ಗ್ರಾಪಂ: ಅಂತಿಮ ಕಣದಲ್ಲಿ 169 ಅಭ್ಯರ್ಥಿಗಳು
Team Udayavani, Dec 15, 2020, 4:39 PM IST
ನಾಲತವಾಡ: ಗ್ರಾಪಂ ಮೊದಲ ಹಂತದ ಚುನಾವಣೆಯ ನಾಮಪತ್ರ ಹಿಂಪಡೆಯುವಕೊನೆ ದಿನವಾದ ಸೋಮವಾರ 92 ಅಭ್ಯರ್ಥಿಗಳು ನಾಮಪತ್ರ ಹಿಂಪಡೆದಿದ್ದು ಅಂತಿಮವಾಗಿ 169 ಅಭ್ಯರ್ಥಿಗಳು ಕಣದಲ್ಲಿ ಉಳಿದಿದ್ದಾರೆ.
ಬಿಜ್ಜೂರ ಗ್ರಾಪಂ: ಬಿಜ್ಜೂರ ಗ್ರಾಪಂ ಒಟ್ಟು 16 ಸ್ಥಾನಕ್ಕೆ 53 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದು ಎಲ್ಲರ ನಾಮಪತ್ರಕ್ರಮಬದ್ಧವಾಗಿವೆ. ಸೋಮವಾರ ಒಟ್ಟು 17 ಅಭ್ಯರ್ಥಿಗಳು ನಾಮಪತ್ರ ಹಿಂಪಡೆದಿದ್ದಾರೆ.
ಅಯ್ಯನಗುಡಿ ಮತಕ್ಷೇತ್ರ 2ಅಭ್ಯರ್ಥಿ ಕಾನಿಕೇರಿ ನಿವಾಸಿ ಶ್ವೇತಾ ಯಮನಪ್ಪಗೌಡ ಪಾಟೀಲ ಮಾತ್ರ ನಾಮಪತ್ರ ಸಲ್ಲಿಸಿದ್ದು ಅವಿರೋಧ ಆಯ್ಕೆಯಾಗಿದ್ದಾರೆ. 15 ಸ್ಥಾನಕ್ಕೆ 36 ಅಭ್ಯರ್ಥಿಗಳು ಅಂತಿಮ ಕಣದಲ್ಲಿ ಉಳಿದಿದ್ದಾರೆ.
ರಕ್ಕಸಗಿ ಗ್ರಾಪಂ: ರಕ್ಕಸಗಿ ಗ್ರಾಪಂನ ಒಟ್ಟು 14 ಸ್ಥಾನಕ್ಕೆ 45 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದು 13 ಅಭ್ಯರ್ಥಿಗಳು ನಾಮಪತ್ರ ಹಿಂಪಡೆದಿದ್ದಾರೆ. ಬಲದಿನ್ನಿಯ ಸಾಮಾನ್ಯ ಸ್ಥಾನದ ಅಭ್ಯರ್ಥಿ ಶಾಂತಲಿಂಗ ಭೂಪಾಲ ನಾಡಗೌಡ ಹಾಗೂಹುನಕುಂಟಿಯ ಹಿಂದುಳಿದ ವರ್ಗ ಅ ಮಹಿಳೆ ಅಭ್ಯರ್ಥಿ ಯಲ್ಲವ್ವ ಚಂದ್ರಾಮಪ್ಪ ಕಾನಿಕೇರಿ ಅವಿರೋಧ ಆಯ್ಕೆಯಾಗಿದ್ದಾರೆ.
ನಾಗರಬೆಟ್ಟ ಗ್ರಾಪಂ: ಒಟ್ಟು 12 ಸ್ಥಾನಕ್ಕೆ 43 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದರು. ನಾಲ್ಕು ಸ್ಥಾನಕ್ಕೆ ಅವಿರೋಧ ಆಯ್ಕೆ ನಡೆದಿದೆ. ನಾಗರಬೆಟ್ಟ ಗ್ರಾಮದ ಅ.ಜಾ.ಮಹಿಳೆ ಸ್ಥಾನಕ್ಕೆ ಪ್ರೇಮಾ ಚಲವಾದಿ, ಮಲಗಲದಿನ್ನಿ ಗ್ರಾಮದ ಸಾಮಾನ್ಯ ಮಹಿಳಾ ಅಭ್ಯರ್ಥಿ ಪರಮವ್ವ ಪಾಟೀಲ, ಮಲಗಲದಿನ್ನಿ ಗ್ರಾಮದ ಹಿ.ಬ ವರ್ಗಕ್ಕೆ ಸಿದ್ರಾಮಪ್ಪ ಪ್ಯಾಟಿ, ಜೈನಾಪುರ ಗ್ರಾಮದ ಅ.ಪಂಗಡ ಅಭ್ಯರ್ಥಿ ಗದ್ದೆಮ್ಮ ನಾಯ್ಕೋಡಿ ಅವಿರೋಧ ಆಯ್ಕೆಯಾಗಿದ್ದಾರೆ. ಉಳಿದ 8 ಸ್ಥಾನಕ್ಕೆ 17 ಅಭ್ಯರ್ಥಿಗಳ ಮಧ್ಯೆ ಪೈಪೋಟಿ ನಡೆಯಲಿದೆ.
