ಜಾನಪದ ಪರಂಪರೆ ರಕ್ಷಣೆ ಎಲ್ಲರ ಜವಾಬ್ದಾರಿ: ವಾಲೀಕಾರ

ಅಂದೇ ಜಾನಪದ ಹುಟ್ಟಿತು. ಜಾನಪದದ ಕುರಿತು ಹಲವರು ಪರಿಣಿತರಿದ್ದಾರೆ

Team Udayavani, Sep 2, 2021, 6:38 PM IST

ಜಾನಪದ ಪರಂಪರೆ ರಕ್ಷಣೆ ಎಲ್ಲರ ಜವಾಬ್ದಾರಿ: ವಾಲೀಕಾರ

ವಿಜಯಪುರ: ಜಾನಪದ ಸಾಹಿತ್ಯ ಅತ್ಯಂತ ಶ್ರೀಮಂತ ಸಾಹಿತ್ಯ ಪ್ರಕಾರ ಎನಿಸಿದೆ. ಜಾನಪದ ನುಡಿಗಳು ವೇದಕ್ಕೆ ಸಮಾನವಾಗಿದ್ದು, ನಮ್ಮ ಪರಂಪರೆಯ ಜೀವಂತಿಕೆ ಇರುವ ಜಾನಪದ ಸಾಹಿತ್ಯ ಹಾಗೂ ಕಲೆಗಳ ಸಂರಕ್ಷಣೆ ಅಗತ್ಯವಿದೆ ಎಂದು ಮಾನವ ಹಕ್ಕುಗಳ ಕಲ್ಯಾಣ ಮಂಡಳಿ ಅಧ್ಯಕ್ಷ ಹಾಸಿಂಪೀರ್‌ ವಾಲೀಕಾರ ಅಭಿಪ್ರಾಯಪಟ್ಟರು.

ತಿಕೋಟಾ ಪಟ್ಟಣದ ಬಿಎಲ್‌ಡಿಇ ಸಂಸ್ಥೆಯಲ್ಲಿ ಕನ್ನಡ ಜಾನಪದ ಪರಿಷತ್‌ ಹಾಗೂ ನೂತನ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ವಿಶ್ವ ಜಾನಪದ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಜಾನಪದ ನಮ್ಮ ಸಂಸ್ಕೃತಿಯ ಪ್ರತೀಕವಾಗಿದೆ.ಭವಿಷ್ಯದಲ್ಲಿ ಸಮಾಜದಲ್ಲಿರುವ ನಮ್ಮಯುವ ಪೀಳಿಗೆಗೆಈ ಪರಂಪರೆಯನ್ನು ನೀಡುವುದು ನಮ್ಮೆಲ್ಲರ ಹೊಣೆಯಾಗಿದೆ ಎಂದು ಹೇಳಿದರು. ಕನ್ನಡಜಾನಪದ ಪರಿಷತ್‌ ಜಿಲ್ಲಾಧ್ಯಕ್ಷಬಾಳನಗೌಡ ಪಾಟೀಲ ಮಾತನಾಡಿ, ಆಡು ಮುಟ್ಟದ ಸೊಪ್ಪಿಲ್ಲ, ಜಾನಪದರು ಹೇಳದ ವಿಷಯಗಳಿಲ.ಜಾನಪದರು ತಮ್ಮ ದಿನ ನಿತ್ಯದ ಕೆಲಸಗಳಲ್ಲಿ ನಿರತವಾಗಿದ್ದರೂ ಅನಕ್ಷರಸ್ತರಾಗಿದ್ದರೂ ಸ್ವಾನುಭವದ ಸಂಗತಿಗಳನ್ನು ಕಾವ್ಯಗಳಾಗಿ, ಕಥೆಗಳಾಗಿ ಕಟ್ಟಿಕೊಡುತ್ತಿದ್ದರು.

