ಬಂಕ್ ಮಾಲೀಕನಿಗೆ ಲಕ್ಷಾಂತರ ರೂ ಬಾಕಿ: ವ್ಯಕ್ತಿಯನ್ನು ಅರೆಬೆತ್ತಲೆ ಕೂರಿಸಿದ ಬಂಕ್ ಮ್ಯಾನೇಜರ್
Team Udayavani, Jun 26, 2023, 4:53 PM IST
ಮುದ್ದೇಬಿಹಾಳ: ಡೀಸೆಲ್ ಹಾಕಿಸಿಕೊಂಡ 15 ಲಕ್ಷಕ್ಕೂ ಹೆಚ್ಚು ಬಾಕಿ ಹಣ ಕೊಡಲು ಸತಾಯಿಸಿದ ಕಾರಣ ವ್ಯಕ್ತಿಯೊಬ್ಬನನ್ನು ಪೆಟ್ರೋಲ್ ಬಂಕ್ ನಲ್ಲಿ ಅರೆಬೆತ್ತಲೆಯಾಗಿ ಕೂರಿಸಿದ ಆರೋಪದ ಮೇರೆಗೆ ಇಲ್ಲಿನ ಭೋಸಲೆ ಪೆಟ್ರೋಲ್ ಬಂಕ್ ಮ್ಯಾನೇಜರ್ ಮೇಲೆ ಪ್ರಕರಣ ದಾಖಲಾಗಿದೆ.
ಮೌನೇಶ ಪತ್ತಾರ ಎಂಬಾತ ಬೋರವೆಲ್ ಕೊರೆಯುವ ಯಂತ್ರದ ವಾಹನಕ್ಕೆ ಡೀಸೆಲ್ ಹಾಕಿಸುತ್ತಿದ್ದ. ಇತ್ತೀಚೆಗೆ ಬೋರವೆಲ್ ಮಾಲಿಕ ವಾಹನ ಸಮೇತ ತಮ್ಮ ರಾಜ್ಯಕ್ಕೆ ಹೋಗಿದ್ದ. ಈ ವಾಹನಗಳಿಗೆ ಹಾಕಿದ ಡೀಸೆಲ್ ಬಾಕಿ ಲಕ್ಷಾಂತರ ರೂ ಆಗಿತ್ತು. ಡೀಸೆಲ್ ಹಾಕಿಸಲು ಮಧ್ಯವರ್ತಿಯಾಗಿದ್ದ ಮೌನೇಶನಿಗೆ ಬಂಕ್ ಮಾಲಕರು ಬಾಕಿ ಕೊಡಿಸುವಂತೆ ಹಲವು ಬಾರಿ ಕೇಳಿದ್ದರೂ ಸ್ಪಂಧಿಸಿರಲಿಲ್ಲ. ಬೇಸತ್ತು ಮೌನೇಶನನ್ನು ಬಂಕ್ ಗೆ ಕರೆತಂದು ಕೂರಿಸಿದ್ದರು. ಆತ ಏನೇನೊ ನೆಪ ಹೇಳಿ ಬಂಕ್ ನಿಂದ ಓಡಿ ಹೋಗುತ್ತಿದ್ದ. ಇದನ್ನು ಕಂಡು ಬಂಕ್ ನವರು ಮತ್ತೇ ಅವನನ್ನು ಕರೆತಂದು ಅರೆಬೆತ್ತಲೆಯಾಗಿ ಕೂರಿಸಿ ಆತ ಓಡಿ ಹೋಗದಂತೆ ಮಾಡಿದ್ದರು. ಈ ವಿಷಯ ತಿಳಿದ ಆತನ ಪತ್ನಿ, ಮಕ್ಕಳು ಬಂಕ್ ಗೆ ಬಂದು, ಗಲಾಟೆ ನಡೆಸಿ, ಜಿಲ್ಲಾ ಎಸ್ಪಿಗೆ ಮೋಬೈಲ್ ಮೂಲಕ ಮಾತಾಡಿ ದೂರು ಸಲ್ಲಿಸಿದ್ದರು. ಈ ವಿಷಯ ವೈರಲ್ ಅಗುತ್ತಿದ್ದಂತೆಯೇ ತಹಶೀಲ್ದಾರ್, ಸಿಪಿಐ, ಪಿಎಸೈ ಅವರು ಬಂಕ್ ಗೆ ಆಗಮಿಸಿ ವಿಚಾರಣೆ ನಡೆಸಿದರು. ಅರೆಬೆತ್ತಲೆ ಕೂರಿಸಿದ್ದ ಮೌನೇಶನಿಗೆ ಬಟ್ಟೆ ತೊಡಿಸಿ ಪೊಲೀಸ್ ಠಾಣೆಗೆ ಕರೆದೊಯ್ದರು. ಮೌನೇಶನ ಪತ್ನಿ ನೀಡಿರುವ ಅಕ್ರಮ ಬಂಧನ ಆರೋಪದ ಮೇಲೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಇದನ್ನೂ ಓದಿ: ಭೀಕರ ಪ್ರವಾಹ: ಹೆದ್ದಾರಿಗೆ ಉರುಳಿದ ಬಂಡೆಗಳು, 15 ಕಿ.ಮೀ ಗೂ ಅಧಿಕ ಟ್ರಾಫಿಕ್ ಜಾಮ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Politics: ಕೇಂದ್ರ ಬರ ಪರಿಹಾರ ನೀಡದಿರಲು ವಿಧಾನಸಭೆ ಚುನವಾಣೆ ಸೋಲಿನ ಸೇಡು: ರಾಮಲಿಂಗಾರೆಡ್ಡಿ
Politics: ಡಿಕೆಶಿ ಹೆಸರು ಹೇಳದಿದ್ದರೆ ಕೆಲವರಿಗೆ ನಿದ್ದೆ ಬರಲ್ಲ : ರಾಮಲಿಂಗಾರೆಡ್ಡಿ
LS Polls: ಮೋದಿ ಆಡಳಿತದಲ್ಲಿ ಭಾರತ 3ನೇ ಆರ್ಥಿಕ ಶಕ್ತಿ
ವರದಿ, ವೀಡಿಯೋ ಪ್ರಕಟಿಸದಂತೆ ನಿರ್ಬಂಧಕಾಜ್ಞೆ ತಂದ ಈಶ್ವರಪ್ಪ ಪುತ್ರ
Hassan Pen Drive; 40 ಜಿಬಿ ಪೆನ್ಡ್ರೈವ್ನಲ್ಲಿ ಸಾವಿರಾರು ಅಶ್ಲೀಲ ವಿಡಿಯೋ!
MUST WATCH
ಹೊಸ ಸೇರ್ಪಡೆ
Rupali Ganguly : ʼಅನುಪಮಾʼ ಧಾರಾವಾಹಿ ಖ್ಯಾತಿಯ ನಟಿ ರೂಪಾಲಿ ಗಂಗೂಲಿ ಬಿಜೆಪಿ ಸೇರ್ಪಡೆ
Extortion: ಆನ್ಲೈನ್ ಗೇಮ್; ಬಾಲಕನ ಬೆದರಿಸಿ ಸುಲಿಗೆ
Kushtagi: ಕಾಣೆಯಾಗಿದ್ದ ಪುರಸಭೆ ನೌಕರ ಪತ್ತೆ; ಆತಂಕ ದೂರ
Politics: ಕೇಂದ್ರ ಬರ ಪರಿಹಾರ ನೀಡದಿರಲು ವಿಧಾನಸಭೆ ಚುನವಾಣೆ ಸೋಲಿನ ಸೇಡು: ರಾಮಲಿಂಗಾರೆಡ್ಡಿ
LPG Cylinders: ವಾಣಿಜ್ಯ ಬಳಕೆಯ ಎಲ್ ಪಿಜಿ ಸಿಲಿಂಡರ್ ಬೆಲೆ ಮತ್ತೆ ಇಳಿಕೆ; ಹೊಸ ದರ ಎಷ್ಟು?