Gundlupet ಕಾಡು ಬೆಕ್ಕು, ಮೊಲಗಳ ಬೇಟೆ: ಇಬ್ಬರ ಬಂಧನ
Team Udayavani, Oct 23, 2023, 8:30 PM IST
ಗುಂಡ್ಲುಪೇಟೆ(ಚಾಮರಾಜನಗರ): ಮೂರು ಕಾಡು ಬೆಕ್ಕುಗಳನ್ನು ಕೊಂದು ಹಾಗೂ ನಾಲ್ಕು ಜೀವಂತ ಮೊಲಗಳನ್ನು ಬೇಟೆಯಾಡಿ ಅಕ್ರಮವಾಗಿ ಸಾಗಣೆ ಮಾಡುತ್ತಿದ್ದ ವೇಳೆ ಅರಣ್ಯಾಧಿಕಾರಿಗಳು ದಾಳಿ ನಡೆಸಿ ಇಬ್ಬರು ವ್ಯಕ್ತಿಗಳನ್ನು ಬಂಧಿಸಿರುವ ಘಟನೆ ಗುಂಡ್ಲುಪೇಟೆ ಬಫರ್ ಜೋನ್ ವಲಯ ವ್ಯಾಪ್ತಿಯ ಹಕ್ಕಲಾಪುರ ಗ್ರಾಮದ ಕೆರೆಯಂಗಳದಲ್ಲಿ ನಡೆದಿದೆ.
ಬನ್ನಿತಾಳಪುರ ಗ್ರಾಮದ ಮಹದೇವಶೆಟ್ಟಿ(50), ಮಾದಶೆಟ್ಟಿ(50) ಬಂಧಿತ ಆರೋಪಿಗಳು. ಉಳಿದಂತೆ ಗೋಪಾಲಯ್ಯ(35), ಕರಿಶೆಟ್ಟಿ(43), ಮಹೇಶ(45) ಮೂವರು ನಾಪತ್ತೆಯಾಗಿದ್ದಾರೆ.
ಬನ್ನಿತಾಳಪುರ ಗ್ರಾಮದಿಂದ ಹಕ್ಕಲಾಪುರ ಗ್ರಾಮಕ್ಕೆ ಹೋಗುವ ಮಣ್ಣಿನ ರಸ್ತೆಯಲ್ಲಿ ಮೂರು ಕಾಡು ಬೆಕ್ಕುಗಳನ್ನು ಕೊಂದು ಹಾಗೂ ನಾಲ್ಕು ಜೀವಂತ ಮೊಲಗಳನ್ನು ಬೇಟೆಯಾಡಿ ಅಕ್ರಮವಾಗಿ ಸಾಗಣೆ ಮಾಡುತ್ತಿದ್ದ ಮಾಹಿತಿ ಆಧರಿಸಿ ಅರಣ್ಯ ಸಂರಕ್ಷಣಾಧಿಕಾರಿ ಡಾ.ಪಿ.ರಮೇಶ್ ಕುಮಾರ್ ಹಾಗೂ ಎಸಿಎಫ್ ನವೀನ್ ಮಾರ್ಗದರ್ಶನದಲ್ಲಿ ದಾಳಿ ನಡೆಸಿ ಅರಣ್ಯ ಇಲಾಖೆ ಅಧಿಕಾರಿಗಳು ಮಾಲು ಸಮೇತ ಇಬ್ಬರನ್ನು ಬಂಧಿಸಿದ್ದಾರೆ. ಉಳಿದ ಮೂವರು ಆರೋಪಿಗಳು ಪರಾರಿಯಾಗಿದ್ದಾರೆ. ಇವರ ಬಂಧನಕ್ಕೆ ಬಲೆ ಬೀಸಲಾಗಿದೆ.
ಕಾರ್ಯಾಚರಣೆಯಲ್ಲಿ ಪ್ರಭಾರ ವಲಯ ಅರಣ್ಯಾಧಿಕಾರಿ ನರೇಶ್, ನವೀನ್ ಕುಮಾರ್, ಸಿಬ್ಬಂದಿ ವರ್ಗದವರಾದ ಕಿರಣ್ ಕುಮಾರ್, ರಮೇಶ್ ಮಠಪತಿ, ಕುಮಾರ್, ಕರಿಗೌಡ, ಬಸವೇಗೌಡ, ಗಸ್ತು ವನಪಾಲಕ ಶಂಕರಪ್ಪ, ಶ್ರೀಕಾಂತ್, ರಮೇಶ, ಸುರೇಶ ಸೇರಿದಂತೆ ಇತರರು ಹಾಜರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Chamarajanagara: ಇಂಡಿಗನತ್ತದಲ್ಲಿ ಮರುಮತದಾನ ಆರಂಭ
Chamarajanagar: ಅಪ್ರಾಪ್ತೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದವನಿಗೆ 20 ವರ್ಷ ಜೈಲು
Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !
Chamarajanagar: ಕೊಳ್ಳೇಗಾಲ ಶಾಸಕ ಎ ಆರ್ ಕೃಷ್ಣಮೂರ್ತಿ ಕಾರು ಅಪಘಾತ, ಅಪಾಯದಿಂದ ಪಾರು
Election; ಸೂಲಿಬೆಲೆ ಕಾರ್ಯಕ್ರಮದಲ್ಲಿ ಫ್ಲೈಯಿಂಗ್ ಸ್ಕ್ವಾಡ್ ಅಧಿಕಾರಿಯ ತಳ್ಳಾಡಿದ ಯುವಕರು