ಕೋವಿಡ್ ಪರಿಹಾರ ನಿಧಿಗೆ ವೈದ್ಯರಿಂದ ಸಹಾಯ ಹಸ್ತ
Team Udayavani, Apr 18, 2020, 6:25 PM IST
ತಾಳಿಕೋಟೆ: ಪಟ್ಟಣದ ವೈದ್ಯರು ಹಾಗೂ ರಕ್ತ ತಪಾಸಣಾ ಕೇಂದ್ರದವರು ಪ್ರಧಾನ ಮಂತ್ರಿ ಪರಿಹಾರ ನಿಧಿ ಗೆ 76 ಸಾವಿರ ರೂ. ದೇಣಿಗೆಯನ್ನು ತಹಶೀಲ್ದಾರ್ಗೆ ನೀಡಿದರು.
ತಾಳಿಕೋಟೆ: ಪಟ್ಟಣದ ವೈದ್ಯರು ಹಾಗೂ ರಕ್ತ ತಪಾಸಣಾ ಕೇಂದ್ರದವರು ಕೂಡಿ ಕೋವಿಡ್ ಸೋಂಕು ತಡೆಗಟ್ಟುವ ಹಿನ್ನೆಲೆಯಲ್ಲಿ ಪ್ರಧಾನ ಮಂತ್ರಿಗಳ ಪರಿಹಾರ ನಿಧಿಗೆ 76 ಸಾವಿರ ರೂ. ಚೆಕ್ನ್ನು ತಹಶೀಲ್ದಾರ್ ಅನಿಲಕುಮಾರ ಢವಳಗಿ ಅವರಿಗೆ ಸಲ್ಲಿಸಿದರು.
ಈ ವೇಳೆ ಡಾ| ರವಿ ಅಗರವಾಲ ಮಾತನಾಡಿ, ಕೋವಿಡ್ ತಡೆಗಟ್ಟುವ ಸಲುವಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರ ಅಗತ್ಯ ಕ್ರಮ ಕೈಗೊಳ್ಳುತ್ತಿದ್ದು ಜನರ ಸಹಕಾರವೂ ಅಗತ್ಯವಾಗಿದೆ. ಸರ್ಕಾರದ ಸೂಚನೆಯಂತೆ ಲಾಕ್ಡೌನ್ ಪಾಲನೆ ಜೊತೆಗೆ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕಿದೆ ಎಂದರು.
ಡಾ| ವಿ.ಎಸ್. ಕಾರ್ಚಿ, ಡಾ| ನಜೀರ್ ಕೊಳ್ಯಾಳ, ಡಾ| ಐ.ಬಿ. ತಳ್ಳೋಳ್ಳಿ, ಡಾ| ಗಿರೀಶ ಯಾದವಾಡ, ಡಾ| ಆನಂದ ಭಟ್, ಡಾ| ಎನ್.ಎಲ್. ಶೆಟ್ಟಿ, ಡಾ| ಡೋಣಿ, ಡಾ| ಶಬ್ಬೀರ್, ಡಾ| ಶ್ರೀಶೈಲ ಬಿರಾದಾರ, ಡಾ| ಸುರೇಶ ಹಂಚಾಟೆ, ಡಾ| ಪ್ರಭುಗೌಡ ಬಿರಾದಾರ, ರಕ್ತ ತಪಾಸಣಾ ಕೇಂದ್ರದ ಸದಸ್ಯರುಗಳು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Tragedy; ಲಚ್ಯಾಣ ರಥೋತ್ಸವ ಗಾಯಾಳುವೂ ಸಾವು: ಮೃತರ ಸಂಖ್ಯೆ ಮೂರಕ್ಕೇರಿಕೆ
Vijayapura; 33 ಲಕ್ಷ ರೂ. ಮೌಲ್ಯದ ಮಾದಕ ವಸ್ತು, ವಾಹನ ವಶ : ದೆಹಲಿ ಮೂಲದ ವ್ಯಕ್ತಿ ಬಂಧನ
BJP ಶೆಟ್ಟರ್, ಶ್ರೀರಾಮುಲುಗೆ ಚೊಂಬು ಗ್ಯಾರಂಟಿ : ಲಕ್ಷ್ಮಣ ಸವದಿ
Indi ಲಚ್ಯಾಣ ಮಹಾರಥೋತ್ಸವದಲ್ಲಿ ಅವಘಡ: ರಥದ ಗಾಲಿಗೆ ಸಿಲುಕಿ ಇಬ್ಬರು ಮೃತ್ಯು
State Govt ದಿವಾಳಿ ಆಗಿದೆ:ಸರ್ಕಾರದಿಂದಲೇ ಲೂಟಿ ನಡೆಯುತ್ತಿದೆ: ಮಾಜಿ ಸಿಎಂ ಯಡಿಯೂರಪ್ಪ ಆರೋಪ