Vijayapura; ವಿಕಸಿತ ಭಾರತದಲ್ಲಾಗಿರುವ ಅಭಿವೃದ್ಧಿ ಏನು: ಕೆಪಿಸಿಸಿ ವಕ್ತಾರ ಗಣಿಹಾರ ಪ್ರಶ್ನೆ
Team Udayavani, Apr 18, 2024, 11:44 AM IST
ವಿಜಯಪುರ: ಬಿಜೆಪಿ ನಾಯಕರು ಪದೇ ಪದೆ ಹೇಳುತ್ತಿರುವ ವಿಕಸಿತ ಭಾರತ ಎಂದರೇನು, ಯಾವ ಅಭಿವೃದ್ಧಿಯಲ್ಲಿ ವಿಕಸಿತವಾಗಿದೆ ಎಂದು ಸ್ಪಷ್ಟಪಡಿಸಬೇಕು ಎಂದು ಕೆಪಿಸಿಸಿ ವಕ್ತಾರ ಎಸ್.ಎಂ.ಪಾಟೀಲ ಗಣಿಹಾರ ಆಗ್ರಹಿಸಿದರು.
ಗುರುವಾರ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶಕ್ಕೆ ಬೆಲೆ ಏರಿಕೆ, ದರ ಕುಸಿತದಿಂದ ರೈತರ ಹೋರಾಟ, ತಮಗೆ ಪುನರ್ವಸತಿ ಕಲ್ಪಿಸದ ನಡೆ ವಿರುದ್ಧ ಕಾಶ್ಮೀರ ಪಂಡಿತರು ಆಕ್ರೋಶಕ್ಕೆ ಗುರಿಯಾಗಿದ್ದಾರೆ ಎಂದು ಟೀಕಿಸಿದರು.
ಸಾಧನೆ ಮುಂದಿಟ್ಟು ಮತ ಕೇಳುವ ಬದಲು ಬಿಜೆಪಿ ಪಕ್ಷ, ಸಂಘ ಪರಿವಾರವನ್ನೆಲ್ಲ ಬದಿಗೊತ್ತಿ ಏಕಚಕ್ರಾಧಿಪತಿ ನರೇಂದ್ರ ಮೋದಿಗೆ ಮತ ಕೊಡಿ ಎನ್ನುವುದು ಸೇರಿದಂತೆ ಇನ್ನಾವುದೇ ಅಭಿವೃದ್ಧಿ ಮಾತನಾಡುತ್ತಿಲ್ಲ. ಒಂದಲ್ಲ ಒಂದು ಅಭಿವೃದ್ಧಿ ಮಾಡಿದ್ದನ್ನು ಹೇಳಿ ಮತ ಕೇಳದ ಬಿಜೆಪಿ ನಾಯಕರು ಕಾಂಗ್ರೆಸ್ ಪರ ಅಲೆಯಿಂದ ಹತಾಶರಾಗಿದ್ದಾರೆ ಎಂದರು.
ಸುಪ್ರೀಂ ಕೋರ್ಟ್ ಆದೇಶದ ಹೊರತಾಗಿಯೂ ಚುನಾವಣಾ ಬಾಂಡ್ ಕುರಿತು ಮಾತನಾಡುತ್ತಿರುವ ಮೋದಿ ಹಾಗೂ ಬಿಜೆಪಿ ನಾಯಕರ ವಿರುದ್ಧ ಚುನಾವಣಾ ಆಯೋಗ ಯಾವ ಕ್ರಮ ಕೈಗೊಳ್ಳುತ್ತಿಲ್ಲ. ಚುನಾವಣಾ ಆಯೋಗ ಹಲ್ಲು ಇಲ್ಲದ ಹಾವು ಎಂಬಂತಾಗಿದೆ ಎಂದು ಟೀಕಿಸಿದರು.
ಚುನಾವಣೆಯಲ್ಲಿ ಮೋದಿ ಎಂಬ ಗಂಡಿದೆ ಎನ್ನುವ ಸಿ.ಟಿ. ರವಿ ಸ್ವಯಂ ಪತ್ನಿಗೆ ಗಂಡನಾಗದ ನರೇಂದ್ರ ಮೋದಿ ಅವರನ್ನು ದೇಶದ ನಾಯಕನೆಂದು ಬಿಂಬಿಸುತ್ತಿದ್ದಾರೆ ಎಂದು ಟೀಕಿಸಿದ ಗಣಿಹಾರ, ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳನ್ನು ಗಂಡನಿಂದ ಕಿತ್ತು ಹೆಂಡತಿಗೆ ಕೊಡುವುದೇ ಕಾಂಗ್ರೆಸ್ ಗ್ಯಾರಂಟಿ ಎನ್ನುವ ರವಿ, ಬಿಜೆಪಿ ದೇಶದ ಸಾರ್ವಜನಿಕ ಆಸ್ತಿಗಳನ್ನು ಕಿತ್ತು ಅಂಬಾನಿ, ಅದಾನಿಯಂಥ ಬಂಡವಾಳಿಗರಿಗೆ ಮಾರಾಟ ಮಾಡಿದ್ದೇ ಮೋದಿ ಗ್ಯಾರಂಟಿ ಎಂದು ತಿರುಗೇಟು ನೀಡಿದರು.
