ಶ್ರೀ ಸಂಗನಬಸವ ಸ್ವಾಮೀಜಿ ಶೈಕ್ಷಣಿಕ ಕಾಳಜಿ ಸ್ಮರಣೀಯ


Team Udayavani, Jul 28, 2017, 3:15 PM IST

28-BJP-2.jpg

ತಾಂಬಾ: ವಿಜಯಪುರದಲ್ಲಿ ಬಂಗಾರೆಮ್ಮ ಸಜ್ಜನ ಅವರಿಂದ ಭೂಮಿ ದಾನ ಪಡೆದು ವಿಜಯ ಕಾಲೇಜು ಮತ್ತು ಬಿಎಲ್‌ಡಿಇ ಸಂಸ್ಥೆಯನ್ನು ಹಾಗೂ ತಾಂಬಾ ಗ್ರಾಮದಲ್ಲಿ ವೃಷಭಲಿಂಗೇಶ್ವರ ವಿದ್ಯಾಸಂಸ್ಥೆಯನ್ನು ತಮ್ಮ ಜೋಳಿಗೆಯಿಂದ ಪ್ರಾರಂಭಿಸಿದ ಕೀರ್ತಿ ಬಂಥನಾಳದ ಲಿಂ| ಶ್ರೀ ಸಂಗನಬಸವ ಸ್ವಾಮೀಜಿಗಳಿಗೆ ಸಲ್ಲುತ್ತದೆ ಎಂದು ಎಸ್‌ವಿವಿ ಸಂಘದ ಚೇರ್‌ಮನ್‌ ಜೆ.ಎಸ್‌. ಹತ್ತಳಿ ಹೇಳಿದರು.

ಗ್ರಾಮದ ಶ್ರೀ ವೃಷಭಲಿಂಗೇಶ್ವರ ವಿದ್ಯಾವರ್ಧಕ ಸಂಸ್ಥೆಯ ಆವರಣದಲ್ಲಿ ಹಮ್ಮಿಕೊಂಡಿದ್ದ ಬಂಥನಾಳದ ಲಿಂ| ಶ್ರೀ ಸಂಗನಬಸವ ಸ್ವಾಮೀಜಿಗಳ 117ನೇ ಜನ್ಮದಿನೋತ್ಸವದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಸಂಗನಬಸವ ಸ್ವಾಮೀಜಿಯವರು ಶಿಕ್ಷಣದ ಬಗ್ಗೆ ಅಪಾರ ಕಾಳಜಿ ಹೊಂದಿದ್ದರು. 50 ವರ್ಷದ ಹಿಂದೆಯೇ ಶಿಕ್ಷಣದಿಂದ ಮಾತ್ರ ಅಭಿವೃದ್ಧಿ ಸಾಧ್ಯ ಎಂದು ಬಲವಾಗಿ ನಂಬಿದ್ದ ಶ್ರೀಗಳು 1962ರಲ್ಲಿಯೆ ಶಿಕ್ಷಣ ಸಂಸ್ಥೆ ಸ್ಥಾಪಿಸಿದ್ದರಿಂದ ಇಂದು ಗ್ರಾಮದ ಜನರು ಶಿಕ್ಷಣವಂತರಾಗಿ ಗ್ರಾಮದ ಕೀರ್ತಿ ಹೆಚ್ಚಿಸಲು ಕಾರಣೀಭೂತರಾಗಿದ್ದಾರೆ ಎಂದರು.

ಸಾನ್ನಿಧ್ಯ ವಹಿಸಿದ್ದ ಬಂಥನಾಳದ ಶ್ರೀ ವೃಷಭಲಿಂಗ ಸ್ವಾಮೀಜಿ ಮಾತನಾಡಿ, ಜೀವನ ಎಂಬುದು ಒಂದು ನಾಣ್ಯವಿದ್ದಂತೆ. ಅದನ್ನು ನಿಮಗಿಷ್ಟ ಬಂದ ರೀತಿಯಲ್ಲಿ ವೆಚ್ಚ ಮಾಡಬಹುದು. ಆದರೆ, ಬಳಸುವ ಅವಕಾಶ ಇರುವುದು ಒಂದು ಬಾರಿ ಮಾತ್ರ. ಹಾಗಾಗಿ ಬದುಕನ್ನು ಮೌಲ್ಯಯುತವಾಗಿ ಬಳಸಬೇಕು ಎಂದರು.

ಪ್ರಾಚಾರ್ಯ ಎಸ್‌.ಎಸ್‌. ಕನಾಳ ಪ್ರಾಸ್ತಾವಿಕ ಮಾತನಾಡಿದರು. ಸಂಸ್ಥೆಯ ಕಾರ್ಯದರ್ಶಿ ಎ.ಬಿ. ಕುಲಕರ್ಣಿ, ಎಸ್‌.ಎಸ್‌. ಕಲ್ಲೂರ, ಸಿದ್ದಯ್ಯ ವಸ್ತ್ರದ, ಬ.ಜೆ. ನಿಂಬಾಳ, ಪರಶುಗೌಡ ಪಾಟೀಲ, ವಿಠಲ ನಾವದಗಿ, ಸತೀಶ ನಾವದಗಿ, ಪ್ರಾಚಾರ್ಯ ವಿ.ಪಿ. ಮರಡಿ, ಎಸ್‌.ಡಿ. ಬಂಟನೂರ, ಮುಖ್ಯ ಗುರುಮಾತೆ ಪಿ.ಬಿ. ಕಾಡಯ್ಯನಮಠ, ಅಂಬರೇಷ ಅಳಗುಂಡಗಿ, ಎಂ.ಜಿ. ಸೋಮನಿಂಗ, ಸಿ.ಎಸ್‌. ದೇಗಿನಾಳ, ಎಮ್‌.ಎನ್‌. ಪೈಕರ, ಜೆ.ಆರ್‌. ಪೂಜಾರಿ, ಎಸ್‌.ಜಿ. ಕೊಂಕನಗಾಂವ, ಜಿ.ಎಸ್‌. ಹಿರೇಮಠ, ಟಿ.ಎಸ್‌. ಗಿರಿಗೌಡರ, ಎ.ಪಿ. ಕಾಗವಾಡಕರ, ಸಿ.ಎಸ್‌. ಕಣ್ಮೆàಶ್ವರ, ಸಿದ್ದಪ್ಪ ಚಟ್ಟರಕಿ, ಎಸ್‌. ಎಸ್‌. ಕನ್ನಾಳ ಮುಂತಾದವರಿದ್ದರು. ಶಿಕ್ಷಕ ಆರ್‌. ಎನ್‌. ಬೊಳೆಗಾಂವ ಸ್ವಾಗತಿಸಿದರು. ಜಿ.ಎಸ್‌. ಹಿರೇಮಠ ನಿರೂಪಿಸಿದರು. ಎಲ್‌.ಎಸ್‌. ಬಡಿಗೇರ ವಂದಿಸಿದರು.

