ಹಠ ಬಿಟ್ಟು ಪೀಟರ್‌ ಅಲೆಗ್ಸಾಂಡರ್‌ ಕೇಶಮುಂಡನ


Team Udayavani, Aug 19, 2017, 3:03 PM IST

vijayapur 1.jpg

ವಿಜಯಪುರ: ಜಿಲ್ಲೆಯ ರಾಮಲಿಂಗ ಕೆರೆ ಸಂರಕ್ಷಣೆಗಾಗಿ ಕಳೆದ ಒಂದು ದಶಕದಿಂದ ಕೂದಲು ಕತ್ತರಿಸದೇ ಪ್ರತಿಜ್ಞೆ ಮಾಡಿ
ಸಾಧನೆಗಾಗಿ ಹಠ ಹಿಡಿದಿದ್ದ ಪೀಟರ್‌ ಅಲೆಗ್ಸಾಂಡರ್‌ ಎಂಬ ಹೋರಾಟಗರ ಕೊನೆಗೂ ಶುಕ್ರವಾರ ಕೇಶಮುಂಡನ
ಮಾಡಿಸಿಕೊಂಡಿದ್ದಾರೆ. ನಗರದಲ್ಲಿ ನಡೆಯುತ್ತಿರುವ ರಾಷ್ಟ್ರಮಟ್ಟದ ಜಲ ಸಮಾವೇಶದ ಸಂದರ್ಭದಲ್ಲಿ ರಾಷ್ಟ್ರೀಯ ಜಲಗಾಂಧಿ ಎಂದೇ ಖ್ಯಾತರಾಗಿರುವ ಡಾ|ರಾಜೇಂದ್ರಸಿಂಗ್‌ ಅವರು ಸದರಿ ಸಮಾವೇಶದಲ್ಲಿ ರಾಮಲಿಂಗ ಮಾತ್ರವಲ್ಲ, ಜೀವ ಕಳೆದುಕೊಂಡಿರುವ ಎಲ್ಲ ನದಿ-ಕೆರೆಗಳ ಪುನರುಜ್ಜೀವನಕ್ಕೆ ನಿರ್ಣಯ ಅಂಗೀಕರಿಸುತ್ತೇವೆ. ನಿಮ್ಮ ಆಶಯದಂತೆ ರಾಜ್ಯದ ಜಲಸಂಪನ್ಮೂಲ ಸಚಿವರಾದ
ಡಾ| ಎಂ.ಬಿ. ಪಾಟೀಲ ಅವರಿಂದ ನಿಮ್ಮ ಕನಸಿನ ಕೆರೆಗೆ ಮರು ಜೀವ ಕೊಡಿಸುವ ಹೊಣೆ ಹೊರುತ್ತೇವೆ ಎಂದು ಭರವಸೆ ನೀಡಿದರು. ಎಲ್ಲಕ್ಕಿಂತ ಹೆಚ್ಚಾಗಿ ವರೆಗೆ ಒಂಟಿಯಾಗಿದ್ದ ನಿಮ್ಮೊಂದಿಗೆ ನಾವೂ ಕೈ ಜೋಡಿಸುತ್ತೇವೆ. ದೇಶದ ಜಲ ಸಂರಕ್ಷಕ ಹೋರಾಟಗಾರರೆಲ್ಲ ನಿಮ್ಮೊಂದಿಗೆ ಇದ್ದೇವೆ. ಹೀಗಾಗಿ ಈ ಜಲ ಸಮಾವೇಶ ಸಂದರ್ಭದಲ್ಲಿ ನಿಮ್ಮ ಬೇಡಿಕೆ ಈಡೇರಿಸುವ ಭರವಸೆ ದೊರೆಯುವ ಕಾರಣ ಪ್ರತಿಜ್ಞೆ ಕೈಬಿಟ್ಟು, ಕೇಶ ಮುಂಡನ ಮಾಡಿಸಿಕೊಳ್ಳಿ ಎಂದು ಮನವಿ ಮಾಡಿದರು. ಇದಲ್ಲದೇ ಜಲ ಬಿರಾದರಿ ಸಮಿತಿಯ ಜಿಲ್ಲಾ ಘಟಕದ ಸಂಚಾಲಕರು ನೀವೇ ಆಗಿರುವ ಕಾರಣ ರಾಮಲಿಂಗ ಕೆರೆ ಸಂರಕ್ಷಣೆ ವಿಷಯದಲ್ಲಿ ನಿಮ್ಮೊಂದಿಗೆ ದೇಶದ ಜನವೇ ಬೆನ್ನೆಲುಬಾಗಿ ನಿಲ್ಲುತ್ತದೆ ಎಂದು ಮನವೊಲಿಸಿದರು. ಅಂತಿಮವಾಗಿ ರಾಷ್ಟ್ರೀಯ ಜಲ ಸಮಾವೇಶದ ಸಮಾರೋಪ ನಡೆಯುವ ಶುಕ್ರವಾರ ಬೆಳಗ್ಗೆ ದಶಕದಿಂದ ಬೆಳೆಸಿದ್ದ ಕೇಶಕ್ಕೆ ಕತ್ತರಿ ಹಾಕಿಸಿದ್ದಾರೆ. ಕಳೆದ ಒಂದು ದಶಕದಿಂದ ರಾಮಲಿಂಗ ಕೆರೆ ಸಂರಕ್ಷಣೆಗಾಗಿ ಕೇಶ ಮುಂಡನ
ಮಾಡಿಸದೇ, ಬಗಲಲ್ಲಿ ಬಿಳಿಯ ಬಟ್ಟೆಯ ಜೋಳಿಗೆ, ತಲೆಗೆ ಪೇಟ ಸುತ್ತಿಕೊಂಡು ಜಲ ಸಂತನಂತೆ ಸುತ್ತಿದ್ದ ಪೀಟರ್‌ ಅಲೆಗ್ಸಾಂಡರ್‌, ರಾಮಲಿಂಗ ಕರೆಯ ಪ್ರದೇಶದಲ್ಲೇ ಕೇಶ ಮುಂಡನಕ್ಕೆ ನಿರ್ಧರಿಸಿದರು. ಸ್ಥಳಕ್ಕೆ ತೆರಳಿದ ಡಾ| ರಾಜೇಂದ್ರಸಿಂಗ್‌ ಹಾಗೂ ಜಲ ಬಿರಾದರಿ ಸಂಘಟನೆ ಕಾರ್ಯಕರ್ತರು ಪೀಠರ್‌ ಅವರ ಕೈಗೆ ದೇಶದ 101 ನದಿಗಳ ಜಲತುಂಬಿದ್ದ ಬಿಂದಿಗೆ ನೀಡಿ, ಪ್ರತಿಜ್ಞೆ ಕೈ ಬಿಡಿಸಿ, ಕೇಶಮುಂಡನ ಮಾಡಿಸಿದರು. ಕೇಶ ಮುಂಡನದ ಬಳಿಕ ಜಲ ಜೋಳಿಗೆಯನ್ನೂ ಕಳಚಿ, ಶೂಟುಬೂಟು ತೊಟ್ಟ ಪೀಟರ್‌ ಅವರು ತಲೆಗೆ ತೊಡುತ್ತಿದ್ದ ಬಿಳಿ ವಸ್ತ್ರದ ಪೇಟವನ್ನು ಮಾತ್ರ ಕಳಚಲು ನಿರಾಕರಿಸಿದರು. ಕೇಶಮುಂಡನದ ಬಳಿಕ ಸಮಾರೋಪ ಸಮಾರಂಭದಲ್ಲಿ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ, ರಾಮಲಿಂಗ ಕೆರೆ ಸಂರಕ್ಷಣೆಗೆ ಮನವಿ ಮಾಡಿದರು. ಸಮಾವೇಶದಲ್ಲಿ ಕೈಗೊಂಡಿರುವ
ನಿರ್ಣಯದಂತೆ ರಾಮಲಿಂಗ ಕೆರೆಯ ಸಂರಕ್ಷಣೆಗೆ ಕ್ರಮ ಕೈಗೊಳ್ಳುವುದಾಗಿ ಜಿಲ್ಲಾ ಉಸ್ತುವಾರಿ ಸಚಿವ ಡಾ| ಎಂ.ಬಿ.
ಪಾಟೀಲ ಕೂಡ ಭರವಸೆ ನೀಡಿದ್ದಾರೆ ಎಂದು ಪೀಟರ್‌ ಹೇಳಿದರು.

