Vijayapura; ಕೇಂದ್ರದಿಂದ ಸೂಚನೆ ಬಂದಿದೆ, ನಾನೇ ಅಭ್ಯರ್ಥಿ: ರಮೇಶ್ ಜಿಗಜಿಣಗಿ
Team Udayavani, Feb 26, 2024, 3:05 PM IST
ವಿಜಯಪುರ: ಆರೋಗ್ಯ ಸರಿ ಇಲ್ಲ ಎಂದು ವಿರೋಧಿಗಳು ನನ್ನ ಬಗ್ಗೆ ಅನಗತ್ಯವಾಗಿ ಅಪಪ್ರಚಾರ ಮಾಡುತ್ತಿದ್ದಾರೆ. ಆದರೆ ಕೇಂದ್ರದಿಂದ ಸೂಚನೆ ಬಂದಿದ್ದು, ವಿಜಯಪುರ ಕ್ಷೇತ್ರದಲ್ಲಿ ಬಿಜೆಪಿ ಪಕ್ಷದಿಂದ ನಾನೇ ಅಭ್ಯರ್ಥಿ ಎಂದು ಲೋಕಸಭೆ ಹಾಲಿ ಸದಸ್ಯ ರಮೇಶ ಜಿಗಜಿಣಗಿ ಹೇಳಿದ್ದಾರೆ.
ಸೋಮವಾರ ನಗರದ ರೈಲ್ವೇ ನಿಲ್ದಾಣದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ನನಗೆ ಬೇಡವಾದವರು ನನಗೆ ಹಾರ್ಟ್ ಅಟ್ಯಾಕ್ ಆಗಿದೆ ಎಂದು ಅಪಪ್ರಚಾರ ಮಾಡುತ್ತಿದ್ದಾರೆ. ಆದರೆ ನನಗೆ ಹಾರ್ಟೇ ಇಲ್ಲ ಎಂದು ನಗಡೆಯಾಡಿದರು.
ಪರಿಶಿಷ್ಟ ಜಾತಿಗೆ ಮೀಸಲಿರುವ ವಿಜಯಪುರ ಲೋಕಸಭೆ ಕ್ಷೇತ್ರದಿಂದ ಸತತ ಮೂರು ಬಾರಿ ಗೆದ್ದಿದ್ದು ಮಾತ್ರವಲ್ಲದೇ, ನೆರೆಯ ಚಿಕ್ಕೋಡಿ ಕ್ಷೇತ್ರದಿಂದಲೂ ಈ ಹಿಂದೆ ಸತತ ಮೂರು ಬಾರಿ ಗೆದ್ದಿದ್ದೆ. ಸ್ವಂತ ಜಿಲ್ಲೆಯಲ್ಲಿ ಗೆಲ್ಲುವುದು ಸುಲಭ ಆದರೆ, ಅನ್ಯ ಜಿಲ್ಲೆಯ ಕ್ಷೇತ್ರಕ್ಕೆ ತೆರಳಿ ನಿರಂತರ ಮೂರು ಬಾರಿ ಗೆಲ್ಲುವುದು ಸುಲಭದ ಕೆಲಸವೇನು ಎಂದು ಪ್ರಶ್ನಿಸಿದರು.
ನಾನು ದಲಿತನಾದರೂ ನನ್ನ ಹಿಂದೆ ದಲಿತರನ್ನು ಇರಿಸಿಕೊಂಡಿಲ್ಲ, ಆದರೆ ದಲಿತರಿಗೆ ಅಗತ್ಯ ಇರುವ ಎಲ್ಲ ಸೌಲಭ್ಯ ಕಲ್ಪಿಸಿದ್ದೇನೆ. ನಾನು ಎಲ್ಲ ಜಾತಿ-ಧರ್ಮದವರೊಂದಿಗೆ ಸರ್ವ ಜನಾಂಗದವರೊಂದಿಗೆ ಬೆರೆಯುವ ಮನೋಭಾವದ ರಾಜಕೀಯ ವ್ಯಕ್ತಿ ಎಂದರು.