ಮೆರವಣಿಗೆ: ಜನ್ಮೋತ್ಸವದ ಅಂಗವಾಗಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಶ್ರೀ ಸಂಗನಬಸವ ಶಿವಯೋಗಿಗಳ ಭಾವಚಿತ್ರದ ಮೆರವಣಿಗೆ ನಡೆಯಿತು. ಶ್ರೀ ವೃಷಭಲಿಂಗ ಶಿವಯೋಗಿಗಳು ಮೆರವಣಿಗೆಗೆ ಚಾಲನೆ ನೀಡಿದರು.

ಟಾಪ್ ನ್ಯೂಸ್

crime (2)

Minor girl ಪ್ರೀತಿಸಿ ಮದುವೆ; ವೈಮನಸ್ಸಾಗಿ ದೂರ: ಕತ್ತು ಸೀಳಿ ಬರ್ಬರ ಹತ್ಯೆ!

1-wweewq

Airstrike; ಹಿಂದಿನಿಂದ ದಾಳಿ ಮಾಡುವುದರಲ್ಲಿ ನನಗೆ ನಂಬಿಕೆ ಇಲ್ಲ: ಮೋದಿ

1-cfcfhh

Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು

1-wweewewq

PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ‌ ಇದ್ದಾರೆ : ಸಿದ್ದರಾಮಯ್ಯ

1———ewqeqwewq

Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು

priyanka vadra

Kalaburagi; ಪ್ರಜ್ವಲ್ ಪರ ಮತಯಾಚನೆ ಮಾಡಿದ್ದ ಮೋದಿ-ಶಾ ಈಗ ಉತ್ತರಿಸಲಿ: ಪ್ರಿಯಾಂಕ ವಾದ್ರಾ

lakshaman-savadi

BJP ಶೆಟ್ಟರ್, ಶ್ರೀರಾಮುಲುಗೆ ಚೊಂಬು ಗ್ಯಾರಂಟಿ : ಲಕ್ಷ್ಮಣ ಸವದಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

lakshaman-savadi

BJP ಶೆಟ್ಟರ್, ಶ್ರೀರಾಮುಲುಗೆ ಚೊಂಬು ಗ್ಯಾರಂಟಿ : ಲಕ್ಷ್ಮಣ ಸವದಿ

1-qewqeqw

Indi ಲಚ್ಯಾಣ ಮಹಾರಥೋತ್ಸವದಲ್ಲಿ ಅವಘಡ: ರಥದ ಗಾಲಿಗೆ ಸಿಲುಕಿ ಇಬ್ಬರು ಮೃತ್ಯು

20

State Govt ದಿವಾಳಿ ಆಗಿದೆ:ಸರ್ಕಾರದಿಂದಲೇ ಲೂಟಿ ನಡೆಯುತ್ತಿದೆ: ಮಾಜಿ ಸಿಎಂ ಯಡಿಯೂರಪ್ಪ ಆರೋಪ

10-muddebihala

Muddebihal: ಹೆಂಡತಿಗೆ ಚೂರಿ ಇರಿದು ಪರಾರಿಯಾದ ಗಂಡ

Siddaramaiah ಮುಸ್ಲಿಂ ಮೀಸಲಾತಿ ಬಗ್ಗೆ ಬಿಜೆಪಿಯಿಂದ ಸುಳ್ಳು

Siddaramaiah ಮುಸ್ಲಿಂ ಮೀಸಲಾತಿ ಬಗ್ಗೆ ಬಿಜೆಪಿಯಿಂದ ಸುಳ್ಳು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

crime (2)

Minor girl ಪ್ರೀತಿಸಿ ಮದುವೆ; ವೈಮನಸ್ಸಾಗಿ ದೂರ: ಕತ್ತು ಸೀಳಿ ಬರ್ಬರ ಹತ್ಯೆ!

1-wweewq

Airstrike; ಹಿಂದಿನಿಂದ ದಾಳಿ ಮಾಡುವುದರಲ್ಲಿ ನನಗೆ ನಂಬಿಕೆ ಇಲ್ಲ: ಮೋದಿ

1-wqeqqweqwe

Not responding; ಶಿವರಾಮ್ ಹೆಬ್ಬಾರ್ ಅವರನ್ನು ಪ್ರಧಾನಿ ಕಾರ್ಯಕ್ರಮಕ್ಕೆ ಕರೆದಿಲ್ಲ: ಬಿಜೆಪಿ

1-cfcfhh

Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು

1-wweewewq

PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ‌ ಇದ್ದಾರೆ : ಸಿದ್ದರಾಮಯ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.