ಟಾಪ್ ನ್ಯೂಸ್

1-cfcfhh

Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು

1-wweewewq

PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ‌ ಇದ್ದಾರೆ : ಸಿದ್ದರಾಮಯ್ಯ

1———ewqeqwewq

Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು

priyanka vadra

Kalaburagi; ಪ್ರಜ್ವಲ್ ಪರ ಮತಯಾಚನೆ ಮಾಡಿದ್ದ ಮೋದಿ-ಶಾ ಈಗ ಉತ್ತರಿಸಲಿ: ಪ್ರಿಯಾಂಕ ವಾದ್ರಾ

lakshaman-savadi

BJP ಶೆಟ್ಟರ್, ಶ್ರೀರಾಮುಲುಗೆ ಚೊಂಬು ಗ್ಯಾರಂಟಿ : ಲಕ್ಷ್ಮಣ ಸವದಿ

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Ramanagar: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು

Ramanagara: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

lakshaman-savadi

BJP ಶೆಟ್ಟರ್, ಶ್ರೀರಾಮುಲುಗೆ ಚೊಂಬು ಗ್ಯಾರಂಟಿ : ಲಕ್ಷ್ಮಣ ಸವದಿ

1-qewqeqw

Indi ಲಚ್ಯಾಣ ಮಹಾರಥೋತ್ಸವದಲ್ಲಿ ಅವಘಡ: ರಥದ ಗಾಲಿಗೆ ಸಿಲುಕಿ ಇಬ್ಬರು ಮೃತ್ಯು

20

State Govt ದಿವಾಳಿ ಆಗಿದೆ:ಸರ್ಕಾರದಿಂದಲೇ ಲೂಟಿ ನಡೆಯುತ್ತಿದೆ: ಮಾಜಿ ಸಿಎಂ ಯಡಿಯೂರಪ್ಪ ಆರೋಪ

10-muddebihala

Muddebihal: ಹೆಂಡತಿಗೆ ಚೂರಿ ಇರಿದು ಪರಾರಿಯಾದ ಗಂಡ

Siddaramaiah ಮುಸ್ಲಿಂ ಮೀಸಲಾತಿ ಬಗ್ಗೆ ಬಿಜೆಪಿಯಿಂದ ಸುಳ್ಳು

Siddaramaiah ಮುಸ್ಲಿಂ ಮೀಸಲಾತಿ ಬಗ್ಗೆ ಬಿಜೆಪಿಯಿಂದ ಸುಳ್ಳು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-wqeqqweqwe

Not responding; ಶಿವರಾಮ್ ಹೆಬ್ಬಾರ್ ಅವರನ್ನು ಪ್ರಧಾನಿ ಕಾರ್ಯಕ್ರಮಕ್ಕೆ ಕರೆದಿಲ್ಲ: ಬಿಜೆಪಿ

1-cfcfhh

Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು

1-wweewewq

PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ‌ ಇದ್ದಾರೆ : ಸಿದ್ದರಾಮಯ್ಯ

1———ewqeqwewq

Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು

priyanka vadra

Kalaburagi; ಪ್ರಜ್ವಲ್ ಪರ ಮತಯಾಚನೆ ಮಾಡಿದ್ದ ಮೋದಿ-ಶಾ ಈಗ ಉತ್ತರಿಸಲಿ: ಪ್ರಿಯಾಂಕ ವಾದ್ರಾ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.