ಮರಳುಗಾರಿಕೆಯಿಂದ ಕೆರೆ ಒಡಲು ಬರಿದು

40 ಅಡಿವರೆಗೆ ಮರಳು ತೆಗೆದಿದ್ದರಿಂದ ಅಂತರ್ಜಲ ಮಟ್ಟ ಕುಸಿತಪೊಲೀಸ್‌-ಕಂದಾಯ ಇಲಾಖೆ ಕ್ರಮ ನಾಮಕಾವಸ್ತೆ

Team Udayavani, Mar 5, 2020, 1:35 PM IST

5-March-12

ಭರಮಸಾಗರ: ದೊಡ್ಡಕೆರೆಯಲ್ಲಿ ಮರಳಿಗಾಗಿ ತೆಗೆದಿರುವ ಸುಮಾರು 20 ಅಡಿಗಳ ಆಳದ ಗುಂಡಿ

ಭರಮಸಾಗರ: ಇಲ್ಲಿನ ಐತಿಹಾಸಿಕ ದೊಡ್ಡಕೆರೆಯಲ್ಲಿ ಕಳೆದ ಸುಮಾರು ಹತ್ತು ವರ್ಷಗಳಿಂದ ಅಕ್ರಮ ಮರಳುಗಾರಿಕೆ ಎಗ್ಗಿಲ್ಲದೆ ನಡೆಯುತ್ತಿದೆ. ಇದರಿಂದಾಗಿ ಕೆರೆಯ ಒಡಲು ಬರಿದಾಗಿದೆ.

ಭರಮಣ್ಣ ನಾಯಕ ಕಟ್ಟಿಸಿದ ಐತಿಹಾಸಿಕ ದೊಡ್ಡಕೆರೆ 800 ಎಕರೆಯಷ್ಟು ವಿಸ್ತಾರವಾಗಿದೆ. ಕೆರೆಯಿಂದ ರೈತರು ಪಡೆದಿರುವ ಅನುಕೂಲಗಳಿಗಿಂತ ಅಕ್ರಮ ಮರಳುಗಾರಿಕೆ ಹೆಚ್ಚು ಸದ್ದು ಮಾಡಿದೆ. ಕಳೆದ ಕೆಲ ವರ್ಷಗಳಿಂದ ಕೆರೆಯಲ್ಲಿ ಮರಳು ದೊರೆಯುತ್ತಿರುವ ಹಿನ್ನೆಲೆಯಲ್ಲಿ ದೊಡ್ಡ ಮಟ್ಟದಲ್ಲಿ ಅಕ್ರಮ ಮರಳುಗಾರಿಕೆ ತನ್ನ ಕಬಂಧ ಬಾಹುಗಳನ್ನು ವಿಸ್ತರಿಸಿಕೊಂಡಿದೆ.

ಅಕ್ರಮವನ್ನು ತಡೆಯಲು ಹೋದ ಪೊಲೀಸರ ಮೇಲೆ ಹಲ್ಲೆಗಳಾಗಿವೆ. ಕಂದಾಯ ಇಲಾಖೆ ಅಧಿಕಾರಿಗಳ ಮೇಲೆ ಒತ್ತಡ ತಂದು ಅವರ ಕೈ ಕಟ್ಟಲಾಗಿದೆ. ಹೀಗೆ ಮರಳುಗಾರಿಕೆ ತಡೆಯುವ ಎಲ್ಲಾ ಪ್ರಯತ್ನಗಳನ್ನು ಒಂದೊಂದಾಗಿ ಶಮನ ಮಾಡಿಕೊಂಡು ಮರಳುಗಾರಿಕೆಯನ್ನು ನಿರಂತರವಾಗಿ ನಡೆಸಿಕೊಂಡು ಬರಲಾಗಿದೆ. ಕೆರೆ ವ್ಯಾಪ್ತಿಯಲ್ಲಿ ಸುಮಾರು 40 ಅಡಿಗಳ ಆಳದವರೆಗೆ ಗುಂಡಿಗಳನ್ನು ತೆಗೆದು ಗುಣಮಟ್ಟದ ಮರಳನ್ನು ಟ್ರ್ಯಾಕ್ಟರ್‌ಗಳ ಮೂಲಕ ನಿತ್ಯ ಸಾಗಾಟ ಮಾಡಲಾಗುತ್ತಿದೆ. ಹೆಚ್ಚು ಕೂಲಿ ಸಿಗುವುದರಿಂದ ಕೆಲಕಾರ್ಮಿಕರು ಕೂಡ ಇದರಲ್ಲಿ  ತೊಡಗಿಸಿಕೊಂಡಿದ್ದಾರೆ.

