ರಾಟೆ: ಬಾಗಲಕೋಟೆಗೆ ನಾಲ್ಕು ಚಿನ್ನ
Team Udayavani, Jun 4, 2018, 10:48 AM IST
ಬಾಗಲಕೋಟೆ: ನವದೆಹಲಿಯ ಟಲಕಾಟೋರ ಇಂಡೋರ್ ಸ್ಟೆಡಿಯಂನಲ್ಲಿ ನಡೆದ ಆಲ್ ಇಂಡಿಂಯ ಸೆಶಿಂಕೈ ಶಿಟೋರು ಕರಾಟೆ ಡು ಫೆಡ್ರೇಷನ್ ಆಯೋಜಿಸಿದ್ದ 17ನೇ ಆಲ್ ಇಂಡಿಂಯ ಇಂಟರ್ ಸ್ಕೂಲ್ ಹಾಗೂ ಸೀನಿಯರ್
ನ್ಯಾಶನಲ್ ಕರಾಟೆ ಚಾಂಪಿಯನ್ ಶಿಪ್ನಲ್ಲಿ ಕರ್ನಾಟಕ ರಾಜ್ಯದ ಸೌತ್ ಇಂಡಿಯನ್ ಕರಾಟೆ ಫೆಡ್ರೇಷನ್ ಸಂಸ್ಥೆಯ 9 ಕರಾಟೆ ವಿದ್ಯಾರ್ಥಿಗಳು ಆಯ್ಕೆಯಾಗುವ ಮೂಲಕ ರಾಷ್ಟ್ರಮಟ್ಟದ ಕರಾಟೆ ಚಾಂಪಿಯನ್ ಶಿಪ್ನಲ್ಲಿ ಆಡಲಿಕ್ಕೆ ಅವಕಾಶ ಪಡೆದಿದ್ದಾರೆ.
ಸಾಕಷ್ಟು ಕಸರತ್ತುಗಳೊಂದಿಗೆ ವಿವಿಧ ರಾಜ್ಯಗಳಿಂದ ಭಾಗವಹಿಸಿದ್ದ ಮೂರು ಸಾವಿರಕ್ಕೂ ಅಧಿಕ ಕರಾಟೆ ಕ್ರೀಡಾ ವಿದ್ಯಾರ್ಥಿಗಳ ಜೊತೆಗೆ ಸೆಣಸಾಡಿ ಅದ್ಭುತ ಆಟದ ವೈಖರಿಯಿಂದ ಪಶ್ಚಿಮ ಬಂಗಾಳ, ಹರಿಯಾಣ, ಗುಜರಾತ್,
ಆಂಧ್ರಪ್ರದೇಶ, ತಮಿಳುನಾಡು, ಆಸ್ಸಾಂ, ಸಿಕ್ಕಿಂ, ಓರಿಸ್ಸಾ, ಬಿಹಾರ, ಕೇರಳ, ಮಹಾರಾಷ್ಟ್ರ, ರಾಜಸ್ತಾನ, ಪಂಜಾಬ್, ಜಾರ್ಖಂಡ, ತೆಲಂಗಾಣ, ಮಧ್ಯಪ್ರದೇಶ, ಉತ್ತರಾಖಂಡ್, ದೆಹಲಿ ಹಾಗೂ ವಿವಿಧ ರಾಜ್ಯಗಳ ಕರಾಟೆ ಆಟಗಾರರ
ಜೊತೆ ಕಠಿಣ ಆಟದ ಸೋಲು ಗೆಲುವಿನ ಮೆಲುಗೈದೊಂದಿಗೆ 4 ಚಿನ್ನ, 3 ಬೆಳ್ಳಿ ಮತ್ತು 4 ಕಂಚು ಪದಕಗಳನ್ನು ಪಡೆಯುವಲ್ಲಿ ಕರ್ನಾಟಕದ ಬಾಗಲಕೋಟೆ ಜಿಲ್ಲೆಯ ಆಟಗಾರರು ಪಡೆದರು.
