ಆಹಾರ ಸಾಮಗ್ರಿ ಪ್ಯಾಕಿಂಗ್ ಪರಿಶೀಲನೆ
Team Udayavani, Apr 18, 2020, 3:52 PM IST
ಮುದ್ದೇಬಿಹಾಳ: ದಾಸೋಹ ನಿಲಯದಲ್ಲಿ ಕಿಟ್ ಪ್ಯಾಕಿಂಗ್ ಕಾರ್ಯವನ್ನು ಶಾಸಕ ನಡಹಳ್ಳಿ ಅವರು ಪತ್ನಿ ಮಹಾದೇವಿಯೊಂದಿಗೆ ಪರಿಶೀಲಿಸಿದರು.
ಮುದ್ದೇಬಿಹಾಳ: ಪಟ್ಟಣದ ಶಾಸಕ ಎ.ಎಸ್. ಪಾಟೀಲ ನಡಹಳ್ಳಿ ಅವರ ದಾಸೋಹ ನಿಲಯದ ಆವರಣದಲ್ಲಿ ತಾಲೂಕಿನ 20,000 ಕಡುಬಡವರಿಗೆ ವಿತರಿಸಲು 12 ರೀತಿಯ ಆಹಾರ ಸಾಮಗ್ರಿ ಕಿಟ್ ಪ್ಯಾಕಿಂಗ್ ಕೆಲಸ ಸಂಪೂರ್ಣ ಸುರಕ್ಷತೆ ಮತ್ತು ಸ್ವತ್ಛತೆಯಲ್ಲಿ ನಡೆಯುತ್ತಿದೆ.
ಸ್ವತಃ ಶಾಸಕ ನಡಹಳ್ಳಿ ಹಾಗೂ ಅವರ ಪತ್ನಿ ಮಹಾದೇವಿ ಅವರು ಕಿಟ್ ತಯಾರಿಸುವ ಉಸ್ತುವಾರಿ ನೋಡಿಕೊಳ್ಳುತ್ತಿದ್ದಾರೆ. ಕಿಟ್ ತಯಾರಿಸುವ ಕಾರ್ಮಿಕರು ಮತ್ತು ನಡಹಳ್ಳಿ ಅಭಿಮಾನಿ ಬಳಗದ ಸದಸ್ಯರು ಮುಖಕ್ಕೆ ಮಾಸ್ಕ್, ತಲೆಗೆ ಕವರ್ ಮತ್ತು ಸಮವಸ್ತ್ರ ಧರಿಸಿ ಗುಣಮಟ್ಟಕ್ಕೆ ಹೆಚ್ಚಿನ ಆದ್ಯತೆ ನೀಡಿದ್ದಾರೆ. ಪ್ಯಾಕಿಂಗ್ ಸಿಬ್ಬಂದಿ ಆರೋಗ್ಯ ಖಚಿತಪಡಿಸಿಕೊಂಡು ಅವರಿಗೆಲ್ಲ ಗುರುತಿನ ಕಾರ್ಡ್ ನೀಡಲಾಗಿದೆ. ಈ ವೇಳೆ ಪ್ಯಾಕಿಂಗ್ನಿರತ ಕಾರ್ಮಿಕರಿಗೆ ಮಹಾದೇವಿ ಅವರು ಸ್ವತಃ ಊಟ ಬಡಿಸಿದರು. ಮುದ್ದೇಬಿಹಾಳ, ತಾಳಿಕೋಟೆ, ನಾಲತವಾಡ ಪಟ್ಟಣದ ಬಡವರಿಗೆ 1 ಕೋಟಿ ರೂ. ಸ್ವಂತದ ಹಣದಲ್ಲಿ ಶಾಸಕರು ಈ ಕಿಟ್ ವಿತರಿಸಲು ಮುಂದಾಗಿದ್ದಾರೆ.
