![CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್ಗೆ ವಿವರಣೆ?](https://www.udayavani.com/wp-content/uploads/2024/07/cm-7-415x252.jpg)
ಸುಣ್ಣಬಣ್ಣ ಭಾಗ್ಯ ಕಂಡ ಮೇಲ್ಮಟ್ಟದ ಟ್ಯಾಂಕ್
Team Udayavani, Sep 30, 2020, 2:36 PM IST
![ಸುಣ್ಣಬಣ್ಣ ಭಾಗ್ಯ ಕಂಡ ಮೇಲ್ಮಟ್ಟದ ಟ್ಯಾಂಕ್](https://www.udayavani.com/wp-content/uploads/2020/09/CB-TDY-2-15-620x372.jpg)
ಚಿಕ್ಕಬಳ್ಳಾಪುರ: ಶಿಡ್ಲಘಟ್ಟ ನಗರದಲ್ಲಿ ಸುಮಾರು 30 ವರ್ಷಗಳ ಹಿಂದೆ ಕುಡಿಯಲು ನೀರು ಸಂಗ್ರಹಿಸಲು ನಿರ್ಮಿಸಿರುವ 10 ಲಕ್ಷ ಲೀ. ಸಾಮರ್ಥ್ಯದ ಮೇಲ್ಮಟ್ಟದ ಟ್ಯಾಂಕ್ಗೆ ಸುಣ್ಣಬಣ್ಣದ ಭಾಗ್ಯಕೂಡಿ ಬಂದಿದೆ.
ಶಿಡ್ಲಘಟ್ಟ ನಗರದ 17 ವಾರ್ಡ್ಗಳಿಗೆ ಕುಡಿಯುವ ನೀರು ಪೂರೈಕೆ ಮಾಡಲು ಮಾಜಿ ಸಿಎಂ ದಿ.ಎಸ್.ಆರ್.ಬೊಮ್ಮಾಯಿ ಅವರ ಅಧಿಕಾರಾವಧಿಯಲ್ಲಿ ನಿರ್ಮಿಸಿರುವ ಮೇಲ್ಮಟ್ಟದ ನೀರಿನ ಟ್ಯಾಂಕ್ ಇತ್ತೀಚಿಗೆ ಸೋರಿಕೆಯಾಗುತಿತ್ತು. ಜೊತೆಗೆ ಸುಣ್ಣಬಣ್ಣವಿಲ್ಲದೇ ವಿಕಾರವಾಗಿ ಕಾಣುತ್ತಿದ್ದ ಬೃಹತ್ ಗಾತ್ರದ ಮೇಲ್ಮಟ್ಟದ ನೀರಿನ ಟ್ಯಾಂಕ್ ನ್ನು ಸುಣ್ಣಬಣ್ಣದಿಂದ ಕಂಗೊಳಿಸಿ ಹೊಸ ರೂಪ ನೀಡಲಾಗಿದೆ.
ಶಿಡ್ಲಘಟ್ಟ ನಗರದಲ್ಲಿ 1, 2, 3ನೇ ಕಾರ್ಮಿಕ ನಗರ,1,2ನೇ ಟಿಎಂಸಿ ಬಡಾವಣೆ, ಆಝಾದ್ ನಗರ, ಗಾಂಧಿನಗರ, ಸಂತೋಷನಗರ, ರಹಮತ್ ನಗರ ಸೇರಿದಂತೆ 17 ವಾರ್ಡ್ಗಳಿಗೆ ಕುಡಿಯುವ ನೀರು ಪೂರೈಕೆ ಮಾಡಲು ಮೇಲ್ಮ ಟ್ಟದ ಟ್ಯಾಂಕ್ ಆವರಣದಲ್ಲಿ ನೀರಿನ ಕಾರಂಜಿ ನಿರ್ಮಿಸಲಾಗಿತ್ತು. ಆದರೆ ಕಾಲಕ್ರಮೇಣ ನಿರ್ವಹಣೆ ಕೊರತೆಯಿಂದ ನೀರಿನ ಕಾರಂಜಿ ಹಾಳಾಗಿ ಇದೀಗ ಕೇವಲ ಮೇಲ್ಮಟ್ಟದ ಟ್ಯಾಂಕ್ ಉಳಿದುಕೊಂಡಿದೆ.
