ಲೂಟಿ ಮಾಡಿರುವ ಹಣದಲ್ಲಿ ಕಾಂಗ್ರೆಸ್ ಪಾದಯಾತ್ರೆ ಮಾಡುತ್ತಿದೆ: ಸಂಸದ ವಿ.ಶ್ರೀನಿವಾಸಪ್ರಸಾದ್
Team Udayavani, Mar 1, 2022, 12:58 PM IST
ಚಾಮರಾಜನಗರ: ಕಾಂಗ್ರೆಸ್ ಪಕ್ಷ ಮೇಕೆದಾಟು ಪಾದಯಾತ್ರೆ ನಡೆಸುತ್ತಿರುವುದು ಕಾನೂನು ಬಾಹಿರವಾಗಿ ಲೂಟಿ ಮಾಡಿರುವ ಹಣದ ಕೂರುಪಿ ಪ್ರದರ್ಶನ ಎಂದು ಸಂಸದ ವಿ.ಶ್ರೀನಿವಾಸಪ್ರಸಾದ್ ಕಿಡಿಕಾರಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾವುದೋ ವ್ಯಕ್ತಿಯ ಪ್ರಚಾರಕ್ಕೆ ಮಾಡುತ್ತಿರುವ ಕಾರ್ಯಕ್ರಮ ಇದು. ಪಾದಯಾತ್ರೆಗೆ ಹಣ ಎಲ್ಲಿಂದ ಬರುತ್ತದೆ?ಬರುವವರೆಲ್ಲರಿಗೂ ಉಚಿತ ಪೆಟ್ರೋಲ್, ಊಟ, ತಿಂಡಿ,ದುಡ್ಡು, ಬಿರಿಯಾನಿ ಎಲ್ಲಿಂದ ಕೊಡ್ತಿದಾರೆ? ಇದನ್ನು ಪಾದಯಾತ್ರೆ ಎಂದು ಕರೆಯುತ್ತಾರೆಯೇ? ಎಂದು ವ್ಯಂಗ್ಯವಾಡಿದರು.
ಇದು ಪಾದಯಾತ್ರೆ ಮಾಡುವ ಸಮಯವಲ್ಲ. ಕಾಂಗ್ರೆಸ್ ಪಾದಯಾತ್ರೆ ಒಂದು ಅಪಹಾಸ್ಯ.ಮೇಕೆದಾಟು ಯೋಜನೆಯ ವಿಚಾರಣೆ ಸುಪ್ರೀಂ ಕೋರ್ಟ್ ಮುಂದಿದೆ. ಮುಖ್ಯಮಂತ್ರಿಗಳ ನೇತೃತ್ವದಲ್ಲಿ ಸರ್ವ ಪಕ್ಷ ನಿಯೋಗ ಕೇಂದ್ರಕ್ಕೆ ಹೋಗಲಿ ಎಂದರು. ಕಾಂಗ್ರೆಸ್ ನವರು ಜನಗಳ ಮುಂದೆ ಬೆತ್ತಲಾಗಿದ್ದಾರೆ. ಬೀದಿಯಲ್ಲಿ ಅರಚಾಡಿ,ಕಿರುಚಾಡಿಕೊಂಡು ಪಾದಯಾತ್ರೆ ಮಾಡಿದರೆ ಅದಕ್ಕೆ ಅರ್ಥ ಇದೆಯೇ? ಎಂದು ಪ್ರಶ್ನಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Chamarajanagar: ಅಪ್ರಾಪ್ತೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದವನಿಗೆ 20 ವರ್ಷ ಜೈಲು
Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !
Chamarajanagar: ಕೊಳ್ಳೇಗಾಲ ಶಾಸಕ ಎ ಆರ್ ಕೃಷ್ಣಮೂರ್ತಿ ಕಾರು ಅಪಘಾತ, ಅಪಾಯದಿಂದ ಪಾರು
Election; ಸೂಲಿಬೆಲೆ ಕಾರ್ಯಕ್ರಮದಲ್ಲಿ ಫ್ಲೈಯಿಂಗ್ ಸ್ಕ್ವಾಡ್ ಅಧಿಕಾರಿಯ ತಳ್ಳಾಡಿದ ಯುವಕರು
Bandipur: ನಡು ರಸ್ತೆಯಲ್ಲೇ ಹುಲಿ ದಾಳಿಗೆ ಆನೆ ಮರಿ ಸಾವು!