ವಿಜಯಪುರ : ನಾಯಿ ದಾಳಿಗೆ ಎರಡು ಮೇಕೆ ಬಲಿ
Team Udayavani, Jan 9, 2020, 4:08 PM IST
ವಿಜಯಪುರ: ಎರಡು ನಾಯಿಗಳು ಏಕಕಾಲಕ್ಕೆ ದಾಳಿ ನಡೆಸಿದ ಕಾರಣಕ್ಕೆ ಎರಡು ಮೇಕೆಗಳು ಸಾವನ್ನಪ್ಪಿದ ಘಟನೆ ಇಂಡಿ ತಾಲೂಕಿನ ಹಳಗುಣಕಿ ಗ್ರಾಮದಲ್ಲಿ ಜರುಗಿದೆ.
ಹೊರ್ತಿ ಪೊಲೀಸ್ ಠಾಣಾ ವ್ಯಾಪ್ತಿಯ ಹಲಗುಣಕಿ ಗ್ರಾಮದ ರೈತ ಮಲ್ಲಿಕಾರ್ಜುನ ದಶವಂತ ಎಂಬವರು ತಮ್ಮ ತೋಟದ ಮನೆಯ ಮುಂದೆ ಕಟ್ಟಿದ್ದ ಮೇಕೆಗಳ ಮೇಲೆ ನಾಯಿ ದಾಳಿ ನಡೆಸಿವೆ.
ಹೊರಗಿನಿಂದ ಬಂದ ಎರಡು ನಾಯಿಗಳು ಮೇಕೆಗಳ ಮೇಲೆ ಮಾರಕವಾಗಿ ದಾಳಿ ಮಾಡಿದ ಕಾರಣ ಮೇಕೆಗಳು ಸ್ಥಳದಲ್ಲೇ ಮೃತಪಟ್ಡಿವೆ.
ಈ ಘಟನೆಯಿಂದ ಮೇಕೆ ಮಾಲೀಕರಿಗೆ ಸುಮಾರು 20ಸಾವಿರ ರೂ. ನಷ್ಟವಾಗಿದ್ದು, ಮೇಕೆ ಕಳೆದುಕೊಂಡಿರುವ ರೈತ ಕಂಗಾಲಾಗಿದ್ದಾನೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Tragedy; ಲಚ್ಯಾಣ ರಥೋತ್ಸವ ಗಾಯಾಳುವೂ ಸಾವು: ಮೃತರ ಸಂಖ್ಯೆ ಮೂರಕ್ಕೇರಿಕೆ
Vijayapura; 33 ಲಕ್ಷ ರೂ. ಮೌಲ್ಯದ ಮಾದಕ ವಸ್ತು, ವಾಹನ ವಶ : ದೆಹಲಿ ಮೂಲದ ವ್ಯಕ್ತಿ ಬಂಧನ
BJP ಶೆಟ್ಟರ್, ಶ್ರೀರಾಮುಲುಗೆ ಚೊಂಬು ಗ್ಯಾರಂಟಿ : ಲಕ್ಷ್ಮಣ ಸವದಿ
Indi ಲಚ್ಯಾಣ ಮಹಾರಥೋತ್ಸವದಲ್ಲಿ ಅವಘಡ: ರಥದ ಗಾಲಿಗೆ ಸಿಲುಕಿ ಇಬ್ಬರು ಮೃತ್ಯು
State Govt ದಿವಾಳಿ ಆಗಿದೆ:ಸರ್ಕಾರದಿಂದಲೇ ಲೂಟಿ ನಡೆಯುತ್ತಿದೆ: ಮಾಜಿ ಸಿಎಂ ಯಡಿಯೂರಪ್ಪ ಆರೋಪ