ಫ್ಲೋರೋಸಿಸ್ ಪುನರ್ವಸತಿ ಕೇಂದ್ರಕ್ಕೆ ಚಾಲನೆ
ಬಾಗೇಪಲ್ಲಿ, ಗುಡಿಬಂಡೆ ತಾಲೂಕಲ್ಲಿ ಹೆಚ್ಚು ಜನ ಫ್ಲೋರೋಸಿಸ್ಗೆ ತುತ್ತು ಜಿಪಂ ಸಿಇಒ ಚಾಲನೆ
Team Udayavani, Sep 28, 2019, 4:57 PM IST
ಚಿಕ್ಕಬಳ್ಳಾಪುರ: ರಾಜ್ಯದಲ್ಲಿ ಅತ್ಯಂತ ಹಿಂದುಳಿದ ತಾಲೂಕಾಗಿರುವ ಬಾಗೇಪಲ್ಲಿಯಲ್ಲಿ ಇತ್ತೀಚೆಗೆ ಕುಡಿಯುವ ನೀರಿನಲ್ಲಿ ಫ್ಲೋರೋಸಿಸ್ (ಲವಣಾಂಶ) ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ರಾಜ್ಯದಲ್ಲಿ ಮೊಟ್ಟ ಮೊದಲಿಗೆ ಬಾಗೇಪಲ್ಲಿ ಪಟ್ಟಣದಲ್ಲಿ ಫ್ಲೋರೋಸಿಸ್ ಪುನರ್ವಸತಿ ಕೇಂದ್ರ ಆರಂಭಿಸಿದೆ.
ಫ್ಲೋರೋಸಿಸ್ ನಿಯಂತ್ರಣ ಹಾಗೂ ತಡೆಗಟ್ಟುವಿಕೆ ಕಾರ್ಯಕ್ರಮದಡಿಯಲ್ಲಿ ರಾಜ್ಯದಲ್ಲೇ ಮೊಟ್ಟ ಮೊದಲ ಆರಂಭಿಸಿರುವ ಫ್ಲೋರೋಸಿಸ್ ಪುರ್ನವಸತಿ ಕೇಂದ್ರಕ್ಕೆ ಜಿಪಂ ಸಿಇಒ ಬಿ.ಫೌಜಿಯಾ ತರನ್ನುಮ್ ಚಾಲನೆ ನೀಡಿ ಕೇಂದ್ರವನ್ನು ಸದ್ಬಳಕೆ ಮಾಡಿಕೊಳ್ಳುವಂತೆ ರೋಗಪೀಡಿತರಲ್ಲಿ ಮನವಿ ಮಾಡಿದರು.
42 ಮೂಳೆ ಫ್ಲೋರೋಸಿಸ್ ಪ್ರಕರಣ: ಜಿಪಂ ಸಿಇಒ ಬಿ.ಫೌಜಿಯಾ ತರುನ್ನುಮ್, ಬಾಗೇಪಲ್ಲಿ ತಾಲೂಕಿನಲ್ಲಿ ಹೆಚ್ಚು ಫ್ಲೋರೋಸಿಸ್ ಪೀಡೀತ ರೋಗಿ ಗಳಿದ್ದು, ರಾಷ್ಟ್ರೀಯ ಫ್ಲೋರೋಸಿಸ್ ನಿಯಂತ್ರಣ ಹಾಗೂ ತಡೆಗಟ್ಟುವಿಕೆ ಕಾರ್ಯ ಕ್ರಮ ದಲ್ಲಿ ಇಲ್ಲಿಯವರೆಗೂ ಒಟ್ಟು 42 ಮೂಳೆ ಫ್ಲೋರೋಸಿಸ್ ಪ್ರಕರಣಗಳು ಖಚಿತಪಡಿಸಲಾಗಿದೆ.
ಬಾಗೇಪಲ್ಲಿ ಹಾಗೂ ಗುಡಿಬಂಡೆ ತಲಾ 19 ಹಾಗೂ 13 ಪ್ರಕರಣಗಳು ದಾಖಲಿಸಲಾಗಿದೆ. ಫ್ಲೋರೋ ಸಿಸ್ ಪ್ರೇರಿತ ಸಂಧಿ ನೋವಿನ ಪ್ರಕರಣಗಳು ಹೆಚ್ಚಿದ್ದು, ಈ ಎಲ್ಲಾ ಪ್ರಕರಣಗಳ ಜೀವನದ ಗುಣಮಟ್ಟಕ್ಕೆ ಪರಿಣಾಮ ಬೀಳುತ್ತವೆ.
