25ರಂದು ಲೋಕ್ ಅದಾಲತ್: ನ್ಯಾಯಾಧೀಶ ಎಂ.ಆಕರ್ಷ್
Team Udayavani, Jun 4, 2022, 3:54 PM IST
ಯಳಂದೂರು: ಯಳಂದೂರಿನ ಸಿವಿಲ್ ನ್ಯಾಯಾಲಯದಲ್ಲಿ ಜೂ.25ಕ್ಕೆ ಕರ್ನಾಟಕ ಉಚ್ಚನ್ಯಾಯಾಲಯ ಹಾಗೂ ಕರ್ನಾಟಕ ಸ್ಟೇಟ್ ಲೀಗಲ್ ಸರ್ವೀಸ್ ಅಥಾರಿಟಿ ಆದೇಶದನ್ವಯ ಲೋಕ್ ಅದಾಲತ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಸಿವಿಲ್ ನ್ಯಾಯಾಧೀಶ ಎಂ.ಆಕರ್ಷ್ ಮಾಹಿತಿ ನೀಡಿದರು.
ಈ ಬಗ್ಗೆಶುಕ್ರವಾರ ನ್ಯಾಯಾಲಯದ ಆವರಣದ ಕಚೇರಿಯಲ್ಲಿ ನಡೆದಸಭೆಯಲ್ಲಿ ಮಾತನಾಡಿ, ಲೋಕ್ ಅದಾಲತ್ ಎಂದರೆ ಜನತಾ ನ್ಯಾಯಾಲ ಯವಾಗಿದೆ. ಇದರಲ್ಲಿಇಬ್ಬರೂ ಕಕ್ಷಿದಾರರನ್ನು ಕೂರಿಸಿ ವಕೀಲರುಹಾಗೂ ನ್ಯಾಯಾಧೀಶರು ಭಾಗವಹಿಸಿ ರಾಜೀಸಂಧಾನದ ಮೂಲಕ ನ್ಯಾಯ ಬಗೆಹರಿಸಲು ಅವಕಾಶವಿದೆ. ಇದರಿಂದ ಸಂಬಂಧ ಗಳು ಗಟ್ಟಿಯಾಗುತ್ತದೆ.
ಇಲ್ಲಿ ಸೋಲು ಎಂಬುದೇ ಇರುವುದಿಲ್ಲ. ಇಬ್ಬರಿಗೂ ಗೆಲುವು ಲಭಿಸುತ್ತದೆ, ತ್ವರಿತವಾಗಿ ನ್ಯಾಯ ಸಿಗುವುದರಿಂದ ಸಮಯದ ಉಳಿತಾಯವಾಗುತ್ತದೆ. ಹಾಗಾಗಿ ಕೋರ್ಟಿನಲ್ಲಿ ವ್ಯಾಜ್ಯ ಹಾಕಿರುವವರುವರು ಇದರಲಾಭವನ್ನು ಪಡೆದು ಕೊಳ್ಳಬೇಕು ಎಂದರು.
ಸಿವಿಲ್ ಪ್ರಕರಣಗಳಲ್ಲಿ ವಿವಾಹ ವಿಚ್ಛೇದನ ಹಾಗೂ ಅಡಾಪ್ಡೇಷನ್ ಹೊರತು ಪಡಿಸಿ, ಚೆಕ್ಬೌನ್ಸ್, ಮಾನನಷ್ಟ, ಬೈಗುಳ, ಜೀವ ಬೆದರಿಕೆ, ಮಾರಕ ವಲ್ಲದ ಹೊಡೆದಾಟ, ಕಳ್ಳತನ, ಮೋಸದಂತಹ ಎಲ್ಲಾ ಪ್ರಕರಣಗಳನ್ನೂ ಬಗೆಹರಿಸಬಹುದಾಗಿದೆ. ಅಲ್ಲದೆ ಕೆಲವು ಕ್ರಿಮಿನಲ್ ಮೊಕದ್ದಮೆಗಳನ್ನು ಬಗೆಹರಿಸಿಕೊಳ್ಳಲು ಇದರಿಂದ ಸಾಧ್ಯವಾಗಲಿದ್ದು ಎಲ್ಲರೂ ಇದರ ಉಪಯೋಗ ಪಡೆದುಕೊಳ್ಳಬೇಕು. ನಮ್ಮ ನ್ಯಾಯಾಲಯದಲ್ಲಿ ಚೆಕ್ಬೌನ್ಸ್ನ 182ಕ್ಕಿಂತಲೂ ಹೆಚ್ಚಿನ ಪ್ರಕರಣ ಗಳಿದ್ದು ಇದನ್ನು ಬಗೆಹರಿಸಿಕೊಳ್ಳಲು ಸುವರ್ಣ ಅವಕಾಶವಿದ್ದು ಇದರ ಲಾಭ ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.