ಕೆರೆಯ ಒಂದು ಭಾಗದಲ್ಲಿನ ದೊಡ್ಡ ಗುಂಡಿಗಳನ್ನು ನೋಡಿದರೆ ಇದು ಕೆರೆಯೋ ಅಥವಾ ಮರಳು ಯಾರ್ಡೋ  ಎನ್ನುವಷ್ಟರ ಮಟ್ಟಿಗೆ ಗುಂಡಿಗಳು ರಾರಾಜಿಸುತ್ತಿವೆ. ಟ್ರ್ಯಾಕ್ಟರ್‌ ಮರಳಿಗೆ 4 ರಿಂದ 5 ಸಾವಿರ ರೂ. ಬೆಲೆಯಿದೆ. ಚಿತ್ರದುರ್ಗ ನಗರ ಸೇರಿದಂತೆ ಭರಮಸಾಗರದ ದೊಡ್ಡಕೆರೆಯ ಮರಳು ಜಗಳೂರು, ದಾವಣಗೆರೆ ತಾಲೂಕಿನ ಹಳ್ಳಿಗಳಿಗೆ ಸಾಗಾಟವಾಗುತ್ತದೆ. ಪೊಲೀಸರು ಆಗೊಮ್ಮೆ ಈಗೊಮ್ಮೆ ಒಂದೋ ಎರಡೋ ಟ್ರ್ಯಾಕ್ಟರ್‌ಗಳನ್ನು ಹಿಡಿಯುತ್ತಾರಾದರೂ ಅದ್ಯಾವುದನ್ನೂ ಲೆಕ್ಕಿಸದೆ ಮರಳು ಸಾಗಾಟ ನಡೆದೇ ಇರುತ್ತದೆ. ಎಷ್ಟೋ ಟ್ರಾಕ್ಟರ್‌ಗಳು ಈ ಧಂದೆ ಹಿನ್ನೆಲೆಯಲ್ಲಿ ಭರಮಸಾಗರ ಸುತ್ತಮುತ್ತಲ ಪ್ರದೇಶಗಳಲ್ಲಿ ನೋಂದಣಿ ಆಗುವುದಿಲ್ಲ.

ಅಕಸ್ಮಾತ್‌ ಪೊಲೀಸರು ಟ್ರ್ಯಾಕ್ಟರ್‌ ಹಿಡಿದರೆ ಹಿಡಿಯಲಿ ಎನ್ನುವ ಸಾಗಾಟ ನಡೆಸುವವರು, ಅದನ್ನು ಕೈಬಿಟ್ಟು ಹೊಸ ಟ್ರ್ಯಾಕ್ಟರ್‌ ಖರೀದಿಸಿ ಮರಳು ಸಾಗಾಟ ಮಾಡುವುದು ಸಾಮಾನ್ಯವಾಗಿಬಿಟ್ಟಿದೆ. ಕಂದಾಯ ಭೂಮಿಗಳಿಂದಲೂ ಮರಳು ಸಾಗಾಟ ಕೂಡ ಅಷ್ಟೇ ದೊಡ್ಡ ಪ್ರಮಾಣದಲ್ಲಿ ನಡೆಯುತ್ತಿದೆ. ಕೆಲ ಇಲಾಖೆ ಅಧಿಕಾರಿಗಳು ಇದನ್ನು ಕಂಡೂ ಕಾಣದಂತೆ ಕುರುಡರಂತೆ ವರ್ತಿಸುತ್ತಿರುವುದು ಜನಸಾಮಾನ್ಯರಲ್ಲಿ ಹಲವು ಅನುಮಾನಗಳನ್ನು ಹುಟ್ಟು ಹಾಕಿದೆ.