ಆದ್ದರಿಂದ ರಾಷ್ಟ್ರೀಯ ಫ್ಲೋರೋಸಿಸ್ ಕಾರ್ಯಕ್ರಮದಲ್ಲಿ ಈಗಾಗಲೇ ದೃಢಪಟ್ಟ ಎಲ್ಲಾ ಫ್ಲೋರೋಸಿಸ್ ಪ್ರಕರಣಗಳಿಗೆ ಚಲನಶೀಲ ಪರಿಕರಗಳನ್ನು
ವಿತರಿಸಲಾಗಿದೆ ಎಂದರು.
ಪುನರ್ವಸತಿ ಕೇಂದ್ರದ ಉಪಯೋಗಗಳನ್ನು ಈ ಭಾಗದ ಜನರು ಸದುಪಯೋಗ ಪಡಿಸಿಕೊಳ್ಳಬೇಕು. ಫ್ಲೋರೋಸಿಸ್ ಒಂದು ಸಾರ್ವಜನಿಕ ಆರೋಗ್ಯ ಸಮಸ್ಯೆ ಯಾಗಿದ್ದು, ಕೆಲವು ಸ್ಥಳಗಳಲ್ಲಿ ಗಂಭೀರವಾದ ಪರಿಣಾಮ ಬೀರುತ್ತದೆ.
ದಿನನಿತ್ಯ ಕುಡಿಯುವ ನೀರಿನಲ್ಲಿ ಅಗತ್ಯಕ್ಕಿಂತ ಹೆಚ್ಚು ಫ್ಲೋರೋಸಿಸ್ ಅಂಶ ಅಂದರೆ ಒಂದು ಪಿ.ಪಿ.ಎಂ (10 ಲಕ್ಷದಲ್ಲಿ ಒಂದು ಭಾಗ)ಗಿಂತಲೂ ಅಧಿಕವಾಗಿದ್ದರೆ ಫ್ಲೋರೋಸಿಸ್ ಕಾಯಿಲೆ ಉಂಟಾಗುತ್ತದೆ.
ಫ್ಲೋರೋಸಿಸ್ ರೋಗದಲ್ಲಿ ದಂತ, ಮೂಳೆಗಳ, ದೇಹದ ಇತರೆ ಭಾಗಗಳ ಫ್ಲೋರೋಸಿಸ್ ಎಂಬ ಮೂರು ವಿಧಾನಗಳಲ್ಲಿ ಬರುತ್ತದೆ. ದೃಢಪಟ್ಟ ಮೂಳೆ ಪ್ರಕರಣಗಳ ಹಾಗೂ ಸಂಧಿ ನೋವಿನ ಪ್ರಕರಣಗಳ ಜೀವನ ಗುಣಮಟ್ಟ ಹೆಚ್ಚಿಸಲು ಹಾಗೂ ರೋಗಪ್ರೇರಿತ ಅಂಗವೈಕಲ್ಯವನ್ನು ಕಡಿಮೆ ಮಾಡುವ ಸಲುವಾಗಿ ರಾಜ್ಯದಲ್ಲೇ ಮೊದಲ ಫ್ಲೋರೋಸಿಸ್ ಪುನರ್ವಸತಿ ಕೇಂದ್ರ ಸ್ಥಾಪಿಸಲಾಗಿದೆ ಎಂದರು.
ಮೂರು ಹಂತ: ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಯೋಗೇಶ್ಗೌಡ ಮಾತನಾಡಿ, ಮೂಳೆಗಳ ಫ್ಲೋರೋಸಿಸ್ ಚಿಕ್ಕವರು
ಹಾಗೂ ವಯಸ್ಕರಲ್ಲಿ ಕಂಡು ಬರುತ್ತದೆ. ಮೊದಲನೇ ಹಂತದಲ್ಲಿ ಮೂಳೆಗಳ ನೋವು, ಕೀಲುಗಳ ಬಿಗಿತ, ಎರಡನೇ ಹಂತದಲ್ಲಿ ನಾಶಕಾರಿ ಫ್ಲೋರೋಸಿಸ್ ದೀರ್ಘಕಾಲದ ಕೀಲು ನೋವು, ನರಗಳ ಎಳೆತ, ಉದ್ದ ಮೂಳೆಗಳ ನೋವು, ಮೂರನೇ ಹಂತದಲ್ಲಿ ಸುಕ್ಕುಗಟ್ಟಿಸುವ ಫ್ಲೋರೋಸಿಸ್ ಬರುತ್ತದೆ.
