ಚಾಮರಾಜನಗರ: ಇಂದು 964 ಮಾದರಿಗಳ ಪರೀಕ್ಷೆ, 17 ಪಾಸಿಟಿವ್ ಪ್ರಕರಣಗಳು ಪತ್ತೆ
Team Udayavani, Jul 17, 2020, 6:05 PM IST
ಚಾಮರಾಜನಗರ: ಜಿಲ್ಲೆಯಲ್ಲಿ ಶುಕ್ರವಾರ 17 ಹೊಸ ಕೋವಿಡ್ ಪ್ರಕರಣಗಳು ಪತ್ತೆಯಾಗಿವೆ. ಇದರಿಂದಾಗಿ ಜಿಲ್ಲೆಯ ಒಟ್ಟು ಸೋಂಕು ಪ್ರಕರಣಗಳ ಸಂಖ್ಯೆ 234ಕ್ಕೆ ಎರಿಕೆಯಾಗಿದೆ.
ಇಂದು ಜಿಲ್ಲೆಯಲ್ಲಿ ಒಟ್ಟು 964 ಗಂಟಲು ದ್ರವ ಮಾದರಿಗಳ ಪರೀಕ್ಷೆ ನಡೆಸಲಾಗಿದ್ದು ಅದರಲ್ಲಿ 17 ಪಾಸಿಟಿವ್ ಎಂದು ದೃಢಪಟ್ಟಿದ್ದಾಗಿವೆ. ಇನ್ನು 270 ಮಾದರಿಗಳ ಫಲಿತಾಂಶ ಬಾಕಿಯಿದೆ.
ಜಿಲ್ಲೆಯಲ್ಲಿ ಒಟ್ಟು 234 ಕೋವಿಡ್ -19ಸೋಂಕು ಪ್ರಕರಣಗಳಾಗಿದ್ದು, ಪ್ರಸ್ತುತ 96 ಸಕ್ರಿಯ ಪ್ರಕರಣಗಳಿವೆ. 6 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಚಾಮರಾಜನಗರ ತಾಲೂಕಿನಲ್ಲಿ 6, ಗುಂಡ್ಲುಪೇಟೆ ತಾಲೂಕಿನಲ್ಲಿ 6, ಕೊಳ್ಳೇಗಾಲ ತಾಲೂಕಿನಲ್ಲಿ 4 ಮತ್ತು ಯಳಂದೂರು ತಾಲೂಕಿನಲ್ಲಿ 1 ಪ್ರಕರಣಗಳು ದೃಢಪಟ್ಟಿವೆ. ಇಂದಿನ ಪ್ರಕರಣಗಳಲ್ಲಿ 6 ಮಂದಿ ಬೆಂಗಳೂರಿನಿಂದ, ಮೂವರು ಮೈಸೂರಿನಿಂದ ಬಂದವರಿದ್ದಾರೆ.
ಚಾಮರಾಜನಗರ ತಾಲೂಕು: 20 ವರ್ಷದ ಯುವಕ, 5ನೇ ವಾರ್ಡ್, ನೂರ್ ಮಸೀದಿ ಸಮೀಪ, ಚಾಮರಾಜನಗರ. 5 ವರ್ಷದ ಬಾಲಕಿ ಸೋಮವಾರಪೇಟೆ. 50 ವರ್ಷದ ಪುರುಷ ಕಣ್ಣೇಗಾಲ, 56 ವರ್ಷದ ಪುರುಷ ಕುದೇರು, 24 ವರ್ಷದ ಯುವಕ ಬಾಗಳಿ. 47 ವರ್ಷದ ಪುರುಷ ಮೂಡಲ ಅಗ್ರಹಾರ.
ಗುಂಡ್ಲುಪೇಟೆ ತಾಲೂಕು: 18 ವರ್ಷದ ಯುವಕ ಮಹದೇವಪ್ರಸಾದ್ ನಗರ. 23 ವರ್ಷದ ಯುವಕ, ಕೆಬ್ಬೇಪುರ. 28 ವರ್ಷದ ಯುವತಿ ನಾಯಕರ ಬೀದಿ, ಗುಂಡ್ಲುಪೇಟೆ. 52 ವರ್ಷದ ಪುರುಷ, ಜಾಕೀರ್ ಹುಸೇನ್ ನಗರ. 25 ವರ್ಷದ ಯುವಕ ಹೂರದಹಳ್ಳಿ, 57 ವರ್ಷದ ಪುರುಷ ಹಳೆ ಆಸ್ಪತ್ರೆ ರಸ್ತೆ, ಗುಂಡ್ಲುಪೇಟೆ.
ಕೊಳ್ಳೇಗಾಲ ತಾಲೂಕು: 39 ವರ್ಷದ ಪುರುಷ, ಗರಡಿ ರಸ್ತೆ, ಕೊಳ್ಳೇಗಾಲ. 35 ವರ್ಷದ ಯುವಕ ಕೊಳ್ಳೇಗಾಲ. 50 ವರ್ಷದ ಮಹಿಳೆ ಕೊಳ್ಳೇಗಾಲ. 62 ವರ್ಷದ ಪುರುಷ, ಚೌಡೇಶ್ವರಿ ದೇವಸ್ಥಾನದ ರಸ್ತೆ ಕೊಳ್ಳೇಗಾಲ.
ಯಳಂದೂರು ತಾಲೂಕು: 22 ವರ್ಷದ ಯುವಕ ಮಾಂಬಳ್ಳಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Chamarajanagara: ಇಂಡಿಗನತ್ತದಲ್ಲಿ ಮರುಮತದಾನ ಆರಂಭ
Chamarajanagar: ಅಪ್ರಾಪ್ತೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದವನಿಗೆ 20 ವರ್ಷ ಜೈಲು
Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !
Chamarajanagar: ಕೊಳ್ಳೇಗಾಲ ಶಾಸಕ ಎ ಆರ್ ಕೃಷ್ಣಮೂರ್ತಿ ಕಾರು ಅಪಘಾತ, ಅಪಾಯದಿಂದ ಪಾರು
Election; ಸೂಲಿಬೆಲೆ ಕಾರ್ಯಕ್ರಮದಲ್ಲಿ ಫ್ಲೈಯಿಂಗ್ ಸ್ಕ್ವಾಡ್ ಅಧಿಕಾರಿಯ ತಳ್ಳಾಡಿದ ಯುವಕರು
MUST WATCH
ಹೊಸ ಸೇರ್ಪಡೆ
Minor girl ಪ್ರೀತಿಸಿ ಮದುವೆ; ವೈಮನಸ್ಸಾಗಿ ದೂರ: ಕತ್ತು ಸೀಳಿ ಬರ್ಬರ ಹತ್ಯೆ!
Airstrike; ಹಿಂದಿನಿಂದ ದಾಳಿ ಮಾಡುವುದರಲ್ಲಿ ನನಗೆ ನಂಬಿಕೆ ಇಲ್ಲ: ಮೋದಿ
Not responding; ಶಿವರಾಮ್ ಹೆಬ್ಬಾರ್ ಅವರನ್ನು ಪ್ರಧಾನಿ ಕಾರ್ಯಕ್ರಮಕ್ಕೆ ಕರೆದಿಲ್ಲ: ಬಿಜೆಪಿ
Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು
PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ ಇದ್ದಾರೆ : ಸಿದ್ದರಾಮಯ್ಯ