ಧರ್ಮ ಒಡೆಯುವ ಕೆಲಸ ಬೇಡ
Team Udayavani, Feb 16, 2018, 4:58 PM IST
ಹೂವಿನಹಿಪ್ಪರಗಿ: ಮಠಗಳಲ್ಲಿ ಯಂತ್ರ, ದಾರ ಕಟ್ಟುವುದು ಮೂಢನಂಬಿಕೆ ಎಂದು ಸರಕಾರ ಜಾರಿಗೆ ತರುತ್ತಿರುವ ಕಾಯಿದೆ ವಿರುದ್ಧ ಪ್ರತಿಭಟನೆ ಮಾಡಬೇಕಾಗಿದೆ ಎಂದು ಕರ್ನಾಟಕ ವೀರಶೈವ ವಿದ್ಯಾಭಿವೃದ್ಧಿ ಸಂಸ್ಥೆ ಅಧ್ಯಕ್ಷ ಬಿ.ಎಸ್. ಪರಮಶಿವಯ್ಯ ಹೇಳಿದರು.
ಸುಕ್ಷೇತ್ರ ಕರಿಭಂಟನಾಳದ ವಿಷಮರ್ಧನ ಶ್ರೀ ಗುರು ಗಂಗಾಧರೇಶ್ವರ ಸ್ವಾಮಿಗಳ ಜಾತ್ರಾ ಮಹೋತ್ಸವದ ಅಂಗವಾಗಿ ಗುರುವಾರ ಹಮ್ಮಿಕೊಂಡಿದ್ದ ಗಂಗಾಧರ ಶ್ರೀ ಪ್ರಶಸ್ತಿ ಪ್ರದಾನ, ಜನಜಾಗೃತಿ ಸಭೆ ಹಾಗೂ ಗಣ್ಯರಿಗೆ ಸನ್ಮಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ದೇವರ ಮೇಲೆ ನಂಬಿಕೆ ಇರಿಸಿಕೊಂಡ ಭಕ್ತರು ತಮಗೆ ನೆಮ್ಮದಿ ಸಿಗಲೆಂದು ಬಸವನಾಡಿನ ಸುಕ್ಷೇತ್ರಗಳಾದ ಉತ್ನಾಳ ಹಾಗೂ ಕರಿಭಂಟನಾಳದಲ್ಲಿ ಯಂತ್ರ, ದಾರಗಳನ್ನು ಕಟ್ಟಿಸಿಕೊಳ್ಳಲು ಬರುತ್ತಾರೆ. ಅದನ್ನೇಕೆ ಸರ್ಕಾರ ನಿಷೇಧ ಹೇರಲು ಮುಂದಾಗಿದೆ ಎಂದು ಪ್ರಶ್ನಿಸಿದರು.
ಧರ್ಮ ಧರ್ಮಗಳನ್ನು ಕೂಡಿಸುವ ಕೆಲಸ ಮಾಡಬೇಕೇ ಹೊರತು ಧರ್ಮ ಧರ್ಮಗಳನ್ನು ಒಡೆಯುವ ಕೆಲಸಗಳನ್ನು ಮಾಡಬೇಡಿ. ಧರ್ಮದ ಇತಿಹಾಸ ಗೊತ್ತಿಲ್ಲದೇ ರಾಜಕಾರಣ ಮಾಡದಿರಿ ಎಂದರು.
ಪತ್ರಕರ್ತ ಪ್ರಶಾಂತ ರಿಪ್ಪನಪೇಟೆ ಮಾತನಾಡಿದರು. ಶಿವಕುಮಾರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ವಿಜಯಪುರ ಎಕ್ಸಲೆಂಟ್ ಸಂಸ್ಥೆ ಅಧ್ಯಕ್ಷ ಬಸವರಾಜ ಕೌಲಗಿ ಮಾತನಾಡಿ, ದೇಶ ಕಟ್ಟುವಲ್ಲಿ ಮಠ ಮಂದಿರಗಳ ಪಾತ್ರ ದೊಡ್ಡದಾಗಿದೆ ಎಂದರು. ಗಂಗಾಧರಶ್ರೀ ಪ್ರಶಸ್ತಿ ಸ್ವೀಕರಿಸಿ ತಾಲೂಕು ದಂಡಾಧಿಕಾರಿ ಎಂ.ಎನ್. ಚೋರಗಸ್ತಿ ಮಾತನಾಡಿದರು.
