ಚಾ.ನಗರ ವಿಶ್ವವಿಖ್ಯಾತ ರಾಜ್ಕುಮಾರ್ ರನ್ನು ಕೊಡುಗೆಯಾಗಿ ನೀಡಿದ ಜಿಲ್ಲೆ- ನಟ ಪ್ರೇಮ್
Team Udayavani, Apr 13, 2022, 6:05 PM IST
ಹನೂರು: ಚಾಮರಾಜನಗರ ಜಿಲ್ಲೆ ವಿಶ್ವ ವಿಖ್ಯಾತ ಡಾ||ರಾಜ್ಕುಮಾರ್ ಅವರನ್ನು ಇಡೀ ವಿಶ್ವಕ್ಕೆ ಕೊಡುಎಯಾಗಿ ನೀಡಿದ ಜಿಲ್ಲೆ, ಅದೇ ರೀತಿ ವಿನಯ್ ಅವರನ್ನು ಉತ್ತಮ ರಾಜಕಾರಣಿಯನ್ನಾಗಿ ನೀಡಲಿ ಎಂದು ಚಲನಚಿತ್ರ ನಟ ಲವ್ಲಿ ಸ್ಟಾರ್ ಪ್ರೇಮ್ ಮನವಿ ಮಾಡಿದರು.
ಹನೂರು ಪಟ್ಟಣದ ಲೋಕೋಪಯೋಗಿ ಇಲಾಖಾ ವಸತಿಗೃಹದಲ್ಲಿ ಏರ್ಪಡಿಸಿದ್ದ ಸುದ್ದಿಗೋಷ್ಠಿಯಲ್ಲಿ ಪದವೀಧರರಿಗೆ ವಿಮಾ ಬಾಂಡ್ಗಳನ್ನು ವಿತರಿಸಿ ಮಾತನಾಡಿ ವಿನಯ್ ಅವರು ಓರ್ವ ಸಾಮಾಜಿಕ ಕಳಕಳಿಯುಳ್ಳಿ ಉತ್ತಮ ವ್ಯಕ್ತಿ, ಅವರು ಈಗಾಗಲೇ ಹಲವಾರು ಸಮಾಜಮುಖಿ ಕಾರ್ಯಗಳನ್ನು ಕೈಗೊಂಡಿದ್ದು, ಅವರ ಕೆಲಸಗಳಿಗೆ ಶಕ್ತಿ ತುಂಬಲು ರಾಜಕಾರಣ ಅತ್ಯವಶ್ಯಕವಾಗಿದೆ. ಈ ನಿಟ್ಟಿನಲ್ಲಿ ಅವರನ್ನು ಬೆಂಬಲಿಸಿ ಮುಂಬರುವ ದಕ್ಷಿಣ ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ಅವರನ್ನು ಪ್ರತಿಯೊಬ್ಬರೂ ಬೆಂಬಲಿಸಬೇಕು. ಈ ಮೂಲಕ ರಾಜಕೀಯ ರಂಗಕ್ಕೆ ನವಯುವಕರನ್ನು ತರಬೇಕು ಎಂದು ಮನವಿ ಮಾಡಿದರು.
ಬಳಿಕ ದಕ್ಷಿಣ ಪದವೀಧರ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ವಿನಯ್ ಮಾತನಾಡಿ ಕಳೆದ 2 ವರ್ಷಗಳಿಂದ ನಿರಂತರ ನೋಂದಣಿ ಪ್ರಕ್ರಿಯೆ ಜರುಗುತ್ತಿದ್ದು ಈವರೆಗೂ 48,884 ನೋಂದಣಿ ಮಾಡಿಸಲಾಗಿದೆ. ಈ ಪೈಕಿ 39ಸಾವಿರ ಜನರಿಗೆ ಈಗಾಗಲೇ ವಿಮಾ ಬಾಂಡ್ಗಳ ವಿತರಣೆ ಮುಗಿದಿದ್ದು ಬಾಕಿ ಉಳಿದಿರುವ 2ನೇ ಹಂತದಲ್ಲಿ ವಿಮಾ ಬಾಂಡ್ ನೀಡಲಾಗುತ್ತದೆ. ಅಲ್ಲದೆ ನಾನು ಬದುಕಿರುವರೆಗೂ ವಾರ್ಷಿಕ ರಿನಿವಲ್ ಶುಲ್ಕವನ್ನು ನಾನೇ ಪಾವತಿಸುತ್ತೇನೆ ಎಂದು ಘೋಷಿಸಿದರು.
ಶಾಸಕರನ್ನು ಭೇಟಿಯಾದ ಪ್ರೇಮ್ ಮತ್ತು ವಿನಯ್: ಸುದ್ದಿಗೋಷ್ಠಿಯ ವೇಳೆಗಾಗಲೇ ವಸತಿಗೃಹಕ್ಕೆ ಆಗಮಿಸಿದ್ದ ಶಾಸಕ ನರೇಂದ್ರ ಅವರನ್ನು ನಟ ಪ್ರೇಮ್ ಮತ್ತು ಪಕ್ಷೇತರ ಅಭ್ಯರ್ಥಿ ವಿನಯ್ ಭೇಟಿ ಮಾಡಿ ಬೆಂಬಲಿಸಿ ಆಶೀರ್ವದಿಸುವಂತೆ ಮನವಿ ಮಾಡಿದರು. ಈ ವೇಳೆ ಶಾಸಕ ನರೇಂದ್ರ ಪ್ರತಿಕ್ರಿಯಿಸಿ ನಾನು ಒಂದು ಪಕ್ಷದ ಶಾಸಕನಾಗಿ ನಿಮ್ಮನ್ನು ಬೆಂಬಲಿಸುವುದು ಹೇಗೆ ಸಾಧ್ಯ? ನಾನು ಸಉಳ್ಳು ಭರವಸೆಗಳನ್ನು ನೀಡುವುದಿಲ್ಲ ಎಂದು ತಿಳಿಸಿ, ಮುಂದಿನ ನಿಮ್ಮ ಭವಿಷ್ಯ ಉಜ್ವಲವಾಗಿರಲಿ ಎಂದು ಅರಸಿದರು.
ಈ ಸಂದರ್ಭದಲ್ಲಿ ಮುಖಂಡರಾದ ಪೊನ್ನಾಚಿ ಜಗದೀಶ್, ಕಣ್ಣೂರು ನಾಗೇಂದ್ರ, ಸೋಮು ಇನ್ನಿತರರು ಹಾಜರಿದ್ದರು.
-ವರದಿ: ವಿನೋದ್ ಎನ್ ಗೌಡ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Chamarajanagar: ಅಪ್ರಾಪ್ತೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದವನಿಗೆ 20 ವರ್ಷ ಜೈಲು
Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !
Chamarajanagar: ಕೊಳ್ಳೇಗಾಲ ಶಾಸಕ ಎ ಆರ್ ಕೃಷ್ಣಮೂರ್ತಿ ಕಾರು ಅಪಘಾತ, ಅಪಾಯದಿಂದ ಪಾರು
Election; ಸೂಲಿಬೆಲೆ ಕಾರ್ಯಕ್ರಮದಲ್ಲಿ ಫ್ಲೈಯಿಂಗ್ ಸ್ಕ್ವಾಡ್ ಅಧಿಕಾರಿಯ ತಳ್ಳಾಡಿದ ಯುವಕರು
Bandipur: ನಡು ರಸ್ತೆಯಲ್ಲೇ ಹುಲಿ ದಾಳಿಗೆ ಆನೆ ಮರಿ ಸಾವು!