![Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ](https://www.udayavani.com/wp-content/uploads/2024/07/cm-g-415x276.jpg)
ತಿರುಕನೂರಿನಲ್ಲಿ ರಂಗದಾಸೋಹ ನಾಟಕೋತ್ಸವ
Team Udayavani, Dec 31, 2019, 1:02 PM IST
![cd-tdy-1](https://www.udayavani.com/wp-content/uploads/2019/12/cd-tdy-1-8-620x234.jpg)
ಹೊಳಲ್ಕೆರೆ: ತಾಲೂಕಿನ ಮಲ್ಲಾಡಿಹಳ್ಳಿ ಅನಾಥ ಸೇವಾಶ್ರಮದ ಸಂಸ್ಥಾಪಕ ಅಧ್ಯಕ್ಷ, ತಿರುಕ ನಾಮಾಂಕಿತ ಶ್ರೀ ರಾಘವೇಂದ್ರ ಸ್ವಾಮೀಜಿ ಅವರ 24ನೇ ಹಾಗೂ ಶ್ರೀ ಸೂರುದಾಸ್ಜಿ ಅವರ 22ನೇ ಪುಣ್ಯಾರಾಧನೆ ಅಂಗವಾಗಿ ಜ.1ರಿಂದ 3ರವರೆಗೆ ತಿರುಕನೂರಿನಲ್ಲಿ ರಂಗದಾಸೋಹ-17 ನಾಟಕೋತ್ಸವ ಜರುಗಲಿದೆ.
ಡಾ| ಶ್ರೀ ಶಿವಮೂರ್ತಿ ಮುರುಘಾ ಶರಣರ ನೇತೃತ್ವದಲ್ಲಿ ನಡೆಯುವ ನಾಟಕೋತ್ಸವದಲ್ಲಿ ನಾಡಿನ ವಿಶ್ವಸ್ತರು, ಸಾಹಿತಿಗಳು, ರಾಜಕೀಯ ಧುರೀಣರು, ಶಿಕ್ಷಣ ತಜ್ಞರು ಹಾಗೂ ಮಲ್ಲಾಡಿಹಳ್ಳಿ ಹಾಗೂ ಸುತ್ತಮುತ್ತಲಿನ ಅನಾಥ ಸೇವಾಶ್ರಮದ ಭಕ್ತವೃಂದ ಭಾಗವಹಿಸಲಿದೆ ಎಂದು ಅನಾಥ ಸೇವಾಶ್ರಮದ ವ್ಯವಸ್ಥಾಪಕ ಎಚ್. ಎಸ್. ಸಿದ್ರಾಮಸ್ವಾಮಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ನಾಟಕೋತ್ಸವದ ಅಂಗವಾಗಿ ದಿನಾಂಕ ಡಿ.30ರಿಂದ ಜನವರಿ 3 ರವರೆಗೆ ಪ್ರತಿದಿನ ಬೆಳಿಗ್ಗೆ 6 ರಿಂದ 7.30ರವರೆಗೆ ಯೋಗ ಶಿಬಿರ ಆಯೋಜಿಸಲಾಗಿದೆ. ಪ್ರತಿದಿನ ಸಂಜೆ 6 ಗಂಟೆಗೆ ಸಭಾ ಕಾರ್ಯಕ್ರಮ ನಡೆಯಲಿದೆ. 7 ಗಂಟೆಗೆ ಸೂರುದಾಸ್ಜಿ ರಂಗ ಮಂಟಪದಲ್ಲಿ ನಾಟಕಗಳು ನಡೆಯಲಿವೆ.
ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸಾಹಿತಿ ಬಿ.ರಾಜಶೇಖರಪ್ಪ ನಾಟಕೋತ್ಸವಕ್ಕೆ ಚಾಲನೆ ನೀಡಲಿರುವರು. ಕಾರ್ಯಕ್ರಮದಲ್ಲಿ ಮಲ್ಲಾಡಿಹಳ್ಳಿ ಅನಾಥ ಸೇವಾಶ್ರಮದ ಸಂಸ್ಥಾಪಕ ಶ್ರೀ ರಾಘವೇಂದ್ರ ಸ್ವಾಮೀಜಿಯವರತತ್ವ ಮತ್ತು ಆದರ್ಶಗಳನ್ನೊತ್ತು ಸಮಾಜದಲ್ಲಿ ಸೇವೆ ಸಲ್ಲಿಸುತ್ತಿರುವವರಿಗೆ ಅನಾಥ ಸೇವಾಶ್ರಮದ ಆಡಳಿತ ಮಂಡಳಿಯು “ತಿರುಕಶ್ರೀ’ ಪ್ರಶಸ್ತಿ ಕೊಡಲು ತೀರ್ಮಾನಿಸಿ 2020ನೇ ಸಾಲಿನ ಪ್ರಶಸ್ತಿಯನ್ನು ಹಿರಿಯರಂಗಕರ್ಮಿ ನಾಟಕ ಅಕಾಡೆಮಿ ಮಾಜಿ ಅಧ್ಯಕ್ಷರಾದ ಶ್ರೀನಿವಾಸ ಜಿ ಕಪ್ಪಣ್ಣ ಅವರಿಗೆ ನೀಡಲಾಗುವುದು. ಜ.1 ಬುಧವಾರ ಬೆಳಗ್ಗೆ 9 ಗಂಟೆಗೆ ಜಾನಪದ ಕಲಾ ತಂಡಗಳೊಂದಿಗೆ ಪೂಜ್ಯರ ಭಾವಚಿತ್ರ, ಸ್ಥಬ್ದಚಿತ್ರಗಳ ಭವ್ಯ ಮೆರವಣಿಗೆ ಮಲ್ಲಾಡಿಹಳ್ಳಿಯ ಪ್ರಮುಖ ಬೀದಿಗಳಲ್ಲಿ ನಡೆಯಲಿದೆ.
ಅದೇ ದಿನ ಸಂಜೆ 7 ಗಂಟೆಗೆ ದ.ರಾ. ಬೇಂದ್ರೆ ರಚಿಸಿರುವ ಉಮೇಶ್ ಪತ್ತಾರ್ ನಿರ್ದೇಶನದ ಸಾಯುವ ಆಟ ನಾಟಕವನ್ನು ಜಮುರಾ ಕಲಾವಿದರು ಪ್ರದರ್ಶಿಸಲಿದ್ದಾರೆ. ಜ.2ರಂದು ಸಂಜೆ 7 ಗಂಟೆಗೆ ಡಾ| ಶ್ರೀ ಶಿವಮೂರ್ತಿ ಮುರುಘಾ ಶರಣರು ರಚಿಸಿರುವ ವೈ.ಡಿ. ಬದಾಮಿ ನಿರ್ದೇಶನದ “ಮಹಾಬೆರಗು’ ಹಾಗೂ ಜ.3ರಂದು ಬಿ.ವಿ. ಕಾರಂತರ ಪಂಜರ ಶಾಲೆ ನಾಟಕ ಪ್ರದರ್ಶನವಾಗಲಿವೆ.
ಟಾಪ್ ನ್ಯೂಸ್
![Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ](https://www.udayavani.com/wp-content/uploads/2024/07/cm-g-415x276.jpg)
![](https://www.udayavani.com/wp-content/uploads/2024/03/IndianClicks_GVega_300x250_03212024_1_3.gif)
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
![ರೇಣುಕಾಸ್ವಾಮಿ ಕುಟುಂಬಕ್ಕೆ ನಟ ವಿನೋದ್ ರಾಜ್ ಸಾಂತ್ವನ](https://www.udayavani.com/wp-content/uploads/2024/07/Vinod-Raj-150x90.jpg)
Renukaswamy ಕುಟುಂಬಕ್ಕೆ ನಟ ವಿನೋದ್ ರಾಜ್ ಸಾಂತ್ವನ
![1-weewq](https://www.udayavani.com/wp-content/uploads/2024/07/1-weewq-2-150x72.jpg)
Bharamasagara; ಸ್ಥಳೀಯ ಟಿಪ್ಪರ್ ಗಳನ್ನು ಬಳಸಿಕೊಳ್ಳಲು ಆಗ್ರಹಿಸಿ ಪ್ರತಿಭಟನೆ
![Nayakanahatti](https://www.udayavani.com/wp-content/uploads/2024/07/kudapuara-150x83.jpg)
Nayakanahatti; ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿದ ಕಳ್ಳರ ಗ್ಯಾಂಗ್
![Chitradurga](https://www.udayavani.com/wp-content/uploads/2024/07/Chitradurga-1-150x90.jpg)
Congress Government; ಮೊದಲು ನಿಮ್ಮ ಕಾಲದ ಹಗರಣಕ್ಕೆ ಉತ್ತರ ಕೊಡಿ: ಬಿವೈವಿ
![Renuka Swamy Case: ಎ 4 ತಾಯಿ ನಿಧನ; ವಿಡಿಯೋ ಕಾಲ್ನಲ್ಲಿ ಅಂತಿಮ ದರ್ಶನ](https://www.udayavani.com/wp-content/uploads/2024/07/13-12-150x90.jpg)
Renuka Swamy Case: ಎ 4 ತಾಯಿ ನಿಧನ; ವಿಡಿಯೋ ಕಾಲ್ನಲ್ಲಿ ಅಂತಿಮ ದರ್ಶನ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.