ಮಸೂತಿ: ಗಮನ ಸೆಳೆದ ನಲಿ-ಕಲಿ ಮೇಳ
Team Udayavani, Feb 10, 2020, 1:31 PM IST
ನಿಡಗುಂದಿ: ಅಜೀಂ ಪ್ರೇಮ್ಜಿ ಫೌಂಡೇಶನ್ ಹಾಗೂ ಶಿಕ್ಷಣ ಇಲಾಖೆ ಆಶ್ರಯದಲ್ಲಿ ತಾಲೂಕಿನ ಮಸೂತಿ ಗ್ರಾಮದಲ್ಲಿ ನಡೆದ ನಲಿ ಕಲಿ ಮೇಳದ ದೃಶ್ಯಗಳು.
ನಿಡಗುಂದಿ: ಅಜೀಂ ಪ್ರೇಮ್ಜಿ ಫೌಂಡೇಶನ್ ಹಾಗೂ ಶಿಕ್ಷಣ ಇಲಾಖೆ ಆಶ್ರಯದಲ್ಲಿ ತಾಲೂಕಿನ ಮಸೂತಿ ಗ್ರಾಮದಲ್ಲಿ ನಲಿಕಲಿ ಕಲಿಕಾ ಮೇಳ ಜರುಗಿತು.
ನಾನಾ ಕಲಿಕಾ ಸಾಮಗ್ರಿಗಳು, ವಿವಿಧ ಪಾಠ ಬೋಧನಾ ವಿಧಾನಗಳ ಪ್ರದರ್ಶನ, ಕಂಠಪಾಠ ಮುಕ್ತ ಚಟುವಟಿಕೆ, ಸ್ವತಂತ್ರ ಆಲೋಚನೆ, ಸೃಜನಾತ್ಮಕತೆ ಬೆಳೆಸುವ ಚಟವಟಿಕೆಗಳು ಗಮನ ಸೆಳೆದವು.
ಬಳಬಟ್ಟಿ ಕ್ಲಸ್ಟರ್ ವ್ಯಾಪ್ತಿಯ 6 ಶಾಲೆಗಳಿಂದ ಎರಡುನೂರು ವಿದ್ಯಾರ್ಥಿಗಳು ಹಾಗೂ 15ಜನ ನಲಿ ಕಲಿ ಶಿಕ್ಷಕರು ನಲಿ ಕಲಿ ವಿಷಯಕ್ಕೆ ಸಂಬಂಧಪಟ್ಟ ಸುಮಾರು ನೂರು ಪರಿಕಲ್ಪನೆಯ ಮೇಲೆ ಕಲಿಕಾ ಸಾಮಗ್ರಿಗಳನ್ನು ತಯಾರಿಸಿ ವಿದ್ಯಾರ್ಥಿಗಳು ಅವುಗಳ ಬಗ್ಗೆ ವಿವರಣೆ ನೀಡಿದರು.
ಮೇಳಕ್ಕೆ ಚಾಲನೆ ನೀಡಿದ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ನುಗ್ಲಿ ಮಾತನಾಡಿ, ಮಕ್ಕಳಲ್ಲಿ ಅನುಭಾವಾತ್ಮಕ ಕಲಿಕೆ ಪ್ರೇರೇಪಿಸಲು ನಲಿ ಕಲಿ ಸಹಕಾರಿ. ಯೋಜನೆಯಿಂದ ಕಲಿಕೆ ಸಾಮರ್ಥ್ಯ ಹೆಚ್ಚಿಸಬಹುದು ಎಂದರು.
ಜಿಲ್ಲಾ ಘಟಕದ ಅಧ್ಯಕ್ಷ ಬಿ.ಟಿ. ಗೌಡರ ಮಾತನಾಡಿ, ಶಿಕ್ಷಣ ನಿಂತ ನೀರಾಗದೇ ಸದಾ ಚಲನೆಯ ಸ್ಥಿತಿಯಲ್ಲಿರಬೇಕು, ಅದಕ್ಕೆ ಪೂರಕವಾಗಿ ಸರ್ಕಾರಿ ಶಾಲೆಗಳಲ್ಲಿ ಆಯೋಜಿಸುವ ಭಾಷಾ ಬೋಧನೆ, ನಲಿ ಕಲಿ ಮೇಳ, ವಿಜ್ಞಾನ ಮೇಳ, ಮೆಟ್ರಿಕ್ ಮೇಳ, ಸಮಾಜ ವಿಜ್ಞಾನ ಮೇಳ, ಭೂಗೋಳ ಮೇಳ ಸೇರಿದಂತೆ ಹಲವು ಶೈಕ್ಷಣಿಕ ಹಬ್ಬಗಳು ಪೂರಕವಾಗಿವೆ ಎಂದರು.
