ಶಾಸಕರಿಗೆ ಜೀವ ಬೆದರಿಕೆ ಪ್ರಕರಣ: ಪರೇಡ್ ನಡೆಸಿ ರೌಡಿಗಳ ಕೆನ್ನೆಗೆ ಬಾರಿಸಿದ SP ಅನುಪಮ್
Team Udayavani, Nov 20, 2020, 12:48 PM IST
ವಿಜಯಪುರ: ಎಸ್ಪಿ ಅನುಪಮ ಅಗರವಾಲ ಶುಕ್ರವಾರ ಜಿಲ್ಲೆಯ ರೌಡಿಗಳ ತುರ್ತು ಪರೇಡ್ ನಡೆಸಿ, ಕೆಲವು ರೌಡಿಗಳ ಕೆನ್ನೆಗೆ ಬಾರಿಸಿ ಎಚ್ಚರಿಸಿದ ಘಟನೆ ಜರುಗಿತು.
ಜಿಲ್ಲೆಯ ಶಾಸಕ ದೇವಾನಂದ ಚವ್ಹಾಣ ತಮಗೆ ಜೀವ ಬೆದರಿಕೆ ಇದ್ದು, ಪೊಲೀಸ್ ವೈಫಲ್ಯವೇ ಇದಕ್ಕೆ ಕಾರಣ, ಜಿಲ್ಲೆಯಲ್ಲಿ ನಡೆಯುವ ಬಹುತೇಕ ಎಲ್ಲ ಸಾಮಾಜಿಕ ಅಕ್ರಮಗಳು ಪೊಲೀಸರ ಸಹಕಾರದಿಂದಲೇ ನಡೆಯುತ್ತಿವೆ. ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಹಾಳಾಗಿದ್ದು, ಪೊಲೀಸ್ ವೈಫಲ್ಯ ಎಂದು ಆರೋಪಿಸಿದ್ದರು.
ಇದನ್ನೂ ಓದಿ:ಯುವತಿಯರನ್ನು ಮುಂದಿಟ್ಟುಕೊಂಡು ಹನಿಟ್ರ್ಯಾಪ್: ಪಿರಿಯಾಪಟ್ಟಣದಲ್ಲಿ ಐವರ ಬಂಧನ
ಇದರ ಬೆನ್ನಲ್ಲೇ ಜಿಲ್ಲೆಯ ರೌಡಿಗಳ ಪರೇಡ್ ನಡೆಸಿರುವ ಎಸ್ಪಿ ಅನುಪಮ್ ಅಗರವಾಲ, ಲೈಸೆನ್ಸ್ ಹೊಂದಿರುವ ಗನ್ ಮೂಲಕ ಬೆದರಿಸಿ ಬಡ್ಡಿ ವ್ಯವಹಾರ ನಡೆಸುತ್ತಿದ್ದ ಭೀಮಶಿ ಬಜಂತ್ರಿ ಕೆನ್ನೆಗೆ ಬಾರಿಸಿ, ನ್ಯಾಯಯುತವಾಗಿ ಬದುಕುವಂತೆ ಎಚ್ಚರಿಕೆ ನೀಡಿದರು.
ಇದಲ್ಲದೇ ಜಿಲ್ಲೆಯ ಎಲ್ಲ ರೌಡಿಗಳ ಮೇಲೆ ಕಟ್ಟುನಿಟ್ಡಿನ ಕಣ್ಣಿಡಬೇಕು. ಸಮಾಜ ಬಾಹಿರ ಕೃತ್ಯದಲ್ಲಿ ತೊಡಗಿ ಸಕ್ರಿಯರಾಗಿರುವ ವ್ಯಕ್ತಿಗಳ ಮೇಲೆ ರೌಡಿ ಶೀಟ್ ಓಪನ್ ಮಾಡುವಂತೆ ಸ್ಥಳದಲ್ಲಿದ್ದ ವಿವಿಧ ಠಾಣೆಯ ಪೊಲೀಸ್ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು
PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ ಇದ್ದಾರೆ : ಸಿದ್ದರಾಮಯ್ಯ
Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು
BJP ಶೆಟ್ಟರ್, ಶ್ರೀರಾಮುಲುಗೆ ಚೊಂಬು ಗ್ಯಾರಂಟಿ : ಲಕ್ಷ್ಮಣ ಸವದಿ
Sirsi: ಮನವಿ ಕೊಟ್ಟ ವಾರದೊಳಗೇ ಕೆಲಸ ಶುರು… 26 ಗುಂಟೆ ಕೆರೆಗೆ ಜೀರ್ಣೋದ್ದಾರ ಭಾಗ್ಯ
MUST WATCH
ಹೊಸ ಸೇರ್ಪಡೆ
Not responding; ಶಿವರಾಮ್ ಹೆಬ್ಬಾರ್ ಅವರನ್ನು ಪ್ರಧಾನಿ ಕಾರ್ಯಕ್ರಮಕ್ಕೆ ಕರೆದಿಲ್ಲ: ಬಿಜೆಪಿ
Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು
PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ ಇದ್ದಾರೆ : ಸಿದ್ದರಾಮಯ್ಯ
Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು
Kalaburagi; ಪ್ರಜ್ವಲ್ ಪರ ಮತಯಾಚನೆ ಮಾಡಿದ್ದ ಮೋದಿ-ಶಾ ಈಗ ಉತ್ತರಿಸಲಿ: ಪ್ರಿಯಾಂಕ ವಾದ್ರಾ