ಕೆಲವು ಟ್ರ್ಯಾಕ್ಟರ್‌ಗಳಲ್ಲಿ ಅಕ್ರಮವಾಗಿ ಮರಳನ್ನು ಪೊಲೀಸ್‌ ಹಾಗೂ ಇತರೆ ಇಲಾಖೆಗಳ ಪರ್ಮಿಟ್‌ ಪಡೆದವರಂತೆ ರಾಜಾರೋಷವಾಗಿ ರಾತ್ರಿ ವೇಳೆ ಸಾಗಾಟ ನಡೆಸುತ್ತಾರೆ. ದೊಡ್ಡ ಕೆರೆ ಗಡಿ ಗುರುತಿಸಿ ಕೆರೆ ಸುತ್ತ ಸುಮಾರು 10 ಅಡಿಗಳವರೆಗೆ ಕಲ್ಲು ಕಟ್ಟಡ ಕಟ್ಟಲಾಗಿದೆ. ಆದರೆ ಕೆರೆಯ ಹೆಗಡೆಹಾಳು ಮತ್ತು ಭರಮಸಾಗರ ಗೊಲ್ಲರಹಟ್ಟಿಗಳ ಕಡೆ ಮಾತ್ರ ಎರಡು ಕಡೆ ಕೆರೆಗೆ ಪ್ರವೇಶ ನೀಡಲಾಗಿದೆ. ಈ ಎರಡು ರಸ್ತೆಗಳೇ ಅಕ್ರಮ ಮರಳು ಸಾಗಾಟಕ್ಕೆ ಇದೀಗ ರಹದಾರಿಗಳಾಗಿವೆ. ಕಳೆದ ಕೆಲ ವರ್ಷಗಳಿಂದ ಸುತ್ತಮುತ್ತಲ ಪ್ರದೇಶದಲ್ಲಿ ಅಂತರ್ಜಲ ಬತ್ತಲು ಕೆರೆ ವ್ಯಾಪ್ತಿಯ ಅಕ್ರಮ ಮರಳುಗಾರಿಕೆ ಕಾರಣ ಎಂಬ ಮಾತುಗಳು ರೈತಾಪಿ ವಲಯದಿಂದ ಕೇಳಿ ಬಂದಿವೆ.

ಇಟ್ಟಿಗೆ ಭಟ್ಟಿ ಮಣ್ಣಿಗೂ ಅಕ್ಷಯ ಪಾತ್ರೆ!
ದೊಡ್ಡಕೆರೆ ಅಕ್ರಮ ಮರಳಿಗೆ ಮಾತ್ರವಲ್ಲದೆ ಅಕ್ರಮವಾಗಿ ಇಟ್ಟಿಗೆ ಭಟ್ಟಿಗಳನ್ನು ನಡೆಸುವವರಿಗೂ ಸುಲಭವಾಗಿ ಮಣ್ಣನ್ನು ಪೂರೈಸುವ ಅಕ್ಷಯಪಾತ್ರಯಾಗಿದೆ. ಪ್ರತಿ ವರ್ಷ ಸಾವಿರಾರು ಲೋಡ್‌ ಮಣ್ಣು ಇಟ್ಟಿಗೆ ಭಟ್ಟಿಗಳಿಗೆ ಇಲ್ಲಿನ ಕೆರೆಯಿಂದಲೇ ಸಾಗಾಟವಾಗುತ್ತದೆ. ಖಾಲಿ ಕೆರೆಯ ಮೈದಾನದಲ್ಲಿ ಅಕಸ್ಮಾತ್‌ ದನಕರುಗಳು ಮೇಯಲು ಹೋದರೆ ಅಕ್ರಮದ ಗುಂಡಿಗಳಲ್ಲಿ ಬಿದ್ದು ಸತ್ತೆ ಹೋಗುತ್ತವೆ. ದನ ಕರುಗಳು, ಪಶು ಪಕ್ಷಿಗಳ ಸ್ವತ್ಛಂದ ಇರುವಿಕೆಗೂ, ಬದುಕಿಗೂ ಕೊಳ್ಳಿ ಇಟ್ಟಿರುವ ಇಲ್ಲಿನ ಅಕ್ರಮ ಮರಳುಗಾರಿಕೆ, ಸ್ಥಳೀಯ ಜನರ ಅದೆಷ್ಟೋ ರಾತ್ರಿಗಳ ನಿದ್ದೆಗೂ ಭಂಗ ಉಂಟು ಮಾಡುತ್ತಿದೆ. ಇಂದಿರಾ ಕಾಲೋನಿ, ಹೆಗಡೆಹಾಳು ಇತರೆ ಪ್ರದೇಶಗಳಿಂದ ರಾತ್ರಿಯೆಲ್ಲಾ ಮರಳು ಸಾಗಿಸುವ ಟ್ರ್ಯಾಕ್ಟರ್‌ಗಳ ಶಬ್ದ ಜನರ ನಿದ್ದೆಯನ್ನೇ ಕಸಿದುಕೊಂಡಿದೆ.

