ಮಲೆನಾಡಿಗೂ ಕಾಲಿಟ್ಟ ಕುಕ್ಕರ್ ಪಾಲಿಟಿಕ್ಸ್: ಮನೆ ಮನೆಗೆ ತೆರಳಿ ಕುಕ್ಕರ್ ವಿತರಣೆ
Team Udayavani, Mar 9, 2023, 10:29 AM IST
ಚಿಕ್ಕಮಗಳೂರು : ದಿನ ಕಳೆದಂತೆ ರಾಜಕೀಯ ಕಣ ಕಾವೇರುತ್ತಿದೆ. ಚುನಾವಣೆ ಸಮೀಪಕ್ಕೆ ಬರುತ್ತಿದ್ದಂತೆ ಮತದಾರರನ್ನು ಸೆಳೆಯಲು ರಾಜಕೀಯ ಪಕ್ಷಗಳು ನಾನಾ ತಂತ್ರಗಳನ್ನು ಮಾಡುತ್ತಿದೆ.
ಇಷ್ಟು ದಿನ ಉತ್ತರ ಕರ್ನಾಟಕ ಭಾಗದಲ್ಲಿದ್ದ ಕುಕ್ಕರ್ ಪಾಲಿಟಿಕ್ಸ್ ಇದೀಗ ಮಲೆನಾಡು ಪ್ರದೇಶಕ್ಕೂ ಕಾಲಿಟ್ಟಿದೆ. ಶೃಂಗೇರಿ ಕ್ಷೇತ್ರದಲ್ಲಿ ಮನೆ-ಮನೆಗೆ ಕುಕ್ಕರ್ ಗಳನ್ನು ವಿತರಣೆ ಮಾಡಲಾಗಿದೆ. ಕಾಂಗ್ರೆಸ್ ಶಾಸಕ ಟಿ.ಡಿ.ರಾಜೇಗೌಡರ ಭಾವಚಿತ್ರವುಳ್ಳ ಕುಕ್ಕರ್ ನ್ನು ಮುಖಂಡರು ಹಂಚಿಕೆ ಮಾಡುತ್ತಿದ್ದಾರೆ.
ಕಾಂಗ್ರೆಸ್ ಮುಖಂಡ ಬೇಗಾರು ರಮೇಶ್ ನೇತೃತ್ವದಲ್ಲಿ ಶೃಂಗೇರಿ ಕ್ಷೇತ್ರದಲ್ಲಿ ಮನೆ-ಮನೆಗೆ ತೆರಳಿ ಕುಕ್ಕರ್ ಹಂಚಿಕೆ ಮಾಡುತ್ತಿದ್ದು, ಕುಕ್ಕರ್ ಪಾಲಿಟಿಕ್ಸ್ ಗೆ,ಹಾಲಿ ಶಾಸಕರ ನಡೆಗೆ ಸಾಮಾಜಿಕ ಜಾಲತಾಣದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ.
ಶೃಂಗೇರಿ ಕ್ಷೇತ್ರದಾದ್ಯಂತ ಒಂದು ಲಕ್ಷಕ್ಕೂ ಅಧಿಕ ಕುಕ್ಕರ್ ವಿತರಣೆ ಆಗಿದ್ದು, ಅಭಿವೃದ್ಧಿ ಕೆಲಸದ ಬದಲು ಕುಕ್ಕರ್ ಕೊಟ್ಟು ಮತ ಕೇಳುತ್ತಿದ್ದಾರೆ ಎಂದು ಲೇವಡಿ ಮಾಡುತ್ತಿದ್ದಾರೆ.