ಪದಕ ಪಡೆದ ವಿದ್ಯಾರ್ಥಿಗಳು: ಬ್ಲಾಕ್ ಬೆಲ್ಟ್ ವಿಭಾಗದಲ್ಲಿ ಶಾಂತೇಶ ಚವ್ಹಾಣ (ಚಿನ್ನ ) ಪ್ರಜ್ವಲ್ ರಾಠೊಡ (ಚಿನ್ನ ಮತ್ತು ಬೆಳ್ಳಿ) ಸಾಗರ ಚವ್ಹಾಣ (ಚಿನ್ನ ಮತ್ತು ಕಂಚು) ಹಾಗೂ ಕಲರ್ ಬೆಲ್ಟ್ ವಿಭಾಗದಲ್ಲಿ ಸಂಜಯ ಕೋಡಿಹಾಳ (ಚಿನ್ನ), ವಾದಿರಾಜ ಕುಲಕರ್ಣಿ (ಬೆಳ್ಳಿ) ಶ್ರೇಯಸ್ ದೊಡಮನಿ (ಬೆಳ್ಳಿ) ಸುನೀಲ ರಾಠೊಡ (ಕಂಚು) ಕಾರ್ತಿಕ ಹೆಬ್ಬಳ್ಳಿ (ಕಂಚು) ಪ್ರಥಮ ಪವಾರ (ಕಂಚು) ಅವರು ವಿವಿಧ ಪದಕ ಪಡೆದಿದ್ದಾರೆ ಎಂದು ಸೌತ್ ಇಂಡಿಯನ್ ಕರಾಟೆ ಫೆಡ್ರೇಷನ್ ಅಧ್ಯಕ್ಷ ಎಸ್.ಆರ್.ರಾಠೊಡ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Indi ಲಚ್ಯಾಣ ಮಹಾರಥೋತ್ಸವದಲ್ಲಿ ಅವಘಡ: ರಥದ ಗಾಲಿಗೆ ಸಿಲುಕಿ ಇಬ್ಬರು ಮೃತ್ಯು
State Govt ದಿವಾಳಿ ಆಗಿದೆ:ಸರ್ಕಾರದಿಂದಲೇ ಲೂಟಿ ನಡೆಯುತ್ತಿದೆ: ಮಾಜಿ ಸಿಎಂ ಯಡಿಯೂರಪ್ಪ ಆರೋಪ
Muddebihal: ಹೆಂಡತಿಗೆ ಚೂರಿ ಇರಿದು ಪರಾರಿಯಾದ ಗಂಡ
Siddaramaiah ಮುಸ್ಲಿಂ ಮೀಸಲಾತಿ ಬಗ್ಗೆ ಬಿಜೆಪಿಯಿಂದ ಸುಳ್ಳು
Vijaypura:ರಾಹುಲ್ ಗಾಂಧಿ ನಿರ್ಗಮಿಸುವಾಗ ವೇದಿಕೆಗೆ ಬಂದ ಸಿದ್ದರಾಮಯ್ಯ
MUST WATCH
ಹೊಸ ಸೇರ್ಪಡೆ
Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್
Ramanagara: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು
Sirsi: ಮನವಿ ಕೊಟ್ಟ ವಾರದೊಳಗೇ ಕೆಲಸ ಶುರು… 26 ಗುಂಟೆ ಕೆರೆಗೆ ಜೀರ್ಣೋದ್ದಾರ ಭಾಗ್ಯ
Father; ಚಂದ್ರು ನಿರ್ಮಾಣದ ‘ಫಾದರ್’ ಚಿತ್ರಕ್ಕೆ ಮುಹೂರ್ತ
Thirthahalli: ಇದು ಪಿಕ್ ಪ್ಯಾಕೆಟ್ ಸರ್ಕಾರ… ಕಾಂಗ್ರೆಸ್ ವಿರುದ್ಧ ಕುಮಾರಸ್ವಾಮಿ ಹೇಳಿಕೆ