ತಿಕೋಟಾ ಸುತ್ತಮುತ್ತ ಭಾರಿ ಸದ್ದಿನೊಂದಿಗೆ ಭೂಕಂಪನ: ಮನೆಗಳಿಂದ ಹೊರ ಓಡಿ ಬಂದ ಜನ
Team Udayavani, Feb 24, 2023, 10:59 PM IST
ವಿಜಯಪುರ: ಜಿಲ್ಲೆಯ ತಿಕೋಟಾ ಭಾಗದಲ್ಲಿ ಶುಕ್ರವಾರ ರಾತ್ರಿ 10-32 ರ ಸುಮಾರಿಗೆ ಭಾರಿ ಸದ್ದಿನೊಂದಿಗೆ ಭೂಕಂಪನ ಸಂಭವಿಸಿದೆ. ಭೂಮಿನಡುಗುತ್ತಲೇ ಮನೆಗಳಲ್ಲಿ ಮಲಗಿದ್ದ ಜನರು ಮನೆಗಳಿಂದ ಹೊರಗೆ ಓಡಿ ಬಂದಿದ್ದಾರೆ.
ತಾಲೂಕು ಕೇಂದ್ರವಾದ ತಿಕೋಟಾ ಪಟ್ಟಣ ಮಾತ್ರವಲ್ಲದೆ ಕಳ್ಳಕವಟಗಿ, ಘೋಣಸಗಿ, ಬಾಬಾನಗರ, ಟಕ್ಕಳಕಿ, ಹುಬನೂರ, ಸೋಮದೇವರಹಟ್ಟಿ, ಮಲಕನದೇವರಹಟ್ಟಿ ಎಲ್ಲ ಗ್ರಾಮಗಳಲ್ಲಿ ಭಾರಿ ಸದ್ದಿನ ಭೂಕಂಪನದ ಅನುಭವ ಆಗಿದೆ.
ಶುಕ್ರವಾರ ರಾತ್ರಿಯ ಭಾರಿ ಸದ್ದಿನ ಭೂಕಂಪನದಿಂದ ಮನೆಗಳು ಅದುರಿದ್ದು, ತಗಡಿನ ಶೆಡ್ ಗಳಂತೂ ಭಾರಿ ಶಬ್ದ ಸೃಷ್ಟಿಸಿದ್ದು, ಮನೆಗಳಲ್ಲಿನ ಪಾತ್ರೆ ಸೇರಿದಂತೆ ಇತರೆ ವಸ್ತುಗಳು ನೆಲಕ್ಕೆ ಉರುಳಿ ಬಿದ್ದಿವೆ.
ಭೂಕಂಪನಕ್ಕೆ ಮುನ್ನ ಈ ಗ್ರಾಮಗಳಲ್ಲಿನ ನಾಯಿಗಳು ವಿಚಿತ್ರವಾಗಿ ಬೊಗಳಿದ್ದು, ಕೆಲವೇ ಕ್ಷಣದಲ್ಲಿ ಭೂಮಿ ಕಂಪಿಸಿದೆ.
ತಿಕೋಟಾ ಭಾಗದಲ್ಲಿ ಕಳೆದ ಹಲವು ವರ್ಷಗಳಿಂದ ಭೂಕಂಪದ ಅನುಭವ ಆಗುತ್ತಲೇ ಇದ್ದು, ಇದೇ ವಾರದಲ್ಲಿ ಎರಡನೇ ಬಾರಿಗೆ ಭೂಕಂಪನ ಸಂಭವಿಸಿದೆ.
ಈ ವರೆಗಿನ ಭೂಕಂಪನಗಳ ಅನುಭವದಲ್ಲೇ ಇದು ಅತಿ ಜೋರಾದ ಹಾಗೂ ಭಾರಿ ಅಪಾಯಕಾರಿ ಎಂಬಂತೆ ಸದ್ದು ಮಾಡಿದೆ. ಪರಿಣಾಮ ಗಾಬರಿಗೊಂಡ ಜನರು ಮನೆಯಿಂದ ಹೊರಗೆ ಓಡಿ ಬಂದಿದ್ದಾರೆ.
ಇದನ್ನೂ ಓದಿ: ಪತ್ನಿ ಆತ್ಮಹತ್ಯೆ ಮರುದಿನವೇ ಪಿತ್ರಾರ್ಜಿತ ಆಸ್ತಿ ಆಸೆಗಾಗಿ ಹೆತ್ತ ತಂದೆಯನ್ನೇ ಕೊಲೆಗೈದ ಮಗ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
UPA ಅವಧಿಯಲ್ಲಿ ರಾಜ್ಯಕ್ಕೆ ಸಿಕ್ಕಿದ್ದು ಬರೀ ಚಿಪ್ಪು: ಅಶೋಕ್
Andhra Pradesh ರಾಜಮಂಡ್ರಿ ಲೋಕಸಭಾ ಕ್ಷೇತ್ರಕ್ಕೆ ಸುಧಾಕರ್ ಉಸ್ತುವಾರಿ
Hosapete; ಕೆಲವು ದೇಶಗಳು ಭಾರತ ಸರ್ಕಾರ ದುರ್ಬಲವಾಗಿರಲು ಬಯಸುತ್ತಿವೆ: ಮೋದಿ
Indi ಲಚ್ಯಾಣ ಮಹಾರಥೋತ್ಸವದಲ್ಲಿ ಅವಘಡ: ರಥದ ಗಾಲಿಗೆ ಸಿಲುಕಿ ಇಬ್ಬರು ಮೃತ್ಯು
China ದಿಂದ 10 ಲಕ್ಷ ಎಕರೆ ಅತಿಕ್ರಮವಾಗಿದೆ: ಮೋದಿ ವಿರುದ್ಧ ಪ್ರಕಾಶ್ ರಾಜ್ ವಾಗ್ದಾಳಿ