ಟ್ಯಾಂಕ್ಗೆ ಹಲವು ವರ್ಷಗಳ ಬಳಿಕ ಅಭಿವೃದ್ಧಿ ಭ್ಯಾಗ್ಯಕಂಡು ಬಂದಿದೆ. ಆದರೆ ಟ್ಯಾಂಕಿನ ಕೆಳಗೆ ನಿರುಪಯುಕ್ತ ಗಿಡಗಂಟಿಗಳು ಬೆಳೆದಿದ್ದು, ವಿಷಜಂತುಗಳಿಗೆ ಆಶ್ರಯತಾಣವಾಗಿದೆ ಪರಿವರ್ತನೆಗೊಂಡಿದೆ. ಅಕ್ರಮ ಚಟುವಟಿಕೆ ತಾಣ: ಮೇಲ್ಮಟ್ಟದ ಟ್ಯಾಂಕ್ಗೆ ಗೇಟ್ ಅಳವಡಿಸಲಾಗಿದೆ. ಅದಕ್ಕೆ ಬೀಗ ಇಲ್ಲದೇ ಪುಂಡಪೋಕರಿಗೆ ಬೀಡಿ- ಸಿಗರೇಟ್, ಪಾನ್ಪರಾಗ್ ಗುಟ್ಕಾ ಸೇರಿದಂತೆ ಮದ್ಯ ಸೇವನೆಗೆ ಅಡ್ಡೆ ಮಾಡಿಕೊಂಡಿದ್ದು, ನಗರಸಭೆ ಅಧಿಕಾರಿಗಳು ಗಿಡಗಂಟಿಗಳನ್ನು ಸ್ವಚ್ಛಗೊಳಿಸಿ ಪುಂಡಪೋಕರಿಗಳು ಟ್ಯಾಂಕ್ ಒಳಗೆ ಪ್ರವೇಶಿಸದಂತೆ ಕಠಿಣ ಕ್ರಮ ಜರುಗಿಸಬೇಕಾಗಿದೆ.
ಶಿಡ್ಲಘಟ್ಟ ನಗರದ 1ನೇ ಟಿಎಂಸಿ ಬಡಾವಣೆ,ಕೋಟೆ ವೃತ್ತ ಹಾಗೂ ಹೆಲ್ತ್ ಕಾಲೋನಿಯಲ್ಲಿ ನಿರ್ಮಿಸಿರುವ ಮೇಲ್ಮಟ್ಟದ ನೀರಿನ ಟ್ಯಾಂಕ್ಗಳನ್ನು2019-20ನೇ ಸಾಲಿನ 14ನೇ ಹಣಕಾಸು ಸಾಮಾನ್ಯ ಮೂಲ ಅನುದಾನದಡಿ 5.5 ಲಕ್ಷ ರೂ. ವೆಚ್ಚದಲ್ಲಿ ಅಭಿವೃದ್ಧಿಗೊಳಿಸಲಾಗುತ್ತಿದೆ. ಟ್ಯಾಂಕ್ ಸುತ್ತಮುತ್ತ ಸ್ವಚ್ಛತಾ ಕಾರ್ಯ ನಡೆಸಲಾಗುವುದು – ಶ್ರೀನಿವಾಸ್, ಪೌರಾಯುಕ್ತ,
ಶಿಡ್ಲಘಟ್ಟ ನಗರದ ಹೊಸ ಪ್ರದೇಶದ 12 ವಾರ್ಡ್ಗಳು ಮತ್ತು ಹಳೆ ನಗರದ ವಾರ್ಡ್ ಸಂಖ್ಯೆ 23,10,11,15,29 ವಾರ್ಡ್ಗಳಿಗೆ ಮೇಲ್ಮಟ್ಟದ ಟ್ಯಾಂಕ್ ನಿರ್ಮಿಸಲಾಗಿದೆ. ಸುಮಾರು ವರ್ಷಗಳ ನಂತರ ಟ್ಯಾಂಕ್ನ್ನು ಸುಣ್ಣಬಣ್ಣದಿಂದ ಕಂಗೊಳಿಸಲಾಗುತ್ತಿದೆ. – ಮುರಳಿ, ನೀರು ಸರಬರಾಜು ವಿಭಾಗ ನಗರಸಭೆ ಶಿಡ್ಲಘಟ್ಟ
ಟಾಪ್ ನ್ಯೂಸ್
![CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್ಗೆ ವಿವರಣೆ?](https://www.udayavani.com/wp-content/uploads/2024/07/cm-7-415x252.jpg)
![](https://www.udayavani.com/wp-content/uploads/2024/03/IndianClicks_GVega_300x250_03212024_1_3.gif)
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
![2-gudibande](https://www.udayavani.com/wp-content/uploads/2024/07/2-gudibande-150x90.jpg)
Gudibande: ಬೆಳ್ಳಂಬೆಳಗ್ಗೆ ಶೂಟ್ ಔಟ್, ಓರ್ವ ಸಾವು
![Chikkaballapura: ಇದು ರಾಜಕೀಯ ಬಜೆಟ್ ಅಲ್ಲ, ರಾಷ್ಟ್ರೀಯ ಬಜೆಟ್: ಸಂಸದ ಡಾ.ಕೆ.ಸುಧಾಕರ್](https://www.udayavani.com/wp-content/uploads/2024/07/sudhakar-1-150x108.jpg)
Chikkaballapura: ಇದು ರಾಜಕೀಯ ಬಜೆಟ್ ಅಲ್ಲ, ರಾಷ್ಟ್ರೀಯ ಬಜೆಟ್: ಸಂಸದ ಡಾ.ಕೆ.ಸುಧಾಕರ್