ಧುರೀಣರ ಸಭೆ: ಪಟ್ಟಣ ಪ್ರದೇಶದಲ್ಲಿ ನಿಜವಾದ ಬಡವರನ್ನು ಗುರುತಿಸುವ ಕುರಿತು ಶಾಸಕರು ತಮ್ಮ ದಾಸೋಹ ನಿಲಯದಲ್ಲಿ ಬಿಜೆಪಿ ಧುರೀಣರು, ಅಭಿಮಾನಿ ಬಳಗದ ಪ್ರಮುಖರು ಮತ್ತು ವಾರ್ಡ್ ಪ್ರಮುಖರ ಸಮಾಲೋಚನಾ ಸಭೆ ನಡೆಸಿದರು. ಸಭೆಯಲ್ಲಿ ತಮ್ಮ ಯೋಜನೆ ಬಗ್ಗೆ ಮಾಹಿತಿ ನೀಡಿದ ಶಾಸಕರು ಎಲ್ಲೆಲ್ಲಿ ಬಡವರಿದ್ದಾರೆ ಅನ್ನುವುದನ್ನು ತಿಳಿದುಕೊಂಡು ಅಂಥವರ ಪಟ್ಟಿ ನೀಡಬೇಕು. ನೇರವಾಗಿ ಅಂಥವರ ಮನೆಗೇ ಕಿಟ್ ವಿತರಿಸಲಾಗುತ್ತದೆ. ಇದರಲ್ಲಿ ಲೋಪವಾಗದಂತೆ ನೋಡಿಕೊಳ್ಳುವ ಜವಾಬ್ದಾರಿಯನ್ನು ನಾವೆಲ್ಲರೂ ನಿರ್ವಹಿಸಬೇಕಿದೆ ಎಂದರು.
ಬಿಜೆಪಿ ತಾಲೂಕಾಧ್ಯಕ್ಷ ಡಾ| ಪರಶುರಾಮ ಪವಾರ, ಧುರೀಣರಾದ ಪ್ರಭು ಕಡಿ, ಮಾಣಿಕಚಂದ ದಂಡಾವತಿ, ಲಕ್ಷ್ಮಣ ಬಿಜ್ಜೂರ, ಸಂಗಮ್ಮ ದೇವರಳ್ಳಿ, ಮನೋಹರ ತುಪ್ಪದ, ವಿವಿಧ ಬಡಾವಣೆ ಯುವ ಕಾರ್ಯಕರ್ತರು ಸಭೆಯಲ್ಲಿ ಪಾಲ್ಗೊಂಡು ಸಲಹೆ ನೀಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Indi ಲಚ್ಯಾಣ ಮಹಾರಥೋತ್ಸವದಲ್ಲಿ ಅವಘಡ: ರಥದ ಗಾಲಿಗೆ ಸಿಲುಕಿ ಇಬ್ಬರು ಮೃತ್ಯು
State Govt ದಿವಾಳಿ ಆಗಿದೆ:ಸರ್ಕಾರದಿಂದಲೇ ಲೂಟಿ ನಡೆಯುತ್ತಿದೆ: ಮಾಜಿ ಸಿಎಂ ಯಡಿಯೂರಪ್ಪ ಆರೋಪ
Muddebihal: ಹೆಂಡತಿಗೆ ಚೂರಿ ಇರಿದು ಪರಾರಿಯಾದ ಗಂಡ
Siddaramaiah ಮುಸ್ಲಿಂ ಮೀಸಲಾತಿ ಬಗ್ಗೆ ಬಿಜೆಪಿಯಿಂದ ಸುಳ್ಳು
Vijaypura:ರಾಹುಲ್ ಗಾಂಧಿ ನಿರ್ಗಮಿಸುವಾಗ ವೇದಿಕೆಗೆ ಬಂದ ಸಿದ್ದರಾಮಯ್ಯ
MUST WATCH
ಹೊಸ ಸೇರ್ಪಡೆ
Spying: ಪಾಕಿಸ್ತಾನ ಪರ ಬೇಹುಗಾರಿಕೆ: ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ ವ್ಯಕ್ತಿಯ ಬಂಧನ
T20 ವಿಶ್ವಕಪ್ ಗೆ ಬಲಿಷ್ಠ ತಂಡವನ್ನು ಪ್ರಕಟಿಸಿದ ನ್ಯೂಜಿಲೆಂಡ್; ಮರಳಿದ ಸ್ಫೋಟಕ ಆಟಗಾರ
Tragedy: ಛತ್ತೀಸ್ಗಢದಲ್ಲಿ ಭೀಕರ ಅಪಘಾತ… ಮಕ್ಕಳು ಸೇರಿ 8 ಮಂದಿ ಮೃತ್ಯು, 22 ಮಂದಿಗೆ ಗಾಯ
MP Srinivas Prasad: ಚಾಮರಾಜನಗರ ಸಂಸದ ಶ್ರೀನಿವಾಸ್ ಪ್ರಸಾದ್ ನಿಧನ
Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