ನಾಲ್ಕು ದಶಕಗಳ ಹಿಂದಿನ ತುರ್ತು ಪರಿಸ್ಥಿತಿ ಬಗ್ಗೆ ಮಾತನಾಡುವ ಬಿಜೆಪಿ ಸರ್ವಾಧಿಕಾರ ಧೋರಣೆಯ ಆಡಳಿತ ನಡೆಸಿದೆ. ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಸೇರಿದಂತೆ ಇತರೆ ನಾಯಕರನ್ನು ಜೈಲಿನಲ್ಲಿ ಇರಿಸಿ ಸರ್ವಾಧಿಕಾರ ಆಡಳಿತ ನಡೆಸುತ್ತಿದ್ದೀರಿ ಎಂದು ಟೀಕಿಸಿದರು.
400 ಸ್ಥಾನ ಗೆಲ್ಲುವ ಸಾಮರ್ಥ್ಯ ಇರುವುದಾಗಿ ಹೇಳುವ ಬಿಜೆಪಿ ಕೇವಲ ಒಂದು-ಎರಡು ಸ್ಥಾನವೂ ಗೆಲ್ಲದ ಪಕ್ಷಗಳ ಜೊತೆ ಮಂಡಿಯೂರಿ ಮೈತ್ರಿಗೆ ಮುಂದಾಗಿರುವುದು ಬಿಜೆಪಿ ಸೋಲಿನ ಪ್ರತೀಕ ಎಂದು ಟೀಕಿಸಿದರು.
ಮಹಾದೇವಿ ಗೋಕಾಕ, ಸುಭಾಶ ಕಾಲೇಬಾಗ, ವಸಂತ ಹೊನಮೋಡೆ, ಬೀರಪ್ಪ ಜುಮನಾಳ ಇತರರು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Vijayapura: ಗೃಹಿಣಿ ಮೇಲೆ ಅತ್ಯಾಚಾರ,ಚಿತ್ರೀಕರಣ: ಮಗನೊಂದಿಗೆ ನಾಪತ್ತೆಯಾದ ಸಂತ್ರಸ್ತೆ
Politics: ಕೇಂದ್ರ ಬರ ಪರಿಹಾರ ನೀಡದಿರಲು ವಿಧಾನಸಭೆ ಚುನವಾಣೆ ಸೋಲಿನ ಸೇಡು: ರಾಮಲಿಂಗಾರೆಡ್ಡಿ
Politics: ಡಿಕೆಶಿ ಹೆಸರು ಹೇಳದಿದ್ದರೆ ಕೆಲವರಿಗೆ ನಿದ್ದೆ ಬರಲ್ಲ : ರಾಮಲಿಂಗಾರೆಡ್ಡಿ
Vijayapura; ಚುನಾವಣೆ ಕರ್ತವ್ಯ ನಿರ್ಲಕ್ಷ: ಇಬ್ಬರು ಶಿಕ್ಷಕರು ಸಸ್ಪೆಂಡ್
Prajwal Case ಬಳಿಕ ಜೆಡಿಎಸ್ 15 ಶಾಸಕರು ಕಾಂಗ್ರೆಸ್ ಸೇರ್ಪಡೆಗೆ ಆಸಕ್ತಿ: ಎಂ.ಬಿ.ಪಾಟೀಲ್
MUST WATCH
ಹೊಸ ಸೇರ್ಪಡೆ
ಮಂಗಳೂರು: ಬಿಸಿಲ ಧಗೆ ಹೆಚ್ಚಿದ್ದರೂ ಅಗ್ನಿ ಆಕಸ್ಮಿಕ ಪ್ರಮಾಣ ಕಡಿಮೆ
ಖಡಕ್ ಬಿಸಿಲು- ಪೊಲೀಸ್ ತಳ್ಳಾಟದಿಂದ ಸಂಸದ ಡಾ.ಜಾಧವ್ ಅಸ್ವಸ್ಥ: ಆಸ್ಪತ್ರೆಗೆ ದಾಖಲು
Prajwal Pendrive Case: ವಿಶ್ವದ ನಾಗರಿಕ ಸಮಾಜವೇ ತಲೆ ತಗ್ಗಿಸುವಂತಹ ಘಟನೆ ಇದು
ಪ್ರಜ್ವಲ್ ರೇವಣ್ಣ ಪ್ರಕರಣದಲ್ಲಿ ಕ್ರಮ ಕೈಗೊಳ್ಳಲು ವಿಳಂಬವಾಗಿಲ್ಲ: ಗೃಹ ಸಚಿವ ಜಿ.ಪರಮೇಶ್ವರ್
ಸಲ್ಮಾನ್ ನಿವಾಸದ ಮೇಲೆ ಗುಂಡಿನ ದಾಳಿ: ಪೊಲೀಸ್ ಕಸ್ಟಡಿಯಲ್ಲಿದ್ದ ಆರೋಪಿ ಆತ್ಮಹತ್ಯೆ – ವರದಿ