ಕೊಟ್ಟಿಗೆಹಾರ: ಬಿಡಾಡಿ ದನಗಳ ಹಾವಳಿ ;ಬಿಡಾಡಿ ದನಗಳ ಕಡಿವಾಣಕ್ಕೆ ಸಾರ್ವಜನಿಕರ ಒತ್ತಾಯ
Team Udayavani, Feb 16, 2022, 3:16 PM IST
ಕೊಟ್ಟಿಗೆಹಾರ: ವಿಲ್ಲುಪುರಂ-ಮಂಗಳೂರು ರಾಷ್ಟಿçಯ ಹೆದ್ದಾರಿಯ ಕೊಟ್ಟಿಗೆಹಾರದಲ್ಲಿ ಬಿಡಾಡಿ ದನಗಳ ಹಾವಳಿ ಹೆಚ್ಚಾಗಿದ್ದು, ವಾಹನ ಸವಾರರು ವರ್ತಕರು ಕಿರಿಕಿರಿ ಅನುಭವಿಸುವಂತಾಗಿದೆ.
ಇಲ್ಲಿನ ರಸ್ತೆಯಲ್ಲಿ 30ಕ್ಕೂ ಅಧಿಕ ಬಿಡಾಡಿ ದನಗಳು ರಸ್ತೆಯಲ್ಲಿ ಮಲಗಿ ವಾಹನ ಸಂಚಾರಕ್ಕೆ ತೊಡಕಾಗಿದೆ. ಅತಿ ಹೆಚ್ಚು ಬಿಡಾಡಿ ದನಗಳು ಮಾಲೀಕರಿದ್ದರೂ ಅವುಗಳನ್ನು ಮೇಯಿಸಲು ಹೊಲಗಳಿಗೆ ಬಿಡದೇ ಅವುಗಳು ರಸ್ರೆ, ಬಸ್ ನಿಲ್ದಾಣ, ಅಂಗಡಿ ಬಾಗಿಲುಗಳ ಮುಂದೆ ಮಲಗಿ ಆಶ್ರಯ ಪಡೆಯುತ್ತಿವೆ. ಅಂಗಡಿ, ಬಸ್ ನಿಲ್ದಾಣದಲ್ಲಿ ಮಲಗಿ ಸಗಣಿ ಹಾಕಿ ಗಂಜಲವನ್ನು ಹಾಕಿ ಇಡೀ ಸ್ಥಳವನ್ನೇ ಕಲುಷಿತಗೊಳಿಸುತ್ತಿವೆ.
ಕೊಟ್ಟಿಗೆಹಾರದ ಬಸ್ ನಿಲ್ದಾಣದಲ್ಲಂತೂ ದನಗಳ ಗಂಜಲದಿಂದ ಬಸ್ ನಿಲ್ದಾಣ ಗಲೀಜಾಗಿದೆ. ಅಂಗಡಿ,ಮುಗ್ಗಟ್ಟುಗಳ ವರ್ತಕರಿಗೆ ಬೆಳಿಗ್ಗೆ ಸಗಣಿ, ಗಂಜಲ ಎತ್ತಿ ಸ್ವಚ್ಚಗೊಳಿಸುವುದೇ ಒಂದು ಕಾಯಕವಾಗಿದೆ. ಅಲ್ಲದೇ ವಾಹನಗಳು ವೇಗವಾಗಿ ಸಂಚಾರಿಸುವ ವೇಳೆ ರಸ್ತೆಯಲ್ಲಿ ಅತ್ತಿತ್ತ ಓಡಾಡಿ ಬೈಕು,ಕಾರು,ಬಸ್ಸುಗಳ ಮುಂದೆ ಬಂದು ಅಪಘಾತಗಳಿಗೂ ಎಡೆಮಾಡಿಕೊಡುತ್ತಿವೆ, ದ್ವಿಚಕ್ರ ಸವಾರರಂತೂ ಜೀವವನ್ನು ಕೈಯಲ್ಲೇ ಇಟ್ಟು ವಾಹನವನ್ನು ಚಲಾಯಿಸಬೇಕಿದೆ. ರಸ್ತೆಯಲ್ಲಿ ಓಡಾಡುವ ಬಿಡಾಡಿ ದನಗಳಿಗೆ ಪಶು ಇಲಾಖೆ ವತಿಯಿಂದ ವಿಮೆ ಮಾಡಿ ಕಿವಿಗೆ ಗುರುತು ಪಟ್ಟಿ ಕೂಡ ಹಾಕಿದ್ದು ಆ ಕಿವಿ ಪಟ್ಟಿಗಳ ಮೂಲಕ ಬಿಡಾಡಿ ದನಗಳ ವಿಳಾಸ ಪತ್ತೆ ಹಚ್ಚಿ ಸಂಬAಧಿಸಿದವರಿಗೆ ಎಚ್ಚರಿಕೆ ನೀಡಿ ಸೂಕ್ತ ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರ ಆಗ್ರಹವಾಗಿದೆ.
ಪ್ರತಿನಿತ್ಯ ಸುಮಾರು ಬಿಡಾಡಿ ದನಗಳು ಕೊಟ್ಟಿಗೆಹಾರ ಪೇಟೆಯ ರಸ್ತೆ ಮಧ್ಯದಲ್ಲಿ ಮಲಗುವುದರಿಂದ ವಾಹನ ಸಂಚಾರಕ್ಕೆ ಅಡ್ಡಿಯಾಗಿದೆ. ಸಂಬಂಧಿಸಿದ ಅಧಿಕಾರಿಗಳು ಬಿಡಾಡಿ ದನಗಳ ಹಾವಳಿಗೆ ಕಡೀವಾಣ ಹಾಕಬೇಕು–ಸಂಜಯ್ ಗೌಡ ಕೊಟ್ಟಿಗೆಹಾರ, ಗ್ರಾಮಸ್ಥ,
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Tragedy: ಮೊಬೈಲ್ ಬೆಳಕಿನಲ್ಲಿ ಸಿಸೇರಿಯನ್ ಹೆರಿಗೆಗೆ ಮುಂದಾದ ವೈದ್ಯರು.. ತಾಯಿ, ಮಗು ಮೃತ್ಯು
Harassment: ಪಶ್ಚಿಮ ಬಂಗಾಳದ ರಾಜ್ಯಪಾಲರಿಂದ ಮಹಿಳೆಗೆ ಲೈಂಗಿಕ ಕಿರುಕುಳ ಆರೋಪ
Aranthodu: ಚಾಲಕನ ನಿಯಂತ್ರಣ ತಪ್ಪಿ ಹೋಟೆಲ್ ಗೆ ಢಿಕ್ಕಿ ಹೊಡೆದ ಕಾರು
Vijayapura: ಸೀಟಿಗಾಗಿ ಮಹಿಳೆಯರ ಕಿತ್ತಾಟ: ರಸ್ತೆಯಲ್ಲೇ ನಿಂತ ಬಸ್
Lok Sabha Election: ರಾಯ್ಬರೇಲಿಯಿಂದ ರಾಹುಲ್, ಅಮೇಥಿಯಿಂದ ಕೆ.ಎಲ್. ಶರ್ಮ ಕಣಕ್ಕೆ