ಭರಚುಕ್ಕಿ ಜಲಪಾತಕ್ಕೆ ಪ್ರವಾಸಿಗರ ದಂಡು
Team Udayavani, Aug 17, 2020, 12:56 PM IST
ಕೊಳ್ಳೇಗಾಲ: ತಾಲೂಕಿನ ಶಿವನಸಮುದ್ರದ ಸಮೀಪವಿರುವ ಭರಚುಕ್ಕಿ ಜಲಪಾತ ಹಾಲಿನ ನೊರೆಯಂತೆ ಧುಮ್ಮಿಕ್ಕುತ್ತಿದ್ದು, ಪ್ರವಾಸಿಗರ ದಂಡು ಭಾನುವಾರ ಆಗಮಿಸಿ ರಮಣೀಯವಾಗಿ ಹರಿಯುತ್ತಿರುವುದನ್ನು ನೋಡಿ ಕಣ್ತುಂಬಿಕೊಂಡರು.
ರಾಜ್ಯದ ವಿವಿಧ ಜಿಲ್ಲೆ ಮತ್ತು ನೆರೆಯ ತಮಿಳುನಾಡು, ಕೇರಳ ರಾಜ್ಯಗಳಿಂದಲೂ ಪ್ರವಾಸಿಗರ ದಂಡು ಆಗಮಿಸಿ, ಜಲಪಾತವೀಕ್ಷಿಸಿ ಮೊಬೈಲ್ಗಳಲ್ಲಿ ಫೋಟೊ ತೆಗೆದು, ಸೆಲ್ಪಿ ತೆಗೆದುಕೊಂಡು ಸಂಭ್ರಮಪಟ್ಟರು. ದೇಶದಲ್ಲಿ ಕೋವಿಡ್ ಮಿತಿ ಮೀರಿದ್ದು, ಇದರ ನಡುವೆಯೂ ಪ್ರವಾಸಿಗರು ಸಾಗರೋ ಪಾದಿಯಲ್ಲಿ ಹರಿದು ಬಂದು ಸಾಮಾಜಿಕ ಅಂತರ ಲೆಕ್ಕಿಸದೆ ಜಮಾವಣೆಗೊಂಡು ವೀಕ್ಷಣೆ ಮಾಡಿದರು.
ಸಂದು ಭೇಟಿ: ರಾಜ್ಯ ಸಿಐಡಿ ಪೊಲೀಸ್ ಮಹಾನಿದೇರ್ಶಕ ಸಂದುರವರು, ತಮ್ಮ ಕುಟುಂಬ ಸಮೇತ ಜಲಪಾತಕ್ಕೆ ಆಗಮಿಸಿ ವೀಕ್ಷಣೆ ಬಳಿಕ ಬೆಂಗಳೂರಿನತ್ತ ವಾಪಾಸು ತೆರಳಿದರು.
ವಾಹನ: ಜಲಪಾತ ವೀಕ್ಷಣೆಗೆಂದು ಪ್ರವಾಸಿಗರು ಕಾರು, ಬೈಕ್ ಹಾಗೂ ಇನ್ನಿತರ ವಾಹನಗಳಲ್ಲಿ ಆಗಮಿಸಿದ್ದ ರಿಂದ ಅಲ್ಲಲ್ಲಿ ವಾಹನಗಳ ಸಂಚಾರ ಜಮಾವಣೆಗೊಂಡ ಹಿನ್ನೆಲೆಯಲ್ಲಿ ಪೊಲೀಸರು ಸಂಚಾರಕ್ಕೆ ತೊಂದರೆಯಾಗದಂತೆ ನೋಡಿಕೊಂಡರು. ಸರಾಗ ಸಂಚಾರಕ್ಕೆ ಮಾರ್ಗಗಳನ್ನು ದೊರಕಿಸಿಕೊಟ್ಟರು. ಚೆಂಡು ಹೂ ಜಮೀನಿಗೆ ಲಗ್ಗೆ: ಭರಚುಕ್ಕಿ ಜಲ ಪಾತದ ಸಮೀಪದ ಜಮೀನೊಂದರಲ್ಲಿ ಚೆಂಡು ಹೂ ಬೆಳೆದಿದ್ದನ್ನು ಕಂಡ ಪ್ರವಾಸಿಗರು ಜಮೀನಿನ ಮಧ್ಯದಲ್ಲಿ ನಿಂತು ಸೆಲ್ಫಿ ತೆಗೆದುಕೊಂಡು ಸಂಭ್ರಮಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Chamarajanagara: ಇಂಡಿಗನತ್ತದಲ್ಲಿ ಮರುಮತದಾನ ಆರಂಭ
Chamarajanagar: ಅಪ್ರಾಪ್ತೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದವನಿಗೆ 20 ವರ್ಷ ಜೈಲು
Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !
Chamarajanagar: ಕೊಳ್ಳೇಗಾಲ ಶಾಸಕ ಎ ಆರ್ ಕೃಷ್ಣಮೂರ್ತಿ ಕಾರು ಅಪಘಾತ, ಅಪಾಯದಿಂದ ಪಾರು
Election; ಸೂಲಿಬೆಲೆ ಕಾರ್ಯಕ್ರಮದಲ್ಲಿ ಫ್ಲೈಯಿಂಗ್ ಸ್ಕ್ವಾಡ್ ಅಧಿಕಾರಿಯ ತಳ್ಳಾಡಿದ ಯುವಕರು
MUST WATCH
ಹೊಸ ಸೇರ್ಪಡೆ
Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್
Ramanagara: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು
Sirsi: ಮನವಿ ಕೊಟ್ಟ ವಾರದೊಳಗೇ ಕೆಲಸ ಶುರು… 26 ಗುಂಟೆ ಕೆರೆಗೆ ಜೀರ್ಣೋದ್ದಾರ ಭಾಗ್ಯ
Father; ಚಂದ್ರು ನಿರ್ಮಾಣದ ‘ಫಾದರ್’ ಚಿತ್ರಕ್ಕೆ ಮುಹೂರ್ತ
Thirthahalli: ಇದು ಪಿಕ್ ಪ್ಯಾಕೆಟ್ ಸರ್ಕಾರ… ಕಾಂಗ್ರೆಸ್ ವಿರುದ್ಧ ಕುಮಾರಸ್ವಾಮಿ ಹೇಳಿಕೆ