ಎಚ್‌.ಬಿ.ನಿರಂಜನ ಮೂರ್ತಿ

ಟಾಪ್ ನ್ಯೂಸ್

2-kushtagi

Polls:ಮತದಾನ ಮಾಡಲು ಬೈಕ್ ನಲ್ಲಿ ಬರುತ್ತಿದ್ದ ಯುವಕನಿಗೆ ಅಪರಿಚಿತ ವಾಹನ ಡಿಕ್ಕಿ; ಸವಾರ ಸಾವು

1-bantwala

Crime: ಮಂಗಳೂರಿನ ಅವಿವಾಹಿತ ಯುವಕ ಬಿಸಿರೋಡಿನಲ್ಲಿ ನೇಣುಬಿಗಿದು ಆತ್ಮಹತ್ಯೆ

Arrested: ಸಲ್ಮಾನ್‌ ಖಾನ್‌ ನಿವಾಸದ ಮೇಲೆ ಗುಂಡಿನ ದಾಳಿ: ಐದನೇ ಆರೋಪಿ ಬಂಧನ

Arrested: ಸಲ್ಮಾನ್‌ ಖಾನ್‌ ನಿವಾಸದ ಮೇಲೆ ಗುಂಡಿನ ದಾಳಿ: ಐದನೇ ಆರೋಪಿ ಬಂಧನ

Lok Sabha Election: ಕೊಪ್ಪಳ, ರಾಯಚೂರಿನಲ್ಲಿ ಮತದಾನದಿಂದ ದೂರ ಉಳಿದ ಮತದಾರರು…

Lok Sabha Election: ಕೊಪ್ಪಳ, ರಾಯಚೂರಿನಲ್ಲಿ ಮತದಾನದಿಂದ ದೂರ ಉಳಿದ ಮತದಾರರು…

ಕುಸಿದು ಬಿದ್ದ ಚುನಾವಣಾ ಸಿಬ್ಬಂದಿ: ಮತದಾನ ಮಾಡಲು ಬಂದ ಡಾ.ನಿತಿನ್‌ಚಂದ್ರ ಅವರಿಂದ ಚಿಕಿತ್ಸೆ

ಕುಸಿದು ಬಿದ್ದ ಚುನಾವಣಾ ಸಿಬ್ಬಂದಿ: ಮತದಾನ ಮಾಡಲು ಬಂದ ಡಾ.ನಿತಿನ್‌ಚಂದ್ರ ಅವರಿಂದ ಚಿಕಿತ್ಸೆ

Vijayapura: ಹಿರೂರಲ್ಲಿ ಕೈಕೊಟ್ಟ ಮತಯಂತ್ರ, ಒಂದು ಗಂಟೆ ತಡವಾಗಿ ಮತದಾನ ಆರಂಭ

Vijayapura: ಹಿರೂರಲ್ಲಿ ಕೈಕೊಟ್ಟ ಮತಯಂತ್ರ, ಒಂದು ಗಂಟೆ ತಡವಾಗಿ ಮತದಾನ ಆರಂಭ

Raichur: ಗುಳೆ ಹೋದ ಜನ; ಮತದಾರರಿಲ್ಲದೆ ಮತಗಟ್ಟೆ ಖಾಲಿ ಖಾಲಿ…

Raichur: ಗುಳೆ ಹೋದ ಜನ; ಮತದಾರರಿಲ್ಲದೆ ಮತಗಟ್ಟೆ ಖಾಲಿ ಖಾಲಿ…


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Bharamasagara: ನಿಯಂತ್ರಣ ತಪ್ಪಿ ಚರಂಡಿಗೆ ಉರುಳಿದ ಕಾರು; ಇಬ್ಬರು ಸ್ಥಳದಲ್ಲೇ ಸಾವು

Bharamasagara: ನಿಯಂತ್ರಣ ತಪ್ಪಿ ಚರಂಡಿಗೆ ಉರುಳಿದ ಕಾರು; ಇಬ್ಬರು ಸ್ಥಳದಲ್ಲೇ ಸಾವು

Chitradurga; ನ್ಯಾಯಾಲಯಕ್ಕೆ ಶರಣಾದ ಮುರುಘಾ ಶ್ರೀ

Chitradurga; ನ್ಯಾಯಾಲಯಕ್ಕೆ ಶರಣಾದ ಮುರುಘಾಶ್ರೀ: ಮೇ 27ರವರೆಗೆ ನ್ಯಾಯಾಂಗ ಬಂಧನ

Chitradurga ಯರೇಹಳ್ಳಿಯಲ್ಲಿ ಹಕ್ಕು ಚಲಾಯಿಸಿದ್ದು ಕೇವಲ 18 ಮಂದಿ!