ಇನ್ನು ಕೆಲವು ಮಾಧ್ಯಮಗಳಲ್ಲಿ ನನ್ನ ಆಸ್ತಿ ಕಳೆದ ಮೂರು ಅವಧಿಯಲ್ಲಿ ನಿರೀಕ್ಷೆ ಮೀರಿ ಹೆಚ್ಚಿದೆ ಎಂದು ಬರೆಯಲಾಗಿದೆ. ಲಕ್ಷದ ಲೆಕ್ಕದಲ್ಲಿದ್ದ ಆಸ್ತಿ 150 ಕೋಟಿ ರೂ. ಹೆಚ್ಚಿದೆ ಎಂದು ವರದಿಯಾಗಿದೆ. ಆದರೆ ಮಾಧ್ಯಮಗಳಲ್ಲಿ ವರದಿ ಆಗಿರುವುದಕ್ಕಿಂತ ನನ್ನ ಆಸ್ತಿ ಹೆಚ್ಚಿದೆ. ಆದರೂ ಮಾಧ್ಯಮದವರು ಕಡಿಮೆ ಆಸ್ತಿ ಇದೆ ಎಂದು ಬರೆದಿದ್ದೀರಿ ಎಂದು ಹಾಸ್ಯ ಮಾಡಿದರು.
ನಾನು ಯಾರ ಬಳಿಯೂ ಲಂಚ ಹೊಡೆದು ಆಸ್ತಿ ಮಾಡಿಲ್ಲ, ನಾನು-ನನ್ನ ಮಕ್ಕಳು ಪ್ರಾಮಾಣಿಕವಾಗಿ ದುಡಿದು ಗಳಿಸಿದ್ದೇವೆ. ನನ್ನ ಜೀವನ ಗಾಂಧೀಜಿ ಅವರಂತೆ ಸಂಪೂರ್ಣ ತೆರೆದ ಪುಸ್ತಕ ಎಂದು ಜಿಗಜಿಣಗಿ, ವಾಸ್ತವವಾಗಿ ನನ್ನ ಆಸ್ತಿ ಹೆಚ್ಚಿಲ್ಲ. ಇರುವ ಆಸ್ತಿಯ ಮೌಲ್ಯ ಪ್ರಸ್ತುತ ದರದಂತೆ ಹೆಚ್ಚಿದೆ ಎಂದರು.
ಬಿಜೆಪಿ ಜೊತೆ ಜೆಡಿಎಸ್ ಚುನಾವಣಾ ಪೂರ್ವ ಮೈತ್ರಿ ಮಾಡಿಕೊಂಡಿದ್ದು, ವಿಜಯಪುರ ಕ್ಷೇತ್ರವನ್ನೂ ಜೆಡಿಎಸ್ ಪಕ್ಷ ಕೇಳುವುದರಲ್ಲಿ ತಪ್ಪೇನಿದೆ. ಪಕ್ಷದ ವರದಿಷ್ಠರು ಬಿಜೆಪಿ ಪಕ್ಷಕ್ಕೆ ವಿಜಯಪುರ ಕ್ಷೇತ್ರವನ್ನು ಉಳಿಸಿಕೊಳ್ಳಲಿದೆ. ಇದರ ಹೊರತಾಗಿ ಜೆಡಿಎಸ್ ಪಕ್ಷಕ್ಕೆ ಬಿಟ್ಟುಕೊಟ್ಟರೂ ಸಂತೋಷ ಎಂದರು.
ವಿಜಯಪುರ ಕ್ಷೇತ್ರದಿಂದ ಮೂರು ಬಾರಿ, ನೆರೆಯ ಚಿಕ್ಕೋಡಿ ಕ್ಷೇತ್ರದಿಂದ ಸತತ ಮೂರು ಬಾರಿ ಸೇರಿದಂತೆ ಸತತವಾಗಿ ಆರು ಬಾರಿ ಗೆದ್ದಿದ್ದೇನೆ. ಬೇರೆ ಬೇರೆ ಕ್ಷೇತ್ರದಿಂದ ಬೇರೆ ಬೇರೆ ಪಕ್ಷದಿಂದ ಸತತವಾಗಿ ಗೆಲ್ಲುವುದು ಸುಲಭದ ಮಾತಲ್ಲ. ನಾನು ಮಾಡಿರುವ ಅಭಿವೃದ್ಧಿ ಕಾರ್ಯಕ್ರಮಗಳು ನನ್ನನ್ನು ಗೆಲ್ಲಿಸಿಕೊಂಡು ಬರಲು ಪ್ರಮುಖ ಕಾರಣ ಎಂದರು.
