ತೊಗರಿ ಖರೀದಿ ಕೇಂದ್ರ ಶುರು
ಹಿರೇರೂಗಿ-ತಾಳಿಕೋಟೆ-ಖೇಡಗಿ-ಹೂವಿನಹಿಪ್ಪರಗಿಯಲ್ಲಿ ಆರಂಭ6,100 ರೂ. ಬೆಲೆ ನಿಗದಿ
Team Udayavani, Feb 14, 2020, 12:41 PM IST
ಹೂವಿನಹಿಪ್ಪರಗಿ: ತೊಗರಿ ನೋಂದಣಿಗೆ ಫೆ.25ರವರೆಗೆ ಅವಕಾಶ ನೀಡಿ 10 ಕ್ವಿಂಟಲ್ಗಿದ್ದ ಖರೀದಿ ಮಿತಿಯನ್ನು 20 ಕ್ವಿಂಟಲ್ ಹೆಚ್ಚಿಸಿದ್ದು, ರೈತರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಪಿಕೆಪಿಎಸ್ ಅಧ್ಯಕ್ಷ ಅನಿಲಗೌಡ ಪಾಟೀಲ ಮನವಿ ಮಾಡಿದರು.
ಕುದರಿ ಸಾಲವಾಡಗಿ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಆಶ್ರಯದಲ್ಲಿ ತೆರೆಯಲಾದ ತೊಗರಿ ಖರೀದಿಗೆ ಚಾಲನೆ ನೀಡಿ ಅವರು ಮಾತನಾಡಿದರು. ಕೇಂದ್ರ ಸರಕಾರ 5,800
ರೂ. ಮತ್ತು ರಾಜ್ಯ ಸರಕಾರ 300 ರೂ. ಬೆಂಬಲ ಬೆಲೆ ಸೇರಿದಂತೆ ಒಟ್ಟು 6,100 ರೂ. ನೀಡುತ್ತಿದ್ದು, ಖಾಸಗಿ ಮಾರುಕಟ್ಟಿಗೆ ಬೆಲೆಯಲ್ಲಿ ಬಾರಿ ವ್ಯತ್ಯಾಸ ಇದ್ದು ಬೆಂಬಲ ಬೆಲೆ ಸಹಾಯವಾಗಲಿದೆ. ಸರಕಾರ ತೆರೆದಿರುವ ತೊಗರಿ ಕೇಂದ್ರದಲ್ಲಿ ರೈತರು ಮಾರಾಟ ಮಾಡಿ ಬೆಂಬಲ ಬೆಲೆಯ ಉಪಯೋಗ ಪಡೆಯಲು ಸಲಹೆ ನೀಡಿದರು.
ನಮ್ಮ ಪಿಕೆಪಿಎಸ್ ಸಿಬ್ಬಂದಿ ರೈತರ ಸರದಿಯಲ್ಲಿ ಯಾವುದೇ ವ್ಯತ್ಯಾಸ ಮಾಡದೇ ಆಯಾ ರೈತರ ಸರದಿ ಪ್ರಕಾರ ತೊಗರಿ ಖರೀದಿಸಲಾಗುತ್ತದೆ. ರೈತರು ಸಹ ಸಿಬ್ಬಂದಿಯೊಂದಿಗೆ ಸಹಕಾರದಿಂದ ವರ್ತಿಸಿದರೆ ಖರೀದಿಗೆ ಅನುಕೂಲವಾಗಲಿದೆ ಎಂದು ಹೇಳಿದರು.
ಸಂಗನಗೌಡ ಪಾಟೀಲ, ಅಡಿವೆಪ್ಪಗೌಡ ಪಾಟೀಲ, ಲಕ್ಷ್ಮಣ ರ್ಯಾಗೇರಿ, ಬೀರಪ್ಪ ಉಂಡಿ, ಮಲ್ಲಣ್ಣ ಅಣ್ಣಪ್ಪನವರ, ಬಸವರಾಜ ಬೈರವಾಡಗಿ, ಪರಶುರಾಮ ಬಿದರಕುಂದಿ, ಅಬ್ಬುಲರಹಿಮಾನ ಗುಡ್ನಾಳ, ದುರಗಪ್ಪ ವಡ್ಡರ, ಅನಿಲಕುಮಾರ ದೇಸಾಯಿ, ವಿಜಯಕುಮಾರ ಬಿರಾದಾರ, ಮಲ್ಲು ಉಪ್ಪಾರ, ಭೀಮನಗೌಡ ಪಾಟೀಲ, ವಿಜಯಕುಮಾರ ದೇಸಾಯಿ, ಮಹಾಂತೇಶ ಡೋಣುರ, ಹನುಮಂತ್ರಾಯ ದೇಸಾಯಿ, ಪರಶುರಾಮ ಕಂಬಾರ, ಚಿದಾನಂದ ಜೀರ, ಲಾಳೆಸಾ ನದಾಫ್ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Indi ಲಚ್ಯಾಣ ಮಹಾರಥೋತ್ಸವದಲ್ಲಿ ಅವಘಡ: ರಥದ ಗಾಲಿಗೆ ಸಿಲುಕಿ ಇಬ್ಬರು ಮೃತ್ಯು
State Govt ದಿವಾಳಿ ಆಗಿದೆ:ಸರ್ಕಾರದಿಂದಲೇ ಲೂಟಿ ನಡೆಯುತ್ತಿದೆ: ಮಾಜಿ ಸಿಎಂ ಯಡಿಯೂರಪ್ಪ ಆರೋಪ
Muddebihal: ಹೆಂಡತಿಗೆ ಚೂರಿ ಇರಿದು ಪರಾರಿಯಾದ ಗಂಡ
Siddaramaiah ಮುಸ್ಲಿಂ ಮೀಸಲಾತಿ ಬಗ್ಗೆ ಬಿಜೆಪಿಯಿಂದ ಸುಳ್ಳು
Vijaypura:ರಾಹುಲ್ ಗಾಂಧಿ ನಿರ್ಗಮಿಸುವಾಗ ವೇದಿಕೆಗೆ ಬಂದ ಸಿದ್ದರಾಮಯ್ಯ
MUST WATCH
ಹೊಸ ಸೇರ್ಪಡೆ
ನಾರಿ ಶಕ್ತಿ ವಿರೋಧಿಸುವ ಕಾಂಗ್ರೆಸ್ಗೆ ಚುನಾವಣೆಯಲ್ಲಿ ಪಾಠ ಕಲಿಸಬೇಕು: ಗಾಯತ್ರಿ ಸಿದ್ದೇಶ್ವರ
Spying: ಪಾಕಿಸ್ತಾನ ಪರ ಬೇಹುಗಾರಿಕೆ: ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ ವ್ಯಕ್ತಿಯ ಬಂಧನ
T20 ವಿಶ್ವಕಪ್ ಗೆ ಬಲಿಷ್ಠ ತಂಡವನ್ನು ಪ್ರಕಟಿಸಿದ ನ್ಯೂಜಿಲೆಂಡ್; ಮರಳಿದ ಸ್ಫೋಟಕ ಆಟಗಾರ
Tragedy: ಛತ್ತೀಸ್ಗಢದಲ್ಲಿ ಭೀಕರ ಅಪಘಾತ… ಮಕ್ಕಳು ಸೇರಿ 8 ಮಂದಿ ಮೃತ್ಯು, 22 ಮಂದಿಗೆ ಗಾಯ
MP Srinivas Prasad: ಚಾಮರಾಜನಗರ ಸಂಸದ ಶ್ರೀನಿವಾಸ್ ಪ್ರಸಾದ್ ನಿಧನ