ಮುರುಘಾ ಶರಣರಿಗೆ ವಿಜಯಪುರ ಮಠಾಧೀಶರ ನೈತಿಕ ಬೆಂಬಲ


Team Udayavani, Aug 30, 2022, 7:45 PM IST

tdy-21

ವಿಜಯಪುರ: ಅಪ್ರಾಪ್ತ ವಿದ್ಯಾರ್ಥಿನಿಯರ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣದ ಆರೋಪದ ಹಿನ್ನೆಲೆಯಲ್ಲಿ ಚಿತ್ರದುರ್ಗದ ಡಾ.ಮುರುಘಾ ಶರಣರಿಗೆ ವಿಜಯಪುರ ಮಠಾಧೀಶರು ನೈತಿಕ ಬೆಂಬಲ ವ್ಯಕ್ತಪಡಿಸಿದ್ದಾರೆ.

ಮಂಗಳವಾರ ನಗರದಲ್ಲಿ ಜಿಲ್ಲೆಯ ಮಠಾಧೀಶರ ಪರವಾಗಿ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಬಂಥನಾಳದ ಡಾ.ವೃಷಭೇಂದ್ರ ಶ್ರೀಗಳು ಹಾಗೂ ಆಲಮೇಲದ ಚಂದ್ರಶೇಖರ ಶ್ರೀಗಳು, ಚಿತ್ರದುರ್ಗ ಮಠದೊಳಗಿನ ಆರ್ಥಿಕ ಗೊಂದಲಗಳು, ಅಧಿಕಾರದ ಲಾಲಸೆಗಳು ಇಡೀ ಪ್ರಕರಣದಲ್ಲಿ ಕಾಣದ ಕೈಗಳಾಗಿ ಕೆಲಸ ಮಾಡಿರುವುದು ಮೇಲ್ನೋಟಕ್ಕೆ ಕಂದು ಬರುತ್ತಿದೆ ಎಂದು ದೂರಿದರು.

ಹೀಗಾಗಿ ಮುರಾಘಾ ಶರಣ ಮೇಲಿನ ಆರೋಪದಲ್ಲಿ ಪೂರ್ವ ಯೋಜಿತ ಷಡ್ಯಂತ್ರ ಇರುವುದು ಕಂಡು ಬರುತ್ತಿದೆ. ಕಾರಣ ಇಡೀ ಪ್ರಕರಣದ ಸತ್ಯಾಸತ್ಯತೆಯನ್ನು ನಿಷ್ಪಕ್ಷಪಾತ ತನಿಖೆಯ ಮೂಲಕ ಹೊರ ಹಾಕಬೇಕು. ಇದಕ್ಕಾಗಿ ಸರ್ಕಾರ ಪೊಲೀಸ್ ಅಥವಾ ನ್ಯಾಯಾಂಗ ತನಿಖೆ ಮೂಲಕ ನ್ಯಾಯ ಸಮ್ಮತ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು.

ಯಾರಿರೂ ಅನ್ಯಾಯ ಆಗದಂತೆ ತನಿಖೆ ಆಗಬೇಕು. ಶ್ರೀಗಳ ಮೇಲೆ ಬಂದಿರುವ ಗಂಭೀರ ಸ್ವರೂಪದ ಆರೋಪದ ಹಿನ್ನೆಲೆಯಲ್ಲಿ ವಿಜಯಪುರ ಜಿಲ್ಲೆಯ ಮಠಾಧೀಶರು ನೈತಿಕ ಬೆಂಬಲ ವ್ಯಕ್ತಪಡಿಸದ್ದೇವೆ. ಇಂಥ ಸಂಕಷ್ಟದ ಸಂದರ್ಭದಲ್ಲಿ ಶ್ರೀಗಳ ಆತ್ಮಸ್ಥೈರ್ಯ ಕಳೆದುಕೊಳ್ಳಬಾರದು ಎಂದು ಮನವಿ ಮಾಡಿರುವ ಮಠಾಧೀಶರು, ಸದರಿ ಪ್ರಕರಣದಲ್ಲಿ ಸಂತ್ರಸ್ತರು ಎನ್ನಲಾದ ಮಕ್ಕಳ ವಿಷಯದಲ್ಲೂ ಮಠಾಧೀಶರ ಸಾಂತ್ವನವಿದೆ ಎಂದು ಹೇಳಿದರು.

