Farmers ಜಮೀನಿನ ದಾಖಲೆ ಸರಿಮಾಡಲು ಪಹಣಿ ಒಟ್ಟುಗೂಡಿಸಿದೆ: ಸಚಿವ ಕೃಷ್ಣ ಭೈರೇಗೌಡ
Team Udayavani, Nov 29, 2023, 8:17 PM IST
ವಿಜಯಪುರ : ರೈತರು ಹೊಂದಿರುವ ಜಮೀನಿನ ದಾಖಲೆಗಳಲ್ಲಿನ ಲೋಪ ಸರಿಮಾಡಲು ಸರ್ವೇ ನಂಬರ್ ಗಳಲ್ಲಿರುವ ಪಹಣಿಯಲ್ಲಿ ರೈತರ ಹೆಸರುಗಳನ್ನು ಒಟ್ಟುಗೂಡಿಸಲಾಗಿದೆ. ತಾತ್ಕಾಲಿಕವಾಗಿರುವ ಈ ಸಮಸ್ಯೆಯನ್ನು ಸರ್ಕಾರವೇ ಶೀಘ್ರ ಪರಿಹರಿಸಲು ಕ್ರಮ ಕೈಗೊಳ್ಳಲಿದೆ ಎಂದು ಕಂದಾಯ ಸಚಿವ ಕೃಷ್ಣ ಭೈರೇಗೌಡ ಹೇಳಿದರು.
ಬುಧವಾರ ನಗರದಲ್ಲಿ ಇಲಾಖೆಯ ಪ್ರಗತಿ ಪರಿಶೀಲನೆ ಬಳಿಕ ಪತ್ರಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸರ್ವೇ ನಂಬರ್ ಗಳಲ್ಲಿರುವ ರೈತರ ಹೆಸರನ್ನು ಒಟ್ಟುಗೂಡಿಸಿರುವ ಸರ್ಕಾರವೇ ಪ್ರತಿ ರೈತರ ಜಮೀನು ದಾಖಲೆಗಳನ್ನು ಎಲ್ಲ ಲೋಪಗಳನ್ನು ಸರಿಪಡಿಸಿ, ಅಮೂಲಾಗ್ರ ಸುಧಾರಣೆಯೊಂದಿಗೆ ದಾಖಲೆಗಳನ್ನು ನೀಡಲು ಮುಂದಾಗಿದೆ ಎಂದರು.
ಇದಕ್ಕಾಗಿ ಕೆಲಕಾಲ ಸಮಸ್ಯೆ ಉಂಟಾದರೂ ತಾತ್ಕಾಲಿಕವಾಗಿರುವ ಈ ಸಮಸ್ಯೆ ಪರಿಹಾರಕ್ಕೆ ರೈತರು ಸಹಕರಿಸಬೇಕು. ಭವಿಷ್ಯದಲ್ಲಿ ರೈತರ ಎಲ್ಲ ದಾಖಲೆಗಳು ನಿಖರವಾಗಿ ಸಿಗಲಿರುವ ಕಾರಣ ಬ್ಯಾಂಕ್ ವಹಿವಾಟು, ಮಾರಾಟ ಸೇರಿದಂತೆ ಎಲ್ಲದಕ್ಕೂ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಕೈಗೊಂಡಿರುವ ಕ್ರಮಕ್ಕೆ ರೈತರೂ ಸಹಕರಿಸಬೇಕು ಎಂದು ಮನವಿ ಮಾಡಿದರು.
ರಾಜ್ಯದಲ್ಲಿ ಹಳ್ಳಿಗಳನ್ನು ಪೋಡಿಮುಕ್ತ ಗ್ರಾಮಗಳಾಗಿ ರೂಪಿಸುವುದಕ್ಕಾಗಿ ಸರ್ಕಾರ ಹಲವು ಕ್ರಮಗಳನ್ನು ಕೈಗೊಂಡಿದೆ. ಮಂದಗತಿಯಲ್ಲಿರುವ ದರಕಾಸ್ತು ಪೋಡಿ ಮಾಡುವ ಕೆಲಸಕ್ಕೆ ವೇಗ ನೀಡಲಾಗುತ್ತದೆ.
ರಾಜ್ಯದಲ್ಲಿ ಕೃಷಿಯೇತರ ಚಟುವಿಕೆಗೆ ಬದಲಾವಣೆ ಆಗದ ಕೃಷಿ ಭೂಮಿಯಲ್ಲೇ ಗುಂಟಾ ಪ್ಲಾಟ್ ಮಾಡಿ ನಿವೇಶನ ಮಾರಾಟ ಮಾಡಲಾಗಿದೆ. ಇದರಿಂದ ಸ್ಥಳೀಯ ಆಡಳಿತಕ್ಕೆ ಕಂದಾಯವು ಇಲ್ಲದೇ ಸೌಲಭ್ಯ ಕಲ್ಪಿಸುವ ಸ್ಥಿತಿ ನಿರ್ಮಾಣವಾಗಿದೆ. ಇದಕ್ಕೆ ಒಂದು ಬಾರಿ ರಾಜ್ಯದಾದ್ಯಂತ ಏಕ ಕಾಲದಲ್ಲೇ ಅಕ್ರಮ ಸಕ್ರಮ ಹೆಸರಿನಲ್ಲಿ ಪರಿಹಾರ ಕಂಡುಕೊಳ್ಳಲು 2015 ರಲ್ಲಿದ್ದ ನಮ್ಮ ಸರ್ಕಾರ ಮುಂದಾಗಿತ್ತು ಎಂದರು.
