Chitradurga; ಹಾಲು ಕರೆಯಲು ತೆರಳುತ್ತಿದ್ದ ಮಹಿಳೆ ಮೇಲೆ ಮೂರು ಕರಡಿಗಳ ದಾಳಿ
Team Udayavani, Dec 24, 2023, 12:34 PM IST
ಚಿತ್ರದುರ್ಗ: ಹಾಲು ಕರೆಯಲು ತೆರಳುತ್ತಿದ್ದ ಮಹಿಳೆಯೊಬ್ಬರ ಮೇಲೆ ಮೂರು ಕರಡಿಗಳು ಏಕಕಾಲದಲ್ಲಿ ದಾಳಿ ನಡೆಸಿದ ಘಟನೆ ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲೂಕಿನ ದೊಡ್ಡ ಉಳ್ಳಾರ್ತಿಯಲ್ಲಿ ನಡೆದಿದೆ.
ಮಂಜುಳಮ್ಮ (60) ಕರಡಿ ದಾಳಿಗೆ ಒಳಗಾದ ಮಹಿಳೆ. ಗಂಭೀರವಾಗಿ ಗಾಯಗೊಂಡಿರುವ ಇವರನ್ನು ಚಿತ್ರದುರ್ಗ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಮಂಜುಳಮ್ಮ ಮುಂಜಾನೆ ಹಸುವಿನ ಹಾಲು ಕರೆಯಲು ತೆರಳಿದ್ದಾಗ ಘಟನೆ ನಡೆದಿದೆ. ಗ್ರಾಮದ ಹೊರವಲಯ ಜಮೀನಿನಲ್ಲಿ ಕರಡಿಗಳು ಏಕಾಏಕಿ ದಾಳಿ ನಡೆಸಿವೆ. ತಲೆ, ಕೈಕಾಲು ಕಿತ್ತು ಮಾರಣಾಂತಿಕ ದಾಳಿ ಮಾಡಿವೆ. ದಾಳಿ ವೇಳೆ ಕೂಗಿಕೊಂಡ ಮಂಜಮ್ಮನ ರಕ್ಷಣೆಗೆ ಪತಿ ಮುಂದಾಗಿದ್ದು, ಕರಡಿಗಳಿಗೆ ಕಲ್ಲು ದೊಣ್ಣೆಗಳಿಂದ ಹೊಡೆದು ಪತ್ನಿಯನ್ನು ರಕ್ಷಿಸಿಕೊಂಡಿದ್ದಾರೆ.
ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು, ಪೊಲೀಸರು ಭೇಟಿ ಪರಿಶೀಲನೆ ನಡೆಸಿದ್ದಾರೆ.