ಇನ್ನು ತಮ್ಮ ವಿರುದ್ಧ ಬಂದಿರುವ ಗಂಭೀರ ಸ್ವರೂಪದ ಆರೋಪದ ಕುರಿತು ಕಾನೂನು ಹೋರಾಟ ನಡೆಸುವ ಕುರಿತು ಧಾರವಾಡದ ಅನುಭವಿ ವಕೀಲರನ್ನು ಭೇಟಿಯಾಗಲು ಮುರುಘಾ ಶರಣರು ಪ್ರಯಾಣಿಸುತ್ತಿದ್ದರು. ಆದರೆ ಅದನ್ನೇ ಶ್ರೀಗಳ ಪಲಾಯನ ಎಂಬಂತೆ ಬಿಂಬಿಸಲಾಗಿದೆ. ಈ ನೆಲದ ಕಾನೂನು ಗೌರವಿಸುತ್ತೇನ ಎಂದಿದ್ದಾರೆ. ಹೀಗಾಗಿ ಮುರುಘಾ ಶ್ರೀಗಳು ಎಲ್ಲಿಯೂ ಓಡಿ ಹೋಗಲು ಯತ್ನಿಸಿಲ್ಲ ಎಂದು ಮಠಾಧೀಶರು ಶ್ರೀಗಳ ಪರವಾಗಿ ಸಮಜಾಯಿಸಿ ನೀಡಿದರು.

ಮಸಬಿನಾಳದ ಡಾ.ಸಿದ್ಧರಾಮ ಶ್ರೀಗಳು, ಸಿಂದಗಿ ಡಾ.ಸಾರಂಗಪ್ರಭು ಶ್ರೀಗಳು, ಚಡಚಣದ ಷಡಕ್ಷರರ ಶ್ರೀಗಳು, ನಗಠಾಣಾದ ಚನ್ನಮಲ್ಲಿಕಾರ್ಜುನ ಶ್ರೀಗಳು, ಯಂಕಂಚಿ ಅಭಿನವ ರುದ್ರಮುನಿ ಶ್ರೀಗಳು, ಸಿಂದಗಿ ರೇವಣಸಿದ್ಧ ಶ್ರೀಗಳು, ಅರ್ಜುಣಗಿಯ ಸಂಗನಬಸವ ಶ್ರೀಗಳು, ತಡವಲಗಾ ರಾಚೋಟೇಶ್ವರ ಶ್ರೀಗಳು, ಅಥರ್ಗಾ ಮುರುಘೇಂದ್ರ ಶ್ರೀಗಳು, ಆಳಂದ ಶಿವಬಸವ ಶ್ರೀಗಳು, ಸಗರಖೇಡ ಪ್ರಭುಲಿಂಗ ಶ್ರೀಗಳು, ದೇವರಹಿಪ್ಪರಗಿಯ ಶಿವಯೋಗಿ ಶ್ರೀಗಳು, ಗೋಲಗೇರಿ ಮುನೀಂದ್ರ ಶ್ರೀಗಳು, ಕುಮಸಗಿ ಶಿವಾನಂದ ಶ್ರೀಗಳು, ಬಸವನಬಾಗೇವಾಡಿ ಸಿದ್ಧಲಿಂಗ ಶ್ರೀಗಳು, ಇಂಚಗೇರಿ ರುದ್ರಮುನಿ ಶ್ರೀಗಳು, ದೇವರಹಿಪ್ಪರಗಿ ಮಡಿವಾಳೇಶ್ವರ ಶ್ರೀಗಳು,  ಮಹಾಂತ ಶ್ರೀಗಳು, ಸಾಮಾಜಿಕ ಕಾರ್ಯಕರ್ತ ಹಾಸಿಂಪೀರ ವಾಲೀಕಾರ ಸೇರಿದಂತೆ ಇತರರು ಉಪಸ್ಥಿತರಿದ್ದರು.