ನಾಗಬೇನಾಳ ಗ್ರಾಪಂ: ಒಟ್ಟು 13 ಸ್ಥಾನಕ್ಕೆ 42 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದರು. ಇದರಲ್ಲಿ ನಾಗಬೇನಾಳ ಗ್ರಾಮಕ್ಕೆ 12 ಅಭ್ಯರ್ಥಿ, ವೀರೇಶನಗರ 10 ಅಭ್ಯರ್ಥಿ, ಆರೇಶಂಕರ ಮತಕ್ಷೇತ್ರಕ್ಕೆ 4 ಅಭ್ಯರ್ಥಿಗಳು ಅಂತಿಮ ಕಣದಲ್ಲಿ ಉಳಿದಿದ್ದಾರೆ. ಒಟ್ಟು 13 ಸ್ಥಾನಗಳಪೈಕಿ ನಾಗಬೇನಾಳ ಅ.ಪಂಗಡ ಅಭ್ಯರ್ಥಿಹಾಗೂ ಸಿದ್ದಾಪುರ ಪಿ.ಎನ್ ಗ್ರಾಮದಮೂವರು ಅಭ್ಯರ್ಥಿಗಳು ಅವಿರೋಧ
ಆಯ್ಕೆಯಾಗಿದ್ದಾರೆ.
ಅಡವಿಸೋಮನಾಳ ಗ್ರಾಪಂ: ಒಟ್ಟು 15 ಸ್ಥಾನಕ್ಕೆ 56 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದರು. ಸೋಮವಾರ 18 ಅಭ್ಯರ್ಥಿಗಳುನಾಮಪತ್ರ ಹಿಂಪಡೆದಿದ್ದಾರೆ. ಒಂದು ನಾಮಪತ್ರ ತಿರಸ್ಕೃತವಾಗಿದ್ದು 31 ಅಭ್ಯರ್ಥಿಗಳು ಅಂತಿಮ ಕಣದಲ್ಲಿ ಉಳಿದಿದ್ದಾರೆ. ಚವನಭಾವಿ ಗ್ರಾಮ ಯಮನಪ್ಪ ಸಿದ್ದಪ್ಪ ಚಲವಾದಿ ಅವಿರೋಧ ಆಯ್ಕೆಯಾಗಿದ್ದಾರೆ.
ಆಲೂರ ಗ್ರಾಪಂ: ಒಟ್ಟು 21 ಸ್ಥಾನಕ್ಕೆ 3 ನಾಮಪತ್ರ ತಿರಸ್ಕೃತವಾಗಿ 57 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದರು. 10 ಅಭ್ಯರ್ಥಿಗಳು ನಾಮಪತ್ರ ಹಿಂಪಡೆದಿದ್ದಾರೆ. ಯರಗಲ್ಲ ಒಂದು ಹಾಗೂ ಹಡಗಲಿ ಗ್ರಾಮದ ಇಬ್ಬರು ಅಭ್ಯರ್ಥಿಗಳು ಅವಿರೋಧ ಆಯ್ಕೆಯಾಗಿದ್ದಾರೆ. ಉಳಿದ 19 ಸ್ಥಾನಕ್ಕೆ 44 ಅಭ್ಯರ್ಥಿಗಳು ಅಂತಿಮ ಕಣದಲ್ಲಿ ಉಳಿದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Indi ಲಚ್ಯಾಣ ಮಹಾರಥೋತ್ಸವದಲ್ಲಿ ಅವಘಡ: ರಥದ ಗಾಲಿಗೆ ಸಿಲುಕಿ ಇಬ್ಬರು ಮೃತ್ಯು
State Govt ದಿವಾಳಿ ಆಗಿದೆ:ಸರ್ಕಾರದಿಂದಲೇ ಲೂಟಿ ನಡೆಯುತ್ತಿದೆ: ಮಾಜಿ ಸಿಎಂ ಯಡಿಯೂರಪ್ಪ ಆರೋಪ
Muddebihal: ಹೆಂಡತಿಗೆ ಚೂರಿ ಇರಿದು ಪರಾರಿಯಾದ ಗಂಡ
Siddaramaiah ಮುಸ್ಲಿಂ ಮೀಸಲಾತಿ ಬಗ್ಗೆ ಬಿಜೆಪಿಯಿಂದ ಸುಳ್ಳು
Vijaypura:ರಾಹುಲ್ ಗಾಂಧಿ ನಿರ್ಗಮಿಸುವಾಗ ವೇದಿಕೆಗೆ ಬಂದ ಸಿದ್ದರಾಮಯ್ಯ