![Chikkaballapur: Siddaramaiah should resign if there is morality: MP Dr K Sudhakar](https://www.udayavani.com/wp-content/uploads/2024/07/sudhakr-150x83.jpg)
Chikkaballapur: ನೈತಿಕತೆ ಇದ್ದರೆ ಸಿದ್ದರಾಮಯ್ಯ ರಾಜೀನಾಮೆ ನೀಡಬೇಕು: ಸಂಸದ ಡಾ.ಕೆ.ಸುಧಾಕರ್
![Mysore ಮೂಡಾ ಹಗರಣ… ಸಿಎಂ ಸಿದ್ದರಾಮಯ್ಯಗೆ ಕಪ್ಪು ಚುಕ್ಕೆ: ನಟ ಚೇತನ್ ಆರೋಪ](https://www.udayavani.com/wp-content/uploads/2024/07/chethan-150x105.jpg)
MUDA Scam: ಸಿಎಂ ಸಿದ್ದರಾಮಯ್ಯಗೆ ಕಪ್ಪು ಚುಕ್ಕೆ… ಸಿಬಿಐ ತನಿಖೆಗೆ ವಹಿಸಿ: ನಟ ಚೇತನ್
![4-gudibande](https://www.udayavani.com/wp-content/uploads/2024/07/4-gudibande-150x90.jpg)
Gudibanda: ಎರಡು ಪ್ರತ್ಯೇಕ ಅಪಘಾತ; ಒಬ್ಬ ಸವಾರ ಸ್ಥಳದಲ್ಲೇ ಸಾವು
MUST WATCH
ಹೊಸ ಸೇರ್ಪಡೆ
![CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್ಗೆ ವಿವರಣೆ?](https://www.udayavani.com/wp-content/uploads/2024/07/cm-7-150x91.jpg)
CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್ಗೆ ವಿವರಣೆ?
![Ramanagara ಜಿಲ್ಲೆ ಇನ್ನು ಬೆಂಗಳೂರು ದಕ್ಷಿಣ; ರಾಜ್ಯ ಸಚಿವ ಸಂಪುಟದಲ್ಲಿ ನಿರ್ಧಾರ](https://www.udayavani.com/wp-content/uploads/2024/07/Vidhana-Soudha-24-150x100.jpg)
Ramanagara ಜಿಲ್ಲೆ ಇನ್ನು ಬೆಂಗಳೂರು ದಕ್ಷಿಣ; ರಾಜ್ಯ ಸಚಿವ ಸಂಪುಟದಲ್ಲಿ ನಿರ್ಧಾರ
![Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ](https://www.udayavani.com/wp-content/uploads/2024/07/cm-g-150x100.jpg)
Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ
![Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್’!](https://www.udayavani.com/wp-content/uploads/2024/07/Pilikula-Biological-150x91.jpg)
Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್’!
![1-aaasdeqweqw](https://www.udayavani.com/wp-content/uploads/2024/07/1-aaasdeqweqw-150x100.jpg)
India-Sri Lanka ಟಿ20 ಸರಣಿ ಇಂದಿನಿಂದ : ಸೂರ್ಯ, ಗಂಭೀರ್ ಯುಗಾರಂಭ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.