ಟಾಪ್ ನ್ಯೂಸ್

crime (2)

Minor girl ಪ್ರೀತಿಸಿ ಮದುವೆ; ವೈಮನಸ್ಸಾಗಿ ದೂರ: ಕತ್ತು ಸೀಳಿ ಬರ್ಬರ ಹತ್ಯೆ!

1-wweewq

Airstrike; ಹಿಂದಿನಿಂದ ದಾಳಿ ಮಾಡುವುದರಲ್ಲಿ ನನಗೆ ನಂಬಿಕೆ ಇಲ್ಲ: ಮೋದಿ

1-cfcfhh

Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು

1-wweewewq

PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ‌ ಇದ್ದಾರೆ : ಸಿದ್ದರಾಮಯ್ಯ

1———ewqeqwewq

Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು

priyanka vadra

Kalaburagi; ಪ್ರಜ್ವಲ್ ಪರ ಮತಯಾಚನೆ ಮಾಡಿದ್ದ ಮೋದಿ-ಶಾ ಈಗ ಉತ್ತರಿಸಲಿ: ಪ್ರಿಯಾಂಕ ವಾದ್ರಾ

lakshaman-savadi

BJP ಶೆಟ್ಟರ್, ಶ್ರೀರಾಮುಲುಗೆ ಚೊಂಬು ಗ್ಯಾರಂಟಿ : ಲಕ್ಷ್ಮಣ ಸವದಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

lakshaman-savadi

BJP ಶೆಟ್ಟರ್, ಶ್ರೀರಾಮುಲುಗೆ ಚೊಂಬು ಗ್ಯಾರಂಟಿ : ಲಕ್ಷ್ಮಣ ಸವದಿ

1-qewqeqw

Indi ಲಚ್ಯಾಣ ಮಹಾರಥೋತ್ಸವದಲ್ಲಿ ಅವಘಡ: ರಥದ ಗಾಲಿಗೆ ಸಿಲುಕಿ ಇಬ್ಬರು ಮೃತ್ಯು

20

State Govt ದಿವಾಳಿ ಆಗಿದೆ:ಸರ್ಕಾರದಿಂದಲೇ ಲೂಟಿ ನಡೆಯುತ್ತಿದೆ: ಮಾಜಿ ಸಿಎಂ ಯಡಿಯೂರಪ್ಪ ಆರೋಪ

10-muddebihala

Muddebihal: ಹೆಂಡತಿಗೆ ಚೂರಿ ಇರಿದು ಪರಾರಿಯಾದ ಗಂಡ

Siddaramaiah ಮುಸ್ಲಿಂ ಮೀಸಲಾತಿ ಬಗ್ಗೆ ಬಿಜೆಪಿಯಿಂದ ಸುಳ್ಳು

Siddaramaiah ಮುಸ್ಲಿಂ ಮೀಸಲಾತಿ ಬಗ್ಗೆ ಬಿಜೆಪಿಯಿಂದ ಸುಳ್ಳು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

crime (2)

Minor girl ಪ್ರೀತಿಸಿ ಮದುವೆ; ವೈಮನಸ್ಸಾಗಿ ದೂರ: ಕತ್ತು ಸೀಳಿ ಬರ್ಬರ ಹತ್ಯೆ!

1-wweewq

Airstrike; ಹಿಂದಿನಿಂದ ದಾಳಿ ಮಾಡುವುದರಲ್ಲಿ ನನಗೆ ನಂಬಿಕೆ ಇಲ್ಲ: ಮೋದಿ

1-wqeqqweqwe

Not responding; ಶಿವರಾಮ್ ಹೆಬ್ಬಾರ್ ಅವರನ್ನು ಪ್ರಧಾನಿ ಕಾರ್ಯಕ್ರಮಕ್ಕೆ ಕರೆದಿಲ್ಲ: ಬಿಜೆಪಿ

1-cfcfhh

Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು

1-wweewewq

PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ‌ ಇದ್ದಾರೆ : ಸಿದ್ದರಾಮಯ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.