ಪ್ರಧಾನಿ ಮೋದಿ ಅವರ ಸಂಪುಟದಲ್ಲಿ ಸಚಿವನಾಗಿ, ಎರಡು ಬಾರಿ ಸಂಸದನಾಗಿ ಮೋದಿ ಅವರ ಕೈಕೆಳಗೆ ಸೇವೆ ಸಲ್ಲಿಸಿರುವುದು ಸಂತೃಪ್ತಿ ನೀಡಿದೆ. ನನ್ನ ಅವಧಿಯಲ್ಲಿ ವಿಜಯಪುರ ಕ್ಷೇತ್ರಕ್ಕೆ ಒಂದು ಲಕ್ಷ ಕೋಟಿ ರೂ. ಅನುದಾನ ತಂದಿದ್ದು, ವಿವಿಧ ಅಭಿವೃದ್ಧಿ ಕೆಲಸ ಮಾಡಿದ್ದೇನೆ. ಹೀಗಾಗಿ ಜನರು ನನಗೆ ನಿರಂತರ ಆಶೀರ್ವದಿಸಿ ಗೆಲ್ಲಿಸುತ್ತಿದ್ದಾರೆ ಎಂದು ವಿವರಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
State Govt ದಿವಾಳಿ ಆಗಿದೆ:ಸರ್ಕಾರದಿಂದಲೇ ಲೂಟಿ ನಡೆಯುತ್ತಿದೆ: ಮಾಜಿ ಸಿಎಂ ಯಡಿಯೂರಪ್ಪ ಆರೋಪ
Muddebihal: ಹೆಂಡತಿಗೆ ಚೂರಿ ಇರಿದು ಪರಾರಿಯಾದ ಗಂಡ
Siddaramaiah ಮುಸ್ಲಿಂ ಮೀಸಲಾತಿ ಬಗ್ಗೆ ಬಿಜೆಪಿಯಿಂದ ಸುಳ್ಳು
Vijaypura:ರಾಹುಲ್ ಗಾಂಧಿ ನಿರ್ಗಮಿಸುವಾಗ ವೇದಿಕೆಗೆ ಬಂದ ಸಿದ್ದರಾಮಯ್ಯ
INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್
MUST WATCH
ಹೊಸ ಸೇರ್ಪಡೆ
Davanagere;ಬೆಣ್ಣೆದೋಸೆಯೊಂದಿಗೆ ವಿಜಯೋತ್ಸವ ಆಚರಿಸಲು ಸಿದ್ಧತೆ ಮಾಡಿಕೊಳ್ಳಿ: ಮೋದಿ
PM Modi ಪ್ರತಿ ಬಾರಿ ಭಯಾನಕ ಸುಳ್ಳು ಹೇಳಿ ಹೋಗ್ತಾರೆ: ಸಿದ್ದರಾಮಯ್ಯ ಕಿಡಿ
ʼಬಂಗಾರಂʼನಲ್ಲಿ ರಕ್ತಸಿಕ್ತ ಅವತಾರ ತಾಳಿದ ಸಮಂತಾ: ಹುಟ್ಟುಹಬ್ಬಕ್ಕೆ ಹೊಸ ಸಿನಿಮಾ ಅನೌನ್ಸ್
Chikkamagaluru:ದತ್ತಪೀಠದಲ್ಲಿ ಪ್ರವಾಸಿ ಬಸ್ ಪಲ್ಟಿಯಾಗಿ 30 ಮಂದಿಗೆ ಗಾಯ
Kangaroo ಮೇಲೆ ಆದಿತ್ಯ ಕಣ್ಣು; ಮೇ.3ಕ್ಕೆ ಸಿನಿಮಾ ಬಿಡುಗಡೆ