ಸಿದ್ದರಾಮಯ್ಯ ಹೇಳಿಕೆಗೆ ಮನಗೂಳಿ ಸಂಗನಬಸವಶ್ರೀ ಕಿಡಿ; ಬಹಿಷ್ಕಾರದ ಬೆದರಿಕೆ
Team Udayavani, Mar 26, 2022, 1:16 PM IST
ವಿಜಯಪುರ: ಮುಖ್ಯಮಂತ್ರಿ ಆಗಿದ್ದಾಗ ರಾಜಕೀಯ ಕಾರಣಗಳಿಗೆ ವೀರಶೈವ-ಲಿಂಗಾಯತ ಎಂದು ಧರ್ಮ ಒಡೆಯುವ ಕೆಲಸ ಮಾಡಿದ್ದ ಸಿದ್ಧರಾಮಯ್ಯ ಅವರು, ಇದೀಗ ಓಲೈಕೆ ಮಾತಿನ ಭರದಲ್ಲಿ ಮಠಾಧೀಶರನ್ನು ಅವಮಾನಿಸುವ ಕೆಲಸ ಮಾಡಿದ್ದಾರೆ. ತಮ್ಮ ತಪ್ಪು ತಿದ್ದುಕೊಳ್ಳದಿದ್ದಲ್ಲಿ ಭವಿಷ್ಯದಲ್ಲಿ ಸಿದ್ದರಾಮಯ್ಯ ಅವರನ್ನು ಸ್ವಾಮಿಗಳು ಬಹಿಷ್ಕಾರ ಹಾಕಬೇಕಾದೀತು ಎಂದು ಮನಗೂಳಿ ಹಿರೇಮಠದ ಅಭಿನವ ಸಂಗನಬಸವ ಶ್ರೀಗಳು ಕಿಡಿಕಾರಿದ್ದಾರೆ.
ಶನಿವಾರ ನಗರದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಮಠಾಧೀಶರು ಮಾಡುತ್ತಿರುವ ಕೆಲಸ ನಾಡಿನ ಜನತೆಗೆ ಗೊತ್ತಿದೆ. ವೀರಶೈವ ಧರ್ಮ ಒಡೆಯುವ ಕೆಲಸಕ್ಕೆ ಕೈಹಾಕಿ ಅಧಿಕಾರ ಕಳೆದುಕೊಂಡ ಸಿದ್ಧರಾಮಯ್ಯ ಅವರು ಇದೀಗ ಮಠಾಧೀಶರ ಬಗ್ಗೆ ಮಾತನಾಡಿದ್ದು ತಪ್ತು. ಭಾರತ ಹಿಂದೂಗಳಿರುವ ದೇಶ, ಹಿಂದೂ ಧರ್ಮ, ಸ್ವಾಮಿಗಳಿಗೆ ಅಪಮಾನ ಮಾಡಿದಲ್ಲಿ ಸಹಿಸಲು ಸಾಧ್ಯವಿಲ್ಲ ಎಂದರು.
ಇದನ್ನೂ ಓದಿ:ಡಬಲ್ ಎಂಜಿನ್ ಸರ್ಕಾರದಲ್ಲಿ ಡಬಲ್ ದೋಖಾ: ಪ್ರಿಯಾಂಕ್ ಖರ್ಗೆ ಆಕ್ರೋಶ
ಸದನದಲ್ಲಿ ಹಿಜಾಬ್ ವಿಷಯ ಬಂದಾಗ ಅನಗತ್ಯವಾಗಿ ಸ್ವಾಮಿಗಳ ಅವಹೇಳನ ಮಾಡಿರುವ ಸಿದ್ಧರಾಮಯ್ಯ ಅವರಿಗೆ ಮಠಾಧೀಶರು ಮಾಡುವ ಕೆಲಸದ ಅರಿವಿಲ್ಲ. ಅವರೇನು ಹಿಂದೂ ಇದ್ದಾರೋ- ಯಾರಿದ್ದಿರೋ ಎಂಬುದು ತಿಳಿಯದಾಗಿದೆ. ನಿಮಗೆ ಬೇರೆ ಸಮಾಜ ಬೇಕಿದ್ದರೆ ಮತ ಬ್ಯಾಂಕ್ ಕಾರಣಕ್ಕೆ ಅವರನ್ನು ಬೆಂಬಲಿಸಿ. ಆದರೆ ಅದರ ರಾಜಕೀಯ ಪ್ರೇರಿತವಾಗಿ ಹಿಜಾಬ್ ನೆಪದಲ್ಲಿ ಸ್ವಾಮಿಗಳನ್ನು ಅಪಮಾನಿಸುವ ಕೆಲಸ ಮಾಡಿದಲ್ಲಿ ಸಹಿಸಲು ಸಾಧ್ಯವಿಲ್ಲ ಎಂದು ಎಚ್ಚರಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Indi ಲಚ್ಯಾಣ ಮಹಾರಥೋತ್ಸವದಲ್ಲಿ ಅವಘಡ: ರಥದ ಗಾಲಿಗೆ ಸಿಲುಕಿ ಇಬ್ಬರು ಮೃತ್ಯು
State Govt ದಿವಾಳಿ ಆಗಿದೆ:ಸರ್ಕಾರದಿಂದಲೇ ಲೂಟಿ ನಡೆಯುತ್ತಿದೆ: ಮಾಜಿ ಸಿಎಂ ಯಡಿಯೂರಪ್ಪ ಆರೋಪ
Muddebihal: ಹೆಂಡತಿಗೆ ಚೂರಿ ಇರಿದು ಪರಾರಿಯಾದ ಗಂಡ
Siddaramaiah ಮುಸ್ಲಿಂ ಮೀಸಲಾತಿ ಬಗ್ಗೆ ಬಿಜೆಪಿಯಿಂದ ಸುಳ್ಳು
Vijaypura:ರಾಹುಲ್ ಗಾಂಧಿ ನಿರ್ಗಮಿಸುವಾಗ ವೇದಿಕೆಗೆ ಬಂದ ಸಿದ್ದರಾಮಯ್ಯ
MUST WATCH
ಹೊಸ ಸೇರ್ಪಡೆ
Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್
Ramanagara: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು
Sirsi: ಮನವಿ ಕೊಟ್ಟ ವಾರದೊಳಗೇ ಕೆಲಸ ಶುರು… 26 ಗುಂಟೆ ಕೆರೆಗೆ ಜೀರ್ಣೋದ್ದಾರ ಭಾಗ್ಯ
Father; ಚಂದ್ರು ನಿರ್ಮಾಣದ ‘ಫಾದರ್’ ಚಿತ್ರಕ್ಕೆ ಮುಹೂರ್ತ
Thirthahalli: ಇದು ಪಿಕ್ ಪ್ಯಾಕೆಟ್ ಸರ್ಕಾರ… ಕಾಂಗ್ರೆಸ್ ವಿರುದ್ಧ ಕುಮಾರಸ್ವಾಮಿ ಹೇಳಿಕೆ