ಮುದ್ದೇಬಿಹಾಳ ಕ್ಷೇತ್ರ ಶಿಕ್ಷಣಾಧಿಕಾರಿ ರೇಣುಕಾ ಕಲಬುರ್ಗಿ ಮಾತನಾಡಿ, ಶಿಕ್ಷಕರು ಮಕ್ಕಳ ಮೇಲೆ ತೀವ್ರ ಪ್ರಭಾವ ಬೀರುವ ವ್ಯಕ್ತಿಗಳಾಗಿದ್ದಾರೆ. ಪಾಠದ ಶೈಲಿ, ಕಲಿಕಾ ವಿಧಾನ, ಆಚಾರ ವಿಚಾರ ತಿಳಿಸುವ ಕೆಲಸ ಶಿಕ್ಷಕರಿಂದ ಸರಿಯಾಗಿ ಆದರೆ ಭವಿಷ್ಯದಲ್ಲಿ ಮಕ್ಕಳು ಉತ್ತಮ ನಾಗರಿಕರಾಗಿ ರೂಪುಗೊಳ್ಳುತ್ತಾರೆ ಎಂದರು.
ಕ್ಷೇತ್ರ ಸಮನ್ವಯಾಧಿಕಾರಿ ಯು.ಬಿ. ಧರಿಕಾರ, ಪಿ.ಜಿ. ಬಲಕುಂದಿ, ಸುರೇಶ ಆಲೂರ, ಈರಣ್ಣ, ಸಂಗಣ್ಣ ಹುಲ್ಲಳ್ಳಿ, ಎಂ.ಕೆ. ಮುತ್ತಣ್ಣವರ, ಸೋಮನಗೌಡ ಪಾಟೀಲ, ನೌಕರ ಸಂಘಟನೆ ಮುಖಂಡರಾದ ಎಂ.ಬಿ. ರಕರಡ್ಡಿ, ವಿ.ಕೆ. ಮಸೂತಿ, ಆರ್.ಎ. ನದಾಫ್, ಎಸ್.ಎಚ್. ದಡೆದ, ಆರ್.ಬಿ. ಗೌಡರ, ಎಚ್.ಎಚ್. ದೊಡಮನಿ, ಅಜೀಂ ಪ್ರೇಮ್ಜಿ ಫೌಂಡೇಶನ್ ಸಂಪನ್ಮೂಲ ವ್ಯಕ್ತಿಗಳು ಇದ್ದರು.
ವೈ.ಬಿ. ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಶಿಕ್ಷಕ ಪಿ.ಎಂ. ಕಡೂರ ಸ್ವಾಗತಿಸಿದರು. ಬಸಮ್ಮ ಪೂಜಾರಿ ನಿರೂಪಿಸಿದರು. ಪರಶುರಾಮ ಬಲಕುಂದಿ ವಂದಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
State Govt ದಿವಾಳಿ ಆಗಿದೆ:ಸರ್ಕಾರದಿಂದಲೇ ಲೂಟಿ ನಡೆಯುತ್ತಿದೆ: ಮಾಜಿ ಸಿಎಂ ಯಡಿಯೂರಪ್ಪ ಆರೋಪ
Muddebihal: ಹೆಂಡತಿಗೆ ಚೂರಿ ಇರಿದು ಪರಾರಿಯಾದ ಗಂಡ
Siddaramaiah ಮುಸ್ಲಿಂ ಮೀಸಲಾತಿ ಬಗ್ಗೆ ಬಿಜೆಪಿಯಿಂದ ಸುಳ್ಳು
Vijaypura:ರಾಹುಲ್ ಗಾಂಧಿ ನಿರ್ಗಮಿಸುವಾಗ ವೇದಿಕೆಗೆ ಬಂದ ಸಿದ್ದರಾಮಯ್ಯ
INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್
MUST WATCH
ಹೊಸ ಸೇರ್ಪಡೆ
Belagavi; ನಿಮ್ಮ ಕನಸುಗಳು ನನ್ನ ಸಂಕಲ್ಪ…: ಬೃಹತ್ ಸಮಾವೇಶದಲ್ಲಿ ನರೇಂದ್ರ ಮೋದಿ ಹೇಳಿಕೆ
LS Polls: ಜೆಡಿಎಸ್ ಬೆಂಬಲ ಆನೆ ಬಲ ತಂದು ಕೊಟ್ಟಿದೆ: ಆರಗ ಜ್ಞಾನೇಂದ್ರ
Pramod, Pruthvi Ambaar: ಪೋಸ್ಟ್ ಪ್ರೊಡಕ್ಷನ್ನಲ್ಲಿ ‘ಭುವನಂ ಗಗನಂ’
Water Supply; ಮಂಗಳೂರಿನ ಈ ಭಾಗಗಳಲ್ಲಿ ಎ.30ರಿಂದ ಮೇ.1ರವರೆಗೆ ನೀರು ಸರಬರಾಜು ಸ್ಥಗಿತ
Heart Diseases: ಮಹಿಳೆಯರಲ್ಲಿ ಹೃದ್ರೋಗಗಳು: ಇದು ವಿಭಿನ್ನ!