ಅಲಿಖಿತ ಸಾಹಿತ್ಯದ ನಿರಂತರ ಪ್ರಸಾರದ ಮೂಲಕವೇ ತಮ್ಮ ನೋವು ನಲಿವುಗಳನ್ನು ಸಂವೇದಿಸುತ್ತಿದ್ದು. ಆದರೆ ಆಧುನಿಕತೆ ತಾಂತ್ರಿಕ ಯುಗದಲ್ಲಿ ಇಂಗಿನ ಯುವ ಸಮೂಹ ಟಿವಿ, ಮೊಬೈಲ್‌, ಅಂತರ್ಜಾಲದಂಥ ಪ್ರಭಾವಕ್ಕೆ ಸಿಲುಕಿ ನಮ್ಮ ಮೂಲ ಪರಂಪರೆಯಿಂದ ವಿಮುಖರಾಗುತ್ತಿದ್ದಾರೆ. ಹೀಗಾಗಿ ಭವಿಷ್ಯದ ಯುವ ಜನಾಂಗಕ್ಕೆ ಜಾನಪದಕಲೆ, ಸಾಹಿತ್ಯದ ಅರಿವು ಮೂಡಿಸುವ ಕೆಲಸ ಮಾಡಲಾಗುತ್ತಿದೆ ಎಂದರು.

ಕನ್ನಡ ಜಾನಪದ ಪರಿಷತ್‌ ತಿಕೋಟಾ ತಾಲೂಕು ಘಟಕದ ಅಧ್ಯಕ್ಷ ನಿಂಗಪ್ಪ ಕಲಘಟಗಿ ಮಾತನಾಡಿ, ಭೂಮಿ ಮೇಲೆ ಮಾನವ ಜನಾಂಗ ಯಾವಾಗ ಹುಟ್ಟಿತೋ ಅಂದೇ ಜಾನಪದ ಹುಟ್ಟಿತು. ಜಾನಪದದ ಕುರಿತು ಹಲವರು ಪರಿಣಿತರಿದ್ದಾರೆ. ಯಾವುದೇ ಶಾಲೆ-ವಿಶ್ವವಿದ್ಯಾಲಯದಲ್ಲಿ ಕಲಿಯದೇ, ಅಕ್ಷರದ ಜ್ಞಾನ ಇಲ್ಲದಿದ್ದರೂ ಸಮಾಜದಲ್ಲಿ ಪರಂಪರೆಯಿಂದ ಹರಿದು ಬಂದಿದ್ದ ಜ್ಞಾನದಿಂದಲೇ ಕಾವ್ಯಗಳನ್ನು ರಚಿಸುತ್ತಿದ್ದರು‌. ಬದುಕಿನ ಅನುಭವಗಳೇ ಅವರಿಗೆ ವಿಶ್ವವಿದ್ಯಾಲಯಕ್ಕೂ ಮೀರಿದ ಸಾತ್ವಿಕ ಬದುಕಿನ ಶಿಕ್ಷಣ ನೀಡುತ್ತಿದ್ದವು ಎಂದು ವಿವರಿಸಿದರು.

ಪ್ರವಚನಕಾರ ಬಾಬುರಾವ್‌ ಮಹಾರಾಜ್‌ ಮಾತನಾಡಿ, ಬ್ರಹ್ಮಾಂಡದ ಮೂಲ ಉತ್ಪತ್ತಿಯೇ ಓಂಕಾರದಿಂದ ರೂಪಿತವಾಗಿದೆ. ಜಾನಪದ ಸಾಹಿತ್ಯ ಅಮ್ಮನ ಲಾಲಿ ಹಾಡಿನಿಂದ ಹಿಡಿದು ಹಂತಿಯ ಹಾಡು, ಮದುವೆ ಹಾಡು, ಬೀಸುವ ಕಲ್ಲಿನ ಹಾಡು ಮುಂತಾದವು ಜಾನಪದ ಸಾಹಿತ್ಯ ಹಾಗೂ ಕಲೆಗಳ ಆಗರವಾಗಿವೆ ಎಂದರು. ಗೀರಥಿತೇಲಿ,ಎಂ.ಎಸ್‌.ಯಚ್ಚಿ,ಪ್ರಾಚಾರ್ಯ ಎಸ್‌.ಪಿ. ಮದ್ರೇಕರ, ಚಂದ್ರಶೇಖರಯ್ಯ ಹಿರೇಮಠ, ಧರೆಪ್ಪ ಪಚ್ಚಾಪುರ, ಶಂಕ್ರಪ್ಪ ಶಿವನಾಕರ, ಕೆಂಚಪ್ಪ ಬೆಳಗಾವಿ, ಶಟವ್ವ ಮಾದರ, ಶಫೀಕ್‌ ಹಡಗಲಿ, ಮಧು ಖೋತ ,ಅನಿಲ ಖೋತ, ಶರಣು ಕಂಠಿ, ಖೋತ, ಐ.ಕೆ. ನದಾಫ್‌, ಎಸ್‌.ಆರ್‌. ಲಕ್ಕೊಂಡ, ಧರೆಪ್ಪ
ಹಡಪದ, ಚಂದ್ರಶೇಖರ ಹಿರೇಮಠ, ಬಸವರಾಜ ತಳವಾರ, ಕೊಣ್ಣೂರ ಇದ್ದರು.

