ಗ್ರಾ.ಪಂ ಚುಕ್ಕಾಣಿ ಹಿಡಿದ ಸಾರಥಿಗಳು
Team Udayavani, Feb 6, 2021, 4:00 PM IST
ಮುದ್ದೇಬಿಹಾಳ: ಹಡಲಗೇರಿ ಗ್ರಾಪಂ ಅಧ್ಯಕ್ಷರಾಗಿ ಹಡಲಗೇರಿಯ ದ್ಯಾಮವ್ವ ಹರಿಂದ್ರಾಳ, ಉಪಾಧ್ಯಕ್ಷರಾಗಿ ಮುದ್ನಾಳದ ಅಬ್ದುಲ್ರಜಾಕ್ ಮಕಾಶಿ ಶುಕ್ರವಾರ ಅವಿರೋಧ ಆಯ್ಕೆಯಾಗಿದ್ದಾರೆ. ಇಬ್ಬರೂ ಕಾಂಗ್ರೆಸ್ ಬೆಂಬಲಿತರಾಗಿದ್ದರಿಂದ ಈ ಗ್ರಾಪಂ ಅಧಿ ಕಾರ ಕಾಂಗ್ರೆಸ್ ವಶಕ್ಕೆ ಸಿಕ್ಕಂತಾಗಿದೆ. ಅಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆ ಹಾಗೂ ಉಪಾಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲಾಗಿತ್ತು.
ಸದಸ್ಯರಾದ ಹನುಮಪ್ಪ ತಳ್ಳಿಕೇರಿ, ದೇವಪ್ಪ ವಾಲೀಕಾರ, ಪಾವಡೇಶ ಮಾದರ, ಟಾಕಪ್ಪ ಲಮಾಣಿ, ಮಾಳಪ್ಪ ಕನ್ನೂರ, ಶ್ರೀಕಾಂತ ಲಮಾಣಿ, ದೇವರಾಜ್ ಲಮಾಣಿ, ಶಾರುಬಾಯಿ ಲಮಾಣಿ, ಮಲ್ಲವ್ವ ಹರಿಜನ, ಲಕ್ಷವ್ವ ಪರಪ್ಪಗೋಳ, ಲಕ್ಷ್ಮೀಬಾಯಿ ಬಿರಾದಾರ, ಲಕ್ಷ್ಮಣ ಒಳಕಲದಿನ್ನಿ, ಮಲ್ಲವ್ವ ಚಲವಾದಿ, ಯಲ್ಲವ್ವ ಚಲವಾದಿ, ಗದ್ದೆವ್ವ ತಳವಾರ ಹಾಜರಿದ್ದರು.
ಸಿಡಿಪಿಒ ಸಾವಿತ್ರಿ ಗುಗ್ಗರಿ ಅವರು ಗೊತ್ತುಪಡಿಸಿದ ಅಧಿಕಾರಿಯಾಗಿ ಪ್ರಕ್ರಿಯೆ ನಡೆಸಿಕೊಟ್ಟರು. ಪಿಡಿಒ ಶೋಭಾ ಮುದಗಲ್ಲ, ಕಾರ್ಯದರ್ಶಿ ಎನ್.ಬಿ. ಕಲ್ಹಾರಿ ಸಹಕರಿಸಿದರು.
ವಿಜಯೋತ್ಸವ: ನೂತನ ಅಧ್ಯಕ್ಷ, ಉಪಾಧ್ಯಕ್ಷರು ಬೆಂಬಲಿತ ಸದಸ್ಯರು, ಸ್ಥಳೀಯ ಕಾಂಗ್ರೆಸ್ ಧುರೀಣರೊಂದಿಗೆ ವಿಜಯೋತ್ಸವ ಆಚರಿಸಿದರು.
ಈ ವೇಳೆ ಎಪಿಎಂಸಿ ಮಾಜಿ ಅಧ್ಯಕ್ಷ, ಹಾಲಿ ನಿರ್ದೇಶಕ ಗುರಣ್ಣ ತಾರನಾಳ ಮಾತನಾಡಿ, ನೂತನವಾಗಿ ಆಯ್ಕೆಗೊಂಡಿರುವ ಅಧ್ಯಕ್ಷ, ಉಪಾಧ್ಯಕ್ಷರು ಕಾಂಗ್ರೆಸ್ ಬೆಂಬಲಿತರಾಗಿದ್ದಾರೆ. ಆದರೂ ಎಲ್ಲ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅಭಿವೃದ್ಧಿ ಕೆಲಸ ಮಾಡಬೇಕು. ಎಲ್ಲರೂ ಒಟ್ಟಾಗಿ ಕೆಲಸ ಮಾಡುವುದು ಅಭಿವೃದ್ಧಿ ದೃಷ್ಟಿಯಲ್ಲಿ ಒಳ್ಳೆಯದು ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
State Govt ದಿವಾಳಿ ಆಗಿದೆ:ಸರ್ಕಾರದಿಂದಲೇ ಲೂಟಿ ನಡೆಯುತ್ತಿದೆ: ಮಾಜಿ ಸಿಎಂ ಯಡಿಯೂರಪ್ಪ ಆರೋಪ
Muddebihal: ಹೆಂಡತಿಗೆ ಚೂರಿ ಇರಿದು ಪರಾರಿಯಾದ ಗಂಡ
Siddaramaiah ಮುಸ್ಲಿಂ ಮೀಸಲಾತಿ ಬಗ್ಗೆ ಬಿಜೆಪಿಯಿಂದ ಸುಳ್ಳು
Vijaypura:ರಾಹುಲ್ ಗಾಂಧಿ ನಿರ್ಗಮಿಸುವಾಗ ವೇದಿಕೆಗೆ ಬಂದ ಸಿದ್ದರಾಮಯ್ಯ
INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್