ನಮ್ಮ ಸರ್ಕಾರದ ನಡೆಗೆ ಕೇಂದ್ರದ ಹಾಲಿ ಸಚಿವರಾಗಿರುವ ರಾಜೀವ ಚಂದ್ರಶೇಖರ ಹೈಕೋರ್ಟ್ ಮೊರೆ ಹೋದರು. ನ್ಯಾಯಾಲಯ ನಮ್ಮ ಪರವಾಗಿ ಆದೇಶ ನೀಡಿದ್ದರಿಂದ ಕಾರ್ಯಾನುಷ್ಠಾನಕ್ಕೆ ಮುಂದಾದ ಹಂತದಲ್ಲೇ ರಾಜೀವ ಅವರು ಸುಪ್ರೀಂ ಕೋರ್ಟ್ನಲ್ಲಿ ತಕರಾರು ಸಲ್ಲಿಸಿದ್ದಾರೆ ಎಂದು ವಿವರಿಸಿದರು.
ಭವಿಷ್ಯದಲ್ಲಿ ಅಕ್ರಮವಾಗಿ ಗುಂಟಾ ಪ್ಲಾಟ್ ನಿವೇಶನ ಅವಕಾಶ ನೀಡದಂತೆ ಕಡಿವಾಣ ಹಾಕಲು ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಲಿದೆ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Indi ಲಚ್ಯಾಣ ಮಹಾರಥೋತ್ಸವದಲ್ಲಿ ಅವಘಡ: ರಥದ ಗಾಲಿಗೆ ಸಿಲುಕಿ ಇಬ್ಬರು ಮೃತ್ಯು
State Govt ದಿವಾಳಿ ಆಗಿದೆ:ಸರ್ಕಾರದಿಂದಲೇ ಲೂಟಿ ನಡೆಯುತ್ತಿದೆ: ಮಾಜಿ ಸಿಎಂ ಯಡಿಯೂರಪ್ಪ ಆರೋಪ
Muddebihal: ಹೆಂಡತಿಗೆ ಚೂರಿ ಇರಿದು ಪರಾರಿಯಾದ ಗಂಡ
Siddaramaiah ಮುಸ್ಲಿಂ ಮೀಸಲಾತಿ ಬಗ್ಗೆ ಬಿಜೆಪಿಯಿಂದ ಸುಳ್ಳು
Vijaypura:ರಾಹುಲ್ ಗಾಂಧಿ ನಿರ್ಗಮಿಸುವಾಗ ವೇದಿಕೆಗೆ ಬಂದ ಸಿದ್ದರಾಮಯ್ಯ
MUST WATCH
ಹೊಸ ಸೇರ್ಪಡೆ
Srinivas Prasad: ದ. ಕರ್ನಾಟಕದ ʼದಲಿತ ಸೂರ್ಯʼ ಎಂದು ಖ್ಯಾತರಾಗಿದ್ದ ಶ್ರೀನಿವಾಸ ಪ್ರಸಾದ್
ಗುಜರಾತ್ ಕರಾವಳಿ ಪ್ರದೇಶದಲ್ಲಿ 602 ಕೋಟಿ ಮೌಲ್ಯದ ಡ್ರಗ್ಸ್ ವಶ: 14 ಪಾಕ್ ಪ್ರಜೆಗಳ ಬಂಧನ
ನಾರಿ ಶಕ್ತಿ ವಿರೋಧಿಸುವ ಕಾಂಗ್ರೆಸ್ಗೆ ಚುನಾವಣೆಯಲ್ಲಿ ಪಾಠ ಕಲಿಸಬೇಕು: ಗಾಯತ್ರಿ ಸಿದ್ದೇಶ್ವರ
Spying: ಪಾಕಿಸ್ತಾನ ಪರ ಬೇಹುಗಾರಿಕೆ: ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ ವ್ಯಕ್ತಿಯ ಬಂಧನ
T20 ವಿಶ್ವಕಪ್ ಗೆ ಬಲಿಷ್ಠ ತಂಡವನ್ನು ಪ್ರಕಟಿಸಿದ ನ್ಯೂಜಿಲೆಂಡ್; ಮರಳಿದ ಸ್ಫೋಟಕ ಆಟಗಾರ