ಭೀಮಾಶಂಕರ ಮಠ ಲೋಕಾರ್ಪಣೆ ಇಂದು


Team Udayavani, Feb 12, 2018, 4:09 PM IST

vij-2.jpg

ತಾಳಿಕೋಟೆ: ದೇಶದಲ್ಲಿ ಸಂತರು ಅನೇಕ ಪವಾಡಗಳ ಮೂಲಕ ವಿಜ್ಞಾನಕ್ಕೆ ಸವಾಲೆಸೆದು ತಮ್ಮ ಅಧ್ಯಾತ್ಮಿಕ ಸಿದ್ದಿಗಳ ಮೂಲಕ ಸಮಾಜಕ್ಕೆ ಒಳ್ಳೆ ದಾರಿ ತೋರಿಸಿದ್ದಾರೆ. ಇಂತಹ ಶಿವಯೋಗಿಗಳ, ಸಂತರ ಚರಿತ್ರೆಗಳನ್ನು ಕೇಳಿದರೆ ಇಂದಿಗೂ ಉತ್ತರಿಸಲಾಗದಂತಹ ವಿಸ್ಮಯಕಾರಿ ಸಂಗತಿಗಳು ಗೋಚರಿಸುತ್ತವೆ.

ಅಂತಹ ನಾತ ಸಂಪ್ರದಾಯಕ್ಕೆ ಒಳಪಟ್ಟ ಆನಾಥ, ಮಶ್ಚೇಂದ್ರನಾಥ, ಗೋರಕನಾಥ, ಗ್ರಹಿಣನಾಥ, ರಾಮನಾಥ ಮಠಕ್ಕೆ ಸೇರಿದ ತಾಳಿಕೋಟೆ ಸಮಿಪದ ಕೂಚಬಾಳದ ಭೀಮಾಶಂಕರ ಮಠ ವೈವಿದ್ಯಮಯಕ್ಕೆ ಹೆಸರಾದಂತಹ ಮಠವಾಗಿದೆ ಎಂದರೆ ತಪ್ಪಾಗಲಾರದು.

ನಾತ ಸಂಪ್ರದಾಯದ ತ್ರಿವಿಕ್ರಮಾನಂದರು ಇಡಿ ಪ್ರಪಂಚಕ್ಕೆ ಯೋಗ ಕೊಟ್ಟವರು ಅನೇಕ ಪವಾಡಗಳ ಮೂಲಕ ಅನೇಕ ಸಿದ್ಧಿಗಳ ಮೂಲಕ, ಪುರಾಣ ಪ್ರವಚನ, ಶಾಸ್ತ್ರಗಳ ಮೂಲಕ ಅಧ್ಯಾತ್ಮಿಕ ಜ್ಞಾನವನ್ನು ರಾಜ್ಯಾದ್ಯಂತ ಪಸರಿಸಿ ಉಣಬಡಿಸಿ ಬೆಳಗಿಸಿದವರು. ರಾಮನಾಥರ ಮೂಲಕ ತಾಳಿಕೋಟೆ ಸಮೀಪದ ಕೂಚಬಾಳ ಗ್ರಾಮವನ್ನು ಸೇರಿ ಸುಮಾರು 8 ಭಾಗಗಳಲ್ಲಿ ಭಕ್ತಾದಿಗಳಿಗೆ ಅಧ್ಯಾತ್ಮಿಕ ರಸದೌತಣ ಪರಿಚಯಿಸಿಕೊಟ್ಟಿದ್ದಾರೆ.

ಅದೇ ನಾತ ಸಂಪ್ರದಾಯಕ್ಕೆ ಸೇರಿದ ವಂಶಸ್ಥರಾದ ಸದ್ಗುರು ಭೀಮಾಶಂಕರ ಸ್ವಾಮಿಗಳು ಕೂಚಬಾಳ ಗ್ರಾಮದಲ್ಲಿ ನೆಲೆಸಿ ತಮ್ಮ ಸಿದ್ದಿ ಪವಾಡ, ಶಾಸ್ತ್ರ ಪ್ರವಚನಗಳ ಮೂಲಕ ಲೋಕಕಲ್ಯಾಣ ಮಾಡಿದ್ದರಿಂದ ಅವರ ನೆಲೆಸಿದ ಸ್ಥಳದಲ್ಲಿಯೇ ಭೀಮಾಶಂಕರ ಮಠವನ್ನು ಸುಮಾರು 130 ವಷಗಳ ಹಿಂದೆ ನಿರ್ಮಿಸಲಾಗಿದೆ. ಯೋಗಿಗಳು ಶಿವನ ಆಜ್ಞೆ ಮೇಲೆಯೆ ಪವಾಡ ಸದೃಶ್ಯಗಳ ಮೂಲಕ ಸಮಾಜದಲ್ಲಿ
ಅಧ್ಯಾತ್ಮಿಕ ನೆಲೆಗಟ್ಟನ್ನು ಸ್ಥಾಪಿಸಿದ್ದರಿಂದ ಇಂದಿಗೂ ಶಿವಲಿಂಗದ ಮೂಲಕವೇ ಭೀಮಾಶಂಕರ ಯೋಗಿಗಳನ್ನು ಎಲ್ಲ ಜನರು ಕಾಣುವುದರೊಂದಿಗೆ ಆರಾಧಿಸುತ್ತಾರೆ.