ಟಾಪ್ ನ್ಯೂಸ್

Summer: ಆಸೆಯ ಭಾವ ಜ್ಯೂಸೇ ಜೀವ.! ಸುಡು ಬೇಸಿಗೆಯಲ್ಲೂ ತಣ್ಣಗಿರೋಣ ಬನ್ನಿ…

Summer: ಆಸೆಯ ಭಾವ ಜ್ಯೂಸೇ ಜೀವ.! ಸುಡು ಬೇಸಿಗೆಯಲ್ಲೂ ತಣ್ಣಗಿರೋಣ ಬನ್ನಿ…

Raichur; ನೀರಿಲ್ಲದೆ ಬರಿದಾದ ಕೆರೆ: ಮೀನುಗಳ ಮಾರಣ ಹೋಮ

Raichur; ನೀರಿಲ್ಲದೆ ಬರಿದಾದ ಕೆರೆ: ಮೀನುಗಳ ಮಾರಣ ಹೋಮ

ಗುರುಗ್ರಂಥ ಸಾಹೀಬ್ ಪುಟಗಳನ್ನು ಹರಿದ ಯುವಕ; ಥಳಿಸಿ ಕೊಂದು ಹಾಕಿದ ಸ್ಥಳೀಯರು

Ferozepur; ಗುರುಗ್ರಂಥ ಸಾಹೀಬ್ ಪುಟಗಳನ್ನು ಹರಿದ ಯುವಕ; ಥಳಿಸಿ ಕೊಂದು ಹಾಕಿದ ಸ್ಥಳೀಯರು

Crime: ಮೊಬೈಲ್‌ ಬಳಸಬೇಡ ಎಂದಿದ್ದಕ್ಕೆ ಅಣ್ಣನನ್ನೇ ಹತ್ಯೆಗೈದ 14ರ ಬಾಲಕಿ

Crime: ಮೊಬೈಲ್‌ ಬಳಸಬೇಡ ಎಂದಿದ್ದಕ್ಕೆ ಅಣ್ಣನನ್ನೇ ಹತ್ಯೆಗೈದ 14ರ ಬಾಲಕಿ

Koppala; ದಲಿತರ ಮನೆಯಲ್ಲಿ ಸಾಮಾನ್ಯರಂತೆ ಕುಳಿತು ಉಪಹಾರ ಸೇವಿಸಿದ ಯದುವೀರ ಒಡೆಯರ್

Koppala; ದಲಿತರ ಮನೆಯಲ್ಲಿ ಸಾಮಾನ್ಯರಂತೆ ಕುಳಿತು ಉಪಹಾರ ಸೇವಿಸಿದ ಯದುವೀರ ಒಡೆಯರ್

Passenger hiding snakes in pants intercepted at Miami airport

Miami; ವಿಮಾನ ಪ್ರಯಾಣಿಕನ ಪ್ಯಾಂಟ್ ನಲ್ಲಿ ಹಾವುಗಳು! ಮಿಯಾಮಿ ಏರ್ಪೋರ್ಟ್ ನಲ್ಲಿ ಆಗಿದ್ದೇನು?

dandeli

Dandeli: ನಾಲೆಗೆಸೆದ ಮಗುವಿನ ಮೃತದೇಹ ಪತ್ತೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Vijayapura ಮರ್ಯಾದಾ ಹತ್ಯೆ: ಇಬ್ಬರಿಗೆ ಗಲ್ಲು,ಐವರಿಗೆ ಜೀವಾವಧಿ ಶಿಕ್ಷೆ