Chitradurga ಯರೇಹಳ್ಳಿಯಲ್ಲಿ ಹಕ್ಕು ಚಲಾಯಿಸಿದ್ದು ಕೇವಲ 18 ಮಂದಿ!

Chitradurga: ಹೃದಯಾಘಾತದಿಂದ ಚುನಾವಣಾ ಕರ್ತವ್ಯದಲ್ಲಿದ್ದ ಶಿಕ್ಷಕಿ ಮೃತ್ಯು…

Chitradurga: ಚುನಾವಣಾ ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತಗೊಂಡು ಶಿಕ್ಷಕಿ ಮೃತ್ಯು…

Baramasagara: ತಾನು ಕಲಿತ ಶಾಲೆಯಲ್ಲೇ ಮೊದಲ ಬಾರಿಗೆ ಮತ ಚಲಾಯಿಸಿದ ಯುವತಿ

Baramasagara: ತಾನು ಕಲಿತ ಶಾಲೆಯಲ್ಲೇ ಮೊದಲ ಬಾರಿಗೆ ಮತ ಚಲಾಯಿಸಿದ ಯುವತಿ…

MUST WATCH

udayavani youtube

ಹಿಮೋಫಿಲಿಯಾ ಈ ರಕ್ತದ ಕಾಯಿಲೆ ಇರುವವರು ಮಾಡಬೇಕಾದ್ದೇನು ?

udayavani youtube

ಪ್ರಚಾರದ ವೇಳೆ ಕೈ ಮುಖಂಡನಿಗೆ ಕಪಾಳ ಮೋಕ್ಷ‌ ಮಾಡಿದ ಡಿಕೆಶಿ;

udayavani youtube

ಅಂಕಲ್ ಎಗ್ ರೈಸ್ ಕಾರ್ನರ್ ನಲ್ಲಿ ದಿನಕ್ಕೆ ಎಷ್ಟು ಮೊಟ್ಟೆ ಉಪಯೋಗಿಸುತ್ತಾರೆ ಗೊತ್ತಾ ?|

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

ಹೊಸ ಸೇರ್ಪಡೆ

18

950 ಕೋಟಿ ರೂಪಾಯಿ ವೈದ್ಯ ಸೀಟು ಹಂಚಿಕೆ ಅಕ್ರಮ: ಬಿಜೆಪಿ

2-kushtagi

Polls:ಮತದಾನ ಮಾಡಲು ಬೈಕ್ ನಲ್ಲಿ ಬರುತ್ತಿದ್ದ ಯುವಕನಿಗೆ ಅಪರಿಚಿತ ವಾಹನ ಡಿಕ್ಕಿ; ಸವಾರ ಸಾವು

1-bantwala

Crime: ಮಂಗಳೂರಿನ ಅವಿವಾಹಿತ ಯುವಕ ಬಿಸಿರೋಡಿನಲ್ಲಿ ನೇಣುಬಿಗಿದು ಆತ್ಮಹತ್ಯೆ

Namma Metro: ಮೆಟ್ರೋದಲ್ಲಿ ಯುವಕ-ಯುವತಿ ಅಪ್ಪುಗೆ ಪಯಣ

Namma Metro: ಮೆಟ್ರೋದಲ್ಲಿ ಯುವಕ-ಯುವತಿ ಅಪ್ಪುಗೆ ಪಯಣ

Crime: ಶೀಲ ಶಂಕಿಸಿ ಪತ್ನಿ ಮೇಲೆ ಕಲ್ಲುಎತ್ತಿ ಹಾಕಿದ ಪತಿ!

Crime: ಶೀಲ ಶಂಕಿಸಿ ಪತ್ನಿ ಮೇಲೆ ಕಲ್ಲುಎತ್ತಿ ಹಾಕಿದ ಪತಿ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.