ಬೆಂಗಳೂರಿನ ಸರ್ಪಭೂಷಣ ಶಿವಯೋಗಿ ಮಠದ ಮಲ್ಲಿಕಾರ್ಜುನ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಮಾಜಿ ಶಾಸಕ ಶಿವಪುತ್ರಯ್ಯ ದೇಸಾಯಿ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಬಿಜೆಪಿ ಉಪಾಧ್ಯಕ್ಷರಾದ ಸೋಮನಗೌಡ ಪಾಟೀಲ, ರಾಜುಗೌಡ ಪಾಟೀಲ, ಮುಖಂಡ ಡಾ| ಬಸನಗೌಡ ಪಾಟೀಲ, ಶಿವಮೊಗ್ಗ ಉಪವಿಭಾಗಾಧಿಕಾರಿ ಮಮತಾ ಹೊಸಗೌಡರ, ಶಹಾಪುರದ ಸೂಗುರೇಶ್ವರ ಶಿವಾಚಾರ್ಯರು, ಐ.ಬಿ. ಹಿರೇಮಠ, ಕೊಟ್ರೇಶಪ್ಪ ಬಿದರಿ, ಡಾ| ಬಿ.ಎಚ್ . ಶಿವಲಿಂಗಮೂರ್ತಿ, ಶೇಖರಯ್ಯ ಹಿರೇಮಠ, ಬಸವರಾಜ ಶಿವಯೋಗಿ, ಶರಣಪ್ಪಗೌಡ ಕರಡಿ, ಮಲ್ಲಿಕಾರ್ಜುನ ಭಾವಿಕಟ್ಟಿ, ಶಿವಾನಂದ ಕೆಲ್ಲೂರ, ಶಿವಾನಂದ ಕಲ್ಯಾಣಿ, ರಮೇಶ ಬಿದನೂರ, ಬಸವರಾಜ ದೇಶಮುಖ ಸೇರಿದಂತೆ ಅನೇಕರು ಇದ್ದರು. ಈರಯ್ಯ ಹೀರೇಮಠ ನಿರೂಪಿಸಿದರು. ಪ್ರೊ| ಐ.ಬಿ. ಹಿರೇಮಠ ಸ್ವಾಗತಿಸಿದರು. ದೇವೇಂದ್ರ ಗೋನಾಳ ವಂದಿಸಿದರು.
ಗಂಗಾಧರಶ್ರೀ ಪ್ರಶಸ್ತಿ: ದಾವಣಗೆರೆಯ ಸುರಭಿ ಮತ್ತು ಮೈತ್ರಿ ಸಂಸ್ಥೆ ಅಧ್ಯಕ್ಷ ಡಾ| ಶಂಕರ ಪಾಟೀಲ, ತಹಶೀಲ್ದಾರ ಎಂ.ಎನ್. ಚೋರಗಸ್ತಿ ಹಾಗೂ ಗದಗದ ವೀಶ್ವರಪ್ಪ ರೇವುಡಿ ಅವರಿಗೆ ಗಂಗಾಧರಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Vijayapura ಮರ್ಯಾದಾ ಹತ್ಯೆ: ಇಬ್ಬರಿಗೆ ಗಲ್ಲು,ಐವರಿಗೆ ಜೀವಾವಧಿ ಶಿಕ್ಷೆ
ಅನ್ಯ ರಾಜ್ಯದ ಅಪರಿಚಿತ ಶಸ್ತ್ರಧಾರಿಗಳಿಂದ ಜೀವಬೆದರಿಕೆ: ಕಾಂಗ್ರೆಸ್ ವಿಪ ಸದಸ್ಯ ಸುನೀಲಗೌಡ
Vijayapura: ಸೀಟಿಗಾಗಿ ಮಹಿಳೆಯರ ಕಿತ್ತಾಟ: ರಸ್ತೆಯಲ್ಲೇ ನಿಂತ ಬಸ್
BJP; ಭಾರತ ವಿಶ್ವ ಮಟ್ಟದಲ್ಲಿ ಮಿಂಚಿದ್ದು ಮೋದಿ ಅಭಿವೃದ್ಧಿಯಿಂದ: ಅಣ್ಣಾಮಲೈ
Prajwal Case; ಪಕ್ಷಕ್ಕೆ ಮುಜುಗರ ಆಗಿರುವುದು ಸತ್ಯ: ಅರವಿಂದ ಲಿಂಬಾವಳಿ