ಆಸರೆ ಮನೆಗಳ ವಂತಿಕೆ ಹಣ ಪಾವತಿ ಕಡ್ಡಾಯ
Team Udayavani, Jun 25, 2021, 9:05 PM IST
ಬಸವನಬಾಗೇವಾಡಿ: ಪಟ್ಟಣದಲ್ಲಿ ನಿರ್ಮಾಣವಾಗುತ್ತಿರುವ ಜಿ+1 ಆಸರೆ ಯೋಜನೆಯ ಮನೆಗಳ ವಂತಿಕೆ ಹಣ ಕಟ್ಟದಿದ್ದರೆ ಅಂಥವರ ಹೆಸರನ್ನು ಕೈ ಬಿಡಲಾಗುತ್ತದೆ ಎಂದು ಜಿಲ್ಲಾ ನಗರಾಭಿವೃದ್ಧಿ ಕೋಶದ ಸಾಮಾಜಿಕ ಅಭಿವೃದ್ಧಿ ಅ ಧಿಕಾರಿ ಬಸವರಾಜ ಗೋಲಾಯಿ ಹೇಳಿದರು.
ಪುರಸಭೆಗೆ ಭೇಟಿ ನೀಡಿ ಮುಖ್ಯಾಧಿ ಕಾರಿಗಳೊಂದಿಗೆ ಜಿ+1 ಆಸರೆ ಯೋಜನೆಯ ಮನೆಗಳ ವಂತಿಕೆ ಹಣ ಕಟ್ಟುವ ಬಗ್ಗೆ ಚರ್ಚಿಸಿ ನಂತರ ಮಾತನಾಡಿದ ಅವರು, ರಾಜ್ಯ ಸರಕಾರ ಈ ವಿಷಯವನ್ನು ಗಂಭೀರವಾಗಿ ತೆಗೆದುಕೊಂಡಿರುವುದರಿಂದ ಫಲಾನುಭವಿಗಳು ಸರಕಾರದ ಆದೇಶದ ಪ್ರಕಾರ ಫಲಾನುಭವಿಗಳು ತಮ್ಮ ಮನೆಯ ವಂತಿಕೆ ಹಣ ಕಡ್ಡಾಯವಾಗಿ ತುಂಬಬೇಕು. ಒಂದು ವೇಳೆ ತುಂಬದೆ ಹೊದಲ್ಲಿ ಹಂತ ಫಲಾನುಬಾವಿಗಳ ಹೆಸರನ್ನು ಕೈ ಬಿಡಲಾಗುತ್ತದೆ ಎಂದು ಹೇಳಿದರು.
ಫಲಾನುಬಾವಿಗಳು ಆರ್ಥಿಕ ಸದೃಢವಾಗಿ ಇರದೇ ಇದ್ದಲ್ಲಿ ಅಂಥ ಫಲಾನುಭವಿಗಳು ಪುರಸಭೆಗೆ ಭೇಟಿ ನೀಡಿ ಮುಖ್ಯಾ ಧಿಕಾರಿಗಳೊಂದಿಗೆ ಚರ್ಚಿಸಿದಲ್ಲಿ ಅಂತಹ ಫಲಾನುಭವಿಗಳಿಗೆ ಬ್ಯಾಂಕ್ನಿಂದ ಸಾಲ ಸೌಲಭ್ಯ ಒದಗಿಸಿಕೊಡಲಾಗುವುದು ಎಂದು ಹೇಳಿದರು. ಹೌಸಿಂಗ್ ಬೋರ್ಡ್ ಇಂಜನಿಯರ್ ಅಮರನಾಥ ಪುಠಾಣೆ ಮಾತನಾಡಿ, ರಾಜ್ಯ ಸರಕಾರದ ಜಿ+ 1 ಆಸರೆ ಮನೆಗಳ ಯೋಜನೆಯ ಲಾಭವನ್ನು ಫಲಾನುಬಾವಿಗಳು ಪಡೆದುಕೊಳ್ಳಬೇಕು.