ಹಿಂದಿನ ಪೀಠಾಧಿಪತಿ ನಿಜಾನಂದ ಮಹಾಸ್ವಾಮಿಗಳು ಬರೆದ ಪದ್ಯವನ್ನು ಆಲಿಸಿ ಗುರು ಗೋವಿಂದಭಟ್ಟರು ಮತ್ತು ಶಿಷ್ಯರಾದ ಸಂತ ಶಿಶುನಾಳ ಶರೀಫರು ಕೂಚಬಾಳ ಗ್ರಾಮದ ಮಠಕ್ಕೆ ಭೇಟಿ ನೀಡಿ ಮೂರು ದಿನ ಅಧ್ಯಾತ್ಮಿಕ ರಸದೌತಣ ಸವಿದುಕೊಂಡು ಹೋಗಿದ್ದಾರೆ.

ಇಂತಹ ಐತಿಹಾಸಿಕ ಹಿನ್ನೆಲೆಯುಳ್ಳ ನಾತ ಸಂಪ್ರದಾಯಕ್ಕೆ ಸೇರಿದ ಉತ್ತರ ಪ್ರದೇಶದ ಗೋರಕಪುರದ ಗೋರಕನಾಥ ಮಠದ ಪೀಠಾಧಿಪತಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥರ ನಾತ ಸಂಪ್ರದಾಯಕ್ಕೆ ಕೂಚಬಾಳದ ಭೀಮಾಶಂಕರ ಮಠ ಪರಿಚಯಿಸಲ್ಪಟ್ಟ ಮಠ.

ಇಂತಹ ಐತಿಹಾಸಿಕ ಹಿನ್ನೆಲೆ ಹೊಂದಿದ ನಾತ ಸಂಪ್ರದಾಯಕ್ಕೆ ಸೇರಿದ ಭಿಮಾಶಂಕರ ಮಠವನ್ನು ಗ್ರಾಮದ ಸದ್ಭಕ್ತ ಮಂಡಳಿಯಿಂದ ಜೀರ್ಣೋದ್ಧಾರವಾಗಿದೆ. ಶ್ರೀಮಠದ ಲೋಕಾರ್ಪಣೆಗೆ ಹುಣಸಿಹೊಳೆ ಕಣ್ವಮಠದ ವಿದ್ಯಾವಾರಿತೀರ್ಥ ಶ್ರೀಪಾದಂಗಳವರು, ಸಿಂದಗಿ
ಭೀಮಾಶಂಕರ ಮಠದ ದತ್ತಪ್ಪಯ್ಯ ಸ್ವಾಮೀಜಿ, ಗಂವ್ಹಾರ ತ್ರಿವಿಕ್ರಮಾನಂದ ಸರಸ್ವತಿ ಸ್ವಾಮಿ ಮಠದ ಸೋಪಾನನಾಥ ಮಹಾಸ್ವಾಮಿಗಳನ್ನೊಳಗೊಂಡು ನಾಡಿನ ಅನೇಕ ಹರಗುರು ಚರಮೂರ್ತಿಗಳ ಸಂತರ ಸಮ್ಮುಖದಲ್ಲಿ ಫೆ. 12ರಂದು ಶ್ರೀಮಠದ ಲೋಕಾರ್ಪಣೆಗೆ ಮಠದ ಇಂದಿನ ಪೀಠಾಧಿ ಪತಿ ಪದ್ಮನಾಭ ಸ್ವಾಮಿಗಳ ನೇತೃತ್ವದಲ್ಲಿ ಎಲ್ಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಈ ವೇಳೆ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಆರ್‌. ಎಸ್‌. ಪಾಟೀಲ (ಕೂಚಬಾಳ) ಸಹಕಾರದೊಂದಿಗೆ ಸಾಮೂಹಿಕ ವಿವಾಹ ಜರುಗಲಿವೆ.

ಲೋಕಾರ್ಪಣೆಗೆ ಗಣ್ಯರ ದಂಡು: ಶ್ರೀಮಠದ ಲೋಕಾರ್ಪಣೆ ಕಾರ್ಯಕ್ರಮಕ್ಕೆ ಕೇಂದ್ರ ಸಚಿವ ರಮೇಶ ಜಿಗಜಿಣಗಿ, ಸಂಸದರಾದ ಪ್ರಲ್ಹಾದ ಜೋಶಿ, ಸುರೇಶ ಅಂಗಡಿ, ಶಾಸಕರಾದ ಗೋವಿಂದ ಕಾರಜೋಳ, ರಮೇಶ ಭೂಸನೂರ, ಅರುಣ ಶಹಾಪುರ, ಹನುಮಂತ ನಿರಾಣಿ, ಮಾಜಿ ಶಾಸಕರಾದ ಅಪ್ಪಾಸಾಹೇಬ ಪಟ್ಟಣಶೆಟ್ಟಿ, ಎಸ್‌. ಕೆ. ಬೆಳ್ಳುಬ್ಬಿ, ವಿಠ್ಠಲ ಕಟಕದೊಂಡ, ದೊಡ್ಡಪ್ಪಗೌಡ ಪಾಟೀಲ, ಜಿಪಂ ಉಪಾಧ್ಯಕ್ಷ ಪ್ರಭು ದೇಸಾಯಿ, ಜಿಪಂ ಸದಸ್ಯೆ ಜ್ಯೋತಿ ಅಸ್ಕಿ, ತಾಪಂ ಉಪಾಧ್ಯಕ್ಷ ಮಂಜುನಾಥಗೌಡ ಪಾಟೀಲ ಭಾಗವಹಿಸಲಿದ್ದಾರೆ.