ಜೂ.10 ರಂದು ಇದಕ್ಕೆ ಪೂರ್ವ ಸಿದ್ಧತೆ ನಡೆಯಲಿದ್ದು, ತೆರೆದ ನ್ಯಾಯಾಲಯದಲ್ಲೇ ನ್ಯಾಯಾಧೀಶರುವಕೀಲರೊಂದಿಗೆ ಕೆಳಕ್ಕೆ ಕುಳಿತುಕೊಂಡು ಲೋಕ್ ಅದಾಲತ್ ನಡೆಸುತ್ತಾರೆ ಅಂದು ಮಧ್ಯಾಹ್ನ 3 ಗಂಟೆಯಿಂದ ಇದು ಆರಂಭಗೊಳ್ಳಲಿದೆ. ಅಲ್ಲದೆ ಜೂ.25 ರತನಕ ಪ್ರತಿದಿನವೂ ಕೋರ್ಟಿನ ಸಮಯ ಮುಗಿದ ಮೇಲೆ ಇದಕ್ಕೆ ಅವಕಾಶವಿದ್ದು ಸಯಮ ಹೊಂದಿಸಿ ಪ್ರಕರಣ ತೀರ್ಮಾನ ಮಾಡಿಕೊಳ್ಳುವವರು ಇದರ ಉಪಯೋಗ ಪಡೆದುಕೊಳ್ಳಬೇಕು ಎಂದು ಕರೆ ನೀಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Chamarajanagar: ಅಪ್ರಾಪ್ತೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದವನಿಗೆ 20 ವರ್ಷ ಜೈಲು
Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !
Chamarajanagar: ಕೊಳ್ಳೇಗಾಲ ಶಾಸಕ ಎ ಆರ್ ಕೃಷ್ಣಮೂರ್ತಿ ಕಾರು ಅಪಘಾತ, ಅಪಾಯದಿಂದ ಪಾರು
Election; ಸೂಲಿಬೆಲೆ ಕಾರ್ಯಕ್ರಮದಲ್ಲಿ ಫ್ಲೈಯಿಂಗ್ ಸ್ಕ್ವಾಡ್ ಅಧಿಕಾರಿಯ ತಳ್ಳಾಡಿದ ಯುವಕರು
Bandipur: ನಡು ರಸ್ತೆಯಲ್ಲೇ ಹುಲಿ ದಾಳಿಗೆ ಆನೆ ಮರಿ ಸಾವು!
MUST WATCH
ಹೊಸ ಸೇರ್ಪಡೆ
Indi ಲಚ್ಯಾಣ ಮಹಾರಥೋತ್ಸವದಲ್ಲಿ ಅವಘಡ: ರಥದ ಗಾಲಿಗೆ ಸಿಲುಕಿ ಇಬ್ಬರು ಮೃತ್ಯು
RCB ಕಮಾಲ್; ವಿಲ್ ಜಾಕ್ಸ್ ರೋಮಾಂಚನಕಾರಿ ಶತಕ: ಗುಜರಾತ್ ವಿರುದ್ಧ ಅತ್ಯಮೋಘ ಜಯ
Congress ಸರ್ಕಾರದಿಂದ ‘ಧರ್ಮ; ಸಂಕಷ್ಟ ನಿವಾರಣೆ: ಪ್ರಿಯಾಂಕ್ ಖರ್ಗೆ
China ದಿಂದ 10 ಲಕ್ಷ ಎಕರೆ ಅತಿಕ್ರಮವಾಗಿದೆ: ಮೋದಿ ವಿರುದ್ಧ ಪ್ರಕಾಶ್ ರಾಜ್ ವಾಗ್ದಾಳಿ
Davanagere;ಬೆಣ್ಣೆದೋಸೆಯೊಂದಿಗೆ ವಿಜಯೋತ್ಸವ ಆಚರಿಸಲು ಸಿದ್ಧತೆ ಮಾಡಿಕೊಳ್ಳಿ: ಮೋದಿ