ಒಂದು ವೇಳೆ ಈ ಯೋಜನೆ ಲಾಭ ಪಡೆಯದೆ ಹೋದಲ್ಲಿ ಇಂತಹ ಯೋಜನೆಗಳು ಮರಳಿ ನಿಮ್ಮ ಪಟ್ಟಣಕ್ಕೆ ಬರುವುದಿಲ್ಲ. ಸರಕಾರದ ಸೌಲಭ್ಯದಿಂದ ಬಡವರು ವಂಚಿವಾಗುವುದು ನಿಶ್ಚಿತ ಎಂದು ಹೇಳಿದರು. ಪುರಸಭೆ ಮುಖ್ಯಾ ಧಿಕಾರಿ ಬಿ.ಎ. ಸೌದಾಗಾರ ಮಾತನಾಡಿ, ಈಗಾಗಲೇ ಫಲಾನುಭವಿಗಳಿಗೆ ವಂತಿಕೆ ಹಣ ಕಟ್ಟುವಂತೆ ತಿಳಿಸಲಾಗಿದೆ. ಹಲವಾರು ಬಾರಿ ನೋಟಿಸ್ ನೀಡಿದ್ದೇವೆ. ಆದರೆ ಕೆಲವರು ಮಾತ್ರ ಪುರಸಭೆಗೆ ಬಂದು ಭೇಟಿ ನೀಡಿದ್ದು, ಕೆಲವರು ಬ್ಯಾಂಕ್ ಸಹಕಾರ ಪಡೆಯಲು ಮುಂದೆ ಬಂದಿದ್ದಾರೆ. ಅಂತಹವರನ್ನು ಹೊರತುಪಡಿಸಿ ಉಳಿದವರು ಒಂದು ವಾರದೊಳಗೆ ಪುರಸಭೆಗೆ ಬಂದು ಭೇಟಿ ನೀಡದಿದ್ದರೆ ಸರಕಾರದ ನಿಯಮಾನುಸಾರ ಫಲಾನುಭವಿಗಳ ಪಟ್ಟಿಯಿಂದ ತೆಗೆದು ಹಾಕಲಾಗುವುದು ಎಂದು ಹೇಳಿದರು. ಶಿವಾನಂದ ಹಂಚಲಿ ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Vijayapura: ಗೃಹಿಣಿ ಮೇಲೆ ಅತ್ಯಾಚಾರ,ಚಿತ್ರೀಕರಣ: ಮಗನೊಂದಿಗೆ ನಾಪತ್ತೆಯಾದ ಸಂತ್ರಸ್ತೆ
Politics: ಕೇಂದ್ರ ಬರ ಪರಿಹಾರ ನೀಡದಿರಲು ವಿಧಾನಸಭೆ ಚುನವಾಣೆ ಸೋಲಿನ ಸೇಡು: ರಾಮಲಿಂಗಾರೆಡ್ಡಿ
Politics: ಡಿಕೆಶಿ ಹೆಸರು ಹೇಳದಿದ್ದರೆ ಕೆಲವರಿಗೆ ನಿದ್ದೆ ಬರಲ್ಲ : ರಾಮಲಿಂಗಾರೆಡ್ಡಿ
Vijayapura; ಚುನಾವಣೆ ಕರ್ತವ್ಯ ನಿರ್ಲಕ್ಷ: ಇಬ್ಬರು ಶಿಕ್ಷಕರು ಸಸ್ಪೆಂಡ್
Prajwal Case ಬಳಿಕ ಜೆಡಿಎಸ್ 15 ಶಾಸಕರು ಕಾಂಗ್ರೆಸ್ ಸೇರ್ಪಡೆಗೆ ಆಸಕ್ತಿ: ಎಂ.ಬಿ.ಪಾಟೀಲ್
MUST WATCH
ಹೊಸ ಸೇರ್ಪಡೆ
Congress ನಾಯಕರ ವಿರುದ್ಧ ಆಕ್ಷೇಪಾರ್ಹ ಹೇಳಿಕೆ: ಕೆಸಿಆರ್ಗೆ 48 ಗಂಟೆ ಪ್ರಚಾರ ನಿಷೇಧ
Yadgiri:ಹಾಸನದ ಸಂತ್ರಸ್ತೆಯರ ಪರವಾಗಿ ಬಿಜೆಪಿ-ಕುಮಾರಸ್ವಾಮಿ ಮಾತಾಡಲಿ: ಡಿಕೆಶಿ
Belagavi: ಮರುಭೂಮಿಯ ದಾಹವಾದ ಪ್ರಧಾನಿ ಮೋದಿ ಭರವಸೆ: ಶರದ್ ಪವಾರ್ ಹೇಳಿಕೆ
ಲಿಂಗಸೂಗೂರು: ಕಾಲುವೆಗೆ ಬಿದ್ದು ಇಬ್ಬರು ಯುವಕರು ಮೃತ್ಯು…
Kollywood: ದಳಪತಿ ವಿಜಯ್ ʼGOATʼ ಸಿನಿಮಾದಲ್ಲಿ ಧೋನಿ, ರುತ್ ರಾಜ್ ನಟನೆ?