ಜಿ. ಟಿ. ಘೋರ್ಪಡೆ

ಟಾಪ್ ನ್ಯೂಸ್

Priyanka Gandhi

ಪ್ರಿಯಾಂಕಾ ಮಾಂಗಲ್ಯ ಧರಿಸದ್ದಕ್ಕೆ ನೆಹರೂ ಆತ್ಮಕ್ಕೆ ಕೊರಗು: ಮೋಹನ್‌ ಯಾದವ್‌

Exam

ಕೋಟಾದಲ್ಲಿ ನೀಟ್‌ ವಿದ್ಯಾರ್ಥಿನಿ ನಾಪತ್ತೆ: ಇದು 4ನೇ ಪ್ರಕರಣ

musk

Elon Musk ಭಾರತ ಭೇಟಿ ರದ್ದಾದ ಬೆನ್ನಲ್ಲೇ ಚೀನಕ್ಕೆ ಭೇಟಿ

1-fire

ಮತ್ತೆ ಉತ್ತರಾಖಂಡದ 8 ಸ್ಥಳಗಳಲ್ಲಿ ಹಬ್ಬಿದ ಕಾಳ್ಗಿಚ್ಚು!

chess

Chess; ಭಾರತದಲ್ಲೇ ವಿಶ್ವ ಚಾಂಪಿಯನ್‌ಶಿಪ್‌ ನಡೆಸಲು ಚಿಂತನೆ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-qewqeqw

Indi ಲಚ್ಯಾಣ ಮಹಾರಥೋತ್ಸವದಲ್ಲಿ ಅವಘಡ: ರಥದ ಗಾಲಿಗೆ ಸಿಲುಕಿ ಇಬ್ಬರು ಮೃತ್ಯು

20

State Govt ದಿವಾಳಿ ಆಗಿದೆ:ಸರ್ಕಾರದಿಂದಲೇ ಲೂಟಿ ನಡೆಯುತ್ತಿದೆ: ಮಾಜಿ ಸಿಎಂ ಯಡಿಯೂರಪ್ಪ ಆರೋಪ

10-muddebihala

Muddebihal: ಹೆಂಡತಿಗೆ ಚೂರಿ ಇರಿದು ಪರಾರಿಯಾದ ಗಂಡ

Siddaramaiah ಮುಸ್ಲಿಂ ಮೀಸಲಾತಿ ಬಗ್ಗೆ ಬಿಜೆಪಿಯಿಂದ ಸುಳ್ಳು

Siddaramaiah ಮುಸ್ಲಿಂ ಮೀಸಲಾತಿ ಬಗ್ಗೆ ಬಿಜೆಪಿಯಿಂದ ಸುಳ್ಳು

1-asaa

Vijaypura:ರಾಹುಲ್ ಗಾಂಧಿ ನಿರ್ಗಮಿಸುವಾಗ ವೇದಿಕೆಗೆ ಬಂದ ಸಿದ್ದರಾಮಯ್ಯ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

congress

North East Delhi ಅಭ್ಯರ್ಥಿ ಕನ್ಹಯ್ಯ ವಿರುದ್ಧ ಕಾಂಗ್ರೆಸಿಗರ ಪ್ರತಿಭಟನೆ!

IMD

Kerala; ಬಿಸಿಲ ಝಳಕ್ಕೆ ಇಬ್ಬರ ಸಾವು

Priyanka Gandhi

ಪ್ರಿಯಾಂಕಾ ಮಾಂಗಲ್ಯ ಧರಿಸದ್ದಕ್ಕೆ ನೆಹರೂ ಆತ್ಮಕ್ಕೆ ಕೊರಗು: ಮೋಹನ್‌ ಯಾದವ್‌

Exam

ಕೋಟಾದಲ್ಲಿ ನೀಟ್‌ ವಿದ್ಯಾರ್ಥಿನಿ ನಾಪತ್ತೆ: ಇದು 4ನೇ ಪ್ರಕರಣ

musk

Elon Musk ಭಾರತ ಭೇಟಿ ರದ್ದಾದ ಬೆನ್ನಲ್ಲೇ ಚೀನಕ್ಕೆ ಭೇಟಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.