Vijayapura ಮರ್ಯಾದಾ ಹತ್ಯೆ: ಇಬ್ಬರಿಗೆ ಗಲ್ಲು,ಐವರಿಗೆ ಜೀವಾವಧಿ ಶಿಕ್ಷೆ

ಅನ್ಯ ರಾಜ್ಯದ ಅಪರಿಚಿತ ಶಸ್ತ್ರಧಾರಿಗಳಿಂದ ಜೀವಬೆದರಿಕೆ: ಕಾಂಗ್ರೆಸ್ ವಿಪ ಸದಸ್ಯ ಸುನೀಲಗೌಡ

ಅನ್ಯ ರಾಜ್ಯದ ಅಪರಿಚಿತ ಶಸ್ತ್ರಧಾರಿಗಳಿಂದ ಜೀವಬೆದರಿಕೆ: ಕಾಂಗ್ರೆಸ್ ವಿಪ ಸದಸ್ಯ ಸುನೀಲಗೌಡ

3-vijayapura

Vijayapura: ಸೀಟಿಗಾಗಿ ಮಹಿಳೆಯರ ಕಿತ್ತಾಟ: ರಸ್ತೆಯಲ್ಲೇ ನಿಂತ ಬಸ್

1-wewqewqe

BJP; ಭಾರತ ವಿಶ್ವ ಮಟ್ಟದಲ್ಲಿ ಮಿಂಚಿದ್ದು ಮೋದಿ ಅಭಿವೃದ್ಧಿಯಿಂದ: ಅಣ್ಣಾಮಲೈ

Aravinda Limbavali reacts to Prajwal Case

Prajwal Case; ಪಕ್ಷಕ್ಕೆ ಮುಜುಗರ ಆಗಿರುವುದು ಸತ್ಯ: ಅರವಿಂದ ಲಿಂಬಾವಳಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Chikkmagaluru; ಕಾಡಾನೆ ದಾಳಿಗೆ ಕೂಲಿ ಕಾರ್ಮಿಕ ಬಲಿ

Chikkmagaluru; ಕಾಡಾನೆ ದಾಳಿಗೆ ಕೂಲಿ ಕಾರ್ಮಿಕ ಬಲಿ

Summer: ಆಸೆಯ ಭಾವ ಜ್ಯೂಸೇ ಜೀವ.! ಸುಡು ಬೇಸಿಗೆಯಲ್ಲೂ ತಣ್ಣಗಿರೋಣ ಬನ್ನಿ…

Summer: ಆಸೆಯ ಭಾವ ಜ್ಯೂಸೇ ಜೀವ.! ಸುಡು ಬೇಸಿಗೆಯಲ್ಲೂ ತಣ್ಣಗಿರೋಣ ಬನ್ನಿ…

Raichur; ನೀರಿಲ್ಲದೆ ಬರಿದಾದ ಕೆರೆ: ಮೀನುಗಳ ಮಾರಣ ಹೋಮ

Raichur; ನೀರಿಲ್ಲದೆ ಬರಿದಾದ ಕೆರೆ: ಮೀನುಗಳ ಮಾರಣ ಹೋಮ

ಗುರುಗ್ರಂಥ ಸಾಹೀಬ್ ಪುಟಗಳನ್ನು ಹರಿದ ಯುವಕ; ಥಳಿಸಿ ಕೊಂದು ಹಾಕಿದ ಸ್ಥಳೀಯರು

Ferozepur; ಗುರುಗ್ರಂಥ ಸಾಹೀಬ್ ಪುಟಗಳನ್ನು ಹರಿದ ಯುವಕ; ಥಳಿಸಿ ಕೊಂದು ಹಾಕಿದ ಸ್ಥಳೀಯರು

Crime: ಮೊಬೈಲ್‌ ಬಳಸಬೇಡ ಎಂದಿದ್ದಕ್ಕೆ ಅಣ್ಣನನ್ನೇ ಹತ್ಯೆಗೈದ 14ರ ಬಾಲಕಿ

Crime: ಮೊಬೈಲ್‌ ಬಳಸಬೇಡ ಎಂದಿದ್ದಕ್ಕೆ ಅಣ್ಣನನ್ನೇ ಹತ್ಯೆಗೈದ 14ರ ಬಾಲಕಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.