿಂದಲೇ ಲೂಟಿ ನಡೆಯುತ್ತಿದೆ: ಮಾಜಿ ಸಿಎಂ ಯಡಿಯೂರಪ್ಪ ಆರೋಪ
MUST WATCH
ಹೊಸ ಸೇರ್ಪಡೆ
Gokarna; 7 ವರ್ಷಗಳಿಂದ ಆಮೆಗತಿಯಲ್ಲಿ ಸಾಗುತ್ತಿರುವ ಮಂಜಗುಣಿ-ಗಂಗಾವಳಿ ಸೇತುವೆ
Thirthahalli: ಚುನಾವಣಾ ಬಹಿಷ್ಕಾರ; ಸ್ವ-ಇಚ್ಛೆಯಿಂದ ಸಾವಿರಕ್ಕೂ ಅಧಿಕ ಮಂದಿಯಿಂದ ನಿರ್ಧಾರ !
ಬಿಜೆಪಿ ಸುಳ್ಳು ಉತ್ಪಾದನೆ ಮಾಡುವ ಫ್ಯಾಕ್ಟರಿ: ಸಿಎಂ ಸಿದ್ದರಾಮಯ್ಯ
ಬಿಜೆಪಿ ಅಧಿಕಾರಕ್ಕೆ ಬಂದರೆ ಗ್ಯಾರಂಟಿ ಯೋಜನೆ ರದ್ದು ಕಾನೂನು ತರುತ್ತಾರೆ: ಕೃಷ್ಣ ಬೈರೇಗೌಡ
Kasturba ಆಸ್ಪತ್ರೆಯಲ್ಲಿ ನೂತನವಾಗಿ ನಿರ್ಮಿಸಲಾದ ಡಾ| ರಾಮದಾಸ್ ಎಂ.ಪೈ ಬ್ಲಾಕ್ ಉದ್ಘಾಟನೆ