‘ಆಪರೇಷನ್ ಬೈರ’ ಕಾರ್ಯಾಚರಣೆಗೆ ಬಂದ ಗಜಪಡೆ
Team Udayavani, Oct 31, 2022, 3:53 PM IST
ಕೊಟ್ಟಿಗೆಹಾರ: ಮೂಡಿಗೆರೆ ತಾಲೂಕಿನ ಬೈರಾಪುರದಲ್ಲಿ ಉಪಟಳ ನೀಡುತ್ತಿರುವ ಪುಂಡಾನೆ ಬೈರನ ಸೆರೆಗೆ ಕಾರ್ಯಾಚರಣೆ ಆರಂಭವಾಗಿದ್ದು, ಆಪರೇಷನ್ ಬೈರ ಕಾರ್ಯಾಚರಣೆಗೆ ಗಜಪಡೆ ಬೈರಾಪುರಕ್ಕೆ ಆಗಮಿಸಿದೆ.
ಈ ಬಾರಿ ಮೈಸೂರು ದಸಾರದಲ್ಲಿ ಅಂಬಾರಿ ಹೊತ್ತ ಆನೆ ಅಭಿಮನ್ಯು, ಭೀಮ, ಗೋಪಾಲ ಸ್ವಾಮಿ, ಮಹೇಂದ್ರ, ಅಜ್ಜಯ್ಯ, ಪ್ರಶಾಂತ್ ಎಂಬ ಆನೆಗಳು ಆಗಮಿಸಿದ್ದು, ಸೋಮವಾರ ಪುಂಡಾನೆ ಬೈರನನ್ನು ಸೆರೆ ಹಿಡಿಯುವ ಕಾರ್ಯಚರಣೆ ಆರಂಭವಾಗಿದೆ.
ಸ್ಥಳದಲ್ಲಿ ಜಿಲ್ಲಾ ಅರಣ್ಯ ಅಧಿಕಾರಿ ಕಾಂತಿ, ವಲಯ ಅರಣ್ಯಾಧಿಕಾರಿ ಮೋಹನ್ ಕುಮಾರ್ ಸೇರಿದಂತೆ ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳದಲ್ಲಿದ್ದಾರೆ.