ಇದು ಕತ್ತಿನ ಮೂಳೆ, ಬೆನ್ನಿನ ಮೂಳೆ, ಎಲುಬುಗಳ ಬಾಗುವಿಕೆ, ಸ್ನಾಯುಗಳ ಎಳೆತ ಹಾಗೂ ಸೆಳೆತ ಮತ್ತು ನರಗಳ ತೊಂದರೆ, ಬೆನ್ನು ಮೂಳೆಗಳ ಸಂಕುಚಿತವಾಗುತ್ತವೆ. ಈ ಹಂತಗಳಲ್ಲಿ ಡಯಟ್ ಎಡಿಟಿಂಗ್ ಹಾಗೂ ಕೌನ್ಸಿಲಿಂಗ್ ಸಮೇತ ಪೂರಕ ಮಾತ್ರೆಗಳಾದ ಕ್ಯಾಲ್ಸಿಯಂ, ವಿಟಮಿನ್ ಡಿ, ವಿಟಮಿನ್ ಸಿ ಜೊತೆಗೆ ಫಿಜಿಯೋಥೆರಪಿ ಚಿಕಿತ್ಸೆ ನೀಡುವುದರಿಂದ ಫ್ಲೋರೋಸಿಸ್ ಪೀಡಿತ ರೋಗಿಯ ಜೀವನ ಗುಣಮಟ್ಟ ಹೆಚ್ಚಿಸಲು ಸಹಕಾರಿಯಾಗುತ್ತದೆ ಹಾಗೂ ಫ್ಲೋರೋಸಿಸ್ ರೋಗ ಪ್ರೇರಿತ ಅಂಗಕಲತೆಯನ್ನು ತಡೆಗಟ್ಟಬಹುದು ಎಂದರು.
ಈ ಸಂದರ್ಭದಲ್ಲಿ ಸ್ಥಳೀಯ ತಾಪಂ ಇಒ ಶ್ರೀನಿವಾಸ್ ಸೇರಿದಂತೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ
Lok Sabha Election 2024; ದಕ್ಷಿಣ ಕನ್ನಡ: ಈಗ “ಮತ ಗಣಿತ’ ಲೆಕ್ಕಾಚಾರ!
Puttur ಕೆಲಸದ ಆಮಿಷವೊಡ್ಡಿ ಅತ್ಯಾಚಾರ ಯತ್ನ ಪ್ರಕರಣ: ಪ್ರಮುಖ ಆರೋಪಿಗೆ ಜಾಮೀನು
Madikeri ಕೊಡವ ಹಾಕಿ ಕೂಟಕ್ಕೆ ಗಿನ್ನೆಸ್ ಗರಿ
D.K,Udupi ಸಿಎನ್ಜಿ ಇಂಧನ ಕೊರತೆ: ಬಂಕ್ಗಳ ಮುಂದೆ ನಿತ್ಯ ಕಿ.ಮೀ.ಗಟ್ಟಲೆ ವಾಹನಗಳ ಸಾಲು
MUST WATCH
ಹೊಸ ಸೇರ್ಪಡೆ
T20 ವಿಶ್ವಕಪ್ ಗೆ ಬಲಿಷ್ಠ ತಂಡವನ್ನು ಪ್ರಕಟಿಸಿದ ನ್ಯೂಜಿಲೆಂಡ್; ಮರಳಿದ ಸ್ಫೋಟಕ ಆಟಗಾರ
Tragedy: ಛತ್ತೀಸ್ಗಢದಲ್ಲಿ ಭೀಕರ ಅಪಘಾತ… ಮಕ್ಕಳು ಸೇರಿ 8 ಮಂದಿ ಮೃತ್ಯು, 22 ಮಂದಿಗೆ ಗಾಯ
MP Srinivas Prasad: ಚಾಮರಾಜನಗರ ಸಂಸದ ಶ್ರೀನಿವಾಸ್ ಪ್ರಸಾದ್ ನಿಧನ
Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ
HD Revanna, ಪ್ರಜ್ವಲ್ ಮೇಲೆ ಲೈಂಗಿಕ ದೌರ್ಜನ್ಯ ಕೇಸ್!