ಮನೆಗಳ್ಳತನ: 10 ಆರೋಪಿಗಳ ಬಂಧನ
Team Udayavani, Sep 15, 2020, 4:15 PM IST
ವಿಜಯಪುರ: ವಿಜಯಪುರ ನಗರದಲ್ಲಿ ನಡೆದಿರುವ ವಿವಿಧ ಮನೆಗಳ ಕಳ್ಳತನ ಪ್ರಕರಣ ಬೇಧಿ ಸುವಲ್ಲಿ ಮತ್ತೂಮ್ಮೆ ಯಶಸ್ವಿಯಾಗಿರುವ ಜಿಲ್ಲೆಯ ಪೊಲೀಸರು ಮತ್ತೆ 10 ಜನರನ್ನು ಬಂಧಿಸಿ, 500 ಗ್ರಾಂ ಚಿನ್ನಾಭರಣ ವಶಕ್ಕೆ ಪಡೆದಿದ್ದಾಗಿ ಜಿಲ್ಲಾ ಪೊಲೀಸ್ ವರಿಷ್ಠಾ ಧಿಕಾರಿ ಅನುಪಮ್ ಅಗರವಾಲ್ ತಿಳಿಸಿದ್ದಾರೆ.
ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಜಿಲ್ಲೆಯ ಪೊಲೀಸರು ಬೇಧಿಸಿರುವ ಕಳ್ಳತನ ಪ್ರಕರಣ ವಿವರ ನೀಡಿದ ಅವರು, ಆ.23ರಂದು ಆದರ್ಶನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಕಳ್ಳತನ ಪ್ರಕರಣಗಳಿಗೆ ಸಂಬಂ ಧಿಸಿದಂತೆ 3 ಆರೋಪಿಗಳನ್ನು ಬಂಧಿ ಸಲಾಗಿದೆ. ಬಂ ಧಿತರನ್ನು ಸ್ವರೂಪ್ ರಮೇಶ ಚಲವಾದಿ, ಗೌಸ್ಪಾಕ್ ಉಸ್ಮಾನ್ಶೇಖ ನಿಸಾರಮಡ್ಡಿ, ಸತೀಶ ಧನರಾಜ್ ನಾಯಕ್ ಎಂದು ಗುರುತಿಸಲಾಗಿದೆ. ಆರೋಪಿಗಳಿಂದ 190 ಗ್ರಾಂ ಚಿನ್ನಾಭರಣ ಜಪು¤ ಮಾಡಿಕೊಳ್ಳಲಾಗಿದೆ.
ಆಗಸ್ಟ್ 20ರಂದು ಜಲನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿನಡೆದ ಕಳ್ಳತನ ಪ್ರಕರಣಕ್ಕೆ ಸಂಬಂಧಿ ಸಿದಂತೆ 3 ಆರೋಪಿಗಳನ್ನು ಬಂಧಿ ಸಿದ್ದು, ಬಂ ಧಿತರನ್ನು ವೀರೇಶ ಶಿವಾನಂದ ಬಂಥನಾಳ, ಕಿರಣ ಶರ್ಮಾ ಎಂದು ಗುರುತಿಸಿದ್ದು, ಇದರಲ್ಲಿ ಕಾನೂನು ಸಂಘರ್ಷಕ್ಕೊಳಗಾದ ಓರ್ವನನ್ನು ವಶಕ್ಕೆ ಪಡೆಯಲಾಗಿದೆ. ಬಂತರಿಂದ 190 ಗ್ರಾಂ ಬಂಗಾರ ಜಫ್ತು ಮಾಡಿಕೊಳ್ಳಲಾಗಿದೆ. ಆಗಸ್ಟ್ 26ರಂದು ಜಲನಗರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲೇ ನಡೆದಿದ್ದ ಇನ್ನೊಂದು ಮನೆಗಳ್ಳತನ ಪ್ರಕರಣಕ್ಕೆ ಸಂಬಂ ಸಿದಂತೆ ಪ್ರಮುಖ ಆರೋಪಿ ಮನ್ ಖಾದರಿ ಸೇರಿದಂಥೆ 4 ಆರೋಪಿಗಳನ್ನು ಬಂ ಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಬಂಧಿ ತರಿಂದ 90 ಗ್ರಾಂ ಚಿನ್ನಾಭರಣ ಜಫ್ತು ಮಾಡಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Siddaramaiah ಮುಸ್ಲಿಂ ಮೀಸಲಾತಿ ಬಗ್ಗೆ ಬಿಜೆಪಿಯಿಂದ ಸುಳ್ಳು
Vijaypura:ರಾಹುಲ್ ಗಾಂಧಿ ನಿರ್ಗಮಿಸುವಾಗ ವೇದಿಕೆಗೆ ಬಂದ ಸಿದ್ದರಾಮಯ್ಯ
INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್
Muddebihal: ಅಪರಿಚಿತ ವಾಹನ ಡಿಕ್ಕಿ: ಯುವಕ ಸಾವು
Vijayapura; ಯತ್ನಾಳ್ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು: ಶಿವಾನಂದ ಪಾಟೀಲ